ನಮ್ಮೂರ ಹೆಸರಿನ ಅರ್ಥ ತಿಳಿಸುವ ದೊಡ್ಡಬಳ್ಳಾಪುರ ತಾಲ್ಲೂಕಿನ ಸ್ಥಳನಾಮಗಳು ಪುಸ್ತಕ ಬಿಡುಗಡೆ ಇಂದು

ದೊಡ್ಡಬಳ್ಳಾಪುರ: ನಮ್ಮೂರಿಗೆ ಏಕೆ ಈ ಹೆಸರು ಬಂತು, ನಮ್ಮ ಪೇಟೆಯನ್ನು ಏಕೆ ಈ ಹೆಸರಿನಿಂದ ಕರೆಯುತ್ತಾರೆ ಇಂತಹ ಹತ್ತಾರು ಪ್ರಶ್ನೆಗಳು ಯಾರಿಗಾದರೂ ಕಾಡದೇ ಇರಲಾರದು. ಇದನ್ನು ತಿಳಿದುಕೊಳ್ಳುವ ಕುತೂಹಲವು ಇದ್ದೇ ಇರುತ್ತದೆ. ಇಂತಹ ಪ್ರಶ್ನೆಗಳಿಗೆಲ್ಲ ಉತ್ತರವನ್ನು ತಿಳಿಸುವುದೇ ‘ದೊಡ್ಡಬಳ್ಳಾಪುರ ತಾಲ್ಲೂಕಿನ ಸ್ಥಳನಾಮಗಳು’ ಭಾಷೆ ಚರಿತ್ರೆ ಮತ್ತು ಸಂಸ್ಕೃತಿ-ಒಂದು ವಿಶ್ಲೇಷಣೆ ಪುಸ್ತಕದ ವಿಶೇಷವಾಗಿದೆ.

ಸ್ಥಳನಾಮಗಳ ಅಧ್ಯಯನ ಯಾವತ್ತೂ ಕುತೂಹಲ,ಆಸಕ್ತಿಯನ್ನು ಕೆರಳಿಸುವಂಥದ್ದು. ಯಾವುದೇ ಸ್ಥಳನಾಮದ ಅಧ್ಯಯನವೆಂದರೆ ಅದು ಆ ನಿರ್ದಿಷ್ಟ ಸ್ಥಳದ ಸಂಸ್ಕೃತಿಯ ಅಧ್ಯಯನವೇ ಆಗಿರುತ್ತದೆ. ಏಕೆಂದರೆ ಸ್ಥಳನಾಮ ಮತ್ತು ಸಂಸ್ಕೃತಿ ಇವು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಒಂದನ್ನು ಬಿಟ್ಟು ಇನ್ನೊಂದು ಇರಲಾರದು.ಇವುಗಳ ನಂಟು ಬಿಡಿಸಲಾಗದ ಗಂಟು. ಅಲ್ಲದೆ ಯಾವುದೇ ಸ್ಥಳನಾಮವು ಆ ಸ್ಥಳದ ‘ನೀಲಿ ನಕಾಶೆ’ ಇದ್ದಂತೆ ಎನ್ನುತ್ತಾರೆ ದೊಡ್ಡಬಳ್ಳಾಪುರ ತಾಲ್ಲೂಕಿನ ಸ್ಥಳನಾಮಗಳು ಪುಸ್ತಕದ ಲೇಖಕ ಡಾ.ಎಸ್.ವೆಂಕಟೇಶ್.

ಸ್ಥಳದ ವಿಶಿಷ್ಟ ಭೂಗೋಳ, ಜನಾಂಗ,ಆ ಜನರ ರಾಜಕೀಯ,ಸಾಮಾಜಿಕ,ಧಾರ್ಮಿಕ,ಸಂಸ್ಕೃತಿಯ ಪ್ರಕಟಿತ ರೂಪವೆಂದರೂ ನಡೆಯುತ್ತದೆ. ಒಟ್ಟಾರೆ ಸ್ಥಳನಾಮದಲ್ಲಿ ಅಲ್ಲಿನ ಜನರ ಸಂಸ್ಕೃತಿಯೇ ಹೆಪ್ಪುಗಟ್ಟಿರುತ್ತದೆ. ಸ್ಥಳನಾಮಗಳು ಒದಗಿಸುವ ಸಾಂಸ್ಕೃತಿಕ ಮಾಹಿತಿ ಶಾಸನವಷ್ಟೇ ಏಕೆ, ಇನ್ನಷ್ಟು ವಿಶ್ವಸನೀಯವೆಂದೇ ಪರಿಗಣಿಸಲಾಗಿದೆ. ಏಕೆಂದರೆ ಶಾಸನಗಳು ಬರೆಯಲ್ಪಡುವ ಕಾಲಕ್ಕೆ ಮೊದಲೇ ಈ ಸ್ಥಳನಾಮಗಳು ಚಲಾವಣೆಯಲ್ಲಿದ್ದವು. ಅಷ್ಟೇ ಅಲ್ಲ ಇದೀಗ ಸಮಕಾಲೀನ ಮಾನದಂಡಗಳಿಂದ ಸ್ಥಳನಾಮಗಳು ಅರ್ಥಹೀನವೆಂದಾಗಿರಬಹುದಾದರೂ ಅವು ಸಾವಿರಾರು ವರ್ಷಗಳಿಂದ ಹಾಗೆಯೇ ಉಳಿದು ಬಂದಿರುತ್ತವೆ. ಸ್ಥಳನಾಮಗಳು ಆಯಾ ಸ್ಥಳದ ಗುರುತು ಪಟ್ಟಿಕೆಗಳಾಗಿರುವುದರಿಂದ ಅವು ಬದಲಾಗಲಾರವು. ಅವುಗಳನ್ನು ಬದಲಿಸುವ ಪ್ರಯತ್ನಗಳೂ ಫಲಿಸಲಾರವು. ಆದರೆ ಕನ್ನಡದ ಮಟ್ಟಿಗೆ ಇಂತಹ ಅಧ್ಯಯನ ಹೊಸದು. ಇದು ತೀರಾ ಇತ್ತೀಚೆಗೆ ಹುಟ್ಟಿಕೊಂಡಿರುವ ಜ್ಞಾನಶಾಖೆಯಾಗಿದೆ. 

ಯಾವುದೇ ಒಂದು ನಿರ್ದಿಷ್ಟ ಸ್ಥಳಕ್ಕೆ ಹೆಸರು ತಟ್ಟನೆ, ಹಾಗೇ ಸುಮ್ಮನೆ ಬಂದಿರುವುದಿಲ್ಲ. ಸ್ಥಳನಾಮ ಎಂಬುದು ಕೇವಲ ಒಂದು ಪ್ರದೇಶದ ಹೆಸರಲ್ಲ. ಅದು ಆ ಪರಿಸರದ ಜೀವವೈವಿಧ್ಯತೆ, ಮಾನವರ ಸಾಂಸ್ಥಿಕ, ಸಾಂಸ್ಕೃತಿಕ ಮತ್ತು ಚಾರಿತ್ರಿಕ ಹಿರಿಮೆಯಿಂದ ಬಂದಿರುವಂಥದ್ದು.ಯಾವುದೇ ಊರಿನ ಹೆಸರು ಅಲ್ಲಿನ ನಗರ, ಪಟ್ಟಣ, ಹಳ್ಳಿ, ಮುದಾಯದಂತಹ ಜನವಸತಿ ಪ್ರದೇಶಗಳನ್ನು, ರಾಜ್ಯ ಮತ್ತು ರಾಜಧಾನಿಯಂಥ ಮುಖ್ಯ ಆಡಳಿತ ವಿಭಾಗವನ್ನು, ಅಣೆಕಟ್ಟು,ಅರಮನೆ, ವಿಮಾನ ನಿಲ್ದಾಣ, ಹೆದ್ದಾರಿ ಮುಂತಾದ ಮಾನವ ನಿರ್ಮಿತಿಗಳನ್ನು, ನದಿ, ತೊರೆ, ಕಾಲುವೆ, ಸಾಗರ, ಸಮುದ್ರ, ಪರ್ವತ, ಬೆಟ್ಟಗುಡ್ಡ, ಅರಣ್ಯ, ಇಳಿಜಾರಿನಂತಹ ಪ್ರಕೃತಿಯನ್ನು, ಯುದ್ದ ಭೂಪ್ರದೇಶದ ಗೆಲುವಿನಂತಹ ಸಾಧನೆಗಳನ್ನು, ಗತಿಸಿರುವ ಘಟನೆಗಳ ಇತಿಹಾಸ ಎಲ್ಲವನ್ನೂ ಒಳಗೊಂಡಿರುತ್ತದೆ. ಹೀಗಾಗಿಯೇ ಸ್ಥಳನಾಮವನ್ನು ಆ ಸ್ಥಳದ ಆತ್ಮ ಎನ್ನಬಹುದು. ಕೆಲವೊಮ್ಮೆ ಸ್ಥಳನಾಮದಿಂದ ಇಡೀ ಆ ಪ್ರದೇಶದ ಚರಿತ್ರೆಯೇ ಬಿಚ್ಚಿಕೊಳ್ಳುತ್ತದೆ. ಆ ಮೂಲಕ ಸ್ಥಳದ ಬಹುಮುಖವನ್ನು ಅನಾವರಣಗೊಳಿಸುತ್ತದೆ. 

ತಾಲ್ಲೂಕಿನ ನಾಲ್ಕು ಹೋಬಳಿಯಗಳಲ್ಲಿನ ಗ್ರಾಮಗಳ ಹಾಗೂ ನಗರದಲ್ಲಿನ ಪೇಟೆ, ಬೀದಿಗಳಿಗೆ ಇರುವ ಹೆಸರುಗಳ ಮಹತ್ವವನ್ನು ವಾಸ್ತವಕ್ಕೆ ಹತ್ತಿರವಾಗಿ ಜನ ಸಾಮಾನ್ಯರಿಗು ಅರ್ಥವಾಗುವಂತೆ ತಿಳಿಸಿಕೊಡುವ ‘ದೊಡ್ಡಬಳ್ಳಾಪುರ ತಾಲ್ಲೂಕಿನ ಸ್ಥಳನಾಮಗಳು’ ಪುಸ್ತಕ ನಮ್ಮೂರಿನ ಹೆಸರಿನ ಬಗ್ಗೆ ಇರುವ ಕುತೂಲಹಗಳನ್ನು, ಪ್ರಶ್ನೆಗಳಿಗೆ ಉತ್ತರಗಳನ್ನು ನೀಡಲಿದೆ. 

ಇಂದು ಪುಸ್ತಕ ಬಿಡುಗಡೆ: ದೊಡ್ಡಬಳ್ಳಾಪುರ ತಾಲ್ಲೂಕಿನ ಸ್ಥಳನಾಮಗಳು ಪುಸ್ತಕ ಬಿಡುಗಡೆ ಸಮಾರಂಭ ಅ.20 ರಂದು ಬೆಳಿಗ್ಗೆ 10.30ಕ್ಕೆ ನಗರದ ಕನ್ನಡ ಜಾಗೃತ ಪರಿಷತ್ ಭವನದಲ್ಲಿ ನಡೆಯಲಿದೆ.

ಪುಸ್ತಕವನ್ನು ಬೆಂಗಳೂರು ವಿಶ್ವ ವಿದ್ಯಾಲಯದ ಇತಿಹಾಸ ಪ್ರಾಧ್ಯಾಪಕಿ ಡಾ.ಎಂ.ಜಮುನ ಹಾಗೂ ಗೌರಿಬಿದನೂರು ವಿಧಾನ ಸಭಾ ಕ್ಷೇತ್ರದ ಶಾಸಕ ಎನ್.ಎಚ್.ಶಿವಶಂಕರೆಡ್ಡಿ ಬಿಡುಗಡೆ ಮಾಡಲಿದ್ದಾರೆ. ಶಾಸನತಜ್ಞ ಡಾ. ಎಚ್.ಎಸ್.ಗೋಪಾಲರಾವ್ ಅಧ್ಯಕ್ಷತೆ ವಹಿಸಲಿದ್ದಾರೆ. ಪುಸ್ತಕ ಕುರಿತು ಕೆಎಎಸ್ ಅಧಿಕಾರಿ ಡಾ.ನೆಲ್ಲುಕುಂಟೆ ವೆಂಕಟೇಶಯ್ಯ, ಕೃಷಿ ಮಾರುಕಟ್ಟೆ ನಿರ್ದೇಶಕ ಸಿ.ಎಸ್.ಕರೀಗೌಡ, ಚಿಂತಕ ಯೋಗೇಶ್ ಮತ್ತಿತರರು ಭಾಗವಹಿಸಲಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….

ರಾಜಕೀಯ

ಭವಿಷ್ಯ ನುಡಿಯೋಕೆ ಅವರ‍್ಯಾರು, ಜ್ಯೋತಿಷಿನಾ? – ಡಿ.ಕೆ. ಶಿವಕುಮಾರ್ ವಿರುದ್ಧ ನಿಖಿಲ್‌ ಕುಮಾರಸ್ವಾಮಿ ಕಿಡಿ

ಭವಿಷ್ಯ ನುಡಿಯೋಕೆ ಅವರ‍್ಯಾರು, ಜ್ಯೋತಿಷಿನಾ? – ಡಿ.ಕೆ. ಶಿವಕುಮಾರ್ ವಿರುದ್ಧ ನಿಖಿಲ್‌ ಕುಮಾರಸ್ವಾಮಿ

ಖಾತಾ ಪರಿವರ್ತನೆ ಹೆಸರಿನಲ್ಲಿ ರಾಜ್ಯ ಸರ್ಕಾರ ಬಡವರ ಹೊಟ್ಟೆ ಮೇಲೆ ಹೊಡೆಯುತ್ತಿದೆ. ಸರ್ಕಾರದ ಬಳಿ ಗುಂಡಿ ಮುಚ್ಚಲು ಹಣವಿಲ್ಲ, ಹಗಲು ದರೋಡೆ ದಂಧೆ ಮಾಡ್ತಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ನಿಖಿಲ್ ಕುಮಾರಸ್ವಾಮಿ (Nikhil

[ccc_my_favorite_select_button post_id="115363"]
ಪ್ರಾಣಿ ಸಂಪತ್ತು ಕೊಲ್ಲುವವರ ವಿರುದ್ಧ ಕಠಿಣ ಕ್ರಮ ಶತಸಿದ್ಧ: Cm ಸಿದ್ದರಾಮಯ್ಯ ಎಚ್ಚರಿಕೆ

ಪ್ರಾಣಿ ಸಂಪತ್ತು ಕೊಲ್ಲುವವರ ವಿರುದ್ಧ ಕಠಿಣ ಕ್ರಮ ಶತಸಿದ್ಧ: Cm ಸಿದ್ದರಾಮಯ್ಯ ಎಚ್ಚರಿಕೆ

ಪ್ರಾಣಿ ಸಂಪತ್ತು ಇಲ್ಲದೆ ಅರಣ್ಯ ಸಂಪತ್ತಿಗೆ ಮೌಲ್ಯವೇ ಇಲ್ಲ. ಹೀಗಾಗಿ ಪ್ರಾಣಿ ಸಂಪತ್ತನ್ನು ಕೊಲ್ಲುವವರ ವಿರುದ್ಧ ಕಠಿಣ ಕ್ರಮ ಶತಸಿದ್ಧ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Cm Siddaramaiah) ಅವರು ಸ್ಪಷ್ಟ ಎಚ್ಚರಿಕೆ ನೀಡಿದರು.

[ccc_my_favorite_select_button post_id="114725"]
ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಅವರೊಂದಿಗೆ, ಸಂಘಟನೆಯ ಟ್ರಸ್ಟಿಯೂ ಆಗಿರುವ ಸಂಸದ ಡಾ.ಕೆ.ಸುಧಾಕರ್‌ (Dr.K.Sudhakar)

[ccc_my_favorite_select_button post_id="113863"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ಯೋಗ ಚಾಂಪಿಯನ್‌ಶಿಪ್: ವಿ.ವರ ಪ್ರಸಾದ್‌ಗೆ ಚಿನ್ನದ ಪದಕ

ಯೋಗ ಚಾಂಪಿಯನ್‌ಶಿಪ್: ವಿ.ವರ ಪ್ರಸಾದ್‌ಗೆ ಚಿನ್ನದ ಪದಕ

ನಿಸರ್ಗ ಯೋಗ ಕೇಂದ್ರದ ಹಾಗೂ ರಾಜ್ಯ ಬಾಲಕರ ಯೋಗ ತಂಡದ ನಾಯಕ ವಿ.ವರ ಪ್ರಸಾದ್ (V. Vara Prasad) 50ನೇ ಗೋಲ್ಡನ್‌ ಜುಬ್ಲಿ ರಾಷ್ಟ್ರೀಯ ಯೋಗ ಚಾಂಪಿಯನ್‌ಶಿಪ್ (Yoga Championship) ನಲ್ಲಿ ಭಾಗವಹಿಸಿ ಚಿನ್ನದ

[ccc_my_favorite_select_button post_id="114944"]
ದೊಡ್ಡಬಳ್ಳಾಪುರ: ಗುಟ್ಟೆ ನರಸಿಂಹಸ್ವಾಮಿ ದೇವಾಲಯದಲ್ಲಿ ಮತ್ತೆ ಕಳವು..!

ದೊಡ್ಡಬಳ್ಳಾಪುರ: ಗುಟ್ಟೆ ನರಸಿಂಹಸ್ವಾಮಿ ದೇವಾಲಯದಲ್ಲಿ ಮತ್ತೆ ಕಳವು..!

ಕಳೆದ ತಿಂಗಳ ಕೊನೆಯ ದಿನ ನಡೆದಿದ್ದ ತಾಲೂಕಿನ ಪ್ರಸಿದ್ಧ ಗುಟ್ಟೆ ಶ್ರೀ ಲಕ್ಷೀನರಸಿಂಹ ಸ್ವಾಮಿ (Gutte Lakshmi Narasimhaswamy Temple) ದೇವಾಲಯದಲ್ಲಿ ಕಳ್ಳತನ (Theft) ಪ್ರಕರಣ ಮತ್ತೆ ಮುಂದುವರಿದಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ.

[ccc_my_favorite_select_button post_id="115220"]
ಬೆಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್ಸಿಗೆ ಬೆಂಕಿ..!: 20 ಪ್ರಯಾಣಿಕರ ದುರ್ಮರಣ| Video

ಬೆಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್ಸಿಗೆ ಬೆಂಕಿ..!: 20 ಪ್ರಯಾಣಿಕರ ದುರ್ಮರಣ| Video

ಹೈದರಾಬಾದ್‌ನಿಂದ (Hyderabad) ಬೆಂಗಳೂರಿಗೆ (Bangalore) ಬರುತ್ತಿದ್ದ ಖಾಸಗಿ ಬಸ್ಸೊಂದು ಆಂಧ್ರಪ್ರದೇಶದ (Andhra Pradesh) ಕರ್ನೂಲು (Kurnool) ಜಿಲ್ಲೆಯ ಚಿನ್ನ ಟೆಕೂರು ಬಳಿ ನಡೆದ ಭೀಕರ ಅಗ್ನಿ (fire) ದುರಂತದಲ್ಲಿ ಬೆಂಕಿಗಾಹುತಿಯಾಗಿ 20 ಮಂದಿ ಸಾವನ್ನಪ್ಪಿದ್ದಾರೆ.

[ccc_my_favorite_select_button post_id="115273"]

ಆರೋಗ್ಯ

ಸಿನಿಮಾ

ಭಾರತೀಯ ಚಿತ್ರರಂಗ ಕನ್ನಡದತ್ತ ಬೆರಗಿನಿಂದ ನೋಡುತ್ತಿದೆ; ಹೆಚ್.ಡಿ. ಕುಮಾರಸ್ವಾಮಿ

ಭಾರತೀಯ ಚಿತ್ರರಂಗ ಕನ್ನಡದತ್ತ ಬೆರಗಿನಿಂದ ನೋಡುತ್ತಿದೆ; ಹೆಚ್.ಡಿ. ಕುಮಾರಸ್ವಾಮಿ

ಕನ್ನಡ ಚಿತ್ರರಂಗ ಸಮೃದ್ಧವಾಗಿ ಬೆಳೆಯಬೇಕಾದರೆ ನಾಯಕ ನಟರು ಹೆಚ್ಚು ಸಿನಿಮಾಗಳನ್ನು ಮಾಡಬೇಕು ಹಾಗೂ ಹೆಚ್ಚು ನಾಯಕ ನಟರು ಚಿತ್ರರಂಗಕ್ಕೆ ಬರಬೇಕು ಎಂದು ಕೇಂದ್ರ ಸರ್ಕಾರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವರಾದ ಹೆಚ್.ಡಿ.

[ccc_my_favorite_select_button post_id="115245"]
error: Content is protected !!