ದೊಡ್ಡಬಳ್ಳಾಪುರ; ನಗರದ ಪ್ರಸಿದ್ಧ ಶಂಕರ್ ಟೆಕ್ವಾಂಡೋ ತರಬೇತಿ ಕೇಂದ್ರದ (Shankar Taekwondo Training Center) ವಿದ್ಯಾರ್ಥಿಗಳು ಇತ್ತೀಚೆಗೆ ನಡೆದ 39ನೇ ರಾಷ್ಟ್ರ ಮಟ್ಟದ ಸಬ್ ಜೂನಿಯರ್ ಕ್ಯೂರಗಿ ಟೆಕ್ವಾಂಡೋ ಪಂದ್ಯಾವಳಿಗಳಲ್ಲಿ (National Level Kyurgi Taekwondo Tournament) ಉತ್ತಮ ಸಾಧನೆ ಮಾಡಿ, ಪ್ರಶಸ್ತಿ ಹಾಗೂ ಪದಕಗಳನ್ನು ಪಡೆದಿದ್ದಾರೆ.
ನವ ದೆಹಲಿಯ ತಲ್ಕತೋರಾ ಒಳಾಂಗಣ ಕ್ರೀಡಾಂಗಣ ಆಯೋಜಿಸಲಾಗಿದ್ದ ಈ ಪಂದ್ಯಾವಳಿಯಲ್ಲಿ 21 ಕೆಜಿ ವಿಭಾಗದಲ್ಲಿ ಭುವನೇಶ್ವರಿ ನಗರದ ಶಂಕರ್ ಹಾಗೂ ರಮ್ಯ ದಂಪತಿಯ ಪುತ್ರ ವರ್ಷನ್.ಎಸ್ ಎಂಬ ವಿದ್ಯಾರ್ಥಿ ಕಂಚಿನ ಪದಕ ಪಡೆದಿದ್ದಾರೆ.
16 ಕೆಜಿ ವಿಭಾಗದಲ್ಲಿ ಭುವನೇಶ್ವರಿ ನಗರದ ಉಮಾಶಂಕರ್ ಮತ್ತು ಮಮತಾ ದಂಪತಿಗಳ ಮಗನಾದ ಡಿ.ಯು.ನಂದನ್ ಕಂಚಿನ ಪದಕ ಪಡೆದಿದ್ದಾರೆ.
ಇನ್ನೊಂದೆಡೆ ಬೆಂಗಳೂರಿನ ಜವಾಹರಲಾಲ್ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ 42ನೇ ರಾಷ್ಟ್ರ ಮಟ್ಟದ 55 ಕೆಜಿ ವಿಭಾಗದ ಜ್ಯೂನಿಯರ್ ಟೆಕ್ವಾಂಡೋ ಪಂದ್ಯಾವಳಿಯಲ್ಲಿ ರಾಜೀವ್ ಗಾಂಧಿ ಬಡಾವಣೆಯ ನಿವಾಸಿ ನಟೇಶ್ ಮತ್ತು ಪುಷ್ಪಾವತಿ ಅವರ ಪುತ್ರ ಯಶವಂತ್ ಕಂಚಿನ ಪದಕಗಳನ್ನು ಪಡೆದಿದ್ದಾರೆ.
ಪದಕಗಳನ್ನು ದೊಡ್ಡಬಳ್ಳಾಪುರ ತಾಲೂಕಿಗೆ ಹಾಗೂ ಶಂಕರ್ ಟೆಕ್ವಾಂಡೋ ತರಬೇತಿ ಕೇಂದ್ರಕ್ಕೆ ಕೀರ್ತಿ ತಂದ ವಿದ್ಯಾರ್ಥಿಗಳನ್ನು ಅಧ್ಯಕ್ಷ ಜಿ.ಸಿ. ರಮೇಶ್, ಬೆಂಗಳೂರು ಗ್ರಾಮಾಂತರ ಜಿಲ್ಲಾ ಟೆಕ್ವಾಂಡೋ ಕಾರ್ಯದರ್ಶಿ ವಿ.ನಾರಾಯಣಸ್ವಾಮಿ, ತರಬೇತುದಾರರಾದ ಆರ್. ಶಂಕರ್ ಹಾಗೂ ಆರ್.ರಮ್ಯ ಅಭಿನಂದನೆ ಸಲ್ಲಿಸಿದ್ದಾರೆ.