Daily story: Known for his grumpiness

ಹರಿತಲೇಖನಿ ದಿನಕ್ಕೊಂದು ಕಥೆ: ಮುಂಗೋಪಕ್ಕೆ ಹೆಸರುವಾಸಿ

Daily story: ದೂರ್ವಾಸ ಅತ್ರಿ ಮುನಿ ಮತ್ತು ಅನಸೂಯ ದಂಪತಿಗಳ ಮಗ. ಇವರು ತನ್ನ ಮುಂಗೋಪಕ್ಕೆ ಹೆಸರುವಾಸಿ. ಇದರಿಂದಾಗಿ ಮಾನವರಿಂದ ಹಾಗೂ ದೇವತೆಗಳಿಂದ ಅತ್ಯಂತ ಹೆಚ್ಚು ಗೌರವ ಪಡೆಯುತ್ತಿದ್ದರು.

ಮಹಾಭಾರತದಲ್ಲಿ, ರಾಜಕುಮಾರಿ ಕುಂತಿಯು ಮಾಡಿದ ಶುಶ್ರೂಷೆಯಿಂದ ಸಂತೃಪ್ತಿಗೊಂಡು ಆಕೆಗೆ ಯಾವ ದೇವತೆಯನ್ನಾದರೂ ವಶಪಡಿಸಿಕೊಳ್ಳಬಹುದಾದ ಮಹಿಮೆಯುಳ್ಳ ಮಂತ್ರಗಳನ್ನು ಉಪದೇಶಿಸಿದ.

ಆ ಮಂತ್ರಗಳ ಮಹಿಮೆಯಿಂದಲೇ ಕುಂತಿ ಕರ್ಣ ಯುಧಿಷ್ಠಿರ ಭೀಮಾರ್ಜುನರನ್ನೂ ಮಾದ್ರಿ ನಕುಲ ಸಹದೇವರನ್ನೂ ಪಡೆದುದು.

ಅಂತಹ ಮಂತ್ರದ ‘ಅದ್ಭುತ’ ಶಕ್ತಿಯನ್ನು , ಕುಂತಿಯು ಪರೀಕ್ಷಿಸುವ ಉದ್ದೇಶದಿಂದ, ಸೂರ್ಯನ ಮೇಲೆ ಪ್ರಯೋಗಿಸಿದಾಗ, ಸೂರ್ಯ ಪ್ರತ್ಯಕ್ಷನಾಗಿದ್ದನ್ನು ಕಂಡು ಹೆದರಿದವಳಾದಳು ಮತ್ತು ಹಿಂತಿರುಗಿ ಹೋಗಲು ಬೇಡಿಕೊಂಡಳು. ಆದರೆ, ಸೂರ್ಯನು ಹೋಗುವ ಮುನ್ನ ಮಂತ್ರದ ಫಲವನ್ನು ನೀಡಿಯೇ /ಪೂರೈಸಿಯೇ ಹೋಗಬೇಕಾಗುತ್ತದೆ.

ಸೂರ್ಯನು ತನ್ನ ಮಾಯಾ ಶಕ್ತಿಯಿಂದ ‘ಕುಂತಿ’ ಗೆ ಮಗುವೊಂದನ್ನು ದಯಪಾಲಿಸಿ, ಆಕೆಯ ಶೀಲವನ್ನೂ ಸಹ ಉಳಿಸಿ ಹೋಗುತ್ತಾನೆ. ಇದರಿಂದಾಗಿ ಮದುವೆಯಾಗದ ರಾಜಕುಮಾರಿಗೆ ‘ಮಗು’ ಹೇಗಾದೀತು? ಎಂಬ ಮುಜುಗರದಿಂದ ಪಾರು ಮಾಡುತ್ತಾನೆ ಅಥವಾ ಸಮಾಜದ ಪ್ರಶ್ನೆಗಳಿಗೆ ಆಸ್ಪದ ಇಲ್ಲದಂತೆ ಮಾಡುತ್ತಾನೆ.

ಕುಂತಿಯು ಮಗುವನ್ನು ತನ್ನ ಬಳಿ ಇಟ್ಟುಕೊಳ್ಳಲು ಹಿಂಜರಿಯುತ್ತಾಳೆ. ಕುರುಕ್ಷೇತ್ರ ದ ಮಹಾಯುದ್ಧದಲ್ಲಿ , ಕರ್ಣ ನು ಒಂದು ‘ಕೇಂದ್ರೀಯ’ ಮಹಾಪಾತ್ರವನ್ನು ಹೊಂದಿ ಬೆಳೆಯುತ್ತಾನೆ. ವೃತ್ತಿಯಲ್ಲಿ ಚಮ್ಮಾರರಾಗಿದ್ದರು.

ದುರ್ಯೋಧನ ದುರ್ವಾಸನಿಗೆ ಹಲವು ಆತಿಥ್ಯ ಮಾಡಿ ಅನುಗ್ರಹಕ್ಕೆ ಪಾತ್ರನಾಗಿ, ವನವಾಸದಲ್ಲಿದ್ದ ಪಾಂಡವರಲ್ಲಿಗೆ ಅವೇಳೆಯಲ್ಲಿ ಹೋಗಿ ಅನ್ನವನ್ನು ಬೇಡಿ , ಅವರಿಗೆ ಶಾಪ ಕೊಡಬೇಕೆಂದು ಹೇಳಿ ಕಳುಹಿಸಿದ. ಆದರೆ ಶ್ರೀಕೃಷ್ಣನ ಕೃಪೆಯಿದ್ದ ಪಾಂಡವರಲ್ಲಿ ಊಟ ಮಾಡದೇ ಹೊಟ್ಟೆ ತುಂಬಿತಾಗಿ ದುರ್ವಾಸ ತನ್ನ ಶಿಷ್ಯರೊಂದಿಗೆ ಅಲ್ಲಿಂದ ಹೊರಟುಹೋದ.

ಒಮ್ಮೆ ಅಂಬರೀಷನಲ್ಲಿಗೆ ಹೋಗಿ, ಅವನನ್ನು ಕೊಲ್ಲಲು ದುರ್ದೇವತೆಯನ್ನು ಸೃಷ್ಟಿಸಿದ. ಅಂಬರೀಷ ವಿಷ್ಣುಚಕ್ರವನ್ನು ಪ್ರಾರ್ಥಿಸಲು ಅದರ ಭಯದಿಂದ ಅಂಬರೀಷನನ್ನೇ ಮರೆಹೊಕ್ಕು ಬದುಕಿಕೊಂಡ.

ಶ್ವೇತಕಿಯೆಂಬ ಅರಸನಿಂದ ಅನೇಕ ಯಜ್ಞಗಳನ್ನು ಮಾಡಿಸಿದ, ಕುರುಕ್ಷೇತ್ರದಲ್ಲಿ ವಾಸಮಾಡುವ ಮುದ್ಗಲ ಅಥವಾ ವ್ರೀಹಿದ್ರೋಣನೆಂಬ ವಹರ್ಷಿಯನ್ನು ಪರೀಕ್ಷಿಸಿ ಅನುಗ್ರಹಿಸಿದ.

ಒಮ್ಮೆ ಈತ ದೇವಲೋಕಸಂಚಾರ ಮಾಡಿ ಬರುತ್ತಿರಲು ವಿದ್ಯಾಧರೆಯೊಬ್ಬಳ ಕೈಯಲ್ಲಿದ್ದ ಹೂಮಾಲೆಯನ್ನು ಕಂಡು, ಮೋಹಭರಿತನಾಗಿ ಅವಳಲ್ಲಿ ಬೇಡಿ ಅದನ್ನು ಪಡೆದು, ತಲೆಗೆ ಸುತ್ತಿಕೊಂಡು ಬರುತ್ತಿದ್ದ.

ಆಗ ಇಂದ್ರ ಶಚಿಯೊಂದಿಗೆ ಐರಾವತದ ಮೇಲೆ ಬರುತ್ತಿರುವುದನ್ನು ಕಂಡು ಆ ಮಾಲೆಯನ್ನು ಇಂದ್ರನ ಮೇಲೆಸೆದ. ಇಂದ್ರ ಅದನ್ನು ಐರಾವತದ ಕುಂಭ ಸ್ಥಳದ ಮೇಲೆ ಹಾಕಿದ. ಐರಾವತ ಅದರ ಪರಿಮಳದಿಂದ ಮದಿಸಿ ಹೂಮಾಲೆಯನ್ನು ನೆಲಕ್ಕೆಸೆಯಿತು. ಇದರಿಂದ ಕ್ರೋಧಗೊಂಡ ದುರ್ವಾಸ ಆತನ ಮೂರು ಲೋಕದ ಸಂಪತ್ತೂ ನಾಶವಾಗಲಿ ಎಂದು ಶಾಪವಿತ್ತ.

ಒಮ್ಮೆ ಭೂಪ್ರದಕ್ಷಿಣೆಗೆ ಹೊರಟ ಈ ಮುನಿ ಕಾಶೀ ಕ್ಷೇತ್ರಕ್ಕೆ ಬಂದ, ಒಡನೆಯೇ ಈತನ ಮನಸ್ಸು ಶಾಂತಿ ಸಮಾಧಾನಗಳಿಂದ ತುಂಬಿತು. ಕಾಶೀ ಕ್ಷೇತ್ರವನ್ನು ಹೊಗಳಿ ತಪಸ್ಸು ಮಾಡಲಾರಂಭಿಸಿದ. ಆದರೆ ಭಗವಂತ ಪ್ರಸನ್ನನಾಗಲಿಲ್ಲ.

ಕ್ರೋಧಗೊಂಡ ಮುನಿ ಕ್ಷೇತ್ರವನ್ನೇ ಶಪಿಸಲು ಮನಸ್ಸು ಮಾಡಿದ. ಇದನ್ನರಿತ ಈಶ್ವರ ಮೈದೋರಿ ಮುನಿಯನ್ನು ಸಮಾಧಾನ ಪಡಿಸಿ, ಮುಕ್ತಿ ದೊರೆಯುವ ಈ ಕ್ಷೇತ್ರದಲ್ಲಿ ನೀನು ಬೇಡುವ ವರವಾದರೂ ಯಾವುದು ಎಂದು ಕೇಳಿದ. ಆಗ ಮುನಿ ತನ್ನ ತಿಳಿಗೇಡಿತನಕ್ಕೆ ತಾನೇ ನಾಚಿ ಭಗವಂತನನ್ನು ಪ್ರಾರ್ಥಿಸಿ ಜ್ಞಾನಸಿದ್ಧಿಯನ್ನು ಪಡೆದರು.

ಕೃಪೆ: ಸಾಮಾಜಿಕ ಜಾಲತಾಣ.

ರಾಜಕೀಯ

ರಾಜ್ಯ ಸರ್ಕಾರದ ವಿರುದ್ಧ ದೊಡ್ಡಬಳ್ಳಾಪುರದಲ್ಲಿ ಛಲವಾದಿ ನಾರಾಯಣಸ್ವಾಮಿ ಟೀಕೆ

ರಾಜ್ಯ ಸರ್ಕಾರದ ವಿರುದ್ಧ ದೊಡ್ಡಬಳ್ಳಾಪುರದಲ್ಲಿ ಛಲವಾದಿ ನಾರಾಯಣಸ್ವಾಮಿ ಟೀಕೆ

ಕೇಂದ್ರದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ 2025-26ನೇ ಸಾಲಿನ ಬಜೆಟ್‌ನಲ್ಲಿ ಯಾರನ್ನೂ ಓಲೈಕೆ ಮಾಡದೇ ಎಲ್ಲಾ ವರ್ಗದವರ ಎಲ್ಲಾ ಕ್ಷೇತ್ರಗಳ ಅಭಿವೃದ್ಧಿಗಾಗಿ ಬಜೆಟ್ ಮಂಡನೆ ಮಾಡಲಾಗಿದೆ. ಕಾಂಗ್ರೆಸ್ ಬಜೆಟ್ ಮಾಡಿದ್ದರೆ ತಾರತಮ್ಯ ಹಾಗೂ

[ccc_my_favorite_select_button post_id="119201"]
ಕೇಂದ್ರ ಬಜೆಟ್.. ಕಾಂಗ್ರೆಸ್ ಸರ್ಕಾರದ ಟೀಕೆಗಳಿಗೆ ಉತ್ತರ: ಹೆಚ್.ಡಿ. ಕುಮಾರಸ್ವಾಮಿ

ಕೇಂದ್ರ ಬಜೆಟ್.. ಕಾಂಗ್ರೆಸ್ ಸರ್ಕಾರದ ಟೀಕೆಗಳಿಗೆ ಉತ್ತರ: ಹೆಚ್.ಡಿ. ಕುಮಾರಸ್ವಾಮಿ

ಕೇಂದ್ರದ ಹಣಕಾಸು ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ 2026-27ನೇ ಸಾಲಿನ ಆಯವ್ಯಯದ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರ ಮಾಡುತ್ತಿರುವ ಟೀಕೆಗಳಿಗೆ ಉತ್ತರ ಕೊಡಲಾಗಿದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು

[ccc_my_favorite_select_button post_id="119030"]
UGC ನಿಯಮಾವಳಿಗೆ ಸುಪ್ರೀಂ ತಡೆ.. ಕೇಂದ್ರ ಸರ್ಕಾರಕ್ಕೆ ನೋಟಿಸ್

UGC ನಿಯಮಾವಳಿಗೆ ಸುಪ್ರೀಂ ತಡೆ.. ಕೇಂದ್ರ ಸರ್ಕಾರಕ್ಕೆ ನೋಟಿಸ್

ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ತಾರತಮ್ಯವನ್ನು ತಡೆಗಟ್ಟಲು ವಿಶ್ವವಿದ್ಯಾಲಯ ಅನುದಾನ ಆಯೋಗ (UGC) ಇತ್ತೀಚೆಗೆ ಸೂಚಿಸಿದ ನಿಯಮಗಳನ್ನು ಸ್ಥಗಿತಗೊಳಿಸುವಂತೆ ಸುಪ್ರೀಂ ಕೋರ್ಟ್ ಗುರುವಾರ ಆದೇಶಿಸಿದ್ದು, ಕೇಂದ್ರ ಸರ್ಕಾರಕ್ಕೆ ನೋಟೀಸ್ ನೀಡಿದೆ.

[ccc_my_favorite_select_button post_id="118953"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

RCB: ಮತ್ತೆ ಕಪ್ ನಮ್ದು

RCB: ಮತ್ತೆ ಕಪ್ ನಮ್ದು

4ನೇ ಆವೃತ್ತಿಯ ಮಹಿಳಾ ಪ್ರೀಮಿ ಯರ್ ಲೀಗ್ (ಡಬ್ಲ್ಯೂಪಿ ಎಲ್) ಟೂರ್ನಿಯಲ್ಲಿ ಸ್ಮೃತಿ ಮಂಧಾನಾ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಚಾಂಪಿಯನ್ ಆಗಿ ಹೊರ ಹೊಮ್ಮಿದ್ದು, ಸಿಎಂ ಸಿದ್ದರಾಮಯ್ಯ (Cmsiddaramaiah), ಡಿಸಿಎಂ

[ccc_my_favorite_select_button post_id="119174"]
ದೊಡ್ಡಬಳ್ಳಾಪುರ: ಹುಲ್ಲಿನ ಬಣವೆಗೆ ಬೆಂಕಿ..  ರೈತರಿಗೆ ಅಪಾರ ನಷ್ಟ

ದೊಡ್ಡಬಳ್ಳಾಪುರ: ಹುಲ್ಲಿನ ಬಣವೆಗೆ ಬೆಂಕಿ.. ರೈತರಿಗೆ ಅಪಾರ ನಷ್ಟ

ಸಹೋದರರು ಒಂದೇ ಕಡೆ ಹಾಕಿದ್ದ ಬಣವೆಗೆ (Haystack) ಆಕಸ್ಮಿಕವಾಗಿ ಬೆಂಕಿ (Fire) ತಗುಲಿ, ಹುಲ್ಲು ಸಂಪೂರ್ಣವಾಗಿ ಭಸ್ಮವಾಗಿರುವ ಘಟನೆ ತಾಲೂಕಿನ ***** ಗ್ರಾಮದಲ್ಲಿ ಗುರುವಾರ ರಾತ್ರಿ ಸಂಭವಿಸಿದೆ.

[ccc_my_favorite_select_button post_id="119190"]
ದೊಡ್ಡಬಳ್ಳಾಪುರ: ಗೂಡ್ಸ್ ವಾಹನ ಡಿಕ್ಕಿ.. ವೃದ್ಧನಿಗೆ ಗಂಭೀರ ಗಾಯ

ದೊಡ್ಡಬಳ್ಳಾಪುರ: ಗೂಡ್ಸ್ ವಾಹನ ಡಿಕ್ಕಿ.. ವೃದ್ಧನಿಗೆ ಗಂಭೀರ ಗಾಯ

ಪೆಟ್ಟಿ ಅಂಗಡಿ ಬಳಿ ಕುಳಿತಿದ್ದ ವೃದ್ಧನಿಗೆ ನಿಯಂತ್ರಣ ತಪ್ಪಿದ ಗೂಡ್ಸ್ ವಾಹನ ಡಿಕ್ಕಿ ಹೊಡೆದ ಪರಿಣಾಮ (Accident) ವೃದ್ಧ ತೀವ್ರವಾಗಿ ಗಾಯಗೊಂಡಿರುವ ಘಟನೆ ತಾಲೂಕಿ‌ನ ****** ಇಂದು ಮಧ್ಯಾಹ್ನ ನಡೆದಿದೆ

[ccc_my_favorite_select_button post_id="119094"]

ಆರೋಗ್ಯ

ಸಿನಿಮಾ

2020 ಹಾಗೂ 2021 ರ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಪ್ರಕಟ

2020 ಹಾಗೂ 2021 ರ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಪ್ರಕಟ

ಕರ್ನಾಟಕ ಸರ್ಕಾರವು ಚಲನಚಿತ್ರ ರಂಗದಲ್ಲಿನ ಜೀವಮಾನ ಸಾಧನೆಗಾಗಿ ನೀಡುವ ಡಾ.ರಾಜಕುಮಾರ್, ಪುಟ್ಟಣ್ಣ ಕಣಗಾಲ್ ಹಾಗೂ ಡಾ.ವಿಷ್ಣುವರ್ಧನ್ ಪ್ರಶಸ್ತಿಗಳನ್ನು ಪ್ರಕಟಿಸಿದೆ (State Film Awards).

[ccc_my_favorite_select_button post_id="118307"]
error: Content is protected !!