Village rat, city rat

ಹರಿತಲೇಖನಿ ದಿನಕ್ಕೊಂದು ಕಥೆ: ಹಳ್ಳಿಯ ಇಲಿ, ನಗರದ ಇಲಿ

Harithalekhani; ಎರಡು ಇಲಿಗಳಿದ್ದವು. ಆವು ತುಂಬಾ ವರ್ಷಗಳಿಂದ ಸ್ನೇಹಿತರಾಗಿದ್ದವು. ಒಂದು ಇಲಿ ನಗರದಲ್ಲಿ ವಾಸಿಸುತ್ತಿತ್ತು. ಮತ್ತೊಂದು ಇಲಿ ಪಕ್ಕದ ಹಳ್ಳಿಯಲ್ಲಿ ವಾಸವಾಗಿದ್ದು ಸಂತೋಷದಿಂದ ನೆಮ್ಮದಿಯಾಗಿತ್ತು.

ಹೀಗಿರಲು ಒಂದು ನಗರದಲ್ಲಿ ವಾಸಿಸುತ್ತಿದ್ದ ಇಲಿ, ಸ್ನೇಹಿತನನ್ನು ಕಾಣಲು ಹಳ್ಳಿಗೆ ಬಂದಿತು. ತನ್ನನ್ನು ಹುಡುಕಿಕೊಂಡು ಮನೆಗೆ ಬಂದ ಸ್ನೇಹಿತನನ್ನು ಕಂಡು ಹಿರಿಹಿರಿ ಹಿಗ್ಗಿತು ಹಳ್ಳಿಯ ಇಲಿ. ಇಬ್ಬರ ನಡುವೆ ಉಭಯ ಕುಶಲೋಪರಿ ನಡೆಯಿತು. ‘ನೀನು ಹೇಗಿದ್ದೀಯಾ’ ಎಂದು ಒಂದನ್ನೊಂದು ವಿಚಾರಿಸಿಕೊಳ್ಳುವ ಮೂಲಕ ತಮ್ಮ ಹಳೆಯ ಗೆಳೆತನದ ದಿನಗಳನ್ನು ಮೆಲುಕು ಹಾಕಿದವು.

ನಗರದಲ್ಲಿ ವೈಭವಯುತವಾದ ಜೀವನದ ರುಚಿ ಕಂಡ ಇಲಿ, ಹಳ್ಳಿಯಲ್ಲಿ ವಾಸವಾಗಿದ್ದ ಸ್ನೇಹಿತ ಇಲಿಯನ್ನು ಛೇಡಿಸಿತು.

‘ಅಯ್ಯೋ… ಈ ವಾತಾವರಣದಲ್ಲಿ ನೀನು ಹೇಗೆ ವಾಸವಾಗಿರುವೆ? ನನಗಂತೂ ಇಲ್ಲಿರಲು ಆಗುತ್ತಿಲ್ಲ, ನೀನಾದರೂ ಹೇಗಿದ್ದಿಯೋ ಏನೋ? ಒಮ್ಮೆ ನಗರಕ್ಕೆ ಬಂದು ನೋಡು ಜೀವನ ಹೇಗಿರುತ್ತದೆ ಎಂದು… ಅಬ್ಬಾ ನನಗಂತೂ ನಗರವೇ ಇಷ್ಟ’ ಎಂದು ಹೇಳಿ ಗೆಳೆಯನಿಗೆ ಆಹ್ವಾನ ನೀಡಿತು ನಗರದ ಇಲಿ.

ಸ್ನೇಹಿತರ ಕರೆಗೆ ಇಲ್ಲ ಎನ್ನಲಾದೀತೆ? ಗೆಳೆಯನ ಆಹ್ವಾನ ಮನ್ನಿಸಿ ಹಳ್ಳಿಯ ಇಲಿ ಆತನೊಂದಿಗೆ ಹೊರಡಲು ಸಿದ್ದವಾಯಿತು. ಇಬ್ಬರೂ ಸ್ನೇಹಿತರು ಕಲೆತು ನಗರಕ್ಕೆ ಆಗಮಿಸಿದರು.

ಜನಗರ ಜೀವನ ಶೈಲಿ ಕಂಡು ಹಳ್ಳಿಯ ಇಲಿಗೆ ನಿಜಕ್ಕೂ ಖುಷಿಯಾಯಿತು. ಇಲ್ಲಿನ ಜಗಮಗಿಸುವ ವ್ಯವಸ್ಥೆ ಅದಕ್ಕೆ ಸಂತೋಷ ಸಂಭ್ರಮ ನೀಡಿತು. ಅದು ಇಲಿಯನ್ನು ಕುಣಿದು ಕುಪ್ಪಳಿಸುವಂತೆ ಮಾಡಿತು.

ಅಪರೂಪಕ್ಕೆ ಸೇರಿದ್ದ ಗೆಳೆಯರಿಬ್ಬರು ಊಟ ಮಾಡಲೆಂದು ಸುಸಜ್ಜಿತವಾದ ಹೋಟೆಲ್‌ಗೆ ಹೋದರು. ಅಬ್ಬಾ… ಈ ದಿನ ಮಜವಾಗಿ ಊಟ ಮಾಡಬಹುದೆಂದು ಲೆಕ್ಕಾಚಾರ ಮಾಡುತ್ತಲೇ ಆಹಾರದ ರಾಶಿಯನ್ನು ಕಣ್ಣಲ್ಲೇ ಸವಿಯುತ್ತಾ ನೋಡುತ್ತಿದ್ದವು.

ಇನ್ನೇನು ಆಹಾರವನ್ನು ಸವಿಯಬೇಕು ಎನ್ನುವಷ್ಟರಲ್ಲಿ ಎಲ್ಲಿಂದಲೋ ‘ಮಿಯಾಂವ್…ಮಿಯಾಂವ್…’ ಎಂಬ ಧ್ವನಿ ಕಿವಿಗಪ್ಪಳಿಸಿತು. ಗೆಳೆಯರಿಬ್ಬರೂ ಎಚ್ಚೆತ್ತುಕೊಂಡರು. ಧ್ವನಿ ಬಂದ ಕಡೆ ನೋಡುತ್ತಾರೆ. ಪಕ್ಕದ ಕಿಟಕಿಯಿಂದ ಬೆಕ್ಕೊಂದು ಕಳ್ಳ ಹೆಜ್ಜೆ ಇರಿಸಿಕೊಂಡು ಇವರೆಡೆಗೆ ಬರುತ್ತಿದೆ. ತಮ್ಮತ್ತಲೇ ಬರುತ್ತಿರುವ ಬೆಕ್ಕನ್ನು ನೋಡಿದ್ದೇ ತಡ, ಆ ಎರಡು ಇಲಿಗಳು ದಿಕ್ಕಾಪಾಲಾಗಿ ಓಡುತ್ತಾ ತಮ್ಮ ಬಿಲವನ್ನು ಹೊಕ್ಕಿದವು. ತಿನ್ನಬೇಕು ಎಂದು ಇಲಿಗಳು ಇಟ್ಟುಕೊಂಡಿದ್ದ ಮೃಷ್ಟಾನ್ನ ಭೋಜನ ಅಂದು ಬೆಕ್ಕಿನ ಪಾಲಾಯಿತು.

ಬೆಕ್ಕು ಹೋಗುವುದನ್ನು ಬಿಲದಿಂದಲೇ ಇಣುಕಿ ನೋಡುತ್ತಿದ್ದ ಇಲಿಗಳು ಬೆಕ್ಕು ಹೋದ ನಂತರ ಹೊರಬಂದವು.

‘ಸರಿ ನಾನಿನ್ನು ಬರುತ್ತೇನೆ’ ಎಂದು ದುಃಖದಿಂದಲೇ ಹೇಳಿತು ಹಳ್ಳಿಯ ಇಲಿ.

‘ಇರು, ಹೋಗುವೆಯಂತೆ’ ಎಂದಿತು ನಗರದ ಇಲಿ. ಅದಕ್ಕೆ ಹಳ್ಳಿಯ ಇಲಿ, ‘ಬೇಡಪ್ಪಾ, ನಗರದ ಸಹವಾಸವೇ ಬೇಡ. ಸದಾ ಆಪತ್ತಿನಲ್ಲೇ ಇರುವ, ರಕ್ಷಣೆ ಇಲ್ಲದಿರುವ ನಿನ್ನ ತಾಣಕ್ಕಿಂದ ಸರಳವಾಗಿರುವ, ಸುರಕ್ಷಿತವಾಗಿರುವ ನನ್ನ ಹೊಲದ ಮನೆಯೇ ಚೆಂದ’ ಎನ್ನುತ್ತಾ ಇಲಿ ತನ್ನ ಹಳ್ಳಿಗೆ ವಾಪಾಸಾಯಿತು.

ಕೃಪೆ: ಕೆ.ಮುರಳಿ, ಮಕ್ಕಳಿಗಾಗಿ ನೂರಾರು ಕಥೆಗಳು, ಕೃಷಿವಿಕಾಸ್ ಪಬ್ಲಿಕೇಷನ್ಸ್, ಬೆಂಗಳೂರು.

ರಾಜಕೀಯ

ಒಳ ಮೀಸಲಾತಿ ಜಾರಿ ವೇಳೆ ಸುಪ್ರೀಂ ಕೋರ್ಟ್ ಆದೇಶವನ್ನೂ ಪಾಲಿಸಿದಂತಿಲ್ಲ: ಬಿ.ವೈ. ವಿಜಯೇಂದ್ರ

ಒಳ ಮೀಸಲಾತಿ ಜಾರಿ ವೇಳೆ ಸುಪ್ರೀಂ ಕೋರ್ಟ್ ಆದೇಶವನ್ನೂ ಪಾಲಿಸಿದಂತಿಲ್ಲ: ಬಿ.ವೈ. ವಿಜಯೇಂದ್ರ

ಒಳ ಮೀಸಲಾತಿ ಜಾರಿ ವಿಚಾರದಲ್ಲಿ ಮುಖ್ಯಮಂತ್ರಿಗಳು ಮಾನ್ಯ ಸುಪ್ರೀಂ ಕೋರ್ಟಿನ ಆದೇಶವನ್ನೂ ಸರಿಯಾಗಿ ಪಾಲನೆ ಮಾಡಿದಂತೆ ಕಾಣುತ್ತಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ (B.Y. Vijayendra)

[ccc_my_favorite_select_button post_id="112894"]
2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

ದಾವಣಗೆರೆ: ಬೆಂಗಳೂರು-ದಾವಣಗೆರೆ- ಬೆಳಗಾವಿಗೆ ವಂದೇ ಭಾರತ್ ಎಕ್ಸ್‍ಪ್ರೆಸ್ (Vande Bharat Express) ರೈಲು ಸೇವೆಯಿಂದ ಶಿಕ್ಷಣ, ಆರೋಗ್ಯ ಸೇವೆಯ ಅನುಕೂಲದ ಜೊತೆಗೆ ವ್ಯಾಪಾರ ವಹಿವಾಟು ವೃದ್ದಿಯಾಗಲಿದೆ ಎಂದು ಸಂಸದರಾದ ಡಾ; ಪ್ರಭಾ ಮಲ್ಲಿಕಾರ್ಜುನ್ (Dr.

[ccc_my_favorite_select_button post_id="112408"]
Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

ಹಳೆ ದ್ವೇಷದ ಹಿನ್ನೆಲೆ ಎರಡು ಗ್ಯಾಂಗ್‌ಗಳ ನಡುವೆ ಮಾರಾಮಾರಿ ನಡೆದಿದೆ. ದೊಣ್ಣೆ, ಮಾರಕಾಸ್ತ್ರಗಳಿಂದ ಪರಸ್ಪರ ಹೊಡೆ ದಾಡಿಕೊಂಡಿದ್ದಾರೆ. Crime News;

[ccc_my_favorite_select_button post_id="110866"]
ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಪ್ರವಾಸದಲ್ಲಿರುವ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ತಮ್ಮ ಪ್ರವಾಸದ ಎರಡನೇ ದಿನವೂ ಇಲ್ಲಿನ ಆಡಳಿತ

[ccc_my_favorite_select_button post_id="110371"]

ಕ್ರೀಡೆ

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಒಡಿಶಾದ ಭುವನೇಶ್ವರದಲ್ಲಿ‌ ಇದೇ ತಿಂಗಳ 10ರಂದು ನಡೆದ ವಿಶ್ವ ಅಥ್ಲೆಟಿಕ್ಸ್ ನ ಕಾಂಟಿನೆಂಟಲ್ ಕೂಟದ ಮಹಿಳೆಯರ ವಿಭಾಗದ 400 ಮೀಟರ್ ಓಟದಲ್ಲಿ ಚಿನ್ನದ ಪದಕ ಗಳಿಸಿದ ರಾಜ್ಯಕ್ಕೆ ಕೀರ್ತಿ ತಂದ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ

[ccc_my_favorite_select_button post_id="112580"]
ದೊಡ್ಡಬಳ್ಳಾಪುರ: ರೈಲ್ವೇ ಸ್ಟೇಷನ್ ಬಳಿ ನಡೆದಿದ್ದು ಕೊಲೆ..! ಪ್ರಕರಣ ದಾಖಲು

ದೊಡ್ಡಬಳ್ಳಾಪುರ: ರೈಲ್ವೇ ಸ್ಟೇಷನ್ ಬಳಿ ನಡೆದಿದ್ದು ಕೊಲೆ..! ಪ್ರಕರಣ ದಾಖಲು

ಮಂಗಳವಾರ ಬೆಳಗ್ಗೆ ವ್ಯಕ್ತಿಯೋರ್ವನ ಮೃತ ದೇಹ ನಗರದ ಹೊರವಲಯದಲ್ಲಿರುವ ರೈಲ್ವೇ ನಿಲ್ದಾಣದ ಬಳಿ ಪತ್ತೆಯಾಗಿದ್ದು, ಹತ್ಯೆ (Murder) ನಡೆದಿರುವ ಕುರಿತು ಸಿಸಿ ಟಿವಿಯಲ್ಲಿ ದೃಶ್ಯ ಸೆರೆ

[ccc_my_favorite_select_button post_id="112854"]
ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ಮಳೆಯ ವೇಳೆ ವಾಹನ ಸವಾರರು ಎಷ್ಟು ಮುಂಜಾಗ್ರತೆ ಸಾಲದು. ಏಕೆಂದರೆ ನಿನ್ನೆ ಸಂಜೆ ಸುರಿದ ಭಾರಿ ಮಳೆಯ ಕಾರಣ ರಸ್ತೆ ಬದಿಯಲ್ಲಿ ಕೆಟ್ಟು ನಿಂತಿದ್ದ ಟ್ರಾಕ್ಟರ್ ಕಾಣದೆ Accident

[ccc_my_favorite_select_button post_id="112435"]

ಆರೋಗ್ಯ

ಸಿನಿಮಾ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಕಾಂಗ್ರೆಸ್ (Congress) ಮಾಡಿರುವ ಓಟ್ ಚೋರಿ ಆರೋಪ ದಿನೇದಿನೇ ತೀವ್ರ ಸ್ವರೂಪ ಪಡೆಯುತ್ತಿದ್ದು, ಚುನಾವಣೆ ಆಯೋಗ (Election Commission) ಹಾಗೂ ಕೇಂದ್ರ ಸರ್ಕಾರದ (Central Government) ವಿರುದ್ಧ ಅನುಮಾನ ಹೆಚ್ಚಿಸುವಂತೆ ಮಾಡುತ್ತಿದೆ‌.

[ccc_my_favorite_select_button post_id="112714"]
error: Content is protected !!