ದೊಡ್ಡಬಳ್ಳಾಪುರ: ನಗರದ ಸ್ಕೌಟ್ ಕ್ಯಾಂಪ್ ರಸ್ತೆಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಆದ್ಯ ಹಾಸ್ಪಿಟಲ್, ಸ್ಪೆಷಾಲಿಟಿ ಸರ್ಜಿಕಲ್ ಸೆಂಟರ್ ಜ.26ರ ಗಣರಾಜ್ಯೋತ್ಸವದಂದು ಉದ್ಘಾಟನೆಗೊಳ್ಳಲಿದೆ.
30 ಹಾಸಿಗೆಗಳು ಹಾಗೂ 10 ಹಾಸಿಗೆಗಳು ವೆಂಟಿಲೇಟರ್ಗಳೊಂದಿಗೆ ಐಸಿಯು ವಾರ್ಡ್ ಹೊಂದಿರುವ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಇದಾಗಿದ್ದು, ಮುರಿತ, ಬೆನ್ನುಮೂಳೆ, ಆರ್ಥೊಸ್ಕೋಪಿ ಮತ್ತು ಜಾಯಿಂಟ್ ರಿಪ್ಲೇಸ್ ಮೆಂಟ್ ಸೇರಿದಂತೆ ಮೀಸಲಾದ ಆರ್ಥೋಪೆಡಿಕ್ ಸರ್ಜಿಕಲ್ ಸೆಂಟರ್, ಎಲ್ಲಾ ವಿಶೇಷ ಮತ್ತು ಸೂಪರ್ ಸ್ಪೆಷಾಲಿಟಿ ಶಸ್ತ್ರಚಿಕಿತ್ಸೆಗಳು, 24×7 ಅಪಘಾತ ಮತ್ತು ತುರ್ತು ಚಿಕಿತ್ಸೆ, ಎರಡು ಸುಸಜ್ಜಿತವಾದ ಸರ್ಜಿಕಲ್ ಥಿಯೇಟರ್, ಲ್ಯಾಬೋರೇಟರಿ, ಡಿಜಿಟಲ್ ಎಕ್ಸ್-ರೇ, ಅಲ್ಟ್ರಾಸೌಂಡ್ ಮತ್ತು ಇತರೆ ಡಯೋಗ್ನೋಸ್ಟಿಕ್ ಸೇವೆಗಳು ಈ ನೂತನ ಆಸ್ಪತ್ರೆಯಲ್ಲಿ ದೊರೆಯಲಿದೆ.
ಈ ಆಸ್ಪತ್ರೆಯನ್ನು ಜ.26ರ ಬೆಳಗ್ಗೆ 8.30ಕ್ಕೆ ಶಾಸಕ ಟಿ.ವೆಂಕಟರಮಣಯ್ಯ ಉದ್ಘಾಟಿಸಲಿದ್ದು. ನಗರಸಭೆ ಅಧ್ಯಕ್ಷೆ ಸುಧಾರಾಣಿ ಅಧ್ಯಕ್ಷತೆವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ನಗರಸಭೆ ಉಪಾಧ್ಯಕ್ಷೆ ಫರ್ಹಾನಾ ತಾಜ್, ಸ್ಥಳೀಯ ನಗರಸಭೆ ಸದಸ್ಯರಾದ ಎಂ.ಮಲ್ಲೇಶ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ತಿಪ್ಪೇಸ್ವಾಮಿ, ತಾಲೂಕು ಆರೋಗ್ಯಾಧಿಕಾರಿ ಡಾ.ಪರಮೇಶ್ವರ, ವೈದ್ಯರಾದ ಡಾ.ರಾಕೇಶ್ ಗೌಡ, ಡಾ.ಸತೀಶ್, ಡಾ.ಮೂರ್ತಿಕುಮಾರ್, ಡಾ.ಇಂದಿರಾಪ್ರಸಾದ್, ಡಾ.ಸಚಿನ್, ಡಾ.ಸಂಘಮೇಶ್, ಡಾ.ದತ್ತಾ, ವ್ಯವಸ್ಥಾಪಕ ಪು.ಮಹೇಶ್ ಸೇರಿದಂತೆ ನಗರಸಭೆ ಸದಸ್ಯರು, ಮುಖಂಡರು, ಅಧಿಕಾರಿಗಳು ಭಾಗವಹಿಸಲಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….