ದೊಡ್ಡಬಳ್ಳಾಪುರ: ತಾಲೂಕಿನ ವಡ್ಡರಹಳ್ಳಿಯ ಶ್ರೀ ತಿರುಮಲ ಕಲ್ಯಾಣ ಶ್ರೀನಿವಾಸ ದೇವಾಲಯದಲ್ಲಿ ವೈಕುಂಠ ಏಕಾದಶಿ (Vaikuntha Ekadashi) ನಾಳೆ (ಡಿ.30) ನಡೆಯಲಿದೆ.
ಶ್ರೀನಿವಾಸ ದೇವಾಲಯದಲ್ಲಿ ವಿಶೇಷ ಅಲಂಕಾರ ಹಾಗೂ ಪೂಜಾ ಕಾರ್ಯಕ್ರಮಗಳಿವೆ. ಡಿ.31ರಂದು ಸ್ವಾಮಿಯವರಿಗೆ ಆರತಿಗಳಿವೆ.
ದೊಡ್ಡಬಳ್ಳಾಪುರ ತಾಲೂಕಿನ ಪಾಲ್ ಪಾಲ್ ದಿನ್ನೆ ಬಳಿಯ ಶ್ರೀ ವಿಶ್ವ ಕಲ್ಯಾಣ ವೆಂಕಟೇಶ್ವರ ದೇವಾಲಯದಲ್ಲಿ ವೈಕುಂಠ ಏಕಾದಶಿ ವಿಶೇಷ ಪೂಜಾ ಕಾರ್ಯಕ್ರಮ ಡಿ.30ರಂದು ನಡೆಯಲಿದೆ.
ಡಿ.29ರಂದು, ಸಂಜೆ 6 ಗಂಟೆಗೆ ಅಭಿಷೇಕ, ತೋಮಾಲೆ ಸೇವೆ, ಡಿ.30ರಂದು ಬೆಳಿಗ್ಗೆ ಬ್ರಾಹ್ಮೀ ಮುಹೂರ್ತದಲ್ಲಿ ವೈಕುಂಠ ಉತ್ತರ ಧ್ವಾರ ತೆರೆಯಲಾಗುವುದು ಎಂದು ಧರ್ಮದರ್ಶಿ ಶ್ರೀಧರ್ ಶರ್ಮ ಗುರೂಜಿ ತಿಳಿಸಿದ್ದಾರೆ.
ಗಾಂಧಿನಗರದ ಖಿಲ್ಲೆ ವೇಣುಗೋಪಾಲಸ್ವಾಮಿ ದೇವಾಲಯದಲ್ಲಿ ಡಿ.30ರಂದು ಬೆಳಿಗ್ಗೆ 6 ಗಂಟೆಗೆ ಪ್ರಾಕಾರೋತ್ಸವ, 10.30ಕ್ಕೆ ವಿಷ್ಣು ಸಹಸ್ರನಾಮ, ಸಂಜೆ 4 ಗಂಟೆಗೆ ಶಾರದಾ ಸಂಗೀತ ಶಾಲೆ ಗಾಯಕರಿಂದ ಹಾಡುಗಾರಿಕೆ ನಂತರ ಹರಿನಾಮ ಸ್ವರಣೆ ಕಾರ್ಯಕ್ರಮಗಳಿವೆ.
ನಗರದ ತೇರಿನಬೀದಿಯ ಶ್ರೀ ಪ್ರಸನ್ನ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ಸ್ವಾಮಿಗೆ ವಿಶೇಷ ಅಲಂಕಾರ ಹಾಗೂ ಪೂಜಾ ಕಾರ್ಯಯಕ್ರಮ ನಡೆಯಲಿದೆ.
ಹೆಗ್ಗಡಿಹಳ್ಳಿ ಶ್ರೀದೇವಿ ಭೂದೇವಿ ಸಮೇತ ಶ್ರೀ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ವೈಕುಂಠ ಏಕಾದಶಿ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.