ದೊಡ್ಡಬಳ್ಳಾಪುರ Doddaballapura): ಹವಾಮಾನ ವೈಪರೀತ್ಯದಿಂದ ತೀವ್ರ ಕೊರೆವ ಚಳಿ, ದಟ್ಟ ಮಂಜು ಕವಿದು ದೊಡ್ಡಬಳ್ಳಾಪುರ ತಾಲೂಕಿನಾಧ್ಯಂತ ಊಟಿ ವಾತಾವರಣ ಸೃಷ್ಟಿಯಾಗಿದ್ದು, ಜನ ಚಡಪಡಿಸುತ್ತಿದ್ದಾರೆ.
ಮೈ ಕೊರೆಯುವ ಚಳಿ, ಹಿಮದಿಂದ ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ. ಕಿರಿಕಿರಿ ಉಂಟಾದರೂ ಜನರು ಎಂಜಾಯ್ ಮಾಡುತ್ತಿದ್ದಾರೆ.
ಕಳೆದ ಕೆಲವು ದಿನಗಳಿಂದ ಹವಾಮಾನ ವೈಪರೀತ್ಯದಿಂದಾಗಿ ಥಂಡಿ ಮತ್ತು ಕೊರೆಯುವ ಚಳಿ ಇಬ್ಬನಿಯ ವಾತಾವರಣಕ್ಕೆ ಚಡಪಡಿಸುತ್ತಿದ್ದಾರೆ.
ಇಲ್ಲಿನ ರಸ್ತೆಗಳು, ರಾಷ್ಟ್ರೀಯ ಹೆದ್ದಾರಿ ಜೊತೆಗೆ ಬೆಟ್ಟದ ತಪ್ಪಿಲಿನ ರಸ್ತೆಗಳಂತೂ ಜಮ್ಮು-ಕಾಶ್ಮೀರದ ವಾತಾವರಣದ ರೀತಿ ಸುಂದರ ಪ್ರಕೃತಿ ಸೊಬಗನ್ನು ನಿರ್ಮಾಣ ಮಾಡಿವೆ. ಇಬ್ಬನಿಯಿಂದ ಆವೃತವಾಗಿರುವ ಬೆಟ್ಟಗಳನ್ನ ನೊಡುವುದಕ್ಕೆ ನಿಜಕ್ಕೂ ಎರಡು ಕಣ್ಣು ಸಾಲದಾಗಿದೆ.
ಚಾಲಕರ ಪರದಾಟ
ಇನ್ನೂ ದಟ್ಟ ಮಂಜು ಕವಿದಿರುವುದರಿಂದ ರಸ್ತೆ ಕಾಣದೆ ವಾಹನ ಸವಾರರು, ಚಾಲಕರು ಪರದಾಡುವಂತಾಗಿದೆ. ಮುಂದಿರುವ ರಸ್ತೆಯೇ ಕಾಣದಂತೆ ಮಂಜು ಕವಿದಿರುವುದು ವಾಹನ ಸಂಚಾರಕ್ಕೆ ತೊಡಕಾಗಿದೆ.
ಸಮಯ 8.30 ಆದರೂ ದೊಡ್ಡಬಳ್ಳಾಪುರ ತಾಲೂಕಿನ ಅನೇಕ ಕಡೆ ಮಂಜು ತೆರವಾಗಿಲ್ಲ.
(ವೈರಲ್ ವಿಡಿಯೋ ಬಳಸಲಾಗಿದೆ)