The cruel Narasimha Varma

ಹರಿತಲೇಖನಿ ದಿನಕ್ಕೊಂದು ಕಥೆ: ಕ್ರೂರಿ ನರಸಿಂಹವರ್ಮ

Harithalekhani: ಒಂದು ಊರಿನಲ್ಲಿ ನರಸಿಂಹವರ್ಮ ಎಂಬ ರಾಜನಿದ್ದನು. ಅವನು ಬಹಳ ಕ್ರೂರಿಯಾಗಿದ್ದನು. ಜನರನ್ನು ಹಿಂಸಿಸುತ್ತಿದ್ದನು. ಅವನನ್ನು ಕಂಡರೆ ಜನರಿಗೆ ಭಯವಾಗುತ್ತಿತ್ತು. ಒಂದು ದಿನ ತೆರಿಗೆ ಪಾವತಿಸಿಲ್ಲದವರನ್ನು ವಿಚಾರಿಸುತ್ತಿದ್ದನು. ಒಬ್ಬ ಬಂದ. ರಾಜ, ‘ಏಕೆ ತೆರಿಗೆ ಪಾವತಿಸಿಲ್ಲ?’ ಎಂದನು.

ಬಡವ ಭಯದಿಂದ, ‘ನನ್ನ ಹೆಂಡತಿಗೆ ಆರೋಗ್ಯ ಸರಿಯಿಲ್ಲ. ಅವಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದೆ. ಅಲ್ಲಿ ಹಣವೆಲ್ಲಾ ಖರ್ಚಾಯಿತು. ಆದ್ದರಿಂದ ತೆರಿಗೆ ಕಟ್ಟಿಲ್ಲ’ ಎಂದನು. ‘ಎರಡು ದಿನ ಕಾಲಾವಕಾಶ ಕೊಡಿ’ ಎಂದನು. ರಾಜ, ‘ಇವನ ತಪ್ಪಿಗೆ ಇವನ ಕೈಕಾಲುಗಳನ್ನು ಕತ್ತರಿಸಿ’ ಎಂದನು.

ಮತ್ತೊಬ್ಬ ಬಂದ. ರಾಜ, ‘ನೀನೇಕೆ ತೆರಿಗೆ ಕಟ್ಟಿಲ್ಲ?’ ಎಂದ. ‘ಸ್ವಾಮಿ, ಅಂಗಡಿಯಲ್ಲಿ ವ್ಯಾಪಾರವಾಗಿಲ್ಲ. ಆದ್ದರಿಂದ ತೆರಿಗೆ ಪಾವತಿಸಿಲ್ಲ’. ‘ಇವನನ್ನು ಕರೆದುಕೊಂಡು ಹೋಗಿ ಇವನ ತಲೆಯನ್ನು ಕತ್ತರಿಸಿ ಎಸೆಯಿರಿ’ ಎಂದ ರಾಜ. ಹೀಗೆ ರಾಜ ಜನರಿಗೆ ಕಿರುಕುಳ ಕೊಡುತ್ತಿದ್ದನು. ಒಂದು ದಿನ ಆತ ಕುದುರೆ ಸವಾರಿ ಮಾಡಿಕೊಂಡು ಬರುತ್ತಿದ್ದ. ಆಗ ದಾರಿಯ ಮಧ್ಯದಲ್ಲಿ ಒಂದು ಕೊಂಬೆ ಅಡ್ಡಲಾಗಿ ಬಿತ್ತು. ರಾಜ ಕೋಪಗೊಂಡು ಸೈನಿಕರಿಗೆ ಆ ಮರವನ್ನು ಕಡಿಯುವಂತೆ ಹೇಳಿದನು. ಆ ಮರದಲ್ಲಿ ನೂರಾರು ಹಕ್ಕಿಗಳು ವಾಸವಾಗಿದ್ದವು, ಅವುಗಳೆಲ್ಲ ನಾಶವಾದವು.

ಆ ಮರದಲ್ಲಿದ್ದ ಹಕ್ಕಿಯೊಂದು ಬದುಕುಳಿಯಿತು. ಅದು ಕೋಪದಿಂದ ಹಾರಿಬಂದು ತನ್ನ ಸ್ನೇಹಿತನಾದ ನಾಗರಹಾವನ್ನು ಭೇಟಿ ಮಾಡಿತು. ನಡೆದ ವಿಷಯವನ್ನೆಲ್ಲಾ ತಿಳಿಸಿತು. ಇಬ್ಬರೂ ಜೊತೆಗೂಡಿ ರಾಜನನ್ನು ಕೊಲ್ಲಲು ನಿರ್ಧರಿಸಿದವು.

ರಾಜನು ಕೊಳದಲ್ಲಿ ಸ್ನಾನ ಮಾಡುವಾಗ ನಾಗರಹಾವು ರಾಜನ ಕುತ್ತಿಗೆಗೆ ಸುತ್ತಿಕೊಂಡಿತು. ರಾಜ ‘ಕಾಪಾಡಿ ಕಾಪಾಡಿ’ ಎಂದು ರಕ್ಷಣೆಗೆ ಮೊರೆಯಿಟ್ಟ. “ನೀವ್ಯಾರು? ನನ್ನನ್ನು ಏಕೆ ಕೊಲ್ಲುತ್ತಿದ್ದೀರಿ? ಎಂದ. ಕೊಳದ ಪಕ್ಕದಲ್ಲಿದ್ದ ಹಕ್ಕಿಯು, ‘ಆವತ್ತು ನೀನು ಒಂದು ಮರವನ್ನು ಕಡಿಯುವಂತೆ ಆಜ್ಞೆ ಮಾಡಿದೆಯಲ್ಲವೇ?’ ಎಂದಿತು.

ರಾಜ, ‘ಹೌದು’ ಎಂದ. ‘ಆ ಮರದಲ್ಲಿ ವಾಸವಿದ್ದ ಒಂದು ಹಕ್ಕಿ ನಾನು’ ಎಂದಿತು.

ರಾಜ, ‘ನನ್ನನ್ನು ಕ್ಷಮಿಸು’ ಎಂದು ಬೇಡಿಕೊಂಡನು.

ನಾಗರಹಾವು ರಾಜನನ್ನು ಕೊಂದು ಹಾಕುವುದಕ್ಕೆ ಗಟ್ಟಿಯಾಗಿ ಕುತ್ತಿಗೆಗೆ ಸುತ್ತಿಕೊಂಡಿತು. ರಾಜ, ‘ಯಾರಾದರೂ ಕಾಪಾಡಿ’ ಎಂದು ಕೂಗಿಕೊಳ್ಳುತ್ತಿದ್ದನು.

ರಾಜ ಮಾಡಿದ ಪಾಪದಿಂದ ಮತ್ತು ಆತ ಜನರಿಗೆ ಕೊಟ್ಟ ಕಷ್ಟದಿಂದ ಯಾರೂ ರಾಜನನ್ನು ಉಳಿಸಲು ಬರಲಿಲ್ಲ. ನಾಗರಾಜ ರಾಜನನ್ನು ಕೊಂದಿತು. ಆಗ ಜನರೆಲ್ಲ ಸಂಭ್ರಮದಿಂದ ಕುಣಿದಾಡಿದರು.

ಕೃಪೆ: ಕೆ.ಮುರಳಿ, ಮಕ್ಕಳಿಗಾಗಿ ನೂರಾರು ಕಥೆಗಳು, ಕೃಷಿವಿಕಾಸ್ ಪಬ್ಲಿಕೇಷನ್ಸ್, ಬೆಂಗಳೂರು. (ಸರ್ಕಾರಿ ಲೈಬ್ರರಿಯಿಂದ)

ರಾಜಕೀಯ

ಡಿ.ಕೆ.ಶಿವಕುಮಾರ್ ಅವರು ಕ್ಷಮೆ ಕೇಳಬೇಕು ಎಂದು ಆದೇಶ ನೀಡಿದ್ದು ಯಾರು?: ಆರ್. ಅಶೋಕ್ ಕಿಡಿ

ಡಿ.ಕೆ.ಶಿವಕುಮಾರ್ ಅವರು ಕ್ಷಮೆ ಕೇಳಬೇಕು ಎಂದು ಆದೇಶ ನೀಡಿದ್ದು ಯಾರು?: ಆರ್. ಅಶೋಕ್

"ನಮಸ್ತೇ ಸದಾ ವತ್ಸಲೇ ಮಾತೃಭೂಮೇ" ಎಂದು ತಾಯಿ ಭಾರತಾಂಬೆಗೆ ನಮಸ್ಕರಿಸಿದ್ದಕ್ಕೆ ಡಿಸಿಎಂ (D.K. Shivakumar) ಅವರು ಕ್ಷಮೆ ಕೇಳಬೇಕು ಎನ್ನುವುದಾದರೆ... R. Ashoka

[ccc_my_favorite_select_button post_id="113127"]
RSS ಗೀತೆಯ ಸಾಲು ಉಲ್ಲೇಖ: ಕಾರ್ಯಕರ್ತರ ಕ್ಷಮೆ ಕೋರಿದ ಡಿಸಿಎಂ ಡಿ.ಕೆ.ಶಿವಕುಮಾರ್

RSS ಗೀತೆಯ ಸಾಲು ಉಲ್ಲೇಖ: ಕಾರ್ಯಕರ್ತರ ಕ್ಷಮೆ ಕೋರಿದ ಡಿಸಿಎಂ ಡಿ.ಕೆ.ಶಿವಕುಮಾರ್

ವಿಧಾನಸಭೆಯಲ್ಲಿ ಆರ್ ಎಸ್ಎಸ್ ಗೀತೆಯ ಸಾಲುಗಳನ್ನು ಉಲ್ಲೇಖಿಸಿದ್ದರ ಬಗ್ಗೆ ಸ್ಪಷ್ಟನೆ ನೀಡಿದರು. ಜೊತೆಗೆ ತಮ್ಮ ಹೇಳಿಕೆಯನ್ನು ರಾಜಕೀಯವಾಗಿ ಬಳಸುತ್ತಿರುವವರಿಗೂ ಡಿ.ಕೆ.ಶಿವಕುಮಾರ್ (D.K. Shivakumar) ತಿರುಗೇಟು ನೀಡಿದರು.

[ccc_my_favorite_select_button post_id="113124"]
Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

ಹಳೆ ದ್ವೇಷದ ಹಿನ್ನೆಲೆ ಎರಡು ಗ್ಯಾಂಗ್‌ಗಳ ನಡುವೆ ಮಾರಾಮಾರಿ ನಡೆದಿದೆ. ದೊಣ್ಣೆ, ಮಾರಕಾಸ್ತ್ರಗಳಿಂದ ಪರಸ್ಪರ ಹೊಡೆ ದಾಡಿಕೊಂಡಿದ್ದಾರೆ. Crime News;

[ccc_my_favorite_select_button post_id="110866"]
ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಪ್ರವಾಸದಲ್ಲಿರುವ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ತಮ್ಮ ಪ್ರವಾಸದ ಎರಡನೇ ದಿನವೂ ಇಲ್ಲಿನ ಆಡಳಿತ

[ccc_my_favorite_select_button post_id="110371"]

ಕ್ರೀಡೆ

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಒಡಿಶಾದ ಭುವನೇಶ್ವರದಲ್ಲಿ‌ ಇದೇ ತಿಂಗಳ 10ರಂದು ನಡೆದ ವಿಶ್ವ ಅಥ್ಲೆಟಿಕ್ಸ್ ನ ಕಾಂಟಿನೆಂಟಲ್ ಕೂಟದ ಮಹಿಳೆಯರ ವಿಭಾಗದ 400 ಮೀಟರ್ ಓಟದಲ್ಲಿ ಚಿನ್ನದ ಪದಕ ಗಳಿಸಿದ ರಾಜ್ಯಕ್ಕೆ ಕೀರ್ತಿ ತಂದ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ

[ccc_my_favorite_select_button post_id="112580"]
ದೊಡ್ಡಬಳ್ಳಾಪುರ: ಆಘಾತಕಾರಿ ಸ್ಥಿತಿಯಲ್ಲಿ ಬಾಲಕನ ಶವ ಪತ್ತೆ.‌. ಹಲವು ಶಂಕೆ

ದೊಡ್ಡಬಳ್ಳಾಪುರ: ಆಘಾತಕಾರಿ ಸ್ಥಿತಿಯಲ್ಲಿ ಬಾಲಕನ ಶವ ಪತ್ತೆ.‌. ಹಲವು ಶಂಕೆ

17 ವರ್ಷದ ಬಾಲಕನ ಶವ ಆಘಾತಕಾರಿ ಸ್ಥಿತಿಯಲ್ಲಿ (shocking condition) ಪತ್ತೆಯಾಗಿರುವ ಘಟನೆ ನಗರದ ಕರೇನಹಳ್ಳಿಯ ಟೆಂಟ್ ಹಿಂಭಾಗದ ಗುಟ್ಟೆಯಲ್ಲಿ ಪತ್ತೆಯಾಗಿದೆ.

[ccc_my_favorite_select_button post_id="113099"]
ದೊಡ್ಡಬಳ್ಳಾಪುರ: ಬೆಳ್ಳಂಬೆಳಗ್ಗೆ ಅಪಘಾತ.. ಯುವಕನ ಬಲಿ ಪಡೆದ ಸಿಮೆಂಟ್ ಲಾರಿ..!

ದೊಡ್ಡಬಳ್ಳಾಪುರ: ಬೆಳ್ಳಂಬೆಳಗ್ಗೆ ಅಪಘಾತ.. ಯುವಕನ ಬಲಿ ಪಡೆದ ಸಿಮೆಂಟ್ ಲಾರಿ..!

ಮತ್ತೊಂದು ರಸ್ತೆಯಲ್ಲಿ ತನ್ನ ಪಾಡಿಗೆ ತಾನು ಸಾಗುತ್ತಿದ್ದ ಯುವಕನ ಮೇಲೆರಗಿದ (Accident) ಲಾರಿ, ಸ್ಥಳದಲ್ಲಿಯೇ ಬಲಿ ಪಡೆದಿರುವ ಘಟನೆ

[ccc_my_favorite_select_button post_id="113040"]

ಆರೋಗ್ಯ

ಸಿನಿಮಾ

Darshan; ‘ಇದ್ರೇ ನೆಮ್ಮದಿಯಾಗ್ ಇರ್ಬೇಕ್’ ಹಾಡು ಬಿಡುಗಡೆ.. Video ಲಿಂಕ್ ಇಲ್ಲಿದೆ ನೋಡಿ

Darshan; ‘ಇದ್ರೇ ನೆಮ್ಮದಿಯಾಗ್ ಇರ್ಬೇಕ್’ ಹಾಡು ಬಿಡುಗಡೆ.. Video ಲಿಂಕ್ ಇಲ್ಲಿದೆ ನೋಡಿ

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ಅಭಿನಯದ ದಿ ಡೆವಿಲ್ ಸಿನಿಮಾದ 'ಇದ್ರೇ ನೆಮ್ಮದಿಯಾಗ್ ಇರ್ಬೇಕ್' ಹಾಡು ಯುಟ್ಯೂಬ್‌ನಲ್ಲಿ ಬಿಡುಗಡೆಯಾಗಿದೆ.

[ccc_my_favorite_select_button post_id="113046"]
error: Content is protected !!