ದೊಡ್ಡಬಳ್ಳಾಪುರ (Doddaballapur): ಇಂದಿನ ಆಧುನಿಕ ತಂತ್ರಜ್ಞಾನ, ಮಾಧ್ಯಮಗಳ ಪ್ರಭಾವದ ನಡುವೆ ನಮ್ಮ ನೈಜ ಕಲೆಗಳು ಮರೆಯಾಗುತ್ತಿದ್ದು, ಕಲಾವಿದರಿಗರ ಉತ್ತೇಜನ ನೀಡುವ ವೇದಿಕೆಗಳ ಅಗತ್ಯವಿದೆ. ಈ ದಿಸೆಯಲ್ಲಿ ಸರ್ಕಾರ ಹಾಗೂ ಸಮುದಾಯ ಕೈ ಜೋಡಿಸಬೇಕಿದ್ದು, ಕಲೆ ಉಳಿಸಿ ಬೆಳೆಸುವ ಕೈಂಕರ್ಯ ಎಲ್ಲಾ ಕಡೆ ಆಗಬೇಕಿದೆ ಎಂದು ನಗರಸಭಾ ಸದಸ್ಯ ಟಿ.ಎನ್.ಪ್ರಭುದೇವ್ ಹೇಳಿದರು.
ನಗರದ ಕಲಾಭವನದಲ್ಲಿ ದೊಡ್ಡಬಳ್ಳಾಪುರ ತಾಲೂಕು ಕಲಾವಿದರ ಸಂಘ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಡೆದ ಸಾಂಸ್ಕೃತಿಕ ಕಲಾ ಜ್ಯೋತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದೊಡ್ಡಬಳ್ಳಾಪುರದಲ್ಲಿ ಅಂಸಖ್ಯಾತ ಕಲಾವಿದರಿದ್ದು, ದಶಕಗಳಿಂದಲೂ ಇಲ್ಲಿ ಸಾವಿರಾರು ಕಲಾವಿದರು ಒಡನಾಟವಿರಿಸಿಕೊಂಡಿದ್ದಾರೆ. ನಾಟಕರತ್ನ ಗುಬ್ಬಿ ವೀರಣ್ಣ, ಮಾಸ್ಟರ್ ಹಿರಣಯ್ಯ ನಟಕ ಮಂಡಲಿಗಳು ಇಲ್ಲಿ ನೂರಾರು ಪ್ರಸಂಗಗಳನ್ನು ಪ್ರದರ್ಶಿಸಿದ್ದಾರೆ. ಜಾನಪದ ತಜ್ಞ ಎಚ್.ಎಲ್.ನಾಗೇಗೌಡ ನಮ್ಮ ತಾಲೂಕಿನ ಜನಪದ ಗಾಯನವನ್ನು ಸುಮಾರು 500 ಗಂಟೆಗಳ ಕಾಲ ಆಲಿಸುವಂತೆ ಧ್ವನಿ ಮುದ್ರಣ ಮಾಡಿದ್ದಾರೆ. ಕಲಾವಿದರಿಗೆ ಯಾವುದೇ ಜಾತಿ, ಪಂಗಡಗಳಿಲ್ಲ. ಅವರಿಗೆ ಕಲೆಯೇ ಸರ್ವಸ್ವ. ಇಂತಹ ಕಳಾವಿದರಿಗೆ ಉತ್ತೇಜನ ನೀಡುವ ಕಲಾವಿದರ ಸಂಘದ ಕಾರ್ಯಅಭಿನಂದನೀಯವಾಗಿದೆ.
ನಗರದಲ್ಲಿ ಕನ್ನಡ ಜಾಗೃತ ಭವನ ಇಲ್ಲಿನ ಜನರ ಹೋರಾಟದ ಆಸ್ಮಿತೆಯಾಗಿದ್ದು, ಈ ಮೂಲಕ ಉತ್ತಮ ಸಂದೇಶ ನೀಡುವ ಕಾರ್ಯವಾಗಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ರಂಗ ಕಲಾವಿದರಾದ ಚಿಕ್ಕಹೆಜ್ಜಾಜಿ ಜಿ.ಕೃಷ್ಣಪ್ಪ, ಎಂ.ಬಾಲಕೃಷ್ಣ, ಎನ್.ಮಂಜುನಾಥ್ ಅವರನ್ನು ಸನ್ಮಾನಿಸಲಾಯಿತು.
ತಾಲೂಕು ಕಲಾವಿದರ ಸಂಘದ ಅಧ್ಯಕ್ಷ ಎನ್.ರಾಮಾಂಜಿನಪ್ಪ ಅದ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಡಿ.ಶ್ರೀಕಾಂತ, ತಾಲೂಕು ಕಲಾವಿದರ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಚಂದ್ರಶೇಖರ್, ಉಪಾಧ್ಯಕ್ಷರಾದ ಎಚ್.ಪ್ರಕಾಶ್ ರಾವ್, ನರಸಿಂಹಯ್ಯ, ಖಜಾಂಚಿ ಎಚ್.ಮುನಿಪಾಪಯ್ಯ, ಸಹ ಕಾರ್ಯದರ್ಶಿ ಎ.ಮಂಜುನಾಥ್, ಸಲಹಾ ಸಮಿತಿಯ ಎಂ.ವೆಂಕಟರಾಜು, ಜಂಟಿ ಕಾರ್ಯದರ್ಶಿ ಮುದ್ದುಕೃಷ್ಣಪ್ಪ ಯಕ್ಷಗಾನ ಕಲಾವಿದರಾದ ಕೆ.ಸಿ.ನಾರಾಯಣ್,ಆನಂದ ಮೂರ್ತಿ, ರಮೇಶ್, ಮಹದೇವ್ ಸೇರಿದಂತೆ ಕಲಾವಿದರ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು.
ಕಾರ್ಯಕ್ರಮದ ಅಂಗವಾಗಿ ತಾಲೂಕಿನ ವಿವಿಧ ಕಲಾವಿದರಿಂದ ರಂಗಗೀತೆ, ಜನಪದ ಗೀತೆ, ಭಜನೆ, ಭಕ್ತಿಗೀತೆಗಳ ಗಾಯನ ನಡೆಯಿತು.