ವಯನಾಡು, (ಆಗಸ್ಟ್.04); ಕಳೆದ ಮಂಗಳವಾರ ಭೂಕುಸಿತ ಸಂಭವಿಸಿದ ಕೇರಳದ ವಯನಾಡು ಜಿಲ್ಲೆಯ ಮುಂಡಕ್ಕೆ ಮತ್ತು ಚೂರಲ್ಲ ಗ್ರಾಮಗಳ ಸುತ್ತಮುತ್ತಲ ಪ್ರದೇಶದಲ್ಲಿನ ರಕ್ಷಣಾ ಕಾರ್ಯಾ ಚರಣೆ 5ನೇ ದಿನವಾದ ಶನಿವಾರವೂ ಮುಂದುವರಿದಿದೆ.
ಭೂಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ 360ರ ಗಡಿದಾಟಿದೆ. ನಾಪತ್ತೆಯಾಗಿರುವ 200ಕ್ಕೂ ಹೆಚ್ಚು ಮಂದಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ.
ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಭೂಕುಸಿತ ಪ್ರದೇಶದಲ್ಲಿನ ರಕ್ಷಣಾ ಕಾರ್ಯಾಚರಣೆಯ ಕಾರ್ಯ ಈಗ ಕೊನೆ ಹಂತಕ್ಕೆ ಬಂದಿದೆ. ಕಣ್ಣರೆಯಾಗಿರುವ 206 ಜನರ ಸುಳಿವು ಈವರೆಗೂ ಲಭ್ಯವಾಗಿಲ್ಲ ಎಂದರು.
ಕಳೆದ 5 ದಿನಗಳಲ್ಲಿ 30 ಮಕ್ಕಳು, 98 ಪುರುಷರು, 87 ಮಹಿಳೆಯರ ಮೃತದೇಹ ಸೇರಿದಂತೆ ಒಟ್ಟು 215 ಶವಗಳನ್ನು ಪತ್ತೆ ಮಾಡಿ ಅವಶೇಷಗಳಡಿಯಿಂದ ಹೊರ ತೆಗೆಯಲಾಗಿದೆ.
ಗುರುತು ಖಾತರಿಯಾದ ಬಳಿಕ 148 ಮೃತದೇಹಗಳನ್ನು ಸಂಬಂಧಿ ಕರಿಗೆ ಹಸ್ತಾಂತರಿ ಸಲಾಗಿದೆ. 67 ಮೃತದೇಹಗಳ ಗುರುತು ಪತ್ತೆಗೆ ಯತ್ನಿಸಲಾಗುತ್ತಿದೆ. ಗುರುತು ಖಚಿತವಾಗದಿದ್ದಲ್ಲಿ ಪಂಚಾಯಿತಿ ನೆರವಿನಿಂದ ಅಂತಿಮ ಸಂಸ್ಕಾರ ನಡೆಸಲಾಗುವುದು ಎಂದರು.
ಮೋಹನ್ ಲಾಲ್ ನೆರವು: ಭೂಕುಸಿತ ಸಂತ್ರಸ್ತ ಮುಂಡಕ್ಕೆ ಮತ್ತು ಚೂರಲ್ಮಲಾ ಪ್ರದೇಶಗಳಿಗೆ ಖ್ಯಾತ ಬಹುಭಾಷಾ ನಟ ಮೋಹನ್ ಲಾಲ್ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು.
ಭಾರತೀಯ ಪ್ರಾದೇಶಿಕ ಸೇನೆ(ಬಿಟಿಎ) ಯಲ್ಲಿ ಗೌರವಾರ್ಥ ಲೆಫ್ಟಿನೆಂಟ್ ಕರ್ನಲ್ ಹುದ್ದೆ ಅಲಂಕರಿಸಿರುವ ಮೋಹನ್ ಲಾಲ್, ಸಮವಸ್ತ್ರದಲ್ಲೇ ರಕ್ಷಣಾ ಕಾರ್ಯಾಚರಣೆಯ ಮಾಹಿತಿ ಪಡೆದುಕೊಂಡರು. ಸಂತ್ರಸ್ತ ಪ್ರದೇಶ ದಲ್ಲಿ ಪುನರ್ವಸತಿ ಕಾರ್ಯಕ್ಕಾಗಿ ತಮ್ಮ ತಂದೆ-ತಾಯಿ ಹೆಸರಲ್ಲಿ ಸ್ಥಾಪಿಸಿರುವ ಪ್ರತಿಷ್ಠಾನದಿಂದ 3 ಕೋಟಿ ರು. ನೆರವು ನೀಡುವುದಾಗಿ ಪ್ರಕಟಿಸಿದರು
ಈ ಘಟನೆಯ ಆಳದ ಬಗ್ಗೆ ಹೋಗಿ ನೋಡಿದಾಗ ನಮಗೆ ತಿಳಿಯುತ್ತದೆ, ಸಾಕಷ್ಟು ಕೆಸರು ಇದೆ ಮತ್ತು ಜನರು ಇನ್ನೂ ಒಳಗೆ ಸಿಲುಕಿಕೊಂಡಿದ್ದಾರೆಯೇ ಎಂದು ಖಚಿತವಾಗಿಲ್ಲ. ಇದರ ಹಿಂದೆ ದುಡಿಯುತ್ತಿರುವ ಪ್ರತಿಯೊಬ್ಬರಿಗೂ ನಾನು ನನ್ನ ಹೃದಯದಾಳದಿಂದ ಧನ್ಯವಾದ ಹೇಳುತ್ತೇನೆ. ಇದು ಭಾರತ ಕಂಡ ದೊಡ್ಡ ದುರಂತಗಳಲ್ಲಿ ಒಂದಾಗಿದೆ.
ನಾವು ಈಗಾಗಲೇ ಕಳೆದುಕೊಂಡಿದ್ದನ್ನು ಮರಳಿ ಪಡೆಯಲು ಸಾಧ್ಯವಾಗುವುದಿಲ್ಲ ಆದರೆ ನಾವು ನೆರವು ಮಾಡಬೇಕಾಗಿದೆ. ಈ ಜನರ ಭವಿಷ್ಯಕ್ಕಾಗಿ ನಾವು ಹೇಗೆ ಸಹಾಯ ಮಾಡಬಹುದು ಎಂದು ಚಿಂತಿಸಬೇಕಿದೆ ಎಂದಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….