ದೊಡ್ಡಬಳ್ಳಾಪುರ: ಪೊಲೀಸ್ ಇಲಾಖೆಯ ಡಿವೈಎಸ್ಪಿ (DYSP) ಎಂಬ ದರ್ಪ, ದೌಲತ್ ಇಲ್ಲದೆ ಸರಳ, ಸಜ್ಜನಿಕೆಯ ವ್ಯಕ್ತಿಯೆಂದು ಹೆಸರು ಪಡೆದಿದ್ದ ದೊಡ್ಡಬಳ್ಳಾಪುರ ಉಪವಿಭಾಗದ ಡಿವೈಎಸ್ಪಿ (DYSP) ರವಿ ಪಿ (Ravi.P) ಅವರನ್ನು ವರ್ಗಾವಣೆ ಮಾಡಲಾಗಿದೆ.
ಈ ಕುರಿತಂತೆ ಪೊಲೀಸ್ ಮಹಾನಿರೀಕ್ಷಕರ ಪರವಾಗಿ ಸೌಮೇಂದ್ರ ಮುಖರ್ಜಿ ಅವರು ಆದೇಶಿಸಿದ್ದಾರೆ.
ದೊಡ್ಡಬಳ್ಳಾಪುರ ಡಿವೈಎಸ್ಪಿ ರವಿ ಅವರನ್ನು ಸಿಐಡಿ ಇಲಾಖೆಗೆ ವರ್ಗಾವಣೆ ಮಾಡಲಾಗಿದ್ದು, ಇವರ ಸ್ಥಾನಕ್ಕೆ ಲೋಕಾಯುಕ್ತ ವಿಶೇಷ ತಂಡದಲ್ಲಿದ್ದ ಪಾಂಡುರಂಗ ಎಸ್ ಅವರನ್ನು ನೇಮಿಸಲಾಗಿದೆ.
ಇದೀಗ ಬಂದ ಮಾಹಿತಿ ಅನ್ವಯ ನೂತನ ಡಿವೈಎಸ್ಪಿ ಪಾಂಡುರಂಗ ಎಸ್ ಅವರು ಇಂದು ಸಂಜೆ ಅಧಿಕಾರ ವಹಿಸಿಕೊಂಡಿದ್ದಾರೆಂದು ತಿಳಿದುಬಂದಿದೆ.