Bhimasena's sense of time

ಹರಿತಲೇಖನಿ ದಿನಕ್ಕೊಂದು ಕಥೆ: ಭೀಮಸೇನನ ಸಮಯ ಪ್ರಜ್ಞೆ

Harithalekhani: ಧರ್ಮರಾಜನು ರಾಜ್ಯವಾಳುತ್ತಿದ್ದ ಕಾಲದಲ್ಲಿ ಎಲ್ಲೆಲ್ಲೂ ಸುಖ ಸಂತೋಷಗಳು ತಾಂಡವಾಡುತ್ತಿದ್ದವು. ಪ್ರಜೆಗಳು ಬಂದು ರಾಜನ ಬಳಿ ಯಾವುದೇ ವಿಧವಾದ ಸಹಾಯವನ್ನು ಕೇಳಿದರೂ ತಕ್ಷಣವೇ ನೆರವೇರುತ್ತಿತ್ತು. ಯಾರೂ ಬರಿಗೈಯಲ್ಲಿ ತಿರುಗಿ ಹೋದದ್ದು ಇಲ್ಲವೇ ಇಲ್ಲ.

ಒಮ್ಮೆ ಒಬ್ಬ ಬ್ರಾಹ್ಮಣ ಯಾವುದೋ ಒಂದು ದಾನ ಕೇಳುತ್ತಾ ಧರ್ಮರಾಜನ ಬಳಿಗೆ ಹೋಗಿದ್ದನು. ಆದರೆ ಆತನು ವಾಪಸ್ ಬರುವಾಗ ಮಾತ್ರ ಬರಿಗೈಯಲ್ಲಿ ಬರುತ್ತಿದ್ದನು ಅದನ್ನು ಗಮನಿಸಿದ ಭೀಮಸೇನನು ಅವನನ್ನು ತನ್ನ ಬಳಿ ಕರೆದು

‘ಸ್ವಾಮೀ, ತಾವು ಏನನ್ನೋ ಕೇಳುವುದಕ್ಕಾಗಿ ರಾಜನ
ಬಳಿಗೆ ಹೋಗಿದ್ದರಿ. ಆದರೆ ವಾಪಾಸು ಬರುವಾಗ ಮಾತ್ರ ಬರಿಗೈಯಲ್ಲಿ ಬರುತ್ತಿದ್ದೀರಿ. ಯಾಕೆ ಬರಿಗೈಯಲ್ಲಿ ವಾಪಾಸಾಗುತ್ತಿದ್ದೀರಿ?’ ಏಕೆ ತಾವು ಮಹಾರಾಜರನ್ನು ಭೇಟಿಯಾಗಲಿಲ್ಲವೇ? ಪ್ರಭುಗಳು ಏನು ಕೊಡಲಿಲ್ಲವೇ ಎಂದು ಕೇಳಿದನು”.

ಆಗ ಆತನು ಅವರ ಬಳಿ ನಾನು ಕೇಳಿದ ವಸ್ತು ಇರಲಿಲ್ಲ. ಅದಕ್ಕಾಗಿ ನಾಳೆ ಬರಲು ತಿಳಿಸಿದ್ದಾರೆ. ನಾಳೆ ಅದನ್ನು ತರಿಸಿ ಇಟ್ಟಿರುತ್ತಾರೆ. ಹಾಗಾಗಿ ನಾನು ನಾಳೆ ಬರುತ್ತೇನೆ’ ಎಂದನು.

ಧರ್ಮರಾಜನಿಂದ ಭೀಮಸೇನನು ಇಂತಹ ಉತ್ತರವನ್ನು ನಿರೀಕ್ಷಿಸಿರಲಿಲ್ಲ. ‘ಇಂದು ಮಾಡಬೇಕಾದಕೆಲಸವನ್ನು ಇಂದೆಯೇ ಮಾಡಬೇಕು. ಅದನ್ನು ನಾಳೆಯ ದಿನಕ್ಕೆ ಮುಂದೂಡುವುದೆಂದರೇನು. ಇಂತಹ ವಿಷಯ ಅಣ್ಣನ ಅರಿವಿಗೇಕೆ ಬರಲಿಲ್ಲ?” ಹೀಗೆ ಯೋಚಿಸಿದ ಭೀಮಸೇನನು ಬ್ರಾಹ್ಮಣನನ್ನು ಹೋಗದಂತೆ ತಡೆದು ಅಲ್ಲೇ ನಿಲ್ಲಿಸುತ್ತ ಮಹಾರಾಜನ ಅರಮನೆಯ ಬಳಿಯಿರುವ ಒಂದು ದೊಡ್ಡ
ಗ೦ಟೆಯನ್ನು ಜೋರಾಗಿ ಬಾರಿಸತೊಡಗಿದ.

ಮಹಾರಾಜನ ಬಳಿ ಇರುವ ಈ ಗಂಟೆಯನ್ನು ಯಾವಾಗಲೂ ಬಾರಿಸುವುದಿಲ್ಲ. ಕೆಲವೊಂದು
ವಿಶಿಷ್ಟ ಸಂದರ್ಭಗಳಲ್ಲಿ ಅಂದರೆ ಅತಿ ಪ್ರಾಮುಖ್ಯವಾದ ಘಟನೆಗಳು ನಡೆದಾಗ ಮಾತ್ರ ಅದನ್ನು ಜನರ ಗಮನಕ್ಕೆ ತರಲು ಬಾರಿಸಲಾಗುತ್ತಿತ್ತು. ಹಾಗಾಗಿ ಈ ಗಂಟೆಯ ಸಪ್ಪಳವನ್ನು ಕೇಳಿದಾಗ ಎಲ್ಲಾ ಪ್ರಜೆಗಳೂ ತಮ್ಮ ತಮ್ಮ ಕೆಲಸಗಳನ್ನು ಅಲ್ಲಲ್ಲಿಯೇ ನಿಲ್ಲಿಸಿ ಮಹಾದ್ವಾರದ ಕಡೆಗೆ ವಿಷಯ ತಿಳಿಯಲು ನುಗ್ಗಿ ಬರುತ್ತಿದ್ದರು.

ಈ ದಿನವಂತೂ ಭೀಮಸೇನನೇ ಆ ಗಂಟೆಯನ್ನು ಜೋರಾಗಿ ಬಾರಿಸುತ್ತಿದ್ದುದರಿಂದ ಪ್ರಜೆಗಳೆಲ್ಲಾ
ಮಹಾದ್ವಾರದ ಕಡೆಗೆ ದೌಡಾಯಿಸತೊಡಗಿದರು. ಅಷ್ಟೇ ಅಲ್ಲ ಧರ್ಮರಾಜ, ಅರ್ಜುನ, ನಕುಲ ಸಹದೇವರ ಸಹಿತ ದೌಪದಿಯೂ ಆ ಸ್ಥಳಕ್ಕೆ ಓಡೋಡಿ ಬಂದರು. ಅವರಾರ ಬರವನ್ನೂ ಲೆಕ್ಕಿಸದೇ ಭೀಮಸೇನನು ತಡೆಯಿಲ್ಲದೇ ತುಂಬಾ ಆವೇಶ ಬಂದವನಂತೆ ಆ ಗಂಟೆಯನ್ನು ಬಾರಿಸುತ್ತಲೇ
ಇದ್ದನು.

ಆಗ ಅಲ್ಲಿಗೆ ಆಗಮಿಸಿದ ಧರ್ಮರಾಯನು ಭೀಮಸೇನನನ್ನು ತಡೆಯುತ್ತ, ‘ನಿಲ್ಲಿಸು,- ಭೀಮಸೇನ. ಯಾರಿಗೆ ಅನ್ಯಾಯವಾಗಿದೆ ಎಂದು ಈ ರೀತಿ ಗಂಟೆಯನ್ನು ಬಾರಿಸುತ್ತಿದ್ದೀಯ. ಈ ಗಂಟೆಯ ಸಪ್ಪಳವನ್ನು ಕೇಳಿ ನಮ್ಮ ಜೊತೆಗೆ ಊರಿನ ಪ್ರಜೆಗಳೂ ಬಂದು ಸೇರಿದ್ದಾರೆ. ನೀನು
ಈ ರೀತಿ ಗಂಟೆಯನ್ನು ಬಾರಿಸಲು ಕಾರಣವೇನು?’ ಎಂದು ಕೇಳಿದನು.

ಭೀಮಸೇನನು, “ಒಂದು ಸಂತಸ ಸುದ್ದಿಯನ್ನು ಹೇಳಲಿದ್ದೇನೆ” ಎಂದನು. ನಂತರ ಅವನು ಅಣ್ಣನಾದ ಧರ್ಮರಾಜನು ಪಾದಗಳಿಗೆ ನಮಸ್ಕರಿಸುತ್ತ ಅಲ್ಲಿ ನೆರೆದಿದ್ದ ಪ್ರಜೆಗಳ ಕಡೆಗೆ ತಿರುಗಿ, “ನಮ್ಮ ಅಣ್ಣನು ದೊಡ್ಡ ವಿಜಯವನ್ನು ಸಂಪಾದಿಸಿದ್ದಾನೆ. ತಾವೆಲ್ಲರೂ ಆ ವಿಷಯವನ್ನು ಕೇಳಿದ ಮೇಲೆ ನನಗಿಂತ ಹೆಚ್ಚಿನ ಸಂತೋಷವನ್ನು ಪಡುವಿರಿ. ಹಾಗೆಯೇ ನಾವೆಲ್ಲರೂ ಅಣ್ಣನ ಸಂತೋಷದಲ್ಲಿ ಪಾಲ್ಗೊಳ್ಳೋಣ’ಎಂದನು.

ಅವನ ಮಾತುಗಳನ್ನು ಕೇಳಿ ಉಳಿದವರ ವಿಷಯ ಹಾಗಿರಲಿ, ಸ್ವತಃ ಧರ್ಮರಾಜನಿಗೆ ಈ ವಿಷಯ ಅರ್ಥವಾಗಲಿಲ್ಲ. ಈ ದಿನ ಆತನು ಅರಮನೆಯನ್ನು ಬಿಟ್ಟು ಹೊರಕ್ಕೇ ಹೋಗಿರಲಿಲ್ಲ. ಯಾರೊಡನೆಯೂ
ಯುದ್ಧ ಮಾಡಿರಲಿಲ್ಲ. ಅಂತಹುದರಲ್ಲಿ ವಿಜಯವನ್ನು ಸಂಪಾದಿಸುವುದಾದರೂ ಹೇಗೆ? ಹಾಗಾಗಿ ಅವನು ಆಶ್ಚರ್ಯದಿಂದ ಭೀಮಸೇನನ ಕಡೆಗೆ ತಿರುಗಿ ನೋಡುತ್ತ, “ಅರೆ! ಭೀಮಸೇನ ಇದೇನು. ಹೇಳುತ್ತಿರುವಿ? ನಾನಿಂದು ಅರಮನೆಯಿಂದ ಹೊರಕ್ಕೇ ಹೋಗಿಲ್ಲ. ಯಾವ ಯುದ್ಧದಲ್ಲೂ ಭಾಗವಹಿಸಿಲ್ಲ. ಅಂತಹುದರಲ್ಲಿ ಯಾವ ಜಯ? ಎಲ್ಲಿ ಸಂಪಾದಿಸಿರುವೆ? ನಿನಗೇನಾದರೂ ಕನಸು ಬಿದ್ದಿದೆಯಾ?’ ಎಂದು ಕೇಳಿದನು.

ಆಗ ಭೀಮಸೇನನು ನಗುತ್ತ, “ಪ್ರಭು, ಇಂದು ಬ್ರಾಹ್ಮಣನೋರ್ವನು ತಮ್ಮ ಬಳಿಗೆ ಬಂದು ಯಾವುದೋ ಒಂದು ವಸ್ತುವನ್ನು ಕೇಳಿದಾಗ ಆ ವಸ್ತು ತಮ್ಮ ಬಳಿ ಇಲ್ಲವೆಂದೂ ನಾಳೆಯ ದಿನ ತರಿಸಿ
ಕೊಡುವುದಾಗಿಯೂ ತಿಳಿಸಿದರಂತೆ. ಅಂದರೆ ನಾಳೆಯ ದಿನದ ತನಕ ತಾವು ಬದುಕಿರುವುದಾಗಿಯೂ ಹಾಗೂ ಆ ಬ್ರಾಹ್ಮಣನೂ ಬದುಕಿ ಉಳಿಯುವುದರ ಬಗ್ಗೆ ತಮಗೆ ಖಾತ್ರಿ ಇದೆ ಎಂದಂತಾಯಿತು. ಆದರೆ ಹುಟ್ಟು ಸಾವಿನ ಬಗ್ಗೆ ಯಾರಿಗೂ ಖಾತ್ರಿಯಾಗಿ ಹೇಳಲಾಗುವುದಿಲ್ಲ. ಆದರೆ ತಾವು ಹೇಳುತ್ತಿರುವಿರಿ ಎಂದರೆ ತಾವು ಜಯಿಸಲಸಾಧ್ಯವಾದ ಸಾವನ್ನೂ ಜಯಸಿರುವಿರಿ ಎಂದರ್ಥವಲ್ಲವೇ? ಹಾಗಾಗಿ ಇದೊಂದು ಭಾರೀ ವಿಜಯವಲ್ಲವೇ?’ ಎಂದು ಕೇಳಿದನು.

ಭೀಮಸೇನನ ಮಾತುಗಳನ್ನು ಕೇಳಿದಾಗ ಧರ್ಮರಾಜನಿಗೆ ತನ್ನ ತಪ್ಪಿನ ಅರಿವಾಯಿತು. ತನ್ನ ತಮ್ಮನನ್ನು ಪ್ರೀತಿಯಿಂದ ತಬ್ಬಿಕೊಳ್ಳುತ್ತ, `ಭೀಮಸೇನ, ನಿಜ ನಿಜ ನೀನು ಹೇಳುತ್ತಿರುವುದು ನಿಜ.
ನೀನು ಸರಿಯಾದ ಸಮಯದಲ್ಲಿ ನನ್ನ ಕಣ್ಣುಗಳನ್ನು ತೆರೆಸಿದ್ದೀಯ. ಹುಟ್ಟು ಸಾವಿನ ಬಗ್ಗೆ ಯಾರೂ ನಿಖರವಾಗಿ ಹೇಳಲು ಸಾಧ್ಯವಿಲ್ಲ. ಹಾಗಾಗಿ ನಾಳೆ ಮಾಡುವುದನ್ನು ಇಂದೇ ಮಾಡಬೇಕು. ಇಂದು ಮಾಡುವುದನ್ನು ಈಗಲೇ ಮಾಡಬೇಕು ಬ್ರಾಹ್ಮಣದಾನ ಕೇಳಿದಾಗ ನಾನು ಅಲ್ಲೇ ನೀಡಬೇಕಿತ್ತು. ಆ ರೀತಿಯಲ್ಲಿ ಹಾಗೇ ಬರಿಗೈಯಲ್ಲಿ ಕಳಿಸಬಾರದಾಗಿತ್ತು. ಒಳ್ಳೆಯ ಕೆಲಸಗಳನ್ನು ಮಾಡುವಾಗ ತಕ್ಷಣವೇ ಮಾಡಬೇಕು. ಅದನ್ನು ಎಂದಿಗೂ ಮುಂದಕ್ಕೆ ಹಾಕಬಾರದು’ ಎಂದನು.

ಮುಂದೆ ತಡ ಮಾಡದೆ ಊರಿಗೆ ಹೊರಡಲು ತಯಾರಾಗಿದ್ದ ಆ ಬ್ರಾಹ್ಮಣನನ್ನು ತಕ್ಷಣವೇ ಕರೆಸಿ, ಅವನನ್ನು ಸತ್ಕರಿಸಿ, ಅವನು ಕೇಳಿದ ಎಲ್ಲಾ ವಸ್ತುವನ್ನು ಅಂದೇ ಕೊಟ್ಟು ಕಳುಹಿಸಿದನು.

ಕೃಪೆ: ಸಾಮಾಜಿಕ ಜಾಲತಾಣ (ಲೇಖಕರ ಮಾಹಿತಿ ಲಭ್ಯವಿಲ್ಲ)

ರಾಜಕೀಯ

ದೆಹಲಿಗೆ ಪ್ರಯಾಣ: ಕಾರಣ ತಿಳಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್

ದೆಹಲಿಗೆ ಪ್ರಯಾಣ: ಕಾರಣ ತಿಳಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್

ನೀವು ಮತ್ತು ಸಿದ್ದರಾಮಯ್ಯ ಅವರು ದುಬಾರಿ ವಾಚ್ ಧರಿಸಿದ್ದರ ಬಗ್ಗೆ ಬಿಜೆಪಿ ಟೀಕೆ ಮಾಡುತ್ತಿದೆ ಎಂದು ಕೇಳಿದಾಗ, “ಈ ನನ್ನ ವಾಚ್ ಏಳು ವರ್ಷಗಳ ಹಿಂದೆ ಆಸ್ಟ್ರೇಲಿಯಾದಲ್ಲಿ ಖರೀದಿ ಮಾಡಿದೆ. ನಾನು ಇದನ್ನು ನನ್ನ

[ccc_my_favorite_select_button post_id="116998"]
ಕರ್ನಾಟಕದ 9 ಜಿಲ್ಲೆ ಒಳಗೊಂಡ ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಕಾರ್ಯಕ್ರಮ (NICDP): ಗೋಯೆಲ್‌ ಜೊತೆ ಕೇಂದ್ರ ಸಚಿವ ಹೆಚ್.ಡಿ.ಕೆ ಮಹತ್ವದ ಚರ್ಚೆ

ಕರ್ನಾಟಕದ 9 ಜಿಲ್ಲೆ ಒಳಗೊಂಡ ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಕಾರ್ಯಕ್ರಮ (NICDP):

ಕರ್ನಾಟಕದ ಕೈಗಾರಿಕಾಭಿವೃದ್ದಿಗೆ ಪರಿವರ್ತನಾತ್ಮಕ ಹೆಜ್ಜೆ ಎಂದೇ ನಂಬಲಾಗಿರುವ 9 ಜಿಲ್ಲೆಗಳನ್ನು ಒಳಗೊಂಡ ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಯೋಜನೆಯನ್ನು (NICDP- National Industrial Corridor Development Programme) ಅನುಷ್ಠಾನಗೊಳಿಸಬೇಕೆಂದು ಕೋರಿ ಕೇಂದ್ರದ ಬೃಹತ್‌ ಕೈಗಾರಿಕೆ

[ccc_my_favorite_select_button post_id="116156"]
ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಅವರೊಂದಿಗೆ, ಸಂಘಟನೆಯ ಟ್ರಸ್ಟಿಯೂ ಆಗಿರುವ ಸಂಸದ ಡಾ.ಕೆ.ಸುಧಾಕರ್‌ (Dr.K.Sudhakar)

[ccc_my_favorite_select_button post_id="113863"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ವಿಶ್ವಕಪ್ ವಿಜೇತ ಅಂಧ ಮಹಿಳಾ ಕ್ರಿಕೆಟ್ ತಂಡಕ್ಕೆ ನಗದು ಬಹುಮಾನ, ಸರ್ಕಾರಿ ಉದ್ಯೋಗ ಘೋಷಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

ವಿಶ್ವಕಪ್ ವಿಜೇತ ಅಂಧ ಮಹಿಳಾ ಕ್ರಿಕೆಟ್ ತಂಡಕ್ಕೆ ನಗದು ಬಹುಮಾನ, ಸರ್ಕಾರಿ ಉದ್ಯೋಗ

ವಿಶ್ವಕಪ್ ವಿಜೇತ ಭಾರತದ ಅಂಧ ಮಹಿಳಾ ಕ್ರಿಕೆಟ್ ತಂಡಕ್ಕೆ ಶುಭ ಹಾರೈಸಿ ಅಭಿನಂದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ (Cmsiddaramaiah) ಕರ್ನಾಟಕದ ಕ್ರಿಕೆಟ್ ಪಟುಗಳಿಗೆ ತಲಾ ಹತ್ತು ಲಕ್ಷ ನಗದು ಬಹುಮಾನದ ಜೊತೆಗೆ ಸರ್ಕಾರಿ ಉದ್ಯೋಗ ಘೋಷಿಸಿದರು.

[ccc_my_favorite_select_button post_id="116681"]
ಕೆಲವೇ ಗಂಟೆಗಳಲ್ಲಿ ಸರಗಳ್ಳನ ಬಂಧನ.. ಸರ್ಕಲ್ ಇನ್ಸ್ಪೆಕ್ಟರ್ ಬಿ.ಕೆ.ಪಾಟೀಲ್ ತಂಡಕ್ಕೆ ವ್ಯಾಪಕ ಪ್ರಶಂಸೆ

ಕೆಲವೇ ಗಂಟೆಗಳಲ್ಲಿ ಸರಗಳ್ಳನ ಬಂಧನ.. ಸರ್ಕಲ್ ಇನ್ಸ್ಪೆಕ್ಟರ್ ಬಿ.ಕೆ.ಪಾಟೀಲ್ ತಂಡಕ್ಕೆ ವ್ಯಾಪಕ ಪ್ರಶಂಸೆ

ಮಹಿಳೆಯ ಮಾಂಗಲ್ಯ ಸರವನ್ನು ಕಿತ್ತು ಬೈಕ್‌ನಲ್ಲಿ ಪರಾರಿಯಾಗಿರುವ ಘಟನೆ ನಡೆದು ಕೆಲವೇ ಗಂಟೆಯೊಳಗೆ ಆರೋಪಿಯನ್ನು (Chain snatcher) ಬಂಧಿಸುವಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ಬಿ.ಕೆ.ಪಾಟೀಲ್ ನೇತೃತ್ವದ

[ccc_my_favorite_select_button post_id="116820"]
ದೊಡ್ಡಬಳ್ಳಾಪುರ: ನಿಂತಿದ್ದ ಬಸ್‌ಗೆ ಆಟೋ ಡಿಕ್ಕಿ.. ಮೂವರಿಗೆ ಪೆಟ್ಟು

ದೊಡ್ಡಬಳ್ಳಾಪುರ: ನಿಂತಿದ್ದ ಬಸ್‌ಗೆ ಆಟೋ ಡಿಕ್ಕಿ.. ಮೂವರಿಗೆ ಪೆಟ್ಟು

ಖಾಸಗಿ ಬಸ್ಗೆ ಹಿಂದಿನಿಂದ ಪ್ಯಾಸೆಂಜರ್ ಆಟೋ ಡಿಕ್ಕಿ ಹೊಡೆದ ಪರಿಣಾಮ (Accident) ಆಟೋದಲ್ಲಿ ಪ್ರಯಾಣಿಸುತ್ತಿದ್ದ ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಇಂದು ಸಂಜೆ ತಾಲೂಕಿನ ಕಂಟನಕುಂಟೆ ಸಮೀಪ ಸಂಭವಿಸಿದೆ.

[ccc_my_favorite_select_button post_id="116950"]

ಆರೋಗ್ಯ

ಸಿನಿಮಾ

ದರ್ಶನ್ ಸೆಲೆಬ್ರಿಟಿಸ್ಗೆ ಗುಡ್‌ನ್ಯೂಸ್: ಡೆವಿಲ್ ಸಿನಿಮಾದ 3ನೇ ಸಾಂಗ್ ಬಿಡುಗಡೆ| Video ಲಿಂಕ್ ಇಲ್ಲಿದೆ ನೋಡಿ

ದರ್ಶನ್ ಸೆಲೆಬ್ರಿಟಿಸ್ಗೆ ಗುಡ್‌ನ್ಯೂಸ್: ಡೆವಿಲ್ ಸಿನಿಮಾದ 3ನೇ ಸಾಂಗ್ ಬಿಡುಗಡೆ| Video ಲಿಂಕ್

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ( Actor Darshan) ಅಭಿನಯದ "ದಿ ಡೆವಿಲ್" (The Devil) ಸಿನಿಮಾದ ಮೂರನೇ ಗೀತೆ ಬಿಡುಗಡೆಯಾಗಿದೆ.

[ccc_my_favorite_select_button post_id="116277"]
error: Content is protected !!