Raghu stabbed Gilli in the back..!

ಗಿಲ್ಲಿ ಬೆನ್ನಿಗೆ ಚಾಕು ಚುಚ್ಚಿದ ರಘು..! ಬಾಹುಬಲಿ ಕಟ್ಟಪ್ಪನ ನೆನೆದು ಅಪ್‌ಸೆಟ್ ಆದ ವೀಕ್ಷಕರು.. Video ನೋಡಿ

ಕೆ.ಎಂ.ಸಂತೋಷ್, ಆರೂಢಿ (ದೊಡ್ಡಬಳ್ಳಾಪುರ): ಪ್ರಸ್ತುತ ಆವೃತ್ತಿಯ ‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss )50 ದಿನಗಳನ್ನು ಪೂರೈಸಿ, ಮನೆ ಮಂದಿ ಕೂತು ಎಂಜಾಯ್ ಮಾಡಬಹುದು ಎಂಬಂತೆ ವೀಕ್ಷಕರ ಗಮನ ಸೆಳೆದು ಮುಂದೆ ಸಾಗುತ್ತಿದೆ.

ಕಳೆದ ಭಾನುವಾರ ನಡೆದ ವಾರದ ಕಥೆ ಕಿಚ್ಚನ ಜೊತೆ ಎಪಿಸೋಡ್ ‌ನಲ್ಲಿ ನಾಮಿನೇಟ್ ಆಗಿದ್ದ ಗಿಲ್ಲಿ ನಟ ಸೇಫ್ ಎಂದು ನಿರೂಪಕ ಸುದೀಪ್ ಹೇಳುತ್ತಿದ್ದಂತೆ ವೀಕ್ಷಕರ ಸಂಭ್ರಮ ಮುಗಿಲು ಮುಟ್ಟಿತು.

ಅದು ಯಾವ ಮಟಕ್ಕೆ ಎಂದರೆ ಚಪ್ಪಾಳೆ, ಸಿಳ್ಳೆ, ಕೂಗಾಟ ಬಿಗ್ ಬಾಸ್ ಮನೆಯೊಳಗೆ ಇದ್ದ ಸ್ಪರ್ಧಿಗಳು ಅಚ್ಚರಿಗೆ ಒಳಗಾದರು.

ಬಿಗ್ ಬಾಸ್ ಸೀಸನ್ 12 ಕುಟುಂಬ ಸಮೇತ ವೀಕ್ಷಕರ ಹಿಡಿದಿಡುವಲ್ಲಿ ಯಶಸ್ವಿಯಾಗಿದೆ. ಗಿಲ್ಲಿಯ ನಟನ ಹಾಸ್ಯಪ್ರವೃತ್ತಿ ಮತ್ತು ತಾಳ್ಮೆ ಅಶ್ವಿನಿಯವರ ಘನತೆ, ರಘುವಿನ ಗಾಂಭೀರ್ಯ, ರಕ್ಷಿತಾಳ ಮುಗ್ಧತೆ, ರಾಶಿಕಾಳ ಸೌಂದರ್ಯ, ರಾಶಿಳ ಕೋಪ, ಧ್ರುವಂತ್‌ನ ಪೆದ್ದುತನ, ಕಾವ್ಯಾಳ ಬುದ್ಧಿವಂತಿಕೆ ಎಲ್ಲವೂ ವೀಕ್ಷಕರ ರಂಜಿಸುತ್ತಿದೆ.

ಗಿಲ್ಲಿ ಬೆನ್ನಿಗೆ ಚುಚ್ಚಿದ ರಘು..!

ಖ್ಯಾತ ಬಹುಭಾಷಾ ಸಿನಿಮಾ ‘ಬಾಹುಬಲಿ -1’ರಲ್ಲಿ ಬಾಹುಬಲಿ ಬೆನ್ನಿಗೆ ನಂಬಿಕಸ್ಥ ಕಟ್ಟಪ್ಪನೇ ಹಿಂದಿನಿಂದ ಕತ್ತಿಯಿಂದ ಚುಚ್ಚಿ ಕೊಂದ ಹಾಗೆ, ‘ಬಿಗ್ ಬಾಸ್’ ಮನೆಯಲ್ಲಿ ಗಿಲ್ಲಿ ನಟನ ಆತ್ಮೀಯ ಕುಚ್ಚಿಕ್ಕೂ ಬೆನ್ನಿಗೆ ರಘು ಚೂರಿ ಹಾಕಿದ್ದಾರೆ.

ಆ ಮೂಲಕ ಗಿಲ್ಲಿಯನ್ನ ರಘು ಅವರು ನಾಮಿನೇಟ್ ಮಾಡಿದ್ದಾರೆ. ಇದು ವೀಕ್ಷಕರಿಗೆ ಬೇಸರಕ್ಕೆ ಕಾರಣವಾಗಿದೆ.

ಜನ ಮೆಚ್ಚಿದ ಗಿಲ್ಲಿ- ರಘು ನಡುವಿನ ಟಾಮ್ ಅಂಡ್ ಜರಿ ಒಡನಾಟ

ಬಿಗ್ ಬಸ್ 12 ಸೀಸನ್ ಅಲ್ಲಿ ಗಿಲ್ಲಿ ನಟ ಹಾಗೂ ರಘು ಪರಿಚಿತರು. ‘ಬಿಗ್ ಬಾಸ್’ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿಕೊಟ್ಮೇಲೆ ರಘು ಜೊತೆ ಹೆಚ್ಚು ಆತ್ಮೀಯವಾಗಿದ್ದವರು ಗಿಲ್ಲಿ ನಟ.

ಸದಾ ಕಾಲ ರಘು ಅವರ ಅಕ್ಕ-ಪಕ್ಕನೇ ಗಿಲ್ಲಿ ನಟ ಕಾಣಿಸಿಕೊಳ್ಳುತ್ತಿದ್ದರು. ಎಷ್ಟೋ ಬಾರಿ ರಘು ತೊಡೆ ಮೇಲೆ ಗಿಲ್ಲಿ ಮಲಗಿರುತ್ತಿದ್ದರು. ಸಾಮಾಜಿಕ ಜಾಲತಾಣದಲ್ಲಿ ಇವರ ಒಡನಾಟ ‘ಟಾಮ್ ಅಂಡ್ ಜರಿ’, ‘ರಘು ಲಪ್ಸ್ ಗಿಲ್ಲಿ’ ವಿಡಿಯೋ ವೈರಲ್ ಆಗಿತ್ತು.

ಹೀಗಿರುವಾಗಲೇ ಅನೇಕ ಸ್ಪರ್ಧಿಗಳು ರಘು ವಿರುದ್ದ ನಾಮಿನೇಷನ್ಗೆ ಗಿಲ್ಲಿ ನಡುವಿನ ಒಡನಾಟ ಕಾರಣ ನೀಡಿರುವುದರಿಂದ ರಘು ಅವರು ಗಿಲ್ಲಿಯಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ಇದು ಮುಂದುವರಿದು ಗಿಲ್ಲಿ ನಟ ಮೇಲೆ ರಘು ಏಕಾಏಕಿ ಮುನಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ.. ಗಿಲ್ಲಿ ನಟ ಅವರನ್ನ ರಘು ನಾಮಿನೇಟ್ ಮಾಡಿದ್ದಾರೆ!

ಕಳೆದ ವಾರದ ಹಿಂದೆಯಷ್ಟೇ ‘ಬಿಗ್ ಬಾಸ್’ ಮನೆಯಲ್ಲಿ ‘ಬಾಹುಬಲಿ’ ಸಿನಿಮಾದ ಬಗ್ಗೆ ಗಿಲ್ಲಿ ಮಾತನಾಡಿದ್ದರು.

“50 ದಿನಗಳ ಬಳಿಕ ಅಶ್ವಿನಿ ಗೌಡ 2.0 ಆರಂಭವಾಗಲಿದೆ.. ಅಶ್ವಿನಿ ಮೇಡಂ ಜಾಗವನ್ನ ರೀಪ್ಲೇಸ್ ಮಾಡೋದು ರಕ್ಷಿತಾ. ಕಟ್ಟಪ್ಪ ರಘು. ಕಟ್ಟಪ್ಪನಿಗೇ ರಕ್ಷಿತಾ ನಾಮಿನೇಟ್ ಮಾಡಿ ಚಾಕು ಚುಚ್ಚಿಬಿಟ್ಟಳು. ಪಾರ್ಟ್ 2 ಸಿನಿಮಾ ಬಂದರೂ ಇನ್ನೂ ಸರಿಯಾಗಿ ಕಾರಣ ಕೊಟ್ಟಿಲ್ಲ” ಅಂತ ಗಿಲ್ಲಿ ನಟ ಕಿಚ್ಚಾಯಿಸಿದ್ದರು.

ಆದರೆ ನಿನ್ನೆ ಸಂಚಿಕೆಯಲ್ಲಿ, ‘ಬಿಗ್ ಬಾಸ್’ ಮನೆಯಲ್ಲಿ ಅಕ್ಷರಶಃ ಬಾಹುಬಲಿ’ ಸಿನಿಮಾದ ಸೀನ್ ರೀ-ಕ್ರಿಯೇಟ್ ಆಗಿದ್ದು, ಗಿಲ್ಲಿಯ ಹಾಸ್ಯ ಸಮಯ ಪ್ರಜ್ಞೆ, ಬಾಹುಬಲಿಯಲ್ಲಿ ಕಟ್ಟಪ್ಪ ಬೆನ್ನಿಗೆ ಚೂರಿ ಚುಚ್ಚಿದ ದೃಶ್ಯಗಳಂತೆ ರಘು ಚೂರಿ ಚುಚ್ಚಿರುವುದ ರೀಕ್ರಿಯೇಟ್ ಮಾಡಿರುವುದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಸೋಮವಾರದ ಸೀಸನ್‌ನಲ್ಲಿ ಸ್ಪರ್ಧಿಗಳ ಬೆನ್ನಿಗೆ ಚೂರಿ ಇರಿಯುವ ಮೂಲಕ ಸ್ಪರ್ಧಿಗಳನ್ನು ನಾಮಿನೇಟ್ ಮಾಡುವ ಟಾಸ್ಕ್ ಅನ್ನು ನೀಡಲಾಗಿತ್ತು. ಇದರ ಅನ್ವಯ ಗಿಲ್ಲಿ ನಟನ ಬೆನ್ನಿಗೇ ರಘು ಚೂರಿ ಚುಚ್ಚಿ ನಾಮಿನೇಟ್ ಮಾಡಿದ್ದಾರೆ.

ಈ ವೇಳೆ ಗಿಲ್ಲಿ ಬಾಹುಬಲಿಗೆ ಕಟ್ಟಪ್ಪ ಬೆನ್ನಿಗೆ ಚೂರಿಯಿಂದ ಚುಚ್ಚಿದಾಗ ನಟ ಪ್ರಭಾಸ್ ನೀಡಿದ ರಿಯಾಕ್ಷನ್ ಅನ್ನು ತೋರಿಸಿದ್ದಾರೆ. ಅಲ್ಲದೆ ಕನ್ನಡ ಸಿನಿಮಾ ರಾಜಾಹುಲಿಯಲ್ಲಿ ಯಶ್ ಅವರು ಸ್ನೇಹಿತರ ಕುರಿತಾದ ಡೈಲಾಗ್ ಹೊಡೆದಿದ್ದನ್ನು ಕಂಡು ವೀಕ್ಷಕರು ಬೆರಗಾಗಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ರಘು ಅವರು ಗಿಲ್ಲಿಗೆ ಚೂರಿ ಚುಚ್ಚಿದ್ದು, ಕಟ್ಟಪ್ಪ ಬಾಹುಬಲಿಗೆ ಚೂರಿ ಚುಚ್ಚಿದ ವಿಡಿಯೋ ಮಿಕ್ಸ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ರಘು ವಿರುದ್ಧ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಇಷ್ಟೆಲ್ಲ ಚರ್ಚೆಗಳ ನಡುವೆ ಇಂದು ರಘು ಮತ್ತು ಗಿಲ್ಲಿ ನಿನ್ನೆ ನಡೆದ ಎಲ್ಲಾ ವಾಗ್ವಾದಗಳ ಮರೆತು ಜೊತೆಯಾಗಿ ತಮಾಷೆ ಮಾಡುತ್ತಿರುವ ವಿಡಿಯೋ ವೈರಲ್ ಆಗಿದ್ದು, ಇದು Beauty of boys… ನಿನ್ನೆ ಕುರುಕ್ಷೇತ್ರ ಮಾಡಿ ಇವತ್ತು ಇಬ್ರು Flex ಮಾಡ್ತಾ ಇದಾರೆ…

ಅದೇ ಹೆಣ್ ಮಕ್ಳು ಯಾವತ್ತೋ ಯಾವ್ದೋ ಟಾಸ್ಕ್ ಅಲ್ಲಿ Dependent ಅಂದಳು ಅಂತ ಇವತ್ತಿಗೂ ಅದನ್ನ ಒಳ್ಳೆ Bubblegum ಥರ ಎಳೆದಾಡ್ತ ಇದಾರೆ ಎಂದು ನೆಟ್ಟಿಗರು ಕಿಚಾಯಿಸಿದ್ದಾರೆ.

ಒಟ್ಟಾರೆ ಬಿಗ್ ಬಾಸ್ ಸೀಸನ್ 12 ಗಿಲ್ಲಿ ತಂಡದ ಚೇಸ್ಟೆಗಳಿಂದ ಮನೆ ಮಂದಿ ಒಟ್ಟಿಗೆ ಕೂತು ಶೋ ನೋಡುತ್ತಾ ನಕ್ಕುನಲಿಯುವ ಮೂಲಕ ಎಂಜಾಯ್ ಮಾಡುತ್ತಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಕಲ್ಲರ್ಸ್ ಕನ್ನಡ ಜಿಯೋ ಹಾಟ್ ಸ್ಟಾರ್ ವಿಡಿಯೋ, ಮತ್ತು ಬಾಹುಬಲಿ ಸಿನಿಮಾದ ವಿಡಿಯೋಗಳು ವೈರಲ್ ಆಗಿದೆ.

ರಾಜಕೀಯ

ಹನುಮ ಜಯಂತಿಯಂದೇ ಸಿಎಂ ಸಿದ್ದರಾಮಯ್ಯ ಕೋಳಿ ಸಾರು ಸೇವನೆ; ಆರ್. ಅಶೋಕ್ ಕಿಡಿ

ಹನುಮ ಜಯಂತಿಯಂದೇ ಸಿಎಂ ಸಿದ್ದರಾಮಯ್ಯ ಕೋಳಿ ಸಾರು ಸೇವನೆ; ಆರ್. ಅಶೋಕ್ ಕಿಡಿ

ಕಾಂಗ್ರೆಸ್‌ ಸರ್ಕಾರ ರೈತರ ಸಮಸ್ಯೆ ಬಗೆಹರಿಸಿಲ್ಲ. ರಸ್ತೆಗುಂಡಿಗಳನ್ನು ದುರಸ್ತಿ ಮಾಡಿಲ್ಲ. ಆದರೆ ಸಿಎಂ ಸಿದ್ದರಾಮಯ್ಯ (Cmsiddaramaiah) ಹಾಗೂ ಡಿ.ಕೆ.ಶಿವಕುಮಾರ್‌ (D.K. Shivakumar) ತಮ್ಮ ನಡುವಿನ ಸಮಸ್ಯೆ ಬಗೆಹರಿಸಲು ಉಪಾಹಾರ ಸಭೆ ಮಾಡಿದ್ದಾರೆ ಎಂದು ಪ್ರತಿಪಕ್ಷ

[ccc_my_favorite_select_button post_id="116948"]
ಕರ್ನಾಟಕದ 9 ಜಿಲ್ಲೆ ಒಳಗೊಂಡ ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಕಾರ್ಯಕ್ರಮ (NICDP): ಗೋಯೆಲ್‌ ಜೊತೆ ಕೇಂದ್ರ ಸಚಿವ ಹೆಚ್.ಡಿ.ಕೆ ಮಹತ್ವದ ಚರ್ಚೆ

ಕರ್ನಾಟಕದ 9 ಜಿಲ್ಲೆ ಒಳಗೊಂಡ ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಕಾರ್ಯಕ್ರಮ (NICDP):

ಕರ್ನಾಟಕದ ಕೈಗಾರಿಕಾಭಿವೃದ್ದಿಗೆ ಪರಿವರ್ತನಾತ್ಮಕ ಹೆಜ್ಜೆ ಎಂದೇ ನಂಬಲಾಗಿರುವ 9 ಜಿಲ್ಲೆಗಳನ್ನು ಒಳಗೊಂಡ ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಯೋಜನೆಯನ್ನು (NICDP- National Industrial Corridor Development Programme) ಅನುಷ್ಠಾನಗೊಳಿಸಬೇಕೆಂದು ಕೋರಿ ಕೇಂದ್ರದ ಬೃಹತ್‌ ಕೈಗಾರಿಕೆ

[ccc_my_favorite_select_button post_id="116156"]
ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಅವರೊಂದಿಗೆ, ಸಂಘಟನೆಯ ಟ್ರಸ್ಟಿಯೂ ಆಗಿರುವ ಸಂಸದ ಡಾ.ಕೆ.ಸುಧಾಕರ್‌ (Dr.K.Sudhakar)

[ccc_my_favorite_select_button post_id="113863"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ವಿಶ್ವಕಪ್ ವಿಜೇತ ಅಂಧ ಮಹಿಳಾ ಕ್ರಿಕೆಟ್ ತಂಡಕ್ಕೆ ನಗದು ಬಹುಮಾನ, ಸರ್ಕಾರಿ ಉದ್ಯೋಗ ಘೋಷಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

ವಿಶ್ವಕಪ್ ವಿಜೇತ ಅಂಧ ಮಹಿಳಾ ಕ್ರಿಕೆಟ್ ತಂಡಕ್ಕೆ ನಗದು ಬಹುಮಾನ, ಸರ್ಕಾರಿ ಉದ್ಯೋಗ

ವಿಶ್ವಕಪ್ ವಿಜೇತ ಭಾರತದ ಅಂಧ ಮಹಿಳಾ ಕ್ರಿಕೆಟ್ ತಂಡಕ್ಕೆ ಶುಭ ಹಾರೈಸಿ ಅಭಿನಂದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ (Cmsiddaramaiah) ಕರ್ನಾಟಕದ ಕ್ರಿಕೆಟ್ ಪಟುಗಳಿಗೆ ತಲಾ ಹತ್ತು ಲಕ್ಷ ನಗದು ಬಹುಮಾನದ ಜೊತೆಗೆ ಸರ್ಕಾರಿ ಉದ್ಯೋಗ ಘೋಷಿಸಿದರು.

[ccc_my_favorite_select_button post_id="116681"]
ಕೆಲವೇ ಗಂಟೆಗಳಲ್ಲಿ ಸರಗಳ್ಳನ ಬಂಧನ.. ಸರ್ಕಲ್ ಇನ್ಸ್ಪೆಕ್ಟರ್ ಬಿ.ಕೆ.ಪಾಟೀಲ್ ತಂಡಕ್ಕೆ ವ್ಯಾಪಕ ಪ್ರಶಂಸೆ

ಕೆಲವೇ ಗಂಟೆಗಳಲ್ಲಿ ಸರಗಳ್ಳನ ಬಂಧನ.. ಸರ್ಕಲ್ ಇನ್ಸ್ಪೆಕ್ಟರ್ ಬಿ.ಕೆ.ಪಾಟೀಲ್ ತಂಡಕ್ಕೆ ವ್ಯಾಪಕ ಪ್ರಶಂಸೆ

ಮಹಿಳೆಯ ಮಾಂಗಲ್ಯ ಸರವನ್ನು ಕಿತ್ತು ಬೈಕ್‌ನಲ್ಲಿ ಪರಾರಿಯಾಗಿರುವ ಘಟನೆ ನಡೆದು ಕೆಲವೇ ಗಂಟೆಯೊಳಗೆ ಆರೋಪಿಯನ್ನು (Chain snatcher) ಬಂಧಿಸುವಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ಬಿ.ಕೆ.ಪಾಟೀಲ್ ನೇತೃತ್ವದ

[ccc_my_favorite_select_button post_id="116820"]
ದೊಡ್ಡಬಳ್ಳಾಪುರ: ನಿಂತಿದ್ದ ಬಸ್‌ಗೆ ಆಟೋ ಡಿಕ್ಕಿ.. ಮೂವರಿಗೆ ಪೆಟ್ಟು

ದೊಡ್ಡಬಳ್ಳಾಪುರ: ನಿಂತಿದ್ದ ಬಸ್‌ಗೆ ಆಟೋ ಡಿಕ್ಕಿ.. ಮೂವರಿಗೆ ಪೆಟ್ಟು

ಖಾಸಗಿ ಬಸ್ಗೆ ಹಿಂದಿನಿಂದ ಪ್ಯಾಸೆಂಜರ್ ಆಟೋ ಡಿಕ್ಕಿ ಹೊಡೆದ ಪರಿಣಾಮ (Accident) ಆಟೋದಲ್ಲಿ ಪ್ರಯಾಣಿಸುತ್ತಿದ್ದ ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಇಂದು ಸಂಜೆ ತಾಲೂಕಿನ ಕಂಟನಕುಂಟೆ ಸಮೀಪ ಸಂಭವಿಸಿದೆ.

[ccc_my_favorite_select_button post_id="116950"]

ಆರೋಗ್ಯ

ಸಿನಿಮಾ

ದರ್ಶನ್ ಸೆಲೆಬ್ರಿಟಿಸ್ಗೆ ಗುಡ್‌ನ್ಯೂಸ್: ಡೆವಿಲ್ ಸಿನಿಮಾದ 3ನೇ ಸಾಂಗ್ ಬಿಡುಗಡೆ| Video ಲಿಂಕ್ ಇಲ್ಲಿದೆ ನೋಡಿ

ದರ್ಶನ್ ಸೆಲೆಬ್ರಿಟಿಸ್ಗೆ ಗುಡ್‌ನ್ಯೂಸ್: ಡೆವಿಲ್ ಸಿನಿಮಾದ 3ನೇ ಸಾಂಗ್ ಬಿಡುಗಡೆ| Video ಲಿಂಕ್

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ( Actor Darshan) ಅಭಿನಯದ "ದಿ ಡೆವಿಲ್" (The Devil) ಸಿನಿಮಾದ ಮೂರನೇ ಗೀತೆ ಬಿಡುಗಡೆಯಾಗಿದೆ.

[ccc_my_favorite_select_button post_id="116277"]
error: Content is protected !!