ದೊಡ್ಡಬಳ್ಳಾಪುರ; ವಿವಿಧೆಡೆ ಅಕ್ರಮ ಬಾಂಗ್ಲಾ ವಲಸಿಗರು (illegal Bangladeshi immigrants) ನೆಲೆಸಿದ್ದಾರೆ ಎಂಬ ಸಾಮಾಜಿಕ ಜಾಲತಾಣದಲ್ಲಿನ ವದಂತಿ ಕುರಿತಾದ ವರದಿ ಹಿನ್ನೆಲೆಯಲ್ಲಿ ಇಂದು ನಗರ ಠಾಣೆ ಇನ್ಸ್ಪೆಕ್ಟರ್ ಅಮರೇಶ್ ಗೌಡ ಅವರು ನೇಕಾರ ಮುಖಂಡರ ತುರ್ತು ಸಭೆ ನಡೆಸಿದ್ದಾರೆ.

ಈ ವೇಳೆ ಸಾಮಾಜಿಕ ಜಾಲತಾಣದಲ್ಲಿನ ಚರ್ಚೆಯ ಕುರಿತು ಸಭೆಯಲ್ಲಿ ಚರ್ಚಿಸಿದ್ದು, ನೇಕಾರಿಕೆ ಕಾರ್ಯಕ್ಕೆ ನೇಮಕವಾಗಿರುವ ಹೊರ ರಾಜ್ಯದವರ ದಾಖಲೆ ಸಂಗ್ರಹಿಸಿ ಪೊಲೀಸ್ ಠಾಣೆ ನೀಡುವಂತೆ ಸೂಚನೆ ನೀಡಿದ್ದಾರೆ.
ಅಲ್ಲದೆ ಯಾವುದೇ ಅಹಿತಕರ ಘಟನೆ, ಚಲನವಲನ ಕಂಡು ಬಂದಲ್ಲಿ ಪೊಲೀಸರಿಗೆ ಮಾಹಿತಿ ನೀಡುವಂತೆ ತಿಳಿಸಿದ್ದಾರೆಂದು ತಿಳಿದುಬಂದಿದೆ.
ಇನ್ನೂ ನೇಕಾರ ಸಂಘಟನೆಗಳ ಮುಖಂಡರು ಪೊಲೀಸರು ಸೂಚನೆಗೆ ಸಹಮತ ನೀಡಿದ್ದು, ಭಾರತದೇ ಇತರೆ ರಾಜ್ಯದವರು ಹಲವು ವರ್ಷಗಳಿಂದ ದೊಡ್ಡಬಳ್ಳಾಪುರದ ನೇಕಾರಿಕೆ ಕೆಲಸ ಮಾಡುತ್ತಿದ್ದು ಯಾವುದೇ ಅನುಮಾನಸ್ಪದವಾಗಿ, ಕಾನೂನು ಉಲ್ಲಂಘನೆಯಂತ ಘಟನೆ ನಡೆದಿಲ್ಲ.
ಈ ಕುರಿತಂತೆ ಕೆಲವರು ಕಪೋಕಲ್ಪಿತವಾಗಿ ವದಂತಿ ಹರಡುತ್ತಿದ್ದಾರೆ. ಆ ರೀತಿ ಆರೋಪ ಮಾಡುವ ಮುನ್ನ ದಾಖಲೆ ಪರಿಶೀಲನೆ ಮಾಡಬೇಕು. ಇಲ್ಲವೇ ಪೊಲೀಸರಿಗೆ ಮಾಹಿತಿ ನೀಡಬೇಕು, ಸುಳ್ಳು ಆರೋಪ ಇರಬಹುದೆಂದು ಬೇಸರ ವ್ಯಕ್ತಪಡಿಸಿದರು ಎಂದು ತಿಳಿದುಬಂದಿದೆ.
ಈ ವೇಳೆಗೆ ನೇಕಾರ ಸಂಘಟನೆ ಮುಖಂಡರಾದ ಹೇಮಂತ್ ರಾಜು, ವೆಂಕಟೇಶ್ ಸೇರಿದಂತೆ ಅನೇಕರು ಇದ್ದರು.
ಹಿನ್ನೆಲೆ
ನಿನ್ನೆ ರಾತ್ರಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಬಿಜೆಪಿ ಓಬಿಸಿ ಮೋರ್ಚಾ ಅಧ್ಯಕ್ಷ ರಾಮಕೃಷ್ಣಯ್ಯ (ರಾಂ ಕಿಟ್ಟಿ) ಅವರು ಫೇಸ್ಬುಕ್ ಖಾತೆಯಲ್ಲಿ ದೊಡ್ಡಬಳ್ಳಾಪುರದಲ್ಲಿ ಅಕ್ರಮ ಬಾಂಗ್ಲಾ ವಲಸಿಗರು ವ್ಯಾಪಕವಾಗಿ ಹರಡಿಕೊಂಡಿದ್ದಾರೆ. ಇದು ಮುಂದೆ ಅತೀ ದೊಡ್ಡ ಸಮಸ್ಯೆಯಾದಿತು ಎಂದು ಕಳವಳ ವ್ಯಕ್ತಪಡಿಸಿ, ಬರೆದುಕೊಂಡಿದ್ದರು
ಇದಕ್ಕೆ ಅನೇಕರು ಪ್ರತಿಕ್ರಿಯೆ ನೀಡಿದ್ದು, ದೊಡ್ಡಬಳ್ಳಾಪುರ ನಗರದ ಕಾಲೇಜು ರಸ್ತೆಗಳಲ್ಲಿ, ಹೋಟೆಲ್ ಬಳಿ, ಮಾರುಕಟ್ಟೆ, ಬಸ್ ನಿಲ್ದಾಣ, ರೈಲ್ವೇ ನಿಲ್ದಾಣ, ಕೈಗಾರಿಕಾ ಪ್ರದೇಶಗಳಲ್ಲಿ ಗುಂಪು ಗುಂಪಾಗಿ ಓಡಾಡುತ್ತಿರುತ್ತಾರೆ. ಇದರಿಂದ ಆತಂಕಕ್ಕೆ ಕಾರಣವಾಗುತ್ತಿದೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಅಲ್ಲದೆ ಪೊಲೀಸ್ ಇಲಾಖೆ ಕೂಡಲೇ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಈ ಕುರಿತಂತೆ ಹರಿತಲೇಖನಿ ವರದಿ ಮಾಡಿದ್ದು, ಅನೇಕ ಓದುಗರು ಪ್ರತಿಕ್ರಿಯೆ ನೀಡಿದ್ದಾರೆ.
ಜಯರಾಮು ನಂದಿನಿ
ಯಾವುದೇ ಹೋಟೆಲ್ ಗಳಿಗೆ ಹೋದರು ಇವರೇ ಮತ್ತು ಸಂಜೆ 5-10 ಜನ gumpu ಗುಂಪು ಓಡಾಟ ಹೆಚ್ಚಾಗಿದೆ.
Nagarjudg Dn
ಮೊದಲಿಗೇ ಇಂಥವರಿಗೆ ಇರಲು ಮನೆ ಬಾಡಿಗೆ ಕೊಡುವುದು ಕೆಲಸ ಕೊಡುವುದು ನಾವೆ ತಾನೆ, ನೇಕಾರರ ಬದುಕಲ್ಲಿ ಇವರುಗಳು ಅತಂತ್ರ ಪರಿಸ್ಥಿತಿ ಉಂಟು ಮಾಡುತ್ತಿದಾರೆ. ಮತ್ತೆ ನಮ್ಮ ಕಾರ್ಖಾನೆಯಲ್ಲಿ ಸಹ ಇವರೆ ತುಂಬಿ ಹೋಗಿದಾರೆ.
ಮತ್ತೆ ನಮ್ಮ 8 ವಾರ್ಡಲ್ಲಿ ಬಹುತೇಕ ಇಲ್ಲಿ ವಾಸವಾಗಿದ್ದಾರೆ. ಇಂಥವರಿಗೆ ಮನೆ ಬಾಡಿಗೆ ಕೊಡುತ್ತಿರುವುದು ದುರಂತಕ್ಕೆ ಕಾರಣವಾಗುತ್ತೆ, ನಮ್ಮ ವಾರ್ಡಲ್ಲಿ ಒಂದು ಕುಟುಂಬಕ್ಕೆ ಸೇರಿದವರ ವ್ಯಾಪ್ತಿಗೇ ಅಂದಾಜು 80 ,90 ಮನೆಗಳನ್ನ ಬಿಹಾರ, ಅಸ್ಸಾಂನಿಂದ ಬಂದವರಿಗೆ ಬಾಡಿಗೆ ಕೊಟ್ಟಿದಾರೆ. ಕಾರಣ ಕೇಳಿದಷ್ಟು ಬಾಡಿಗೆ ಬರುತ್ತೆ, ಆದಾಯ ಆಗುತ್ತೆ ಅಂತ.
ಮೊದಲಿಗೆ 31 ವಾರ್ಡ್ ಗಳಲ್ಲಿ ಅತಿ ಹೆಚ್ಚು ಯಾರು ಬಾಡಿಗೆ ಮನೆಗಳನ್ನ ಕೊಟ್ಟಿದಾರೆ ಅನ್ನುವುದು ಪತ್ತೆ ಮಾಡಿ ಅವರ ಮೇಲೆ ಕ್ರಮ ತಗೊಬೇಕು. ಮೊದಲಿಗೆ 8ನೇ ವಾರ್ಡಲ್ಲಿ ಅತಿ ಹೆಚ್ಚು ಮನೆ ಬಾಡಿಗೆ ಕೊಟ್ಟಿರುವವರು ಯಾರು ಅಂತ ತಿಳಿದುಕೊಂಡು ಕ್ರಮ ಜರುಗಿಸಿ ಇಂಥವರಿಂದಲೇ ಸ್ಥಳಿಯರಿಗೆ ಅತಂತ್ರ ಸ್ಥಿತಿ ಊಂಟಾಗಿರುವುದು.
Ramachandra Rao
ಬರಿ ಚರ್ಚೆ ಆದರೆ ಸಾಲದು ಕಡಿಯೋಣ ಹಾಕಲೇಬೇಕಾಗಿದೆ. ಅನಿವಾರ್ಯ ಕೂಡ ಮತ್ತೊಂದು ದಿನ ಸ್ಥಳೀಯರಿಗೆ ಉದ್ಯೋಗ ಸಿಗದು.
Preetham Roy
ಈಗಾಲೇ ಸ್ಥಳೀಯರಿಗೆ ಉದ್ಯೋಗ ಸಿಗುತ್ತಿಲ್ಲ. ಯಾವುದೇ ಕಂಪನಿ, ಕಾರ್ಖಾನೆಗಳಿಗೆ ಓದರೆ ಅವರೆ ತುಂಬಿದ್ದಾರೆ.
ಕನ್ನಡದಲ್ಲಿ ಮಾತನಾಡಿದರೆ ಅರ್ಥವಾಗದೆ ಕ್ಯಾ ಅಂತಾರೆ. ನಾವು ನಮ್ಮ ರಾಜ್ಯದಲ್ಲಿ ಇದ್ದೇವೋ..? ಯಾವ ರಾಜ್ಯದಲ್ಲಿ ಇದ್ದೇವೆ ಅನ್ನೋದೇ ಗೊತ್ತಾಗಲ್ಲ. ಮುಂದೆ ದೊಡ್ಡಬಳ್ಳಾಪುರದಲ್ಲಿ ಕನ್ನಡಿಗರ ಹುಡುಕಬೇಕಾದ ಪರಿಸ್ಥಿತಿ ದೂರ ಇಲ್ಲ.
Girija Giri
ಸಂಘ ಸಂಸ್ಥೆಗಳು ಎಚ್ಚರಿಕೆ ವಹಿಸಬೇಕು
ಇಲ್ಲದೆ ಹೋದರೆ ಸ್ಥಳೀಯ ಜನರಿಗೆ ಆಪಾಯ.
Chandrasekhar DM Chandru
ಇವರು ಯಾವ ರಾಜ್ಯದವರು ಎಂದು ಯಾರಿಗೂ ತಿಳಿಯುವುದಿಲ್ಲ. ದೊಡ್ಡಬಳ್ಳಾಪುರದಲ್ಲಿ ನೇಕಾರಿಕೆಯು ಮುಖ್ಯ ಕಸಬಾಗಿದ್ದು, ಇದರ ಸಲುವಾಗಿ ಬಂದು ಅನ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರಬಹುದು. ಇವರು ದೊಡ್ಡಬಳ್ಳಾಪುರಕ್ಕೆ ಬಂದ ಮೇಲೆ ದೊಡ್ಡಬಳ್ಳಾಪುರದ ಸ್ಥಳೀಯ ನೇಕಾರರಿಗೆ ಅವಕಾಶವಿಲ್ಲದಂತೆ ಆಗಿದೆ. ಹಾಗೂ ಕಡಿಮೆ ಕೂಲಿಗೆ ಮಗ್ಗ ಬಿಡುವುದರಿಂದ ಇಲ್ಲಿನ ಸ್ಥಳೀಯರಿಗೂ ತುಂಬಾ ತೊಂದರೆ ಆಗುತ್ತಿದೆ.
ಅರುಣ್ ದಾದಾ
ಕಾಲೇಜ್ ರಸ್ತೆ.. ಇಸ್ಲಾಂಪುರ ರಸ್ತೆಯಲ್ಲಿ ಇವರದೇ ಆಟಾಟೋಪ.. ಇಲ್ಲಿನ ಸ್ಥಳೀಯ ಒನರ್ ಗಳು ಹಿಂದೆ ಮುಂದು ನೋಡದೆ ಅವರನ್ನು ಕೆಲಸಕ್ಕೆ ಇಟ್ಟುಕೊಂಡು ಕಡಿಮೆ ಸಂಬಳ ಕೊಟ್ಟು ದುಡಿಸಿಕೊಳ್ಳುತ್ತಿದ್ದಾರೆ. ಏನಾದರೂ ಅಚಾತುರ್ಯ ನಡೆದು ಕುತ್ತಿಗೆಗೆ ಬರುವವರೇಗೂ ಸ್ಥಳೀಯರು ಎಚ್ಚೆತ್ತುಕೊಳ್ಳುವುದಿಲ್ಲ.
G. Venkatesh Venkatesh
ನಾವು ಆಗಾಗ್ಗೆ. ಹೇಳುತ್ತಿರುತ್ತೇವೆ, ಹೊರರಾಜ್ಯದವರಿಗೆ ಸಲಿಗೆ ನೀಡಬೇಡಿ ಎಂದು, ಮುಂದಿನ ದಿನಗಳಲ್ಲಿ ಅಪಾಯ. ಕಟ್ಟಿಟ್ಟ ಬುತ್ತಿ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.