ದೆಹಲಿ: ದೇಶದಲ್ಲಿನ್ನೂ ಎಲ್ಪಿಜಿ ಸಿಲಿಂಡರ್ಗಳ ಪೂರೈಕೆ ಸಹಜ ಸ್ಥಿತಿಗೆ ಬಾರದ ಹಿನ್ನೆಲೆಯಲ್ಲಿ ಜನರಿಗೆ, ಹೋಟೆಲ್ಗಳಿಗೆ ಅಡುಗೆ ಮಾಡುವುದಕ್ಕೆ ಅನುಕೂಲವಾಗಲಿ ಎಂದು ಪೆಟ್ರೋಲ್ ಬಂಕ್ ಗಳಲ್ಲಿಯೇ ‘ಸೀಮೆಎಣ್ಣೆ’ (Kerosene) ಮಾರಾಟಕ್ಕೆ ಪ್ರಧಾನಿ ನರೇಂದ್ರ ಮೋದಿ (Narendra Modi) ನೇತೃತ್ವದ ಕೇಂದ್ರ ಸರಕಾರ ಅನುಮತಿ ನೀಡಿದೆ.

ಸೀಮೆಎಣ್ಣೆ ವಿತರಣೆ ನಿಯಮದಲ್ಲಿನ ಕೆಲವು ಕಠಿಣ ಷರತ್ತುಗಳನ್ನು ಕೇಂದ್ರ ಸರ್ಕಾರ ಸಡಿಲಗೊಳಿಸಿದೆ. ಮುಂದಿನ 60 ದಿನಗಳ ಕಾಲ ಪೆಟ್ರೋಲ್ ಬಂಕ್ ಗಳಲ್ಲಿಯೂ ಸೀಮೆಎಣ್ಣೆ ಮಾರಾಟಕ್ಕೆ ಅವಕಾಶ ಮಾಡಿಕೊಟ್ಟಿದೆ.
ಮಾ.29ರ ಭಾನುವಾರ ಕೇಂದ್ರ ಸರಕಾರ ಹೊರಡಿಸಿದ ಗೆಜೆಟ್ ಅಧಿಸೂಚನೆ ಪ್ರಕಾರ, ದೆಹಲಿ, ಹರಿಯಾಣ, ಉತ್ತರಪ್ರದೇಶ, ಗುಜರಾತ್ ಸೇರಿದಂತೆ 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸೀಮೆಎಣ್ಣೆ ವಿತರಣೆಗೆ ಕೇಂದ್ರ ಸರಕಾರ ಅನುಮತಿ ನೀಡಿದೆ.
ರಾಜ್ಯ ಸರಕಾರ, ಕೇಂದ್ರಾಡಳಿತ ಪ್ರದೇಶಗಳ ಆಡಳಿತ ಪ್ರತಿ ಜಿಲ್ಲೆಗಳಲ್ಲಿ 2 ಸೇವಾ ಕೇಂದ್ರಗಳನ್ನ ಗುರುತಿಸಿ, ಪ್ರತಿ ಘಟಕದಲ್ಲಿ ಗರಿಷ್ಠ 5,000 ಲೀ. ಸೀಮೆಎಣ್ಣೆ ಸಂಗ್ರಹಿಸಬಹುದು ಎಂದು ವರದಿಯಾಗಿದೆ.