Astrology: Likely to be a memorable day

Astrology: ಜ.15 ದಿನ ಭವಿಷ್ಯ: ಈ ರಾಶಿಯವರು ಮಾಟ ಮಂತ್ರ ಪ್ರಯೋಗದ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ – ಎನ್ಎಸ್ ಶರ್ಮ

ಶ್ರೀ ಕ್ರೋಧಿನಾಮ ಸಂವತ್ಸರ ಪುಷ್ಯ ಕೃಷ್ಣ ಬಿದಿಗೆ ಜ.15 2025 ಬುಧವಾರ: ವಿಶೇಷವಾಗಿ ಮಹಾ ವಿಷ್ಣು ವಿನ ದೇವಸ್ಥಾನದಲ್ಲಿ ಅರ್ಚನೆ ಪೂಜೆ ಮಾಡಿಸುವುದರಿಂದ ದಿನವೂ ಶುಭವಾಗುತ್ತದೆ.. Astrology

ಮೇಷ ರಾಶಿ: ಜೀವನದಲ್ಲಿ ಸಾಕಷ್ಟು ಹೋರಾಟಗಳನ್ನು ಮಾಡಿ ಮುಂದೆ ಬಂದಿದ್ದೀರಾ. ಆದರೆ ಈಗ ಸುಖ ಸಂತೋಷ ನೆಮ್ಮದಿ ಸಿಗಲು ಪ್ರಾರಂಭವಾಗುತ್ತಿದೆ. ಎಲ್ಲವೂ ಸಹ ಅನುಕೂಲವಾಗುತ್ತದೆ ಚಿಂತ ಬೇಡ. (ಪರಿಹಾರಕ್ಕಾಗಿ ಆಂಜನೇಯನ ದೇವಸ್ಥಾನದಲ್ಲಿ ಪೂಜೆ ಮಾಡಿಸಿ)

ವೃಷಭ ರಾಶಿ: ವಂಚನೆ ಮತ್ತು ಸಣ್ಣಪುಟ್ಟ ಮೋಸ ಮಾಡುವವರಿಂದ ದೂರವಿರಿ, ಇದರಿಂದ ತೊಂದರೆ ಸಾಕಷ್ಟಾಗುತ್ತದೆ.. ಎಚ್ಚರಿಕೆ ಬಹಳ ಮುಖ್ಯ, ಅನುಮಾನದಲ್ಲಿ ವ್ಯವಹರಿಸಬೇಡಿ. (ಪರಿಹಾರಕ್ಕಾಗಿ ಲಕ್ಷ್ಮೀನಾರಾಯಣರ ಆರಾಧನೆ ಮಾಡಿ )

ಮಿಥುನ ರಾಶಿ: ಭಯ ಬೀಳು ಅಗತ್ಯವಿಲ್ಲ. ನಿಮ್ಮ ಕೆಲಸಗಳನ್ನು ಬಲಿಷ್ಠವಾಗಿ ಮಾಡಿದ್ದೀರಿ ಅದರ ಪ್ರತಿಫಲ ನಿಮಗೆ ಸಿಗುತ್ತದೆ. ಹೆಚ್ಚು ಚಿಂತೆ ಬೇಡ ಸುಖವಾಗುತ್ತದೆ. (ಪರಿಹಾರಕ್ಕಾಗಿ ಶಿವನನ್ನು ಆರಾಧನೆ ಮಾಡಿ)

ಕಟಕ ರಾಶಿ: ಅಧಿಕವಾದ ತಿರುಗಾಟ, ಮನಸ್ಸಿಗೆ ನೆಮ್ಮದಿ ಇಲ್ಲ.. ಆದರೂ ಕಾರ್ಯವನ್ನು ಮಾಡಬೇಕು, ಎಚ್ಚರಿಕೆವಹಿಸುವುದು ಬಹಳ ಮುಖ್ಯ. ಸ್ವಲ್ಪ ನಿಧಾನವಾದರೂ ಶುಭವಾಗುತ್ತದೆ. (ಪರಿಹಾರಕ್ಕಾಗಿ ದಕ್ಷಿಣ ಮೂರ್ತಿ ಸ್ತೋತ್ರವನ್ನು ಪಾರಾಯಣ ಮಾಡಿಕೊಳ್ಳಿ)

ಸಿಂಹ ರಾಶಿ: ಅತಿಯಾದ ಆಯಾಸ. ಯಾಕೋ ನೆಮ್ಮದಿ ಇಲ್ಲ, ಈ ಜೀವನದಲ್ಲಿ ಎಂಬ ನಿಟ್ಟುಸಿರು‌. ಆದರೆ ಒಂದೇ ಬಾರಿ ಶುಭವಾಗುವುದು ಸ್ವಲ್ಪ ಕಠಿಣವಾಗಿದೆ. ಧನಾಗಮದಲ್ಲಿ ಸ್ವಲ್ಪ ಕೊರತೆ ಏರುಪೇರು, ವಿದ್ಯಾಭ್ಯಾಸದಲ್ಲಿ ಸ್ವಲ್ಪ ಕುಂಟಿತ. (ಪರಿಹಾರಕ್ಕಾಗಿ ಶ್ರೀ ಕೃಷ್ಣನ ಸ್ಮರಣೆಯನ್ನು ಮಾಡಿ)

ಕನ್ಯಾ ರಾಶಿ: ಮಾಟ ಮಂತ್ರ ಪ್ರಯೋಗದ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ.. ಇವುಗಳಿಂದ ನಿಮಗೆ ಏನು ಮಾಡಲು ಸಾಧ್ಯವಾಗುವುದಿಲ್ಲ. ಎಚ್ಚರಿಕೆ ಇರಬೇಕು, ಧೈರ್ಯವನ್ನು ಮಾಡಿ ಇಟ್ಟ ಗುರಿಯನ್ನು ಸಾಧಿಸಿ ಶುಭವಾಗುತ್ತದೆ‌. (ಪರಿಹಾರಕ್ಕಾಗಿ ಸಿದ್ದಲಕ್ಷ್ಮಿ ಸ್ತೋತ್ರವನ್ನು ಪಠಿಸಿ)

ತುಲಾ ರಾಶಿ: ಅವಶ್ಯಕತೆಗೆ ತಕ್ಕಂತೆ ಬದಲಾಗಬಾರದು. ಜೀವನದಲ್ಲಿ ವಿಶೇಷವಾದ ಧ್ಯೇಯ ಉದ್ದೇಶ ಇರಬೇಕು.. ಮಾತಿನಲ್ಲಿ ಹಿಡಿತವಿರಲಿ, ಸಂಕಲ್ಪದಲ್ಲಿ ಮುಂದಿನ ಜೀವನವು ಕಾಣುವಂತೆ ವ್ಯವಸ್ಥೆ ಮಾಡಿ.(ಪರಿಹಾರಕ್ಕಾಗಿ ನರಸಿಂಹ ಗಾಯತ್ರಿಯನ್ನು ಜಪಿಸಿ)

ವೃಶ್ಚಿಕ ರಾಶಿ: ಆರೋಗ್ಯದ ವಿಚಾರದಲ್ಲಿ ಸ್ವಲ್ಪ ತೊಂದರೆ. ಸ್ವಲ್ಪ ಧನದ ಭಾದೆಗಳು, ಮನಸ್ಸಿನಲ್ಲಿ ನೆಮ್ಮದಿ ಇರುವುದಿಲ್ಲ. ದೃಢವಾದ ನಿರ್ಧಾರ ತೆಗೆದುಕೊಳ್ಳಲು ಸ್ವಲ್ಪ ಕಠಿಣ, ಅತಿಯಾದ ಆಸೆಯನ್ನು ಸ್ವಲ್ಪ ಕಮ್ಮಿ ಮಾಡಿಕೊಳ್ಳಿ. (ಪರಿಹಾರಕ್ಕಾಗಿ ದುರ್ಗಾದೇವಿಗೆ ಕುಂಕುಮರ್ಚನೆ ಮಾಡಿಸಿ)

ಧನಸ್ಸು ರಾಶಿ: ಅತಿಯಾದ ಆಲೋಚನೆ.. ದೀರ್ಘವಾದ ಚಿಂತನೆ. ಆದರೆ ಪ್ರಯತ್ನದಲ್ಲಿ ಇರುತ್ತೀರಿ, ಪರ ತೀರ ಕಮ್ಮಿ. ಪ್ರಯತ್ನವೆಲ್ಲವೂ ಬೇರೆ ಬೇರೆ ರೀತಿಯಲ್ಲಿ ಪೋಲಾಗುತ್ತಿರುತ್ತದೆ.. ಗಮನಿಸಿ ಒಂದೇ ನೇರವಾದ ರೀತಿಯಲ್ಲಿ ಗುರಿಯಾಗಿರಿಸಿ ಕಾರ್ಯವನ್ನು ಮಾಡಿ, ಶುಭವಾಗುತ್ತದೆ. ( ಪರಿಹಾರಕ್ಕಾಗಿ ಸೂರ್ಯನಾರಾಯಣನ ಸ್ಮರಣೆ ಪೂಜೆ ಮಾಡಿ)

ಮಕರ ರಾಶಿ: ಸುಮ್ಮನೆ ತಿರುಗಾಟ, ಕೆಲಸ ಕಾರ್ಯಗಳಲ್ಲಿ ತೊಂದರೆ. ಜೀವನದಲ್ಲಿ ಇರುವುದಕ್ಕಿಂತ ಇಲ್ಲದೇ ಇರುವುದರ ಮೇಲೆ ವಿಪರೀತವಾದ ಆಸೆ, ಅತಿಯಾದ ನಂಬಿಕೆ. ಆದರೆ ಎಲ್ಲದಕ್ಕೂ ಸಮಯ ಬರಬೇಕು.. ನಿಧಾನವಾಗಿ ಕಾಯಿರಿ ಅನುಕೂಲವಾಗುತ್ತದೆ. (ಪರಿಹಾರಕ್ಕಾಗಿ ದತ್ತಾತ್ರೇಯರ ಆರಾಧನೆ ಮಾಡಿ)

ಕುಂಭ ರಾಶಿ: ಏನು ಲಾಭವಿಲ್ಲ ಎಂದು ಚಿಂತಿಸಬೇಡಿ ನೀವು ಮಾಡುತ್ತಿರುವ ಕೆಲಸದಲ್ಲಿ ಲಾಭವಿದೆ. ಆದರೆ ಸಮಯ ತೆಗೆದುಕೊಳ್ಳುತ್ತದೆ. ನಿಧಾನವಾಗಿ ಆಲೋಚಿಸಿ ಕಾರ್ಯಗಳನ್ನು ಮಾಡಿ, ಯಶಸ್ವಿ ಆಗುತ್ತೀರಾ.. ವಿದ್ಯೆಯಲ್ಲೂ ಅನುಕೂಲ ಮತ್ತು ಸ್ಥಿರತೆಯನ್ನು ಕಾಪಾಡಿಕೊಳ್ಳಬಹುದು. (ಪರಿಹಾರಕ್ಕಾಗಿ ಮಹೇಶ್ವರನನ್ನು ಆರಾಧನೆ ಮಾಡಿ)

ಮೀನ ರಾಶಿ: ಅನಾವಶ್ಯಕ ಯೋಚನೆ, ನನ್ನ ಹಣೆಯ ಬರಹ ಈಗಾಯಿತಲ್ಲ ಎಂಬ ಚಿಂತೆ, ಮಾನಸಿಕ ತಾಳಮಳ, ವಾಪಸ್ ಆಗುವುದಿಲ್ಲ ಎಂಬ ಚಿಂತೆ, ಧನಾರ್ಜನಿಗೆ ಸ್ವಲ್ಪ ತೊಂದರೆ, ವಿದ್ಯಾವಂತರಿಗೆ ಅನುಕೂಲ, ಸ್ವಲ್ಪ ಅನಾರೋಗ್ಯ. (ಪರಿಹಾರಕ್ಕಾಗಿ ಧನ್ವಂತರಿ ಮೂಲ ಮಂತ್ರ ಜಪ ಮಾಡಿ)

ರಾಹುಕಾಲ: 12-೦೦PM ರಿಂದ 1-3೦PM
ಗುಳಿಕಕಾಲ: 10-30AM ರಿಂದ 12-00PM
ಯಮಗಂಡಕಾಲ: 7-30AMರಿಂದ 9-00AM

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಜ್ಯೋತಿಶ್ಯಾಸ್ತ್ರವಿಶಾರದ, ಜ್ಯೋತಿರ್ವಿದ್ಯಾರತ್ನ ಎನ್ಎಸ್ ಶರ್ಮ, ಪ್ರಧಾನ ಪುರೋಹಿತರು ಮತ್ತು ಆಗಮಿಕರು, ಶ್ರೀ ವಾಗ್ವಾದಿನೀ ಜ್ಯೋತಿಷ ಕೇಂದ್ರ, ಇಲ್ತೊರೆ ಗ್ರಾಮ. ದೇವನಹಳ್ಳಿ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ: 562110. ಮೊ-9945170572.

ರಾಜಕೀಯ

ಕಾಂಗ್ರೆಸ್‌ ಆಡಳಿತದ ಅವಧಿ ಮುಗಿಯುತ್ತಾ ಬಂದಿದೆ: ಆರ್‌.ಅಶೋಕ

ಕಾಂಗ್ರೆಸ್‌ ಆಡಳಿತದ ಅವಧಿ ಮುಗಿಯುತ್ತಾ ಬಂದಿದೆ: ಆರ್‌.ಅಶೋಕ

ಈ ಬಾರಿಯ ಬಜೆಟ್‌ ಅಧಿವೇಶನದಲ್ಲಿ ಸರ್ಕಾರದ ಲೋಪದೋಷಗಳನ್ನು ಚರ್ಚಿಸಲಾಗುವುದು. ರಾಜ್ಯದ ಆರ್ಥಿಕ ದುಸ್ಥಿತಿಯ ವಿರುದ್ಧ ಹೋರಾಟ ಮಾಡಲಾಗುವುದು ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ (R.Ashoka) ಹೇಳಿದರು.

[ccc_my_favorite_select_button post_id="119883"]
ಮನರೇಗಾ ಮರುಸ್ಥಾಪಿಸುವ ಕಾಂಗ್ರೆಸ್ ಹೋರಾಟವನ್ನು ಬೆಂಬಲಿಸಿ: ರಾಜ್ಯದ ಜನರಿಗೆ ಸಿಎಂ ಸಿದ್ದರಾಮಯ್ಯ ಕರೆ

ಮನರೇಗಾ ಮರುಸ್ಥಾಪಿಸುವ ಕಾಂಗ್ರೆಸ್ ಹೋರಾಟವನ್ನು ಬೆಂಬಲಿಸಿ: ರಾಜ್ಯದ ಜನರಿಗೆ ಸಿಎಂ ಸಿದ್ದರಾಮಯ್ಯ ಕರೆ

ಗ್ರಾಮೀಣ ಜನರ ಉದ್ಯೋಗದ ಹಕ್ಕನ್ನು ಕಸಿಯುತ್ತಿರುವ ವಿಬಿಜಿರಾಮ್ ಜಿ ಕಾಯ್ದೆಯನ್ನು ರದ್ದುಪಡಿಸಿ, ಮನರೇಗಾ ಮರುಸ್ಥಾಪಿಸುವವರೆಗೆ ದೇಶಾದ್ಯಂತ ಕಾಂಗ್ರೆಸ್ ನಡೆಸುತ್ತಿರುವ ಹೋರಾಟವನ್ನು ಬೆಂಬಲಿಸಬೇಕೆಂದು ರಾಜ್ಯದ ಜನರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ (Cmsiddaramaiah) ಕರೆ ನೀಡಿದರು.

[ccc_my_favorite_select_button post_id="119685"]
ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಮಧ್ಯಪ್ರಾಚ್ಯದಲ್ಲಿ ಯುದ್ದ ನಡೆಯುತ್ತಿರುವುದರಿಂದ ಭಾರತದ ಷೇರುಪೇಟೆ (Indian share market ) ತತ್ತರಿಸುತ್ತಿದ್ದು, ಕೋಟ್ಯಾಂತರ ರೂ ನಷ್ಟದ ಜೊತೆಗೆ, ತೈಲ ಬೆಲೆಯೇರಿಕೆಯಾಗುವ ಭೀತಿ ಉಂಟಾಗಿದೆ.

[ccc_my_favorite_select_button post_id="119892"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಗಳ ಆಯೋಜನೆಗೆ ಅನುಮತಿ: ಡಿಸಿಎಂ ಡಿ.ಕೆ. ಶಿವಕುಮಾರ್

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಗಳ ಆಯೋಜನೆಗೆ ಅನುಮತಿ: ಡಿಸಿಎಂ ಡಿ.ಕೆ. ಶಿವಕುಮಾರ್

"ಯುವಕರು ಹಾಗೂ ಕ್ರಿಕೆಟ್ ಕ್ರೀಡೆಯ ಹಿತದೃಷ್ಟಿಯಿಂದ ಇನ್ನುಮುಂದೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ಆಯೋಜನೆಗೆ ಸರ್ಕಾರ ಅನುಮತಿ ನೀಡುತ್ತಿದೆ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (D.K. Shivakumar) ಅವರು ತಿಳಿಸಿದರು.

[ccc_my_favorite_select_button post_id="119372"]
ದೊಡ್ಡಬಳ್ಳಾಪುರ: ಗ್ಯಾಸ್ ಗೀಸರ್ ಬಳಸುವವರೆ ಎಚ್ಚರ.. ವಿಷಾನಿಲ ಸೋರಿಕೆಯಿಂದ ಬಾಲಕಿ ದುರ್ಮರಣ

ದೊಡ್ಡಬಳ್ಳಾಪುರ: ಗ್ಯಾಸ್ ಗೀಸರ್ ಬಳಸುವವರೆ ಎಚ್ಚರ.. ವಿಷಾನಿಲ ಸೋರಿಕೆಯಿಂದ ಬಾಲಕಿ ದುರ್ಮರಣ

ಗ್ಯಾಸ್ ಗೀಸರ್ (Gas geyser) ಬಳಕೆ ಮಾಡುವವರು ಆದಷ್ಟು ಮುಂಜಾಗ್ರತೆಯ ಕ್ರಮಕೈಗೊಳ್ಳಬೇಕಿದೆ. ಏಕೆಂದರೆ ಪದೇ ಪದೇ ವಿಷಾನಿಲ ಸೋರಿಕೆಯಿಂದ ಸಾವನಪ್ಪುವ ಪ್ರಕರಣಗಳು ವರದಿಯಾಗುತ್ತಿವೆ.

[ccc_my_favorite_select_button post_id="119828"]
ದೊಡ್ಡಬಳ್ಳಾಪುರ: Accident.. ಗೀತಂ ವಿವಿ ವಿದ್ಯಾರ್ಥಿ ಸ್ಥಳದಲ್ಲೇ ಸಾವು

ದೊಡ್ಡಬಳ್ಳಾಪುರ: Accident.. ಗೀತಂ ವಿವಿ ವಿದ್ಯಾರ್ಥಿ ಸ್ಥಳದಲ್ಲೇ ಸಾವು

ಮುಂದೆ ಸಾಗುತ್ತಿದ್ದ ಟಿಪ್ಪರ್ ಲಾರಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ (Accident) ಓರ್ವ ವಿದ್ಯಾರ್ಥಿ ಸಾವನಪ್ಪಿದ್ದು, ಮತ್ತೋರ್ವ ಗಾಯಗೊಂಡಿರುವ ಘಟನೆ ನಗರದ ಹೊರವಲಯದಲ್ಲಿರುವ ರೈಲ್ವೆ ಸ್ಟೇಷನ್ ಪೆಟ್ರೋಲ್ ಬಂಕ್ ಮುಂಭಾಗ ಸಂಭವಿಸಿದೆ.

[ccc_my_favorite_select_button post_id="119695"]

ಆರೋಗ್ಯ

ಸಿನಿಮಾ

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ (Actor Darshan) ಅವರಿಗೆ ಇಂದು ಜನ್ಮದಿನದ (Birthday) ಸಡಗರ. 49ನೇ ವರ್ಷಕ್ಕೆ ದರ್ಶನ್ ಕಾಲಿಟ್ಟಿದ್ದಾರೆ.

[ccc_my_favorite_select_button post_id="119431"]
error: Content is protected !!