Bhimasena's sense of time

ಹರಿತಲೇಖನಿ ದಿನಕ್ಕೊಂದು ಕಥೆ: ಭೀಮಸೇನನ ಸಮಯ ಪ್ರಜ್ಞೆ

Harithalekhani: ಧರ್ಮರಾಜನು ರಾಜ್ಯವಾಳುತ್ತಿದ್ದ ಕಾಲದಲ್ಲಿ ಎಲ್ಲೆಲ್ಲೂ ಸುಖ ಸಂತೋಷಗಳು ತಾಂಡವಾಡುತ್ತಿದ್ದವು. ಪ್ರಜೆಗಳು ಬಂದು ರಾಜನ ಬಳಿ ಯಾವುದೇ ವಿಧವಾದ ಸಹಾಯವನ್ನು ಕೇಳಿದರೂ ತಕ್ಷಣವೇ ನೆರವೇರುತ್ತಿತ್ತು. ಯಾರೂ ಬರಿಗೈಯಲ್ಲಿ ತಿರುಗಿ ಹೋದದ್ದು ಇಲ್ಲವೇ ಇಲ್ಲ.

ಒಮ್ಮೆ ಒಬ್ಬ ಬ್ರಾಹ್ಮಣ ಯಾವುದೋ ಒಂದು ದಾನ ಕೇಳುತ್ತಾ ಧರ್ಮರಾಜನ ಬಳಿಗೆ ಹೋಗಿದ್ದನು. ಆದರೆ ಆತನು ವಾಪಸ್ ಬರುವಾಗ ಮಾತ್ರ ಬರಿಗೈಯಲ್ಲಿ ಬರುತ್ತಿದ್ದನು ಅದನ್ನು ಗಮನಿಸಿದ ಭೀಮಸೇನನು ಅವನನ್ನು ತನ್ನ ಬಳಿ ಕರೆದು

‘ಸ್ವಾಮೀ, ತಾವು ಏನನ್ನೋ ಕೇಳುವುದಕ್ಕಾಗಿ ರಾಜನ
ಬಳಿಗೆ ಹೋಗಿದ್ದರಿ. ಆದರೆ ವಾಪಾಸು ಬರುವಾಗ ಮಾತ್ರ ಬರಿಗೈಯಲ್ಲಿ ಬರುತ್ತಿದ್ದೀರಿ. ಯಾಕೆ ಬರಿಗೈಯಲ್ಲಿ ವಾಪಾಸಾಗುತ್ತಿದ್ದೀರಿ?’ ಏಕೆ ತಾವು ಮಹಾರಾಜರನ್ನು ಭೇಟಿಯಾಗಲಿಲ್ಲವೇ? ಪ್ರಭುಗಳು ಏನು ಕೊಡಲಿಲ್ಲವೇ ಎಂದು ಕೇಳಿದನು”.

ಆಗ ಆತನು ಅವರ ಬಳಿ ನಾನು ಕೇಳಿದ ವಸ್ತು ಇರಲಿಲ್ಲ. ಅದಕ್ಕಾಗಿ ನಾಳೆ ಬರಲು ತಿಳಿಸಿದ್ದಾರೆ. ನಾಳೆ ಅದನ್ನು ತರಿಸಿ ಇಟ್ಟಿರುತ್ತಾರೆ. ಹಾಗಾಗಿ ನಾನು ನಾಳೆ ಬರುತ್ತೇನೆ’ ಎಂದನು.

ಧರ್ಮರಾಜನಿಂದ ಭೀಮಸೇನನು ಇಂತಹ ಉತ್ತರವನ್ನು ನಿರೀಕ್ಷಿಸಿರಲಿಲ್ಲ. ‘ಇಂದು ಮಾಡಬೇಕಾದಕೆಲಸವನ್ನು ಇಂದೆಯೇ ಮಾಡಬೇಕು. ಅದನ್ನು ನಾಳೆಯ ದಿನಕ್ಕೆ ಮುಂದೂಡುವುದೆಂದರೇನು. ಇಂತಹ ವಿಷಯ ಅಣ್ಣನ ಅರಿವಿಗೇಕೆ ಬರಲಿಲ್ಲ?” ಹೀಗೆ ಯೋಚಿಸಿದ ಭೀಮಸೇನನು ಬ್ರಾಹ್ಮಣನನ್ನು ಹೋಗದಂತೆ ತಡೆದು ಅಲ್ಲೇ ನಿಲ್ಲಿಸುತ್ತ ಮಹಾರಾಜನ ಅರಮನೆಯ ಬಳಿಯಿರುವ ಒಂದು ದೊಡ್ಡ
ಗ೦ಟೆಯನ್ನು ಜೋರಾಗಿ ಬಾರಿಸತೊಡಗಿದ.

ಮಹಾರಾಜನ ಬಳಿ ಇರುವ ಈ ಗಂಟೆಯನ್ನು ಯಾವಾಗಲೂ ಬಾರಿಸುವುದಿಲ್ಲ. ಕೆಲವೊಂದು
ವಿಶಿಷ್ಟ ಸಂದರ್ಭಗಳಲ್ಲಿ ಅಂದರೆ ಅತಿ ಪ್ರಾಮುಖ್ಯವಾದ ಘಟನೆಗಳು ನಡೆದಾಗ ಮಾತ್ರ ಅದನ್ನು ಜನರ ಗಮನಕ್ಕೆ ತರಲು ಬಾರಿಸಲಾಗುತ್ತಿತ್ತು. ಹಾಗಾಗಿ ಈ ಗಂಟೆಯ ಸಪ್ಪಳವನ್ನು ಕೇಳಿದಾಗ ಎಲ್ಲಾ ಪ್ರಜೆಗಳೂ ತಮ್ಮ ತಮ್ಮ ಕೆಲಸಗಳನ್ನು ಅಲ್ಲಲ್ಲಿಯೇ ನಿಲ್ಲಿಸಿ ಮಹಾದ್ವಾರದ ಕಡೆಗೆ ವಿಷಯ ತಿಳಿಯಲು ನುಗ್ಗಿ ಬರುತ್ತಿದ್ದರು.

ಈ ದಿನವಂತೂ ಭೀಮಸೇನನೇ ಆ ಗಂಟೆಯನ್ನು ಜೋರಾಗಿ ಬಾರಿಸುತ್ತಿದ್ದುದರಿಂದ ಪ್ರಜೆಗಳೆಲ್ಲಾ
ಮಹಾದ್ವಾರದ ಕಡೆಗೆ ದೌಡಾಯಿಸತೊಡಗಿದರು. ಅಷ್ಟೇ ಅಲ್ಲ ಧರ್ಮರಾಜ, ಅರ್ಜುನ, ನಕುಲ ಸಹದೇವರ ಸಹಿತ ದೌಪದಿಯೂ ಆ ಸ್ಥಳಕ್ಕೆ ಓಡೋಡಿ ಬಂದರು. ಅವರಾರ ಬರವನ್ನೂ ಲೆಕ್ಕಿಸದೇ ಭೀಮಸೇನನು ತಡೆಯಿಲ್ಲದೇ ತುಂಬಾ ಆವೇಶ ಬಂದವನಂತೆ ಆ ಗಂಟೆಯನ್ನು ಬಾರಿಸುತ್ತಲೇ
ಇದ್ದನು.

ಆಗ ಅಲ್ಲಿಗೆ ಆಗಮಿಸಿದ ಧರ್ಮರಾಯನು ಭೀಮಸೇನನನ್ನು ತಡೆಯುತ್ತ, ‘ನಿಲ್ಲಿಸು,- ಭೀಮಸೇನ. ಯಾರಿಗೆ ಅನ್ಯಾಯವಾಗಿದೆ ಎಂದು ಈ ರೀತಿ ಗಂಟೆಯನ್ನು ಬಾರಿಸುತ್ತಿದ್ದೀಯ. ಈ ಗಂಟೆಯ ಸಪ್ಪಳವನ್ನು ಕೇಳಿ ನಮ್ಮ ಜೊತೆಗೆ ಊರಿನ ಪ್ರಜೆಗಳೂ ಬಂದು ಸೇರಿದ್ದಾರೆ. ನೀನು
ಈ ರೀತಿ ಗಂಟೆಯನ್ನು ಬಾರಿಸಲು ಕಾರಣವೇನು?’ ಎಂದು ಕೇಳಿದನು.

ಭೀಮಸೇನನು, “ಒಂದು ಸಂತಸ ಸುದ್ದಿಯನ್ನು ಹೇಳಲಿದ್ದೇನೆ” ಎಂದನು. ನಂತರ ಅವನು ಅಣ್ಣನಾದ ಧರ್ಮರಾಜನು ಪಾದಗಳಿಗೆ ನಮಸ್ಕರಿಸುತ್ತ ಅಲ್ಲಿ ನೆರೆದಿದ್ದ ಪ್ರಜೆಗಳ ಕಡೆಗೆ ತಿರುಗಿ, “ನಮ್ಮ ಅಣ್ಣನು ದೊಡ್ಡ ವಿಜಯವನ್ನು ಸಂಪಾದಿಸಿದ್ದಾನೆ. ತಾವೆಲ್ಲರೂ ಆ ವಿಷಯವನ್ನು ಕೇಳಿದ ಮೇಲೆ ನನಗಿಂತ ಹೆಚ್ಚಿನ ಸಂತೋಷವನ್ನು ಪಡುವಿರಿ. ಹಾಗೆಯೇ ನಾವೆಲ್ಲರೂ ಅಣ್ಣನ ಸಂತೋಷದಲ್ಲಿ ಪಾಲ್ಗೊಳ್ಳೋಣ’ಎಂದನು.

ಅವನ ಮಾತುಗಳನ್ನು ಕೇಳಿ ಉಳಿದವರ ವಿಷಯ ಹಾಗಿರಲಿ, ಸ್ವತಃ ಧರ್ಮರಾಜನಿಗೆ ಈ ವಿಷಯ ಅರ್ಥವಾಗಲಿಲ್ಲ. ಈ ದಿನ ಆತನು ಅರಮನೆಯನ್ನು ಬಿಟ್ಟು ಹೊರಕ್ಕೇ ಹೋಗಿರಲಿಲ್ಲ. ಯಾರೊಡನೆಯೂ
ಯುದ್ಧ ಮಾಡಿರಲಿಲ್ಲ. ಅಂತಹುದರಲ್ಲಿ ವಿಜಯವನ್ನು ಸಂಪಾದಿಸುವುದಾದರೂ ಹೇಗೆ? ಹಾಗಾಗಿ ಅವನು ಆಶ್ಚರ್ಯದಿಂದ ಭೀಮಸೇನನ ಕಡೆಗೆ ತಿರುಗಿ ನೋಡುತ್ತ, “ಅರೆ! ಭೀಮಸೇನ ಇದೇನು. ಹೇಳುತ್ತಿರುವಿ? ನಾನಿಂದು ಅರಮನೆಯಿಂದ ಹೊರಕ್ಕೇ ಹೋಗಿಲ್ಲ. ಯಾವ ಯುದ್ಧದಲ್ಲೂ ಭಾಗವಹಿಸಿಲ್ಲ. ಅಂತಹುದರಲ್ಲಿ ಯಾವ ಜಯ? ಎಲ್ಲಿ ಸಂಪಾದಿಸಿರುವೆ? ನಿನಗೇನಾದರೂ ಕನಸು ಬಿದ್ದಿದೆಯಾ?’ ಎಂದು ಕೇಳಿದನು.

ಆಗ ಭೀಮಸೇನನು ನಗುತ್ತ, “ಪ್ರಭು, ಇಂದು ಬ್ರಾಹ್ಮಣನೋರ್ವನು ತಮ್ಮ ಬಳಿಗೆ ಬಂದು ಯಾವುದೋ ಒಂದು ವಸ್ತುವನ್ನು ಕೇಳಿದಾಗ ಆ ವಸ್ತು ತಮ್ಮ ಬಳಿ ಇಲ್ಲವೆಂದೂ ನಾಳೆಯ ದಿನ ತರಿಸಿ
ಕೊಡುವುದಾಗಿಯೂ ತಿಳಿಸಿದರಂತೆ. ಅಂದರೆ ನಾಳೆಯ ದಿನದ ತನಕ ತಾವು ಬದುಕಿರುವುದಾಗಿಯೂ ಹಾಗೂ ಆ ಬ್ರಾಹ್ಮಣನೂ ಬದುಕಿ ಉಳಿಯುವುದರ ಬಗ್ಗೆ ತಮಗೆ ಖಾತ್ರಿ ಇದೆ ಎಂದಂತಾಯಿತು. ಆದರೆ ಹುಟ್ಟು ಸಾವಿನ ಬಗ್ಗೆ ಯಾರಿಗೂ ಖಾತ್ರಿಯಾಗಿ ಹೇಳಲಾಗುವುದಿಲ್ಲ. ಆದರೆ ತಾವು ಹೇಳುತ್ತಿರುವಿರಿ ಎಂದರೆ ತಾವು ಜಯಿಸಲಸಾಧ್ಯವಾದ ಸಾವನ್ನೂ ಜಯಸಿರುವಿರಿ ಎಂದರ್ಥವಲ್ಲವೇ? ಹಾಗಾಗಿ ಇದೊಂದು ಭಾರೀ ವಿಜಯವಲ್ಲವೇ?’ ಎಂದು ಕೇಳಿದನು.

ಭೀಮಸೇನನ ಮಾತುಗಳನ್ನು ಕೇಳಿದಾಗ ಧರ್ಮರಾಜನಿಗೆ ತನ್ನ ತಪ್ಪಿನ ಅರಿವಾಯಿತು. ತನ್ನ ತಮ್ಮನನ್ನು ಪ್ರೀತಿಯಿಂದ ತಬ್ಬಿಕೊಳ್ಳುತ್ತ, `ಭೀಮಸೇನ, ನಿಜ ನಿಜ ನೀನು ಹೇಳುತ್ತಿರುವುದು ನಿಜ.
ನೀನು ಸರಿಯಾದ ಸಮಯದಲ್ಲಿ ನನ್ನ ಕಣ್ಣುಗಳನ್ನು ತೆರೆಸಿದ್ದೀಯ. ಹುಟ್ಟು ಸಾವಿನ ಬಗ್ಗೆ ಯಾರೂ ನಿಖರವಾಗಿ ಹೇಳಲು ಸಾಧ್ಯವಿಲ್ಲ. ಹಾಗಾಗಿ ನಾಳೆ ಮಾಡುವುದನ್ನು ಇಂದೇ ಮಾಡಬೇಕು. ಇಂದು ಮಾಡುವುದನ್ನು ಈಗಲೇ ಮಾಡಬೇಕು ಬ್ರಾಹ್ಮಣದಾನ ಕೇಳಿದಾಗ ನಾನು ಅಲ್ಲೇ ನೀಡಬೇಕಿತ್ತು. ಆ ರೀತಿಯಲ್ಲಿ ಹಾಗೇ ಬರಿಗೈಯಲ್ಲಿ ಕಳಿಸಬಾರದಾಗಿತ್ತು. ಒಳ್ಳೆಯ ಕೆಲಸಗಳನ್ನು ಮಾಡುವಾಗ ತಕ್ಷಣವೇ ಮಾಡಬೇಕು. ಅದನ್ನು ಎಂದಿಗೂ ಮುಂದಕ್ಕೆ ಹಾಕಬಾರದು’ ಎಂದನು.

ಮುಂದೆ ತಡ ಮಾಡದೆ ಊರಿಗೆ ಹೊರಡಲು ತಯಾರಾಗಿದ್ದ ಆ ಬ್ರಾಹ್ಮಣನನ್ನು ತಕ್ಷಣವೇ ಕರೆಸಿ, ಅವನನ್ನು ಸತ್ಕರಿಸಿ, ಅವನು ಕೇಳಿದ ಎಲ್ಲಾ ವಸ್ತುವನ್ನು ಅಂದೇ ಕೊಟ್ಟು ಕಳುಹಿಸಿದನು.

ಕೃಪೆ: ಸಾಮಾಜಿಕ ಜಾಲತಾಣ (ಲೇಖಕರ ಮಾಹಿತಿ ಲಭ್ಯವಿಲ್ಲ)

ರಾಜಕೀಯ

ದೇಶದಲ್ಲಿ ಬೆಂಗಳೂರಿಗೆ ಸರಿಸಮನಾದ ನಗರ ಮತ್ತೊಂದಿಲ್ಲ: ನಾರಾ ಲೋಕೇಶ್‌ಗೆ ಡಿಸಿಎಂ ಡಿ.ಕೆ. ಶಿವಕುಮಾರ್ ತಿರುಗೇಟು

ದೇಶದಲ್ಲಿ ಬೆಂಗಳೂರಿಗೆ ಸರಿಸಮನಾದ ನಗರ ಮತ್ತೊಂದಿಲ್ಲ: ನಾರಾ ಲೋಕೇಶ್‌ಗೆ ಡಿಸಿಎಂ ಡಿ.ಕೆ. ಶಿವಕುಮಾರ್

“ಮೂಲಸೌಕರ್ಯ, ಮಾನವ ಸಂಪನ್ಮೂಲ, ನವೋದ್ಯಮ, ಅನ್ವೇಷಣೆ ವಿಚಾರದಲ್ಲಿ ದೇಶದಲ್ಲಿ ಬೆಂಗಳೂರಿಗೆ ಸರಿಸಮನಾದ ನಗರ ಮತ್ತೊಂದಿಲ್ಲ. ಬೇರೆಯವರು ತಮ್ಮನ್ನು ಮಾರ್ಕೆಟಿಂಗ್ ಮಾಡಿಕೊಳ್ಳಲು ಬೆಂಗಳೂರಿನ ಬಗ್ಗೆ ಮಾತನಾಡುತ್ತಾರೆ” ಎಂದು ಆಂಧ್ರ ಐಟಿ ಸಚಿವ ನಾರಾ ಲೋಕೇಶ್ (Nara

[ccc_my_favorite_select_button post_id="115011"]

ಬೆದರಿಕೆ ಕರೆ.. Video ಪೋಸ್ಟ್ ಮಾಡಿದ ಸಚಿವ

[ccc_my_favorite_select_button post_id="115009"]

300 ರೂ. ಊಟ ಕೊಟ್ಟು 300 ಕೋಟಿ

[ccc_my_favorite_select_button post_id="114973"]

Bihar Election; ಬಿಜೆಪಿ ಪಟ್ಟಿ ಬಿಡುಗಡೆ

[ccc_my_favorite_select_button post_id="114963"]
ಪ್ರಾಣಿ ಸಂಪತ್ತು ಕೊಲ್ಲುವವರ ವಿರುದ್ಧ ಕಠಿಣ ಕ್ರಮ ಶತಸಿದ್ಧ: Cm ಸಿದ್ದರಾಮಯ್ಯ ಎಚ್ಚರಿಕೆ

ಪ್ರಾಣಿ ಸಂಪತ್ತು ಕೊಲ್ಲುವವರ ವಿರುದ್ಧ ಕಠಿಣ ಕ್ರಮ ಶತಸಿದ್ಧ: Cm ಸಿದ್ದರಾಮಯ್ಯ ಎಚ್ಚರಿಕೆ

ಪ್ರಾಣಿ ಸಂಪತ್ತು ಇಲ್ಲದೆ ಅರಣ್ಯ ಸಂಪತ್ತಿಗೆ ಮೌಲ್ಯವೇ ಇಲ್ಲ. ಹೀಗಾಗಿ ಪ್ರಾಣಿ ಸಂಪತ್ತನ್ನು ಕೊಲ್ಲುವವರ ವಿರುದ್ಧ ಕಠಿಣ ಕ್ರಮ ಶತಸಿದ್ಧ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Cm Siddaramaiah) ಅವರು ಸ್ಪಷ್ಟ ಎಚ್ಚರಿಕೆ ನೀಡಿದರು.

[ccc_my_favorite_select_button post_id="114725"]
ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಅವರೊಂದಿಗೆ, ಸಂಘಟನೆಯ ಟ್ರಸ್ಟಿಯೂ ಆಗಿರುವ ಸಂಸದ ಡಾ.ಕೆ.ಸುಧಾಕರ್‌ (Dr.K.Sudhakar)

[ccc_my_favorite_select_button post_id="113863"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ಯೋಗ ಚಾಂಪಿಯನ್‌ಶಿಪ್: ವಿ.ವರ ಪ್ರಸಾದ್‌ಗೆ ಚಿನ್ನದ ಪದಕ

ಯೋಗ ಚಾಂಪಿಯನ್‌ಶಿಪ್: ವಿ.ವರ ಪ್ರಸಾದ್‌ಗೆ ಚಿನ್ನದ ಪದಕ

ನಿಸರ್ಗ ಯೋಗ ಕೇಂದ್ರದ ಹಾಗೂ ರಾಜ್ಯ ಬಾಲಕರ ಯೋಗ ತಂಡದ ನಾಯಕ ವಿ.ವರ ಪ್ರಸಾದ್ (V. Vara Prasad) 50ನೇ ಗೋಲ್ಡನ್‌ ಜುಬ್ಲಿ ರಾಷ್ಟ್ರೀಯ ಯೋಗ ಚಾಂಪಿಯನ್‌ಶಿಪ್ (Yoga Championship) ನಲ್ಲಿ ಭಾಗವಹಿಸಿ ಚಿನ್ನದ

[ccc_my_favorite_select_button post_id="114944"]
ದೊಡ್ಡಬಳ್ಳಾಪುರ: ಅರಸಮ್ಮ ದೇವಾಲಯದಲ್ಲಿ ಕಳವು

ದೊಡ್ಡಬಳ್ಳಾಪುರ: ಅರಸಮ್ಮ ದೇವಾಲಯದಲ್ಲಿ ಕಳವು

ಅರಸಮ್ಮ ದೇವಾಲಯದ (Arasamma Temple) ಬಾಗಿಲಿನ ಬೀಗ ಹೊಡೆದು ಹುಂಡಿ ಹಾಗೂ ದೇವರ ಆಭರಣಗಳನ್ನು ಕಳವು ಮಾಡಿರುವ ಪ್ರಕರಣ ಭಾನುವಾರ ರಾತ್ರಿ ನಡೆದಿದೆ.

[ccc_my_favorite_select_button post_id="114950"]
ದೊಡ್ಡಬಳ್ಳಾಪುರದಲ್ಲಿ ಸತತ 3ನೇ ಅಪಘಾತ..! ಬೈಕ್ ಸವಾರನ ಸ್ಥಿತಿ ಗಂಭೀರ

ದೊಡ್ಡಬಳ್ಳಾಪುರದಲ್ಲಿ ಸತತ 3ನೇ ಅಪಘಾತ..! ಬೈಕ್ ಸವಾರನ ಸ್ಥಿತಿ ಗಂಭೀರ

ಮಂಗಳವಾರ ರಾತ್ರಿಯಿಂದ ಬುಧವಾರ ಬೆಳಗ್ಗೆ 9.15 ರ ವರೆಗೆ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಸತತ 3ನೇ ಅಪಘಾತ (Accident) ಪ್ರಕರಣ ವರದಿಯಾಗುತ್ತಿದೆ.

[ccc_my_favorite_select_button post_id="114999"]

ಆರೋಗ್ಯ

ಸಿನಿಮಾ

ದಿನ ಭವಿಷ್ಯ: ಈ ರಾಶಿಯವರಿಂದು ಅತಿಯಾದ ಒತ್ತಡಕ್ಕೆ ಸಿಲುಕದಿರಿ

ದಿನ ಭವಿಷ್ಯ: ಈ ರಾಶಿಯವರಿಂದು ಅತಿಯಾದ ಒತ್ತಡಕ್ಕೆ ಸಿಲುಕದಿರಿ

ರಾಹುಕಾಲ: 07:30AM ರಿಂದ 09:00AM, ಗುಳಿಕಕಾಲ: 01:30PM ರಿಂದ 03:00PM, ಯಮಗಂಡಕಾಲ: 10:30AM ರಿಂದ 12:00PM, Astrology

[ccc_my_favorite_select_button post_id="114397"]
error: Content is protected !!