ದೊಡ್ಡಬಳ್ಳಾಪುರ: ಜ.26ರಂದು ಭಗತ್ಸಿಂಗ್ ಕ್ರೀಡಾಂಗಣದಲ್ಲಿ ನಡೆಯಲಿರುವ 2026 ನೇ ಸಾಲಿನ ಗಣರಾಜ್ಯೋತ್ಸವ ದಿನಾಚರಣೆ (Republic Day) ಅಂಗವಾಗಿ ದೊಡ್ಡಬಳ್ಳಾಪುರ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ವಿವಿಧ ಕ್ಷೇತ್ರಗಳ ಸಾಧಕರ ಸನ್ಮಾನಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಇದರ ಅನ್ವಯ ವಿವಿಧ – ಬಾಲ ಪ್ರತಿಭೆ, ಶೌರ್ಯ ಪ್ರಶಸ್ತಿ (ತುರ್ತು ಸೇವೆಗಳು), ಸಮಾಜ ಸೇವೆ, ಕ್ರೀಡೆ, ಮಹಿಳಾ ಸಬಲೀಕರಣ, ಪರಿಸರ ಸಂರಕ್ಷಣೆ, ಪ್ರಗತಿ ಪರ ಸಂಘಟನೆ (ಹೋರಾಟಗಾರರು), ಪ್ರಗತಿಪರ ರೈತರು, ಸಾರ್ವಜನಿಕ ಸೇವೆ(ಸರ್ಕಾರಿ ನೌಕರರು), ಪೌರ ಕಾರ್ಮಿಕರು, ಸಾಹಿತ್ಯ ಕ್ಷೇತ್ರ, ಸಾಂಸ್ಕೃತಿಕ ಕ್ಷೇತ್ರ (ಜನಪದ ಕಲೆ), ರಕ್ಷಣಾ ಕ್ಷೇತ್ರ, ಪತ್ರಿಕಾ ರಂಗ, ಶಿಕ್ಷಣ, ವಿಜ್ಞಾನ ಮತ್ತು ತಂತ್ರ ಜ್ಞಾನ.
ಈ ಕ್ಷೇತ್ರ ಗಳಲ್ಲಿ ಗಣನೀಯ ಸಾಧನೆ(ಸೇವೆ) ಮಾಡಿರುವ ವರನ್ನು ಸನ್ಮಾನಿಸಲು ತೀರ್ಮಾನಿಸಲಾಗಿದ್ದು, ಅರ್ಹ ಸಾಧಕರು ತಮ್ಮ ವೈಯಕ್ತಿಕ ಮಾಹಿತಿ ಮತ್ತು ಸಾಧನೆ ಬಗ್ಗೆ ಮಾಹಿತಿ ನೀಡಿ ಅರ್ಜಿಯನ್ನು ಜ.21ರಂದು ಸಂಜೆ 5 ಗಂಟೆಯೊಳಗೆ ತಾಲೂಕು ಕಚೇರಿಗೆ ಸಲ್ಲಿಸಲು ಕೋರಿದೆ ಎಂದು ತಹಶೀಲ್ದಾರ್ ಹಾಗೂ ತಾಲೂಕು ಸಮಿತಿ ಅಧ್ಯಕ್ಷ ಮಲ್ಲಪ್ಪ.ಕೆ.ಯರಗೋಳ ತಿಳಿಸಿದ್ದಾರೆ.