ಉಡುಪಿ: ಆಂಧ್ರಪ್ರದೇಶ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ (Pawan Kalyan) ಅವರು ಉಡುಪಿಯ ಪುತ್ತಿಗೆ ಮಠದ ವತಿಯಿಂದ ನಡೆದ ಗೀತೋತ್ಸವ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ್ದರು.
ಉಡುಪಿಗೆ ಬರುವುದು ನನಗೆ ದೇವರು ನೀಡಿದ ಡಿವೈನ್ ಕಾಲ್. ಪುತ್ತಿಗೆ ಶ್ರೀಗಳು ವೈಯಕ್ತಿಕವಾಗಿ ಆಮಂತ್ರಿಸಿದರು. ಅವರಿಗೆ ಆಭಾರಿಯಾಗಿದ್ದೇನೆ ಎಂದು ಪವನ್ ಕಲ್ಯಾಣ್ ತಿಳಿಸಿದರು.
ಕನಕನ ಕಿಂಡಿಯ ಮೂಲಕ ಪವನ್ ಕಲ್ಯಾಣ್ ಕೃಷ್ಣ ದೇವರ ದರ್ಶನ ಪಡೆದರು. ಪರ್ಯಾಯ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ, ಕಿರಿಯ ಯತಿ ಸುಶ್ರೀಂದ್ರ ಸ್ವಾಮೀಜಿ, ದಿವಾನರಾದ ನಾಗರಾಜ ಆಚಾರ್ಯ, ಮಠದ ಅಂತಾ ರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ ಈ ಸಂದರ್ಭದಲ್ಲಿದ್ದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪವನ್ ಕಲ್ಯಾಣ್, ಕಾಂತಾರ ಚಿತ್ರದ ಕುರಿತು ಕೇಳಿದಾಗ, ಪ್ರತಿ ಊರಿಗೂ ತನ್ನದೇ ಆದ ಸಂಸ್ಕೃತಿ ಇರುವುದು. ಕಾಂತಾರ ತುಳುನಾಡಿನ ಕಥೆಯನ್ನು ಸಾರುತ್ತದೆ. ಆಂಧ್ರ, ತೆಲಂಗಾಣ ಭಾಗದಲ್ಲೂ ಇಂತಹ ಸಂಪ್ರದಾಯ, ಆಚರಣಗಳಿದೆ. ಇದೀಗ ಬಿಡುಗಡೆಯಾದ ಕಾಂತಾರ ನಾನು ನೋಡಿಲ್ಲ. ಹಿಂದೆ ಬಿಡುಗಡೆ ಯಾದ ಕಾಂತಾರ ನೋಡಿ ಖುಷಿ ಪಟ್ಟಿದ್ದೇನೆ ಎಂದರು.
ಆಂಧ್ರಪ್ರದೇಶದ ಶಾಲಾ ಪಠ್ಯ ಪುಸ್ತಕ ಗಳಲ್ಲಿ ಶ್ರೀಶಂಕರಾಚಾರ್ಯ, ಶ್ರೀರಾಮಾನು ಜಾಚಾರ್ಯ, ಶ್ರೀಮಧ್ವಾಚಾರ್ಯರ ತತ್ವಗಳನ್ನು ಸೇರಿಸುವಂತೆ ಉಡುಪಿ ಶ್ರೀಕೃಷ್ಣ ಮಠದ ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಆಂಧ್ರ ಡಿಸಿಎಂ ಪವನ್ ಕಲ್ಯಾಣ್ಗೆ ಮನವಿ ಮಾಡಿಕೊಂಡರು.