Open the door, Bigg Boss

ಬಾಗಿಲು ತೆಗೆದು ಬಿಡಿ ಬಿಗ್ ಬಾಸ್; ವೀಕ್ಷಕರು ರೊಚ್ಚಿಗೆದ್ದಿದ್ದೇಕೆ ಗೊತ್ತೆ..!

ಕೆ.ಎಂ.ಸಂತೋಷ್, ಆರೂಢಿ ( ದೊಡ್ಡಬಳ್ಳಾಪುರ): ಬಿಗ್​ಬಾಸ್​ (Bigg Boss) 12 ನೇ ಸೀಸನ್ ರಿಯಾಲಿಟಿ ಶೋ ಯಶಸ್ವಿಯಾಗಿ 50ನೇ ದಿನ ಮುಗಿಸಿದ್ದು, ಗಿಲ್ಲಿ ನಟನ ವಿರುದ್ಧ ದೂರು, ಅಶ್ವಿನಿ ಗೌಡ ಅವರ ಕೂಗಾಟ, ಕಣ್ಣೀರು ಸಾಮಾಜಿಕ ಜಾಲತಾಣದಲ್ಲಿ, ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗುತ್ತಿದೆ.

ಕಳೆದ ಶನಿವಾರ ಅಶ್ವಿನಿ ಗೌಡ ಬಣದಲ್ಲಿದ್ದ ಕಾಕ್ರೋಚ್ ಸುಧೀರ್ ಹೊರಗೆ ಬಂದಿದ್ದಾರೆ.

ಬಿಗ್​ಬಾಸ್​ 12ರಲ್ಲಿ ಗಿಲ್ಲಿ ನಟ ತಂಡ ಹಾಗೂ ಅಶ್ವಿನಿ ತಂಡ ಎಂದು ವಿಂಗಡನೆಯಾಗಿದ್ದು, ಗಿಲ್ಲಿ ನಟ ತಂಡ ಎಂದರೆ ಮನರಂಜನೆ, ಅಶ್ವಿನಿ ತಂಡ ಎಂದರೆ ಜಗಳ, ಕಿರಿಕ್ ಎಂಬುದು ವೀಕ್ಷಕರು ಬಹುತೇಕ ಅಭಿಪ್ರಾಯಕ್ಕೆ ಬಂದಿರುವುದು ಕಳೆದ ವರದಿಯಲ್ಲಿ ಹೇಳಿದ್ದೇವೆ.

ದಿನೇ ದಿನೇ ಅಶ್ವಿನಿ ತಂಡದ ಪರ ಇರುವವರು ಒಬ್ಬರಾಗಿ ಗಿಲ್ಲಿ ತಂಡವನ್ನು ಸೇರುತ್ತಿದ್ದು, ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿಯ 2.O ಆಟ ಶುರುವಾಗಿದೆ.

ಇನ್ನೂ ರಘು ಕ್ಯಾಪ್ಟನ್ ಆದ ಬಳಿಕ ಸ್ವಯಂ ಘೋಷಿತ ವೈಸ್ ಕ್ಯಾಪ್ಟನ್ ಗಿಲ್ಲಿ ಕ್ವಾಟ್ಲೆ ಶುರು ಮಾಡಿದ್ದರು. ಆದರೆ ರಘು ಗಿಲ್ಲಿನ ಕೆಲಸಕ್ಕಿಟ್ಟಿದ್ದು ನೋಡಿ ಯಾಕಣ್ಣ ಹೀಗ್ ಬೆನ್ನಿಗೆ ಬಿದ್ದೆ ಎಂದು ಗೊಣಗಾಡಿದ್ದು ವೀಕ್ಷಕರನ್ನು ರಂಜಿಸಿದೆ‌.

ಇನ್ನೂ ಮಂಗಳವಾರ ರಾತ್ರಿ ನಡೆದ ಸ್ಪರ್ಧೆಯ ವೇಳೆ ಗಿಲ್ಲಿ ಹಾಗೂ ಅಶ್ವಿನಿ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದ್ದು, ಮತ್ತೆ ಅಶ್ವಿನಿ ಗೌಡ ಬೇಕಾಬಿಟ್ಟಿ ಮಾತಾಡಿದ್ದು, ಗಿಲ್ಲಿ ತಿರುಗೇಟು ನೀಡಿದ್ದು, ಬಳಿಕ ಅಶ್ವಿನಿ ಗೌಡ ಕಣ್ಣೀರು ಹಾಕಿದ್ದರು. ಈ ವೇಳೆ ಗಿಲ್ಲಿಯದ್ದೇ ತಪ್ಪು ಎಂದು ಕೆಲ ಸದಸ್ಯರು ಹೇಳಿದರು, ವೀಕ್ಷಕರು ಮಾತ್ರ ಅಶ್ವಿನಿ ಗೌಡ ತಪ್ಪು ಎಂದು ವಕಾಲತ್ತು ವಹಿಸುತ್ತಾರೆ.

ಮುಂದುವರಿದು ಗುರುವಾರ ಸಂಜೆ ಕೂಡ ಅಶ್ವಿನಿ ಗೌಡ ಎಡವಟ್ಟು ಮಾಡಿಕೊಂಡಿದ್ದು, ಕ್ಯಾಪ್ಟನ್ ರಘು ಅವರು ಕೆಲಸ ಮಾಡಲು ಹೇಳಿದಾಗ ವರ್ತಿಸಿದ ರೀತಿ, ರಘು ವಿರುದ್ಧ ಏಕವಚನ ಬಳಕೆ, ಆಕ್ರೋಶ, ಬಾಗಿಲು ಬಳಿ ಬಂದು ನಾ ಇಲ್ಲಿ ಇರಲ್ಲ ಹೊರಟೋಗುವೆ ಬಾಗಿಲು ತೆರೆಯಿರಿ ಎಂದು ಹೈಡ್ರಾಮ ಸೃಷ್ಟಿಸಿದರು.

ಈ ವರೆಗೆ ಒಂದು ಹಂತದಲ್ಲಿ ಗಿಲ್ಲಿಯ ತಂಡ ಪರವಾಗಿರುವ ವೀಕ್ಷಕರು ಕೇರಳಿದ್ದು, ಈಯಮ್ಮನ ನಾಟಕ ನೋಡಲು ಸಾಧ್ಯವಾಗುತ್ತಿಲ್ಲ‌. ದಿನಾ ಒಂದೊಂದು ಡ್ರಾಮ ತಗೆದು ಸಿಂಪತಿ ಪಡೆಯಲು ಮುಂದಾಗಿದ್ದಾರೆ. ಅವಕಾಶ ಬಂದಿದೆ ಬಾಗಿಲು ತೆಗೆದು ಆಚೆ ಕಳಿಸಿಬಿಡಿ, ಬಿಗ್ ಬಾಸ್ ನೋಡಲು ಸಾಧ್ಯವಾಗದಷ್ಟು ಬೇಸರ ಅಶ್ವಿನಿ ಗೌಡ ಸೃಷ್ಟಿಸುತ್ತಿದ್ದಾರೆ.

ಈಕೆ ರಕ್ಷಿತ, ಕಾವ್ಯ, ಗಿಲ್ಲಿ ಈಗ ರಘು ಅವರ ವಿರುದ್ಧ ಬಳಸುವ ಭಾಷೆ ಮಿತಿ ಮೀರಿದೆ. ಮೊದಲು ಗೌರವವನ್ನ ಕೊಟ್ಟು ಆನಂತರ ನಿರೀಕ್ಷೆ ಮಾಡಬೇಕು. ಅಶ್ವಿನಿ ಇತರರಿಗೆ ಗೌರವ ಕೊಡೋದಿಲ್ಲ. ಆದರೆ, ಬೇರೆಯವರು ಅಶ್ವಿನಿಗೆ ಗೌರವ ಕೊಡಬೇಕು.

ಗಿಲ್ಲಿ ನಟನ ಯೋಗ್ಯತೆ ಬಗ್ಗೆ ಅಶ್ವಿನಿ ಮಾತಾಡುತ್ತಾರೆ. ಅದಕ್ಕೆ ಪ್ರತಿಕ್ರಿಯೆ ಬಂದಾಗ ನಾಟಕ ಮಾಡುತ್ತಾರೆ’ ದಯವಿಟ್ಟು ಆಚೆ ಕಳಿಸಿಬಿಡಿ ಎಂದು ವಿಡಿಯೋಗಳ ಮೂಲಕ ಒತ್ತಾಯಿಸುತ್ತಿದ್ದಾರೆ.

’ನೀನ್ಯಾವನೋ’’, ‘‘ಹೋಗೋಲೋ’’, ‘’ನಿನ್ ಯೋಗ್ಯತೆಗಿಷ್ಟು..’’, ‘’ಮುಚ್ಕೊಂಡ್ ಮಲ್ಕೋ’’, ‘’ಎಸ್ ಕ್ಯಾಟಗರಿ’’, ‘’ಅಮಾವಾಸ್ಯೆ’’ ಮುಂತಾದ ಮಾತುಗಳು ಅಶ್ವಿನಿ ಗೌಡ ಬಾಯಿಂದಲೇ ಬಂದಿದೆ. ಇನ್ನೊಬ್ಬರ ಬಗ್ಗೆ ಕೇವಲವಾಗಿ ಮಾತಾಡುವ ಅಶ್ವಿನಿ ಗೌಡ, ಬೇರೆಯವರಿಂದ ಗೌರವ ನಿರೀಕ್ಷಿಸೋದು ಸರಿಯೇ? ಎಂದು ವೀಕ್ಷಕರು ಪ್ರಶ್ನೆ ಮಾಡುತ್ತಿದ್ದಾರೆ.

ಗಿಲ್ಲಿ ನಟ ಹಾಗೂ ರಘು ಜೊತೆ ಜೋರು ಜಗಳ ಆಡಿದ್ಮೇಲೆ ಅಶ್ವಿನಿ ಗೌಡ ಕಣ್ಣೀರು ಸುರಿಸಿದ್ದಾರೆ. ಅವಮಾನ ಆಗಿದೆ, ಇಲ್ಲಿರೋಲ್ಲ, ಹೊರಗೆ ಹೋಗಬೇಕು ಅಂತ ಹಠ ಹಿಡಿದಿದ್ದಾರೆ. ಊಟ, ತಿಂಡಿ ಬಿಟ್ಟು ಸತ್ಯಾಗ್ರಹ ಮಾಡುತ್ತಿರುವ ಅಶ್ವಿನಿ ಗೌಡ ಬಗ್ಗೆ ವೀಕ್ಷಕರು ಕಿಡಿ ಕಾರಿದ್ದಾರೆ.

ಅಲ್ಲದೆ ನಿರೂಪಕ ಕಿಚ್ಚ ಸುದೀಪ್ ಅವರಿಗೂ ಪ್ರಶ್ನೆ ಮಾಡುತ್ತಿದ್ದು, ಬರಲಿರುವ ವಾರದ ಸಂತೆಯಲ್ಲಿ ಆಕೆಯ ಪರ ಮೃದು ಧೋರಣೆ ತೋರಿದರೆ ಬಿಗ್ ಬಾಸ್ ನೋಡುವುದ ನಿಲ್ಲಿಸುತ್ತೇವೆ ಎಂದು ಎಚ್ಚರಿಕೆ ನೀಡುತ್ತಿದ್ದಾರೆ.

ಒಟ್ಟಾರೆ ಬಿಗ್ ಬಾಸ್ ಸಿಸನ್ 12 ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೆ ಒಳಗಾಗುತ್ತಿದ್ದು, ಗಿಲ್ಲಿ ತಂಡದ ಪರ ಈ ವಾರವೂ ಬೆಂಬಲ ಮುಂದುವರಿದೆ.

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ವೀಕ್ಷಕರು ಹಂಚಿಕೊಂಡಿರುವ ವಿಡಿಯೋ ಬಳಸಲಾಗಿದೆ.!

ರಾಜಕೀಯ

ದೊಡ್ಡಬಳ್ಳಾಪುರ TAPMCS ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ..!

ದೊಡ್ಡಬಳ್ಳಾಪುರ TAPMCS ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ..!

ದೊಡ್ಡಬಳ್ಳಾಪುರ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ (TAPMCS) ಅಧ್ಯಕ್ಷ ಸ್ಥಾನಕ್ಕೆ ಗುರುವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಡಿ.ಸಿದ್ದರಾಮಯ್ಯ, ಉಪಾಧ್ಯಕ್ಷರಾಗಿ ಎನ್.ಜಗನ್ನಾಥ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

[ccc_my_favorite_select_button post_id="116459"]
ಕರ್ನಾಟಕದ 9 ಜಿಲ್ಲೆ ಒಳಗೊಂಡ ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಕಾರ್ಯಕ್ರಮ (NICDP): ಗೋಯೆಲ್‌ ಜೊತೆ ಕೇಂದ್ರ ಸಚಿವ ಹೆಚ್.ಡಿ.ಕೆ ಮಹತ್ವದ ಚರ್ಚೆ

ಕರ್ನಾಟಕದ 9 ಜಿಲ್ಲೆ ಒಳಗೊಂಡ ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಕಾರ್ಯಕ್ರಮ (NICDP):

ಕರ್ನಾಟಕದ ಕೈಗಾರಿಕಾಭಿವೃದ್ದಿಗೆ ಪರಿವರ್ತನಾತ್ಮಕ ಹೆಜ್ಜೆ ಎಂದೇ ನಂಬಲಾಗಿರುವ 9 ಜಿಲ್ಲೆಗಳನ್ನು ಒಳಗೊಂಡ ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಯೋಜನೆಯನ್ನು (NICDP- National Industrial Corridor Development Programme) ಅನುಷ್ಠಾನಗೊಳಿಸಬೇಕೆಂದು ಕೋರಿ ಕೇಂದ್ರದ ಬೃಹತ್‌ ಕೈಗಾರಿಕೆ

[ccc_my_favorite_select_button post_id="116156"]
ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಅವರೊಂದಿಗೆ, ಸಂಘಟನೆಯ ಟ್ರಸ್ಟಿಯೂ ಆಗಿರುವ ಸಂಸದ ಡಾ.ಕೆ.ಸುಧಾಕರ್‌ (Dr.K.Sudhakar)

[ccc_my_favorite_select_button post_id="113863"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ: ದೊಡ್ಡಬಳ್ಳಾಪುರ ಬಾಲಕ ರಾಷ್ಟ್ರ ಮಟ್ಟಕ್ಕೆ ಆಯ್ಕೆ..!

ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ: ದೊಡ್ಡಬಳ್ಳಾಪುರ ಬಾಲಕ ರಾಷ್ಟ್ರ ಮಟ್ಟಕ್ಕೆ ಆಯ್ಕೆ..!

ರಾಜ್ಯಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ (Shuttle Badminton Tournament) ಅಂಡರ್ 17 ಬಾಲಕರ ವಿಭಾಗದಲ್ಲಿ ದೊಡ್ಡಬಳ್ಳಾಪುರದ ಬಾಲಕ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾನೆ.

[ccc_my_favorite_select_button post_id="116353"]
ಪತ್ನಿಗೆ ವಿಡಿಯೊ ಕಾಲ್ ಮಾಡಿ ಪತಿ ಆತ್ಮಹತ್ಯೆ

ಪತ್ನಿಗೆ ವಿಡಿಯೊ ಕಾಲ್ ಮಾಡಿ ಪತಿ ಆತ್ಮಹತ್ಯೆ

ಜೈಲು ಪಾಲಾಗಿದ್ದ ಯುವಕ ಜಾಮೀನಿನಲ್ಲಿ ಹೊರಗೆ ಬಂದ ಎರಡು ವಾರಗಳ ನಂತರ ಪತ್ನಿಗೆ ಲೈವ್ ವಿಡಿಯೊ ಮಾಡಿ ನೇಣಿಗೆ ಕೊರಳೊಡ್ಡಿ ಆತ್ಮಹತ್ಯೆ (Suicide) ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ

[ccc_my_favorite_select_button post_id="116294"]
ದೊಡ್ಡಬಳ್ಳಾಪುರ; ಭೀಕರ ಅಪಘಾತ.. ಎಂಬಿಎ ವಿದ್ಯಾರ್ಥಿ ದುರ್ಮರಣ

ದೊಡ್ಡಬಳ್ಳಾಪುರ; ಭೀಕರ ಅಪಘಾತ.. ಎಂಬಿಎ ವಿದ್ಯಾರ್ಥಿ ದುರ್ಮರಣ

ಮುಂದೆ ಸಾಗುತ್ತಿದ್ದ ಲಾರಿ ಚಾಲಕನ ನಿರ್ಲಕ್ಷ್ಯದಿಂದ ಹಿಂಬದಿಯಲ್ಲಿ ಬರುತ್ತಿದ್ದ ಕಾರು ಭೀಕರ ಅಫಘಾತಕ್ಕೆ (Accident) ಒಳಗಾಗಿ ದೊಡ್ಡಬಳ್ಳಾಪುರ ನಗರದ ನಿವಾಸಿ, ಎಂಬಿಎ ವಿದ್ಯಾರ್ಥಿ ಸಾವನಪ್ಪಿರುವ ಘಟನೆ ನಾರನಹಳ್ಳಿ ಬಳಿ ಸಂಭವಿಸಿದೆ.

[ccc_my_favorite_select_button post_id="116301"]

ಆರೋಗ್ಯ

ಸಿನಿಮಾ

ದರ್ಶನ್ ಸೆಲೆಬ್ರಿಟಿಸ್ಗೆ ಗುಡ್‌ನ್ಯೂಸ್: ಡೆವಿಲ್ ಸಿನಿಮಾದ 3ನೇ ಸಾಂಗ್ ಬಿಡುಗಡೆ| Video ಲಿಂಕ್ ಇಲ್ಲಿದೆ ನೋಡಿ

ದರ್ಶನ್ ಸೆಲೆಬ್ರಿಟಿಸ್ಗೆ ಗುಡ್‌ನ್ಯೂಸ್: ಡೆವಿಲ್ ಸಿನಿಮಾದ 3ನೇ ಸಾಂಗ್ ಬಿಡುಗಡೆ| Video ಲಿಂಕ್

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ( Actor Darshan) ಅಭಿನಯದ "ದಿ ಡೆವಿಲ್" (The Devil) ಸಿನಿಮಾದ ಮೂರನೇ ಗೀತೆ ಬಿಡುಗಡೆಯಾಗಿದೆ.

[ccc_my_favorite_select_button post_id="116277"]
error: Content is protected !!