5ರೂ.ಗೆ ಅನ್ನ ಕೊಡುವ ಇಂದಿರಾ ಕ್ಯಾಂಟೀನ್ ರಾಷ್ಟ್ರಕ್ಕೆ ಮಾದರಿ ಎಂದ ಸಚಿವ ಸಂತೋಷ ಲಾಡ್: ಹುಬ್ಬಳ್ಳಿ ಧಾರವಾಡ ಪ್ಯಾಕೇಜ್ ವಿವರ ಹೇಗಿದೆ ನೋಡಿ

ಧಾರವಾಡ (ಸೆಪ್ಟೆಂಬರ್ 13); ಕರ್ನಾಟಕ ರಾಜ್ಯ ಸರಕಾರವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಾಯಕತ್ವದಲ್ಲಿ ಬಡವರಿಗೆ, ಕಾರ್ಮಿಕರಿಗೆ, ಹಿಂದುಳಿದವರಿಗೆ ಹಾಗೂ ಎಲ್ಲ ಸಾರ್ವಜನಿಕರಿಗೆ ಇಂದಿರಾ ಕ್ಯಾಂಟೀನ್ ಮೂಲಕ ಕೇವಲ ಐದು ರೂಪಾಯಿಗೆ ಊಟ, ಉಪಹಾರ ನೀಡುತ್ತಿರುವುದು ರಾಷ್ಟ್ರಕ್ಕೆ ಮಾದರಿಯಾಗಿದೆ ಎಂದು ಕಾರ್ಮಿಕ ಇಲಾಖೆ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಹೇಳಿದರು.

ಅವರು ನಗರದ ಮಿನಿವಿಧಾನಸೌಧ ಬಳಿ ಇರುವ ಇಂದಿರಾ ಕ್ಯಾಂಟೀನ್‍ದಲ್ಲಿ ಇಂದಿರಾ ಕ್ಯಾಂಟೀನ್ ಹೊಸ ದರ ಪಟ್ಟಿ ಮತ್ತು ವಿವಿಧ ಆಹಾರಗಳ ಪೂರೈಕೆಗೆ ಚಾಲನೆ ನೀಡಿ, ಮಾತನಾಡಿದರು.

ಇಂದಿರಾ ಕ್ಯಾಂಟೀನ್ ಅನ್ನುವುದು, ರಾಜ್ಯ ಸರಕಾರದ ಮಹತ್ವದ ಕೊಡುಗೆಯಾಗಿದೆ. ಜಿಲ್ಲೆಯ ಅವಳಿ ನಗರದಲ್ಲಿ 9 ಇಂದಿರಾ ಕ್ಯಾಂಟೀನ್‍ಗಳು ಕಾರ್ಯನಿರ್ವಹಿಸುತ್ತಿವೆ. ಪ್ರತಿ ಇಂದಿರಾ ಕ್ಯಾಂಟೀನ್‍ದಿಂದ ಪ್ರತಿದಿನ 500 ಜನರಿಗೆ ಊಟ ಪೂರೈಸುವ ಗುತ್ತಿಗೆ ನೀಡಲಾಗಿದೆ. ಅದರಂತೆ ಇಂದಿರಾ ಕ್ಯಾಂಟೀನ್‍ಗಳು ಕಾರ್ಯ ನಿರ್ವಹಿಸುತ್ತಿವೆ ಎಂದು ಅವರು ಹೇಳಿದರು.

ಇಂದಿರಾ ಕ್ಯಾಂಟೀನ್ ರುಚಿ ಸವಿದ ಸಚಿವ, ಡಿಸಿ: ಸಚಿವ ಸಂತೋಷ ಲಾಡ್ ಅವರು ಇಂದು ಧಾರವಾಡ ನಗರದಲ್ಲಿ ಇಂದಿರಾ ಕ್ಯಾಂಟೀನ್‍ದಲ್ಲಿ ಹೊಸ ದರದ ಪಟ್ಟಿ ಬಿಡುಗಡೆ ಮಾಡಿ, ವಿವಿಧ ಪ್ರಕಾರದ ಉಪಹಾರ ಸೆವಿಸಿದರು.

ಕ್ಯಾಂಟೀನ್‍ದಲ್ಲಿ ಸಚಿವ ಸಂತೋಷ ಲಾಡ್ ಹಾಗೂ ಡಿಸಿ ದಿವ್ಯ ಪ್ರಭು ಅವರು ಐದು ರೂ. ಹಣ ಕೊಟ್ಟು ಟೋಕನ್ ಖರೀದಿಸಿದರು. ನಂತರ ಸಚಿವರು ಜೋಳದ ರೊಟ್ಟಿ ಊಟ ಸವಿದರು. ಡಿಸಿ ದಿವ್ಯ ಪ್ರಭು ಅವರು ಇಡ್ಲಿ, ಅವಲಕ್ಕಿ ಮತ್ತು ಶ್ಯಾವಿಗೆ ಸಿಹಿ ಸವಿದರು. 

ಈ ಸಂದರ್ಭದಲ್ಲಿ ನವಲಗುಂದ ಶಾಸಕ ಎನ್.ಎಚ್.ಕೋನರಡ್ಡಿ, ಜಿಲ್ಲಾಧಿಕಾರಿ ದಿವ್ಯ ಪ್ರಭು, ಮಹಾನಗರ ಪಾಲಿಕೆ ಆಯುಕ್ತ ಡಾ.ಈಶ್ವರ ಉಳ್ಳಾಗಡ್ಡಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಅಜೀಜ್ ದೇಸಾಯಿ, ಪಾಲಿಕೆ ಸದಸ್ಯ ಡಾ.ಮಯೂರ ಮೋರೆ, ಸೇರಿದಂತೆ ವಿವಿಧ ಅಧಿಕಾರಿಗಳು, ಜನಪ್ರತಿನಿಧಿಗಳು ಇದ್ದರು.

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ 9 ಇಂದಿರಾ ಕ್ಯಾಂಟೀನ್‍ಗಳಿಗೆ ಎರಡು ಪ್ಯಾಕೇಜ್‍ಗಳ ಮೂಲಕ ಆಹಾರ ಸರಬರಾಜು ಮಾಡಲಾಗುತ್ತದೆ. 

ಹುಬ್ಬಳ್ಳಿ (ಪ್ಯಾಕೇಜ್ 1): ಪ್ಯಾಕೇಜ್ 1 ರಲ್ಲಿ ಹುಬ್ಬಳ್ಳಿಯ ಕಿಮ್ಸ್ ಆವರಣ, ಹೊಸ ಬಸ್ ನಿಲ್ದಾಣ, ಎಸ್.ಎಮ್.ಕೃಷ್ಣ ನಗರ, ನ್ಯೂ ಇಂಗ್ಲೀಷ ಶಾಲೆ, ಸೋನಿಯಾ ಗಾಂಧಿ ನಗರದಲ್ಲಿ ಇಂದಿರಾ ಕ್ಯಾಂಟೀನ್‍ಗಳಿಗೆ ಪ್ರತಿದಿನ ಪ್ರತಿ ಕ್ಯಾಂಟೀನ್‍ದಲ್ಲಿ ಬೆಳಗಿನ ಉಪಹಾರ 500, ಮಧ್ಯಾಹ್ನದ ಊಟ 500, ರಾತ್ರಿ ಊಟ 500 ಸೇರಿ ಒಟ್ಟು 1500 ಜನರಿಗೆ ಊಟ, ಉಪಹಾರ ಪೂರೈಸಲಾಗುತ್ತಿದೆ.

 ಒಟ್ಟಾರೆ ಒಂದು ವರ್ಷಕ್ಕೆ ಬೆಳಗಿನ ಉಪಹಾರ-912500, ಮಧ್ಯಾಹ್ನದ ಊಟ-912500, ರಾತ್ರಿ ಊಟ-912500, ಒಟ್ಟು 2737500 ಜನರಿಗೆ ಆಹಾರ ಪೂರೈಸಲಾಗುತ್ತಿದೆ.

  ಪ್ರತಿ ಒಬ್ಬ ಫಲಾನುಭವಿಗಳಿಗೆ ಬೆಳಿಗಿನ ಉಪಹಾರಕ್ಕೆ ನೀಡುವ ರೂ 5, ಮಧ್ಯಾಹ್ನ ಊಟ ರೂ 10, ರಾತ್ರಿ ಊಟ ರೂ.10 ಒಟ್ಟು 25 ಆಗುತ್ತದೆ. 

ಧಾರವಾಡ (ಪ್ಯಾಕೇಜ್ 2): ಪ್ಯಾಕೇಜ್ 2 ರಲ್ಲಿ ಧಾರವಾಡದ ಹೊಸ ಬಸ್ ನಿಲ್ದಾಣ, ಮಿನಿ ವಿಧಾನಸೌಧ, ಹುಬ್ಬಳ್ಳಿಯ ಉಣಕಲ್, ಬೆಂಗೇರಿ ಸಂತೆ ಮೈದಾನದಲ್ಲಿ ಇಂದಿರಾ ಕ್ಯಾಂಟೀನ್‍ಗಳಿಗೆ ಪ್ರತಿದಿನ ಬೆಳಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ನೀಡಲಾಗುತ್ತಿದೆ.

  ಪ್ರತಿ ಒಬ್ಬ ಫಲಾನುಭವಿಗಳಿಗೆ ಬೆಳಿಗಿನ ಉಪಹಾರಕ್ಕೆ ನೀಡುವ ರೂ 5, ಮಧ್ಯಾಹ್ನ ಊಟ ರೂ 10, ರಾತ್ರಿ ಊಟ ರೂ.10 ಒಟ್ಟು 25 ಆಗುತ್ತದೆ. ಅಂದಾಜು ದರ ಪಟ್ಟಿಯ ಪ್ರಕಾರ ಉಪಹಾರಕ್ಕೆ ನೀಡುವ ರೂ 12.4, ಮಧ್ಯಾಹ್ನ ಊಟ ರೂ 24.8, ರಾತ್ರಿ ಊಟ ರೂ. 24.8 ಒಟ್ಟು ರೂ.62 ಆಗುತ್ತದೆ.

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ 9 ಇಂದಿರಾ ಕ್ಯಾಂಟೀನ್‍ನಲ್ಲಿ ವಾರದ ಏಳು ದಿನಗಳಲ್ಲಿ ಬೆಳಗಿನ ಉಪಹಾರವು ಬೆಳಿಗ್ಗೆ 7.30 ರಿಂದ 10 ಗಂಟೆಯವರಿಗೆ, ಮಧ್ಯಾಹ್ನ ಊಟ ಮಧ್ಯಾಹ್ನ 12.30 ರಿಂದ 3 ಗಂಟೆಯವರೆಗೆ ಹಾಗೂ ರಾತ್ರಿ ಊಟ ಸಂಜೆ 6 ರಿಂದ 8 ರವರೆಗೆ ಆಹಾರದ ಒದಗಿಸಲಾಗುತ್ತದೆ. 

ಭಾನುವಾರ: ಬೆಳಗಿನ ಉಪಹಾರ: ಐಟಂ 1 ರಲ್ಲಿ 3 ಇಡ್ಲಿ (150 ಗ್ರಾಮ್ಸ್) ಪುದೀನಾ ಚಟ್ನಿ (100 ಗ್ರಾಮ್ಸ್), ಐಟಂ 2 ರಲ್ಲಿ ಕೇಸರಿ ಬಾತ್, ಖಾರಾ ಬಾತ್ (225 ಗ್ರಾಮ್ಸ್) ಚಟ್ನಿ (100 ಗ್ರಾಮ್ಸ್), 

ಮಧ್ಯಾಹ್ನದ ಊಟ: ಐಟಂ 1 ರಲ್ಲಿ ಅನ್ನ (300 ಗ್ರಾಮ್ಸ್), ಅಲ್ಸಂದೆ ಕಾಳು ಸಾಂಬಾರ್ (150 ಗ್ರಾಮ್ಸ್) ಹಾಗೂ ಕೀರ್ (75 ಎಂ.ಎಲ್), ಐಟಂ 2 ರಲ್ಲಿ ಜೋಳದ ರೋಟ್ಟಿ (2 ಸಂಖ್ಯೆ) ಸೊಪ್ಪು ಪಲ್ಯ (100 ಗ್ರಾಮ್ಸ್) ಕೀರ್ (75 ಎಂ.ಎಲ್)

ರಾತ್ರಿ ಊಟ: ಐಟಂ 1 ರಲ್ಲಿ ಅನ್ನ (300 ಗ್ರಾಮ್ಸ್), ಮೊಳಕೆ ಕಾಳು ಸಾಂಬಾರ್ (150 ಗ್ರಾಮ್ಸ್), ಐಟಂ 2 ರಲ್ಲಿ ಜೋಳದ ರೋಟ್ಟಿ (2 ಸಂಖ್ಯೆ) ಸೊಪ್ಪು ಪಲ್ಯ (100 ಗ್ರಾಮ್ಸ್)

ಸೋಮವಾರ: ಬೆಳಗಿನ ಉಪಹಾರ: ಐಟಂ 1 ರಲ್ಲಿ 3 ಇಡ್ಲಿ (150 ಗ್ರಾಮ್ಸ್) ಸಾಂಬರ್ (100 ಗ್ರಾಮ್ಸ್), ಐಟಂ 2 ರಲ್ಲಿ ಮಂಡಕ್ಕಿ (120 ಗ್ರಾಮ್ಸ್).

ಮಧ್ಯಾಹ್ನದ ಊಟ: ಐಟಂ 1 ರಲ್ಲಿ ಅನ್ನ (300 ಗ್ರಾಮ್ಸ್), ಮೂಲಂಗಿ ಸಾಂಬಾರ್ (150 ಗ್ರಾಮ್ಸ್) ಹಾಗೂ ಮೊಸರನ್ನ(100 ಗ್ರಾಮ್ಸ್), ಐಟಂ 2 ರಲ್ಲಿ ಚಪಾತಿ (2 ಸಂಖ್ಯೆ) ಸಾಗು (40 ಗ್ರಾಮ್ಸ್) ಮೊಸರನ್ನ(100 ಗ್ರಾಮ್ಸ್), 

ರಾತ್ರಿ ಊಟ: ಐಟಂ 1 ರಲ್ಲಿ ಅನ್ನ (300 ಗ್ರಾಮ್ಸ್), ಹಿರೇಕಾಯಿ ಸಾಂಬಾರ್ (150 ಗ್ರಾಮ್ಸ್), ಐಟಂ 2 ರಲ್ಲಿ ಚಪಾತಿ (2 ಸಂಖ್ಯೆ) ಸಾಗು (40 ಗ್ರಾಮ್ಸ್)

ಮಂಗಳವಾರ:

ಬೆಳಗಿನ ಉಪಹಾರ: ಐಟಂ 1 ರಲ್ಲಿ 3 ಇಡ್ಲಿ (150 ಗ್ರಾಮ್ಸ್) ಸಾಂಬರ್ (100 ಗ್ರಾಮ್ಸ್), ಐಟಂ 2 ರಲ್ಲಿ ಖಾರಾ ಬಾತ್ (225ಗ್ರಾಮ್ಸ್) ಚಟ್ನಿ (100)

ಮಧ್ಯಾಹ್ನದ ಊಟ: ಐಟಂ 1 ರಲ್ಲಿ ಅನ್ನ (300 ಗ್ರಾಮ್ಸ್), ಬದನೆಕಾಯಿ (150 ಗ್ರಾಮ್ಸ್) ಹಾಗೂ ರಾಗಿ ಅಂಬಲಿ (75 ಎಂ.ಎಲ್), ಐಟಂ 2 ರಲ್ಲಿ ಜೋಳದ ರೋಟ್ಟಿ (2 ಸಂಖ್ಯೆ) ಸೊಪ್ಪು ಪಲ್ಯ (100 ಗ್ರಾಮ್ಸ್) ರಾಗಿ ಅಂಬಲಿ (75 ಎಂ.ಎಲ್)

ರಾತ್ರಿ ಊಟ: ಐಟಂ 1 ರಲ್ಲಿ ಅನ್ನ (300 ಗ್ರಾಮ್ಸ್), ಕುಂಬಳಕಾಯಿ ಸಾಂಬಾರ್ (150 ಗ್ರಾಮ್ಸ್), ಐಟಂ 2 ರಲ್ಲಿ ಜೋಳದ ರೋಟ್ಟಿ (2 ಸಂಖ್ಯೆ) ಸೊಪ್ಪು ಪಲ್ಯ (100 ಗ್ರಾಮ್ಸ್)

ಬುಧವಾರ: ಬೆಳಗಿನ ಉಪಹಾರ: ಐಟಂ 1 ರಲ್ಲಿ 3 ಇಡ್ಲಿ (150 ಗ್ರಾಮ್ಸ್) ಕರಿಬೇವು ಚಟ್ನಿ (100 ಗ್ರಾಮ್ಸ್), ಐಟಂ 2 ರಲ್ಲಿ ಅವಲಕ್ಕಿ (225 ಗ್ರಾಮ್ಸ್) ಚಟ್ನಿ (100 ಗ್ರಾಮ್ಸ್)

ಮಧ್ಯಾಹ್ನದ ಊಟ: ಐಟಂ 1 ರಲ್ಲಿ ಅನ್ನ (300 ಗ್ರಾಮ್ಸ್), ಬೀನ್ಸ್ ಸಾಂಬಾರ್ (150 ಗ್ರಾಮ್ಸ್) ಹಾಗೂ ಮೊಸರನ್ನ (100 ಗ್ರಾಮ್ಸ್), ಐಟಂ 2 ರಲ್ಲಿ ಚಪಾತಿ (2 ಸಂಖ್ಯೆ) ಸಾಗು (40 ಗ್ರಾಮ್ಸ್) ಮೊಸರನ್ನ(100 ಗ್ರಾಮ್ಸ್), 

ರಾತ್ರಿ ಊಟ: ಐಟಂ 1 ರಲ್ಲಿ ಅನ್ನ (300 ಗ್ರಾಮ್ಸ್), ಮೂಲಂಗಿ ಸಾಂಬಾರ್ (150 ಗ್ರಾಮ್ಸ್), ಐಟಂ 2 ರಲ್ಲಿ ಚಪಾತಿ (2 ಸಂಖ್ಯೆ) ಸಾಗು (40 ಗ್ರಾಮ್ಸ್)

ಗುರುವಾರ: ಬೆಳಗಿನ ಉಪಹಾರ: ಐಟಂ 1 ರಲ್ಲಿ 3 ಇಡ್ಲಿ (150 ಗ್ರಾಮ್ಸ್) ಸಾಂಬರ್ (100 ಗ್ರಾಮ್ಸ್), ಐಟಂ 2 ರಲ್ಲಿ ವೆಜ್ ಪಲಾವ್ (225ಗ್ರಾಮ್ಸ್) ರೈತಾ (100)

ಮಧ್ಯಾಹ್ನದ ಊಟ: ಐಟಂ 1 ರಲ್ಲಿ ಅನ್ನ (300 ಗ್ರಾಮ್ಸ್), ಮೊಳಕೆಕಾಳು ಸಾಂಬಾರ್ (150 ಗ್ರಾಮ್ಸ್) ಹಾಗೂ ಕೀರ್ (75 ಎಂ.ಎಲ್), ಐಟಂ 2 ರಲ್ಲಿ ಜೋಳದ ರೋಟ್ಟಿ (2 ಸಂಖ್ಯೆ) ಸೊಪ್ಪು ಪಲ್ಯ (100 ಗ್ರಾಮ್ಸ್) ಕೀರ್ (75 ಎಂ.ಎಲ್)

ರಾತ್ರಿ ಊಟ: ಐಟಂ 1 ರಲ್ಲಿ ಅನ್ನ (300 ಗ್ರಾಮ್ಸ್), ಬದನೆಕಾಯಿ ಸಾಂಬಾರ್ (150 ಗ್ರಾಮ್ಸ್), ಐಟಂ 2 ರಲ್ಲಿ ಜೋಳದ ರೋಟ್ಟಿ (2 ಸಂಖ್ಯೆ) ಸೊಪ್ಪು ಪಲ್ಯ (100 ಗ್ರಾಮ್ಸ್)

ಶುಕ್ರವಾರ: ಬೆಳಗಿನ ಉಪಹಾರ: ಐಟಂ 1 ರಲ್ಲಿ 3 ಇಡ್ಲಿ (150 ಗ್ರಾಮ್ಸ್) ಸಾಂಬಾರ್ (100 ಗ್ರಾಮ್ಸ್), ಐಟಂ 2 ರಲ್ಲಿ ಚಿತ್ರನ್ನಾ (225 ಗ್ರಾಮ್ಸ್) ಚಟ್ನಿ (100 ಗ್ರಾಮ್ಸ್)

ಮಧ್ಯಾಹ್ನದ ಊಟ: ಐಟಂ 1 ರಲ್ಲಿ ಅನ್ನ (300 ಗ್ರಾಮ್ಸ್), ಹಿರೇಕಾಯಿ ಸಾಂಬಾರ್ (150 ಗ್ರಾಮ್ಸ್) ಹಾಗೂ ರಾಗಿ ಅಂಬಲಿ (75 ಎಂ.ಎಲ್), ಐಟಂ 2 ರಲ್ಲಿ ಚಪಾತಿ (2 ಸಂಖ್ಯೆ) ಸಾಗು (40 ಗ್ರಾಮ್ಸ್) ರಾಗಿ ಅಂಬಲಿ (75 ಎಂ.ಎಲ್),

ರಾತ್ರಿ ಊಟ: ಐಟಂ 1 ರಲ್ಲಿ ಅನ್ನ (300 ಗ್ರಾಮ್ಸ್), ಅಲ್ಸಂದೆಕಾಳು ಸಾಂಬಾರ್ (150 ಗ್ರಾಮ್ಸ್), ಐಟಂ 2 ರಲ್ಲಿ ಚಪಾತಿ (2 ಸಂಖ್ಯೆ) ಸಾಗು (40 ಗ್ರಾಮ್ಸ್)

ಶನಿವಾರ: ಬೆಳಗಿನ ಉಪಹಾರ: ಐಟಂ 1 ರಲ್ಲಿ 3 ಇಡ್ಲಿ (150 ಗ್ರಾಮ್ಸ್) ಸಾಂಬರ್ (100 ಗ್ರಾಮ್ಸ್), ಐಟಂ 2 ರಲ್ಲಿ ಆಲೂಬಾತ್ (225ಗ್ರಾಮ್ಸ್) ಚಟ್ನಿ (100)

ಮಧ್ಯಾಹ್ನದ ಊಟ: ಐಟಂ 1 ರಲ್ಲಿ ಅನ್ನ (300 ಗ್ರಾಮ್ಸ್), ಕುಂಬಳಕಾಯಿ ಸಾಂಬಾರ್ (150 ಗ್ರಾಮ್ಸ್) ಹಾಗೂ ಕೀರ್ (75 ಎಂ.ಎಲ್), ಐಟಂ 2 ರಲ್ಲಿ ಜೋಳದ ರೋಟ್ಟಿ (2 ಸಂಖ್ಯೆ) ಸೊಪ್ಪು ಪಲ್ಯ (100 ಗ್ರಾಮ್ಸ್) ಕೀರ್ (75 ಎಂ.ಎಲ್)

ರಾತ್ರಿ ಊಟ: ಐಟಂ 1 ರಲ್ಲಿ ಅನ್ನ (300 ಗ್ರಾಮ್ಸ್), ನುಗ್ಗೇಕಾಯಿ ಸಾಂಬಾರ್ (150 ಗ್ರಾಮ್ಸ್), ಐಟಂ 2 ರಲ್ಲಿ ಜೋಳದ ರೋಟ್ಟಿ (2 ಸಂಖ್ಯೆ) ಸೊಪ್ಪು ಪಲ್ಯ (100 ಗ್ರಾಮ್ಸ್)

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

ರಾಜಕೀಯ

ಮಾತುಕತೆಗೆ ದೆಹಲಿಗೆ ಬನ್ನಿ: ಧರಣಿ ನಿರತ ಅಂಗನವಾಡಿ ನೌಕರರಿಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಮನವಿ

ಮಾತುಕತೆಗೆ ದೆಹಲಿಗೆ ಬನ್ನಿ: ಧರಣಿ ನಿರತ ಅಂಗನವಾಡಿ ನೌಕರರಿಗೆ ಕೇಂದ್ರ ಸಚಿವ ಹೆಚ್.ಡಿ.

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮಂಡ್ಯದಲ್ಲಿ ಧರಣಿ ನಡೆಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರ ಜತೆ ನವದೆಹಲಿಯಿಂದ ದೂರವಾಣಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ (H.D. Kumaraswamy) ಅವರು, ಮಾತುಕತೆಗೆ ಬರುವಂತೆ ನವದೆಹಲಿಗೆ ಆಹ್ವಾನಿಸಿದ್ದಾರೆ.

[ccc_my_favorite_select_button post_id="116929"]
ಕರ್ನಾಟಕದ 9 ಜಿಲ್ಲೆ ಒಳಗೊಂಡ ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಕಾರ್ಯಕ್ರಮ (NICDP): ಗೋಯೆಲ್‌ ಜೊತೆ ಕೇಂದ್ರ ಸಚಿವ ಹೆಚ್.ಡಿ.ಕೆ ಮಹತ್ವದ ಚರ್ಚೆ

ಕರ್ನಾಟಕದ 9 ಜಿಲ್ಲೆ ಒಳಗೊಂಡ ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಕಾರ್ಯಕ್ರಮ (NICDP):

ಕರ್ನಾಟಕದ ಕೈಗಾರಿಕಾಭಿವೃದ್ದಿಗೆ ಪರಿವರ್ತನಾತ್ಮಕ ಹೆಜ್ಜೆ ಎಂದೇ ನಂಬಲಾಗಿರುವ 9 ಜಿಲ್ಲೆಗಳನ್ನು ಒಳಗೊಂಡ ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಯೋಜನೆಯನ್ನು (NICDP- National Industrial Corridor Development Programme) ಅನುಷ್ಠಾನಗೊಳಿಸಬೇಕೆಂದು ಕೋರಿ ಕೇಂದ್ರದ ಬೃಹತ್‌ ಕೈಗಾರಿಕೆ

[ccc_my_favorite_select_button post_id="116156"]
ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಅವರೊಂದಿಗೆ, ಸಂಘಟನೆಯ ಟ್ರಸ್ಟಿಯೂ ಆಗಿರುವ ಸಂಸದ ಡಾ.ಕೆ.ಸುಧಾಕರ್‌ (Dr.K.Sudhakar)

[ccc_my_favorite_select_button post_id="113863"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ವಿಶ್ವಕಪ್ ವಿಜೇತ ಅಂಧ ಮಹಿಳಾ ಕ್ರಿಕೆಟ್ ತಂಡಕ್ಕೆ ನಗದು ಬಹುಮಾನ, ಸರ್ಕಾರಿ ಉದ್ಯೋಗ ಘೋಷಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

ವಿಶ್ವಕಪ್ ವಿಜೇತ ಅಂಧ ಮಹಿಳಾ ಕ್ರಿಕೆಟ್ ತಂಡಕ್ಕೆ ನಗದು ಬಹುಮಾನ, ಸರ್ಕಾರಿ ಉದ್ಯೋಗ

ವಿಶ್ವಕಪ್ ವಿಜೇತ ಭಾರತದ ಅಂಧ ಮಹಿಳಾ ಕ್ರಿಕೆಟ್ ತಂಡಕ್ಕೆ ಶುಭ ಹಾರೈಸಿ ಅಭಿನಂದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ (Cmsiddaramaiah) ಕರ್ನಾಟಕದ ಕ್ರಿಕೆಟ್ ಪಟುಗಳಿಗೆ ತಲಾ ಹತ್ತು ಲಕ್ಷ ನಗದು ಬಹುಮಾನದ ಜೊತೆಗೆ ಸರ್ಕಾರಿ ಉದ್ಯೋಗ ಘೋಷಿಸಿದರು.

[ccc_my_favorite_select_button post_id="116681"]
ಕೆಲವೇ ಗಂಟೆಗಳಲ್ಲಿ ಸರಗಳ್ಳನ ಬಂಧನ.. ಸರ್ಕಲ್ ಇನ್ಸ್ಪೆಕ್ಟರ್ ಬಿ.ಕೆ.ಪಾಟೀಲ್ ತಂಡಕ್ಕೆ ವ್ಯಾಪಕ ಪ್ರಶಂಸೆ

ಕೆಲವೇ ಗಂಟೆಗಳಲ್ಲಿ ಸರಗಳ್ಳನ ಬಂಧನ.. ಸರ್ಕಲ್ ಇನ್ಸ್ಪೆಕ್ಟರ್ ಬಿ.ಕೆ.ಪಾಟೀಲ್ ತಂಡಕ್ಕೆ ವ್ಯಾಪಕ ಪ್ರಶಂಸೆ

ಮಹಿಳೆಯ ಮಾಂಗಲ್ಯ ಸರವನ್ನು ಕಿತ್ತು ಬೈಕ್‌ನಲ್ಲಿ ಪರಾರಿಯಾಗಿರುವ ಘಟನೆ ನಡೆದು ಕೆಲವೇ ಗಂಟೆಯೊಳಗೆ ಆರೋಪಿಯನ್ನು (Chain snatcher) ಬಂಧಿಸುವಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ಬಿ.ಕೆ.ಪಾಟೀಲ್ ನೇತೃತ್ವದ

[ccc_my_favorite_select_button post_id="116820"]
ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ದುರ್ಮರಣ: ಇಂದು ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ

ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ದುರ್ಮರಣ: ಇಂದು ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ

ಕರ್ನಾಟಕ ರಾಜ್ಯ ಖನಿಜ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಹಿರಿಯ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ (Mahantesh Bilagi) ಸೇರಿ ಮೂವರು ಅಪಘಾತದಲ್ಲಿ ಮೃತಪಟ್ಟಿದ್ದಾರೆ.

[ccc_my_favorite_select_button post_id="116728"]

ಆರೋಗ್ಯ

ಸಿನಿಮಾ

ದರ್ಶನ್ ಸೆಲೆಬ್ರಿಟಿಸ್ಗೆ ಗುಡ್‌ನ್ಯೂಸ್: ಡೆವಿಲ್ ಸಿನಿಮಾದ 3ನೇ ಸಾಂಗ್ ಬಿಡುಗಡೆ| Video ಲಿಂಕ್ ಇಲ್ಲಿದೆ ನೋಡಿ

ದರ್ಶನ್ ಸೆಲೆಬ್ರಿಟಿಸ್ಗೆ ಗುಡ್‌ನ್ಯೂಸ್: ಡೆವಿಲ್ ಸಿನಿಮಾದ 3ನೇ ಸಾಂಗ್ ಬಿಡುಗಡೆ| Video ಲಿಂಕ್

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ( Actor Darshan) ಅಭಿನಯದ "ದಿ ಡೆವಿಲ್" (The Devil) ಸಿನಿಮಾದ ಮೂರನೇ ಗೀತೆ ಬಿಡುಗಡೆಯಾಗಿದೆ.

[ccc_my_favorite_select_button post_id="116277"]
error: Content is protected !!