Open the door, Bigg Boss

ಬಾಗಿಲು ತೆಗೆದು ಬಿಡಿ ಬಿಗ್ ಬಾಸ್; ವೀಕ್ಷಕರು ರೊಚ್ಚಿಗೆದ್ದಿದ್ದೇಕೆ ಗೊತ್ತೆ..!

ಕೆ.ಎಂ.ಸಂತೋಷ್, ಆರೂಢಿ ( ದೊಡ್ಡಬಳ್ಳಾಪುರ): ಬಿಗ್​ಬಾಸ್​ (Bigg Boss) 12 ನೇ ಸೀಸನ್ ರಿಯಾಲಿಟಿ ಶೋ ಯಶಸ್ವಿಯಾಗಿ 50ನೇ ದಿನ ಮುಗಿಸಿದ್ದು, ಗಿಲ್ಲಿ ನಟನ ವಿರುದ್ಧ ದೂರು, ಅಶ್ವಿನಿ ಗೌಡ ಅವರ ಕೂಗಾಟ, ಕಣ್ಣೀರು ಸಾಮಾಜಿಕ ಜಾಲತಾಣದಲ್ಲಿ, ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗುತ್ತಿದೆ.

ಕಳೆದ ಶನಿವಾರ ಅಶ್ವಿನಿ ಗೌಡ ಬಣದಲ್ಲಿದ್ದ ಕಾಕ್ರೋಚ್ ಸುಧೀರ್ ಹೊರಗೆ ಬಂದಿದ್ದಾರೆ.

ಬಿಗ್​ಬಾಸ್​ 12ರಲ್ಲಿ ಗಿಲ್ಲಿ ನಟ ತಂಡ ಹಾಗೂ ಅಶ್ವಿನಿ ತಂಡ ಎಂದು ವಿಂಗಡನೆಯಾಗಿದ್ದು, ಗಿಲ್ಲಿ ನಟ ತಂಡ ಎಂದರೆ ಮನರಂಜನೆ, ಅಶ್ವಿನಿ ತಂಡ ಎಂದರೆ ಜಗಳ, ಕಿರಿಕ್ ಎಂಬುದು ವೀಕ್ಷಕರು ಬಹುತೇಕ ಅಭಿಪ್ರಾಯಕ್ಕೆ ಬಂದಿರುವುದು ಕಳೆದ ವರದಿಯಲ್ಲಿ ಹೇಳಿದ್ದೇವೆ.

ದಿನೇ ದಿನೇ ಅಶ್ವಿನಿ ತಂಡದ ಪರ ಇರುವವರು ಒಬ್ಬರಾಗಿ ಗಿಲ್ಲಿ ತಂಡವನ್ನು ಸೇರುತ್ತಿದ್ದು, ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿಯ 2.O ಆಟ ಶುರುವಾಗಿದೆ.

ಇನ್ನೂ ರಘು ಕ್ಯಾಪ್ಟನ್ ಆದ ಬಳಿಕ ಸ್ವಯಂ ಘೋಷಿತ ವೈಸ್ ಕ್ಯಾಪ್ಟನ್ ಗಿಲ್ಲಿ ಕ್ವಾಟ್ಲೆ ಶುರು ಮಾಡಿದ್ದರು. ಆದರೆ ರಘು ಗಿಲ್ಲಿನ ಕೆಲಸಕ್ಕಿಟ್ಟಿದ್ದು ನೋಡಿ ಯಾಕಣ್ಣ ಹೀಗ್ ಬೆನ್ನಿಗೆ ಬಿದ್ದೆ ಎಂದು ಗೊಣಗಾಡಿದ್ದು ವೀಕ್ಷಕರನ್ನು ರಂಜಿಸಿದೆ‌.

ಇನ್ನೂ ಮಂಗಳವಾರ ರಾತ್ರಿ ನಡೆದ ಸ್ಪರ್ಧೆಯ ವೇಳೆ ಗಿಲ್ಲಿ ಹಾಗೂ ಅಶ್ವಿನಿ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದ್ದು, ಮತ್ತೆ ಅಶ್ವಿನಿ ಗೌಡ ಬೇಕಾಬಿಟ್ಟಿ ಮಾತಾಡಿದ್ದು, ಗಿಲ್ಲಿ ತಿರುಗೇಟು ನೀಡಿದ್ದು, ಬಳಿಕ ಅಶ್ವಿನಿ ಗೌಡ ಕಣ್ಣೀರು ಹಾಕಿದ್ದರು. ಈ ವೇಳೆ ಗಿಲ್ಲಿಯದ್ದೇ ತಪ್ಪು ಎಂದು ಕೆಲ ಸದಸ್ಯರು ಹೇಳಿದರು, ವೀಕ್ಷಕರು ಮಾತ್ರ ಅಶ್ವಿನಿ ಗೌಡ ತಪ್ಪು ಎಂದು ವಕಾಲತ್ತು ವಹಿಸುತ್ತಾರೆ.

ಮುಂದುವರಿದು ಗುರುವಾರ ಸಂಜೆ ಕೂಡ ಅಶ್ವಿನಿ ಗೌಡ ಎಡವಟ್ಟು ಮಾಡಿಕೊಂಡಿದ್ದು, ಕ್ಯಾಪ್ಟನ್ ರಘು ಅವರು ಕೆಲಸ ಮಾಡಲು ಹೇಳಿದಾಗ ವರ್ತಿಸಿದ ರೀತಿ, ರಘು ವಿರುದ್ಧ ಏಕವಚನ ಬಳಕೆ, ಆಕ್ರೋಶ, ಬಾಗಿಲು ಬಳಿ ಬಂದು ನಾ ಇಲ್ಲಿ ಇರಲ್ಲ ಹೊರಟೋಗುವೆ ಬಾಗಿಲು ತೆರೆಯಿರಿ ಎಂದು ಹೈಡ್ರಾಮ ಸೃಷ್ಟಿಸಿದರು.

ಈ ವರೆಗೆ ಒಂದು ಹಂತದಲ್ಲಿ ಗಿಲ್ಲಿಯ ತಂಡ ಪರವಾಗಿರುವ ವೀಕ್ಷಕರು ಕೇರಳಿದ್ದು, ಈಯಮ್ಮನ ನಾಟಕ ನೋಡಲು ಸಾಧ್ಯವಾಗುತ್ತಿಲ್ಲ‌. ದಿನಾ ಒಂದೊಂದು ಡ್ರಾಮ ತಗೆದು ಸಿಂಪತಿ ಪಡೆಯಲು ಮುಂದಾಗಿದ್ದಾರೆ. ಅವಕಾಶ ಬಂದಿದೆ ಬಾಗಿಲು ತೆಗೆದು ಆಚೆ ಕಳಿಸಿಬಿಡಿ, ಬಿಗ್ ಬಾಸ್ ನೋಡಲು ಸಾಧ್ಯವಾಗದಷ್ಟು ಬೇಸರ ಅಶ್ವಿನಿ ಗೌಡ ಸೃಷ್ಟಿಸುತ್ತಿದ್ದಾರೆ.

ಈಕೆ ರಕ್ಷಿತ, ಕಾವ್ಯ, ಗಿಲ್ಲಿ ಈಗ ರಘು ಅವರ ವಿರುದ್ಧ ಬಳಸುವ ಭಾಷೆ ಮಿತಿ ಮೀರಿದೆ. ಮೊದಲು ಗೌರವವನ್ನ ಕೊಟ್ಟು ಆನಂತರ ನಿರೀಕ್ಷೆ ಮಾಡಬೇಕು. ಅಶ್ವಿನಿ ಇತರರಿಗೆ ಗೌರವ ಕೊಡೋದಿಲ್ಲ. ಆದರೆ, ಬೇರೆಯವರು ಅಶ್ವಿನಿಗೆ ಗೌರವ ಕೊಡಬೇಕು.

ಗಿಲ್ಲಿ ನಟನ ಯೋಗ್ಯತೆ ಬಗ್ಗೆ ಅಶ್ವಿನಿ ಮಾತಾಡುತ್ತಾರೆ. ಅದಕ್ಕೆ ಪ್ರತಿಕ್ರಿಯೆ ಬಂದಾಗ ನಾಟಕ ಮಾಡುತ್ತಾರೆ’ ದಯವಿಟ್ಟು ಆಚೆ ಕಳಿಸಿಬಿಡಿ ಎಂದು ವಿಡಿಯೋಗಳ ಮೂಲಕ ಒತ್ತಾಯಿಸುತ್ತಿದ್ದಾರೆ.

’ನೀನ್ಯಾವನೋ’’, ‘‘ಹೋಗೋಲೋ’’, ‘’ನಿನ್ ಯೋಗ್ಯತೆಗಿಷ್ಟು..’’, ‘’ಮುಚ್ಕೊಂಡ್ ಮಲ್ಕೋ’’, ‘’ಎಸ್ ಕ್ಯಾಟಗರಿ’’, ‘’ಅಮಾವಾಸ್ಯೆ’’ ಮುಂತಾದ ಮಾತುಗಳು ಅಶ್ವಿನಿ ಗೌಡ ಬಾಯಿಂದಲೇ ಬಂದಿದೆ. ಇನ್ನೊಬ್ಬರ ಬಗ್ಗೆ ಕೇವಲವಾಗಿ ಮಾತಾಡುವ ಅಶ್ವಿನಿ ಗೌಡ, ಬೇರೆಯವರಿಂದ ಗೌರವ ನಿರೀಕ್ಷಿಸೋದು ಸರಿಯೇ? ಎಂದು ವೀಕ್ಷಕರು ಪ್ರಶ್ನೆ ಮಾಡುತ್ತಿದ್ದಾರೆ.

ಗಿಲ್ಲಿ ನಟ ಹಾಗೂ ರಘು ಜೊತೆ ಜೋರು ಜಗಳ ಆಡಿದ್ಮೇಲೆ ಅಶ್ವಿನಿ ಗೌಡ ಕಣ್ಣೀರು ಸುರಿಸಿದ್ದಾರೆ. ಅವಮಾನ ಆಗಿದೆ, ಇಲ್ಲಿರೋಲ್ಲ, ಹೊರಗೆ ಹೋಗಬೇಕು ಅಂತ ಹಠ ಹಿಡಿದಿದ್ದಾರೆ. ಊಟ, ತಿಂಡಿ ಬಿಟ್ಟು ಸತ್ಯಾಗ್ರಹ ಮಾಡುತ್ತಿರುವ ಅಶ್ವಿನಿ ಗೌಡ ಬಗ್ಗೆ ವೀಕ್ಷಕರು ಕಿಡಿ ಕಾರಿದ್ದಾರೆ.

ಅಲ್ಲದೆ ನಿರೂಪಕ ಕಿಚ್ಚ ಸುದೀಪ್ ಅವರಿಗೂ ಪ್ರಶ್ನೆ ಮಾಡುತ್ತಿದ್ದು, ಬರಲಿರುವ ವಾರದ ಸಂತೆಯಲ್ಲಿ ಆಕೆಯ ಪರ ಮೃದು ಧೋರಣೆ ತೋರಿದರೆ ಬಿಗ್ ಬಾಸ್ ನೋಡುವುದ ನಿಲ್ಲಿಸುತ್ತೇವೆ ಎಂದು ಎಚ್ಚರಿಕೆ ನೀಡುತ್ತಿದ್ದಾರೆ.

ಒಟ್ಟಾರೆ ಬಿಗ್ ಬಾಸ್ ಸಿಸನ್ 12 ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೆ ಒಳಗಾಗುತ್ತಿದ್ದು, ಗಿಲ್ಲಿ ತಂಡದ ಪರ ಈ ವಾರವೂ ಬೆಂಬಲ ಮುಂದುವರಿದೆ.

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ವೀಕ್ಷಕರು ಹಂಚಿಕೊಂಡಿರುವ ವಿಡಿಯೋ ಬಳಸಲಾಗಿದೆ.!

ರಾಜಕೀಯ

ಕಾಂಗ್ರೆಸ್‌ ಆಡಳಿತದ ಅವಧಿ ಮುಗಿಯುತ್ತಾ ಬಂದಿದೆ: ಆರ್‌.ಅಶೋಕ

ಕಾಂಗ್ರೆಸ್‌ ಆಡಳಿತದ ಅವಧಿ ಮುಗಿಯುತ್ತಾ ಬಂದಿದೆ: ಆರ್‌.ಅಶೋಕ

ಈ ಬಾರಿಯ ಬಜೆಟ್‌ ಅಧಿವೇಶನದಲ್ಲಿ ಸರ್ಕಾರದ ಲೋಪದೋಷಗಳನ್ನು ಚರ್ಚಿಸಲಾಗುವುದು. ರಾಜ್ಯದ ಆರ್ಥಿಕ ದುಸ್ಥಿತಿಯ ವಿರುದ್ಧ ಹೋರಾಟ ಮಾಡಲಾಗುವುದು ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ (R.Ashoka) ಹೇಳಿದರು.

[ccc_my_favorite_select_button post_id="119883"]
ಮನರೇಗಾ ಮರುಸ್ಥಾಪಿಸುವ ಕಾಂಗ್ರೆಸ್ ಹೋರಾಟವನ್ನು ಬೆಂಬಲಿಸಿ: ರಾಜ್ಯದ ಜನರಿಗೆ ಸಿಎಂ ಸಿದ್ದರಾಮಯ್ಯ ಕರೆ

ಮನರೇಗಾ ಮರುಸ್ಥಾಪಿಸುವ ಕಾಂಗ್ರೆಸ್ ಹೋರಾಟವನ್ನು ಬೆಂಬಲಿಸಿ: ರಾಜ್ಯದ ಜನರಿಗೆ ಸಿಎಂ ಸಿದ್ದರಾಮಯ್ಯ ಕರೆ

ಗ್ರಾಮೀಣ ಜನರ ಉದ್ಯೋಗದ ಹಕ್ಕನ್ನು ಕಸಿಯುತ್ತಿರುವ ವಿಬಿಜಿರಾಮ್ ಜಿ ಕಾಯ್ದೆಯನ್ನು ರದ್ದುಪಡಿಸಿ, ಮನರೇಗಾ ಮರುಸ್ಥಾಪಿಸುವವರೆಗೆ ದೇಶಾದ್ಯಂತ ಕಾಂಗ್ರೆಸ್ ನಡೆಸುತ್ತಿರುವ ಹೋರಾಟವನ್ನು ಬೆಂಬಲಿಸಬೇಕೆಂದು ರಾಜ್ಯದ ಜನರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ (Cmsiddaramaiah) ಕರೆ ನೀಡಿದರು.

[ccc_my_favorite_select_button post_id="119685"]
ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಮಧ್ಯಪ್ರಾಚ್ಯದಲ್ಲಿ ಯುದ್ದ ನಡೆಯುತ್ತಿರುವುದರಿಂದ ಭಾರತದ ಷೇರುಪೇಟೆ (Indian share market ) ತತ್ತರಿಸುತ್ತಿದ್ದು, ಕೋಟ್ಯಾಂತರ ರೂ ನಷ್ಟದ ಜೊತೆಗೆ, ತೈಲ ಬೆಲೆಯೇರಿಕೆಯಾಗುವ ಭೀತಿ ಉಂಟಾಗಿದೆ.

[ccc_my_favorite_select_button post_id="119892"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಗಳ ಆಯೋಜನೆಗೆ ಅನುಮತಿ: ಡಿಸಿಎಂ ಡಿ.ಕೆ. ಶಿವಕುಮಾರ್

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಗಳ ಆಯೋಜನೆಗೆ ಅನುಮತಿ: ಡಿಸಿಎಂ ಡಿ.ಕೆ. ಶಿವಕುಮಾರ್

"ಯುವಕರು ಹಾಗೂ ಕ್ರಿಕೆಟ್ ಕ್ರೀಡೆಯ ಹಿತದೃಷ್ಟಿಯಿಂದ ಇನ್ನುಮುಂದೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ಆಯೋಜನೆಗೆ ಸರ್ಕಾರ ಅನುಮತಿ ನೀಡುತ್ತಿದೆ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (D.K. Shivakumar) ಅವರು ತಿಳಿಸಿದರು.

[ccc_my_favorite_select_button post_id="119372"]
ದೊಡ್ಡಬಳ್ಳಾಪುರ: ಗ್ಯಾಸ್ ಗೀಸರ್ ಬಳಸುವವರೆ ಎಚ್ಚರ.. ವಿಷಾನಿಲ ಸೋರಿಕೆಯಿಂದ ಬಾಲಕಿ ದುರ್ಮರಣ

ದೊಡ್ಡಬಳ್ಳಾಪುರ: ಗ್ಯಾಸ್ ಗೀಸರ್ ಬಳಸುವವರೆ ಎಚ್ಚರ.. ವಿಷಾನಿಲ ಸೋರಿಕೆಯಿಂದ ಬಾಲಕಿ ದುರ್ಮರಣ

ಗ್ಯಾಸ್ ಗೀಸರ್ (Gas geyser) ಬಳಕೆ ಮಾಡುವವರು ಆದಷ್ಟು ಮುಂಜಾಗ್ರತೆಯ ಕ್ರಮಕೈಗೊಳ್ಳಬೇಕಿದೆ. ಏಕೆಂದರೆ ಪದೇ ಪದೇ ವಿಷಾನಿಲ ಸೋರಿಕೆಯಿಂದ ಸಾವನಪ್ಪುವ ಪ್ರಕರಣಗಳು ವರದಿಯಾಗುತ್ತಿವೆ.

[ccc_my_favorite_select_button post_id="119828"]
ದೊಡ್ಡಬಳ್ಳಾಪುರ: Accident.. ಗೀತಂ ವಿವಿ ವಿದ್ಯಾರ್ಥಿ ಸ್ಥಳದಲ್ಲೇ ಸಾವು

ದೊಡ್ಡಬಳ್ಳಾಪುರ: Accident.. ಗೀತಂ ವಿವಿ ವಿದ್ಯಾರ್ಥಿ ಸ್ಥಳದಲ್ಲೇ ಸಾವು

ಮುಂದೆ ಸಾಗುತ್ತಿದ್ದ ಟಿಪ್ಪರ್ ಲಾರಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ (Accident) ಓರ್ವ ವಿದ್ಯಾರ್ಥಿ ಸಾವನಪ್ಪಿದ್ದು, ಮತ್ತೋರ್ವ ಗಾಯಗೊಂಡಿರುವ ಘಟನೆ ನಗರದ ಹೊರವಲಯದಲ್ಲಿರುವ ರೈಲ್ವೆ ಸ್ಟೇಷನ್ ಪೆಟ್ರೋಲ್ ಬಂಕ್ ಮುಂಭಾಗ ಸಂಭವಿಸಿದೆ.

[ccc_my_favorite_select_button post_id="119695"]

ಆರೋಗ್ಯ

ಸಿನಿಮಾ

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ (Actor Darshan) ಅವರಿಗೆ ಇಂದು ಜನ್ಮದಿನದ (Birthday) ಸಡಗರ. 49ನೇ ವರ್ಷಕ್ಕೆ ದರ್ಶನ್ ಕಾಲಿಟ್ಟಿದ್ದಾರೆ.

[ccc_my_favorite_select_button post_id="119431"]
error: Content is protected !!