ದೊಡ್ಡಬಳ್ಳಾಪುರ: ತಾಲೂಕಿನ ಪ್ರತಿಷ್ಠಿತ ಶಾಲೆ ಎಂಎಸ್ವಿ ಪಬ್ಲಿಕ್ ಶಾಲೆಯಲ್ಲಿ (MSV Public School) ಶಿಕ್ಷಕರ ದಿನಾಚರಣೆಯನ್ನು (Teachers’ Day) ಸಂಭ್ರಮದಿಂದ ಆಚರಿಸಲಾಯಿತು.
ಶಿಕ್ಷಕರ ದಿನಾಚರಣೆಯ ಅಂಗವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಕ್ಕಳು ನಡೆಸಿಕೊಟ್ಟರು.

ಶಿಕ್ಷಕರಿಗಾಗಿ ಮನರಂಜನಾ ಕ್ರೀಡೆಗಳನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು.

ಸಂಸ್ಥೆಯ ಅಧ್ಯಕ್ಷರಾದ ಎ. ಸುಬ್ರಮಣ್ಯ ಮಾತನಾಡಿ, ಗುರು ಕೇವಲ ಪದವಲ್ಲ, ಗುರುವಿಗಿಂತಲೂ ಮಿಗಿಲಾದುದು ಯಾವುದೂ ಇಲ್ಲ. ಏಕೆಂದರೆ ನಮ್ಮ ಬಾಳಿನ ಅಂಧಕಾರವನ್ನು ತೊಲಗಿಸುವ ನಮ್ಮ ಬಾಳಿಗೆ ಬೆಳಕು ನೀಡುವ ಆಶಾಕಿರಣವೇ ಗುರು. ವಿದ್ಯಾರ್ಥಿ ಜೀವನದಲ್ಲಿ ಏನೇ ಮಹತ್ತರ ಸಾಧನೆ ಮಾಡಲು ಗುರುವಿನ ಮಾರ್ಗದರ್ಶನ ಬಹಳ ಮುಖ್ಯ ಮುಂದೆ ಗುರಿಯಿರಬೇಕು. ಹಿಂದೆ ಗುರುವಿರಬೇಕು ಆಗ ವಿದ್ಯಾರ್ಥಿ ಜೀವನದಲ್ಲಿ ಉನ್ನತವಾದುದನ್ನು ಸಾಧಿಸಲು ಸಾಧ್ಯವಾಗುತ್ತದೆ.

ಹೀಗೆ ಶಿಕ್ಷಕರ ಹುದ್ದೆಯನ್ನು ಬಹಳ ಆನಂದಿಸಿ ಲಕ್ಷಾಂತರ ವಿದ್ಯಾರ್ಥಿಗಳ ಬಾಳಿಗೆ ಆಶಾಕಿರಣವಾಗಿ ನಂತರ ನಮ್ಮ ದೇಶದ ರಾಷ್ಟ್ರಪತಿ ಸ್ಥಾನದವರೆಗೆ ಏರಿದ ಮಹಾನ್ ಚೇತನ ನಮ್ಮ ನೆಚ್ಚಿನ ಗುರುಗಳಾದ ಡಾ. ಸರ್ವೆಪಲ್ಲಿ ರಾಧಾಕೃಷ್ಣನ್ ಇವರ ಜನ್ಮದಿನ ಇವರ ಜನ್ಮದಿನವನ್ನು ದೇಶದಾದ್ಯಂತ ಶಿಕ್ಷಕರ ದಿನವನ್ನಾಗಿ ಆಚರಿಸುತ್ತೇವೆ.

ರಾಧಾಕೃಷ್ಣನ್ ರವರು ಕೊಲ್ಕತ್ತಾ ವಿಶ್ವವಿದ್ಯಾಲಯದ ತತ್ವ ಶಾಸ್ತ್ರದ ಪ್ರಾಧ್ಯಾಪಕರಾಗಿ ನೇಮಕಗೊಂಡಾಗ ಮೈಸೂರಿನಿಂದ ಹೊರಟ ದಿನ ಅವರಿಗೆ ಕೊಟ್ಟಂತಹ ವೈಭವದ ಬೀಳ್ಕೊಡುಗೆ ಯಾವ ಚಕ್ರವರ್ತಿಗೂ ದೊರತಿರಲಾರದು. ಅಂದಿನ ವಾತಾವರಣದಲ್ಲಿದ್ದುದು ವೈಭವಕ್ಕಿಂತ ಹೆಚ್ಚಾಗಿ ಹೃದಯದಿಂದ ನೇರವಾಗಿ ಹೊರಹೊಮ್ಮಿದ ಗುರುಪ್ರೇಮ ವಿದ್ಯಾರ್ಥಿಗಳೆಲ್ಲರಲ್ಲೂ ಭಕ್ತಿ ಪ್ರೇಮದ ಚಿಲುಮೆ ಉಕ್ಕಿ ಬಂತು. ರಾಧಾಕೃಷ್ಣನ್ ಅವರನ್ನೂ ಮಹಾರಾಜ ಕಾಲೇಜಿನಿಂದ ರೈಲು ನಿಲ್ದಾಣಕ್ಕೆ ಕರೆದೊಯ್ಯುವಾಗ ಸಾರೋಟಿಗೆ ಕುದುರೆಯನ್ನು ಕಟ್ಟಲಿಲ್ಲ, ಸ್ವತಃ ವಿದ್ಯಾರ್ಥಿಗಳೇ ಎಳೆದೊಯ್ದರು.
ಇದನ್ನೂ ಓದಿ: ದೊಡ್ಡಬಳ್ಳಾಪುರ: ಸರಸ್ವತಿ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ ಸಂಭ್ರಮ
ರಾಧಾಕೃಷ್ಣನ್ ರವರ ಕಾಂಪಾರ್ಟ್ ಮೆಂಟನ್ನು ಒರಗು ದಿಂಬು ಹಾಗೂ ರತ್ನಗಂಬಳಿಯನ್ನು ಹಾಕಿ ಮಲಗುವ ಸೀಟನ್ನು ನೆಲವನ್ನು ಹೂವಿನಿಂದ ಸುಪ್ಪತ್ತಿಗೆಯಂತೆ ಮಾಡಿ ದೈವ ಮಂದಿರದಂತೆ ಅಲಂಕಾರ ಮಾಡಿದ್ದರು ಎಂದು ತಿಳಿಸಿದರು.

ಉಪಾಧ್ಯಕ್ಷ ಸ್ವರೂಪ್ ಮಾತನಾಡಿ, ಇತ್ತೀಚೆಗೆ ಬಾಹ್ಯಾಕಾಶಕ್ಕೆ ಹೋಗಿ ಬಂದ ಭಾರತದ ಹೆಮ್ಮೆಯ ಪುತ್ರ ಶುಭಾಂಶು ಶುಕ್ಲರವರ ಸಾಧನೆಯನ್ನು ಹಾಗೂ ಅವರು ಅಲ್ಲಿ ಕೈಗೊಂಡ ಅಧ್ಯಾಯಗಳ ಬಗ್ಗೆ, ಇದಕ್ಕೆ ಅವರ ಮಾರ್ಗದರ್ಶಕ ಗುರುಗಳ ಬಗ್ಗೆ ಅವರ ಮಹತ್ತರ ಕೊಡುಗೆಯ ಬಗ್ಗೆ ಹಾಗೇಯೇ ಮಕ್ಕಳಲ್ಲಿ ಭವಿಷ್ಯದ ಭರವಸೆಗಳನ್ನು ಮೂಡಿಸಿದರು. ಮತ್ತು ಮಕ್ಕಳು ಶುಭಾಂಶು ಶುಕ್ಲರವರಂತೆ ಅಗಾಧವಾದುದನ್ನು ಸಾಧಿಸಬೇಕು ಎಂದು ತಿಳಿಸಿದರು.
ಸಂಸ್ಥೆಯ ಪ್ರಾಂಶುಪಾಲರಾದ ರೆಮ್ಯ ಬಿ.ವಿ. ಮಾತನಾಡಿ, ರಾಮಕೃಷ್ಣ ಪರಮಹಂಸ ಹಾಗೂ ವಿವೇಕಾನಂದರ ಗುರುಶಿಷ್ಯರ ಸಂಬಂಧದ ಬಗ್ಗೆ ತಿಳಿಸಿದರು. ಹಾಗೆಯೇ ವಿವೇಕಾನಂದರು ಜಗತ್ತಿಗೆ ನೀಡಿದ ಸಂದೇಶಗಳ ಬಗ್ಗೆ ಅವರು ಪಾಲಿಸಿದ ಶಿಸ್ತು ಸಂಯಮದ ಬಗ್ಗೆ ಹಾಗೂ ಅವರಲ್ಲಿದ್ದ ಏಕಾಗ್ರತೆಯ ಛಲ, ಧೈರ್ಯ ಸಾಹಸ ಗುಣಗಳನ್ನು ಕೊಂಡಾಡಿದರು.