Raghu stabbed Gilli in the back..!

ಗಿಲ್ಲಿ ಬೆನ್ನಿಗೆ ಚಾಕು ಚುಚ್ಚಿದ ರಘು..! ಬಾಹುಬಲಿ ಕಟ್ಟಪ್ಪನ ನೆನೆದು ಅಪ್‌ಸೆಟ್ ಆದ ವೀಕ್ಷಕರು.. Video ನೋಡಿ

ಕೆ.ಎಂ.ಸಂತೋಷ್, ಆರೂಢಿ (ದೊಡ್ಡಬಳ್ಳಾಪುರ): ಪ್ರಸ್ತುತ ಆವೃತ್ತಿಯ ‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss )50 ದಿನಗಳನ್ನು ಪೂರೈಸಿ, ಮನೆ ಮಂದಿ ಕೂತು ಎಂಜಾಯ್ ಮಾಡಬಹುದು ಎಂಬಂತೆ ವೀಕ್ಷಕರ ಗಮನ ಸೆಳೆದು ಮುಂದೆ ಸಾಗುತ್ತಿದೆ.

ಕಳೆದ ಭಾನುವಾರ ನಡೆದ ವಾರದ ಕಥೆ ಕಿಚ್ಚನ ಜೊತೆ ಎಪಿಸೋಡ್ ‌ನಲ್ಲಿ ನಾಮಿನೇಟ್ ಆಗಿದ್ದ ಗಿಲ್ಲಿ ನಟ ಸೇಫ್ ಎಂದು ನಿರೂಪಕ ಸುದೀಪ್ ಹೇಳುತ್ತಿದ್ದಂತೆ ವೀಕ್ಷಕರ ಸಂಭ್ರಮ ಮುಗಿಲು ಮುಟ್ಟಿತು.

ಅದು ಯಾವ ಮಟಕ್ಕೆ ಎಂದರೆ ಚಪ್ಪಾಳೆ, ಸಿಳ್ಳೆ, ಕೂಗಾಟ ಬಿಗ್ ಬಾಸ್ ಮನೆಯೊಳಗೆ ಇದ್ದ ಸ್ಪರ್ಧಿಗಳು ಅಚ್ಚರಿಗೆ ಒಳಗಾದರು.

ಬಿಗ್ ಬಾಸ್ ಸೀಸನ್ 12 ಕುಟುಂಬ ಸಮೇತ ವೀಕ್ಷಕರ ಹಿಡಿದಿಡುವಲ್ಲಿ ಯಶಸ್ವಿಯಾಗಿದೆ. ಗಿಲ್ಲಿಯ ನಟನ ಹಾಸ್ಯಪ್ರವೃತ್ತಿ ಮತ್ತು ತಾಳ್ಮೆ ಅಶ್ವಿನಿಯವರ ಘನತೆ, ರಘುವಿನ ಗಾಂಭೀರ್ಯ, ರಕ್ಷಿತಾಳ ಮುಗ್ಧತೆ, ರಾಶಿಕಾಳ ಸೌಂದರ್ಯ, ರಾಶಿಳ ಕೋಪ, ಧ್ರುವಂತ್‌ನ ಪೆದ್ದುತನ, ಕಾವ್ಯಾಳ ಬುದ್ಧಿವಂತಿಕೆ ಎಲ್ಲವೂ ವೀಕ್ಷಕರ ರಂಜಿಸುತ್ತಿದೆ.

ಗಿಲ್ಲಿ ಬೆನ್ನಿಗೆ ಚುಚ್ಚಿದ ರಘು..!

ಖ್ಯಾತ ಬಹುಭಾಷಾ ಸಿನಿಮಾ ‘ಬಾಹುಬಲಿ -1’ರಲ್ಲಿ ಬಾಹುಬಲಿ ಬೆನ್ನಿಗೆ ನಂಬಿಕಸ್ಥ ಕಟ್ಟಪ್ಪನೇ ಹಿಂದಿನಿಂದ ಕತ್ತಿಯಿಂದ ಚುಚ್ಚಿ ಕೊಂದ ಹಾಗೆ, ‘ಬಿಗ್ ಬಾಸ್’ ಮನೆಯಲ್ಲಿ ಗಿಲ್ಲಿ ನಟನ ಆತ್ಮೀಯ ಕುಚ್ಚಿಕ್ಕೂ ಬೆನ್ನಿಗೆ ರಘು ಚೂರಿ ಹಾಕಿದ್ದಾರೆ.

ಆ ಮೂಲಕ ಗಿಲ್ಲಿಯನ್ನ ರಘು ಅವರು ನಾಮಿನೇಟ್ ಮಾಡಿದ್ದಾರೆ. ಇದು ವೀಕ್ಷಕರಿಗೆ ಬೇಸರಕ್ಕೆ ಕಾರಣವಾಗಿದೆ.

ಜನ ಮೆಚ್ಚಿದ ಗಿಲ್ಲಿ- ರಘು ನಡುವಿನ ಟಾಮ್ ಅಂಡ್ ಜರಿ ಒಡನಾಟ

ಬಿಗ್ ಬಸ್ 12 ಸೀಸನ್ ಅಲ್ಲಿ ಗಿಲ್ಲಿ ನಟ ಹಾಗೂ ರಘು ಪರಿಚಿತರು. ‘ಬಿಗ್ ಬಾಸ್’ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿಕೊಟ್ಮೇಲೆ ರಘು ಜೊತೆ ಹೆಚ್ಚು ಆತ್ಮೀಯವಾಗಿದ್ದವರು ಗಿಲ್ಲಿ ನಟ.

ಸದಾ ಕಾಲ ರಘು ಅವರ ಅಕ್ಕ-ಪಕ್ಕನೇ ಗಿಲ್ಲಿ ನಟ ಕಾಣಿಸಿಕೊಳ್ಳುತ್ತಿದ್ದರು. ಎಷ್ಟೋ ಬಾರಿ ರಘು ತೊಡೆ ಮೇಲೆ ಗಿಲ್ಲಿ ಮಲಗಿರುತ್ತಿದ್ದರು. ಸಾಮಾಜಿಕ ಜಾಲತಾಣದಲ್ಲಿ ಇವರ ಒಡನಾಟ ‘ಟಾಮ್ ಅಂಡ್ ಜರಿ’, ‘ರಘು ಲಪ್ಸ್ ಗಿಲ್ಲಿ’ ವಿಡಿಯೋ ವೈರಲ್ ಆಗಿತ್ತು.

ಹೀಗಿರುವಾಗಲೇ ಅನೇಕ ಸ್ಪರ್ಧಿಗಳು ರಘು ವಿರುದ್ದ ನಾಮಿನೇಷನ್ಗೆ ಗಿಲ್ಲಿ ನಡುವಿನ ಒಡನಾಟ ಕಾರಣ ನೀಡಿರುವುದರಿಂದ ರಘು ಅವರು ಗಿಲ್ಲಿಯಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ಇದು ಮುಂದುವರಿದು ಗಿಲ್ಲಿ ನಟ ಮೇಲೆ ರಘು ಏಕಾಏಕಿ ಮುನಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ.. ಗಿಲ್ಲಿ ನಟ ಅವರನ್ನ ರಘು ನಾಮಿನೇಟ್ ಮಾಡಿದ್ದಾರೆ!

ಕಳೆದ ವಾರದ ಹಿಂದೆಯಷ್ಟೇ ‘ಬಿಗ್ ಬಾಸ್’ ಮನೆಯಲ್ಲಿ ‘ಬಾಹುಬಲಿ’ ಸಿನಿಮಾದ ಬಗ್ಗೆ ಗಿಲ್ಲಿ ಮಾತನಾಡಿದ್ದರು.

“50 ದಿನಗಳ ಬಳಿಕ ಅಶ್ವಿನಿ ಗೌಡ 2.0 ಆರಂಭವಾಗಲಿದೆ.. ಅಶ್ವಿನಿ ಮೇಡಂ ಜಾಗವನ್ನ ರೀಪ್ಲೇಸ್ ಮಾಡೋದು ರಕ್ಷಿತಾ. ಕಟ್ಟಪ್ಪ ರಘು. ಕಟ್ಟಪ್ಪನಿಗೇ ರಕ್ಷಿತಾ ನಾಮಿನೇಟ್ ಮಾಡಿ ಚಾಕು ಚುಚ್ಚಿಬಿಟ್ಟಳು. ಪಾರ್ಟ್ 2 ಸಿನಿಮಾ ಬಂದರೂ ಇನ್ನೂ ಸರಿಯಾಗಿ ಕಾರಣ ಕೊಟ್ಟಿಲ್ಲ” ಅಂತ ಗಿಲ್ಲಿ ನಟ ಕಿಚ್ಚಾಯಿಸಿದ್ದರು.

ಆದರೆ ನಿನ್ನೆ ಸಂಚಿಕೆಯಲ್ಲಿ, ‘ಬಿಗ್ ಬಾಸ್’ ಮನೆಯಲ್ಲಿ ಅಕ್ಷರಶಃ ಬಾಹುಬಲಿ’ ಸಿನಿಮಾದ ಸೀನ್ ರೀ-ಕ್ರಿಯೇಟ್ ಆಗಿದ್ದು, ಗಿಲ್ಲಿಯ ಹಾಸ್ಯ ಸಮಯ ಪ್ರಜ್ಞೆ, ಬಾಹುಬಲಿಯಲ್ಲಿ ಕಟ್ಟಪ್ಪ ಬೆನ್ನಿಗೆ ಚೂರಿ ಚುಚ್ಚಿದ ದೃಶ್ಯಗಳಂತೆ ರಘು ಚೂರಿ ಚುಚ್ಚಿರುವುದ ರೀಕ್ರಿಯೇಟ್ ಮಾಡಿರುವುದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಸೋಮವಾರದ ಸೀಸನ್‌ನಲ್ಲಿ ಸ್ಪರ್ಧಿಗಳ ಬೆನ್ನಿಗೆ ಚೂರಿ ಇರಿಯುವ ಮೂಲಕ ಸ್ಪರ್ಧಿಗಳನ್ನು ನಾಮಿನೇಟ್ ಮಾಡುವ ಟಾಸ್ಕ್ ಅನ್ನು ನೀಡಲಾಗಿತ್ತು. ಇದರ ಅನ್ವಯ ಗಿಲ್ಲಿ ನಟನ ಬೆನ್ನಿಗೇ ರಘು ಚೂರಿ ಚುಚ್ಚಿ ನಾಮಿನೇಟ್ ಮಾಡಿದ್ದಾರೆ.

ಈ ವೇಳೆ ಗಿಲ್ಲಿ ಬಾಹುಬಲಿಗೆ ಕಟ್ಟಪ್ಪ ಬೆನ್ನಿಗೆ ಚೂರಿಯಿಂದ ಚುಚ್ಚಿದಾಗ ನಟ ಪ್ರಭಾಸ್ ನೀಡಿದ ರಿಯಾಕ್ಷನ್ ಅನ್ನು ತೋರಿಸಿದ್ದಾರೆ. ಅಲ್ಲದೆ ಕನ್ನಡ ಸಿನಿಮಾ ರಾಜಾಹುಲಿಯಲ್ಲಿ ಯಶ್ ಅವರು ಸ್ನೇಹಿತರ ಕುರಿತಾದ ಡೈಲಾಗ್ ಹೊಡೆದಿದ್ದನ್ನು ಕಂಡು ವೀಕ್ಷಕರು ಬೆರಗಾಗಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ರಘು ಅವರು ಗಿಲ್ಲಿಗೆ ಚೂರಿ ಚುಚ್ಚಿದ್ದು, ಕಟ್ಟಪ್ಪ ಬಾಹುಬಲಿಗೆ ಚೂರಿ ಚುಚ್ಚಿದ ವಿಡಿಯೋ ಮಿಕ್ಸ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ರಘು ವಿರುದ್ಧ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಇಷ್ಟೆಲ್ಲ ಚರ್ಚೆಗಳ ನಡುವೆ ಇಂದು ರಘು ಮತ್ತು ಗಿಲ್ಲಿ ನಿನ್ನೆ ನಡೆದ ಎಲ್ಲಾ ವಾಗ್ವಾದಗಳ ಮರೆತು ಜೊತೆಯಾಗಿ ತಮಾಷೆ ಮಾಡುತ್ತಿರುವ ವಿಡಿಯೋ ವೈರಲ್ ಆಗಿದ್ದು, ಇದು Beauty of boys… ನಿನ್ನೆ ಕುರುಕ್ಷೇತ್ರ ಮಾಡಿ ಇವತ್ತು ಇಬ್ರು Flex ಮಾಡ್ತಾ ಇದಾರೆ…

ಅದೇ ಹೆಣ್ ಮಕ್ಳು ಯಾವತ್ತೋ ಯಾವ್ದೋ ಟಾಸ್ಕ್ ಅಲ್ಲಿ Dependent ಅಂದಳು ಅಂತ ಇವತ್ತಿಗೂ ಅದನ್ನ ಒಳ್ಳೆ Bubblegum ಥರ ಎಳೆದಾಡ್ತ ಇದಾರೆ ಎಂದು ನೆಟ್ಟಿಗರು ಕಿಚಾಯಿಸಿದ್ದಾರೆ.

ಒಟ್ಟಾರೆ ಬಿಗ್ ಬಾಸ್ ಸೀಸನ್ 12 ಗಿಲ್ಲಿ ತಂಡದ ಚೇಸ್ಟೆಗಳಿಂದ ಮನೆ ಮಂದಿ ಒಟ್ಟಿಗೆ ಕೂತು ಶೋ ನೋಡುತ್ತಾ ನಕ್ಕುನಲಿಯುವ ಮೂಲಕ ಎಂಜಾಯ್ ಮಾಡುತ್ತಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಕಲ್ಲರ್ಸ್ ಕನ್ನಡ ಜಿಯೋ ಹಾಟ್ ಸ್ಟಾರ್ ವಿಡಿಯೋ, ಮತ್ತು ಬಾಹುಬಲಿ ಸಿನಿಮಾದ ವಿಡಿಯೋಗಳು ವೈರಲ್ ಆಗಿದೆ.

ರಾಜಕೀಯ

ಕಾಂಗ್ರೆಸ್‌ ಆಡಳಿತದ ಅವಧಿ ಮುಗಿಯುತ್ತಾ ಬಂದಿದೆ: ಆರ್‌.ಅಶೋಕ

ಕಾಂಗ್ರೆಸ್‌ ಆಡಳಿತದ ಅವಧಿ ಮುಗಿಯುತ್ತಾ ಬಂದಿದೆ: ಆರ್‌.ಅಶೋಕ

ಈ ಬಾರಿಯ ಬಜೆಟ್‌ ಅಧಿವೇಶನದಲ್ಲಿ ಸರ್ಕಾರದ ಲೋಪದೋಷಗಳನ್ನು ಚರ್ಚಿಸಲಾಗುವುದು. ರಾಜ್ಯದ ಆರ್ಥಿಕ ದುಸ್ಥಿತಿಯ ವಿರುದ್ಧ ಹೋರಾಟ ಮಾಡಲಾಗುವುದು ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ (R.Ashoka) ಹೇಳಿದರು.

[ccc_my_favorite_select_button post_id="119883"]
ಮನರೇಗಾ ಮರುಸ್ಥಾಪಿಸುವ ಕಾಂಗ್ರೆಸ್ ಹೋರಾಟವನ್ನು ಬೆಂಬಲಿಸಿ: ರಾಜ್ಯದ ಜನರಿಗೆ ಸಿಎಂ ಸಿದ್ದರಾಮಯ್ಯ ಕರೆ

ಮನರೇಗಾ ಮರುಸ್ಥಾಪಿಸುವ ಕಾಂಗ್ರೆಸ್ ಹೋರಾಟವನ್ನು ಬೆಂಬಲಿಸಿ: ರಾಜ್ಯದ ಜನರಿಗೆ ಸಿಎಂ ಸಿದ್ದರಾಮಯ್ಯ ಕರೆ

ಗ್ರಾಮೀಣ ಜನರ ಉದ್ಯೋಗದ ಹಕ್ಕನ್ನು ಕಸಿಯುತ್ತಿರುವ ವಿಬಿಜಿರಾಮ್ ಜಿ ಕಾಯ್ದೆಯನ್ನು ರದ್ದುಪಡಿಸಿ, ಮನರೇಗಾ ಮರುಸ್ಥಾಪಿಸುವವರೆಗೆ ದೇಶಾದ್ಯಂತ ಕಾಂಗ್ರೆಸ್ ನಡೆಸುತ್ತಿರುವ ಹೋರಾಟವನ್ನು ಬೆಂಬಲಿಸಬೇಕೆಂದು ರಾಜ್ಯದ ಜನರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ (Cmsiddaramaiah) ಕರೆ ನೀಡಿದರು.

[ccc_my_favorite_select_button post_id="119685"]
ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಮಧ್ಯಪ್ರಾಚ್ಯದಲ್ಲಿ ಯುದ್ದ ನಡೆಯುತ್ತಿರುವುದರಿಂದ ಭಾರತದ ಷೇರುಪೇಟೆ (Indian share market ) ತತ್ತರಿಸುತ್ತಿದ್ದು, ಕೋಟ್ಯಾಂತರ ರೂ ನಷ್ಟದ ಜೊತೆಗೆ, ತೈಲ ಬೆಲೆಯೇರಿಕೆಯಾಗುವ ಭೀತಿ ಉಂಟಾಗಿದೆ.

[ccc_my_favorite_select_button post_id="119892"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಗಳ ಆಯೋಜನೆಗೆ ಅನುಮತಿ: ಡಿಸಿಎಂ ಡಿ.ಕೆ. ಶಿವಕುಮಾರ್

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಗಳ ಆಯೋಜನೆಗೆ ಅನುಮತಿ: ಡಿಸಿಎಂ ಡಿ.ಕೆ. ಶಿವಕುಮಾರ್

"ಯುವಕರು ಹಾಗೂ ಕ್ರಿಕೆಟ್ ಕ್ರೀಡೆಯ ಹಿತದೃಷ್ಟಿಯಿಂದ ಇನ್ನುಮುಂದೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ಆಯೋಜನೆಗೆ ಸರ್ಕಾರ ಅನುಮತಿ ನೀಡುತ್ತಿದೆ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (D.K. Shivakumar) ಅವರು ತಿಳಿಸಿದರು.

[ccc_my_favorite_select_button post_id="119372"]
ದೊಡ್ಡಬಳ್ಳಾಪುರ: ಗ್ಯಾಸ್ ಗೀಸರ್ ಬಳಸುವವರೆ ಎಚ್ಚರ.. ವಿಷಾನಿಲ ಸೋರಿಕೆಯಿಂದ ಬಾಲಕಿ ದುರ್ಮರಣ

ದೊಡ್ಡಬಳ್ಳಾಪುರ: ಗ್ಯಾಸ್ ಗೀಸರ್ ಬಳಸುವವರೆ ಎಚ್ಚರ.. ವಿಷಾನಿಲ ಸೋರಿಕೆಯಿಂದ ಬಾಲಕಿ ದುರ್ಮರಣ

ಗ್ಯಾಸ್ ಗೀಸರ್ (Gas geyser) ಬಳಕೆ ಮಾಡುವವರು ಆದಷ್ಟು ಮುಂಜಾಗ್ರತೆಯ ಕ್ರಮಕೈಗೊಳ್ಳಬೇಕಿದೆ. ಏಕೆಂದರೆ ಪದೇ ಪದೇ ವಿಷಾನಿಲ ಸೋರಿಕೆಯಿಂದ ಸಾವನಪ್ಪುವ ಪ್ರಕರಣಗಳು ವರದಿಯಾಗುತ್ತಿವೆ.

[ccc_my_favorite_select_button post_id="119828"]
ದೊಡ್ಡಬಳ್ಳಾಪುರ: Accident.. ಗೀತಂ ವಿವಿ ವಿದ್ಯಾರ್ಥಿ ಸ್ಥಳದಲ್ಲೇ ಸಾವು

ದೊಡ್ಡಬಳ್ಳಾಪುರ: Accident.. ಗೀತಂ ವಿವಿ ವಿದ್ಯಾರ್ಥಿ ಸ್ಥಳದಲ್ಲೇ ಸಾವು

ಮುಂದೆ ಸಾಗುತ್ತಿದ್ದ ಟಿಪ್ಪರ್ ಲಾರಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ (Accident) ಓರ್ವ ವಿದ್ಯಾರ್ಥಿ ಸಾವನಪ್ಪಿದ್ದು, ಮತ್ತೋರ್ವ ಗಾಯಗೊಂಡಿರುವ ಘಟನೆ ನಗರದ ಹೊರವಲಯದಲ್ಲಿರುವ ರೈಲ್ವೆ ಸ್ಟೇಷನ್ ಪೆಟ್ರೋಲ್ ಬಂಕ್ ಮುಂಭಾಗ ಸಂಭವಿಸಿದೆ.

[ccc_my_favorite_select_button post_id="119695"]

ಆರೋಗ್ಯ

ಸಿನಿಮಾ

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ (Actor Darshan) ಅವರಿಗೆ ಇಂದು ಜನ್ಮದಿನದ (Birthday) ಸಡಗರ. 49ನೇ ವರ್ಷಕ್ಕೆ ದರ್ಶನ್ ಕಾಲಿಟ್ಟಿದ್ದಾರೆ.

[ccc_my_favorite_select_button post_id="119431"]
error: Content is protected !!