5ರೂ.ಗೆ ಅನ್ನ ಕೊಡುವ ಇಂದಿರಾ ಕ್ಯಾಂಟೀನ್ ರಾಷ್ಟ್ರಕ್ಕೆ ಮಾದರಿ ಎಂದ ಸಚಿವ ಸಂತೋಷ ಲಾಡ್: ಹುಬ್ಬಳ್ಳಿ ಧಾರವಾಡ ಪ್ಯಾಕೇಜ್ ವಿವರ ಹೇಗಿದೆ ನೋಡಿ

ಧಾರವಾಡ (ಸೆಪ್ಟೆಂಬರ್ 13); ಕರ್ನಾಟಕ ರಾಜ್ಯ ಸರಕಾರವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಾಯಕತ್ವದಲ್ಲಿ ಬಡವರಿಗೆ, ಕಾರ್ಮಿಕರಿಗೆ, ಹಿಂದುಳಿದವರಿಗೆ ಹಾಗೂ ಎಲ್ಲ ಸಾರ್ವಜನಿಕರಿಗೆ ಇಂದಿರಾ ಕ್ಯಾಂಟೀನ್ ಮೂಲಕ ಕೇವಲ ಐದು ರೂಪಾಯಿಗೆ ಊಟ, ಉಪಹಾರ ನೀಡುತ್ತಿರುವುದು ರಾಷ್ಟ್ರಕ್ಕೆ ಮಾದರಿಯಾಗಿದೆ ಎಂದು ಕಾರ್ಮಿಕ ಇಲಾಖೆ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಹೇಳಿದರು.

ಅವರು ನಗರದ ಮಿನಿವಿಧಾನಸೌಧ ಬಳಿ ಇರುವ ಇಂದಿರಾ ಕ್ಯಾಂಟೀನ್‍ದಲ್ಲಿ ಇಂದಿರಾ ಕ್ಯಾಂಟೀನ್ ಹೊಸ ದರ ಪಟ್ಟಿ ಮತ್ತು ವಿವಿಧ ಆಹಾರಗಳ ಪೂರೈಕೆಗೆ ಚಾಲನೆ ನೀಡಿ, ಮಾತನಾಡಿದರು.

ಇಂದಿರಾ ಕ್ಯಾಂಟೀನ್ ಅನ್ನುವುದು, ರಾಜ್ಯ ಸರಕಾರದ ಮಹತ್ವದ ಕೊಡುಗೆಯಾಗಿದೆ. ಜಿಲ್ಲೆಯ ಅವಳಿ ನಗರದಲ್ಲಿ 9 ಇಂದಿರಾ ಕ್ಯಾಂಟೀನ್‍ಗಳು ಕಾರ್ಯನಿರ್ವಹಿಸುತ್ತಿವೆ. ಪ್ರತಿ ಇಂದಿರಾ ಕ್ಯಾಂಟೀನ್‍ದಿಂದ ಪ್ರತಿದಿನ 500 ಜನರಿಗೆ ಊಟ ಪೂರೈಸುವ ಗುತ್ತಿಗೆ ನೀಡಲಾಗಿದೆ. ಅದರಂತೆ ಇಂದಿರಾ ಕ್ಯಾಂಟೀನ್‍ಗಳು ಕಾರ್ಯ ನಿರ್ವಹಿಸುತ್ತಿವೆ ಎಂದು ಅವರು ಹೇಳಿದರು.

ಇಂದಿರಾ ಕ್ಯಾಂಟೀನ್ ರುಚಿ ಸವಿದ ಸಚಿವ, ಡಿಸಿ: ಸಚಿವ ಸಂತೋಷ ಲಾಡ್ ಅವರು ಇಂದು ಧಾರವಾಡ ನಗರದಲ್ಲಿ ಇಂದಿರಾ ಕ್ಯಾಂಟೀನ್‍ದಲ್ಲಿ ಹೊಸ ದರದ ಪಟ್ಟಿ ಬಿಡುಗಡೆ ಮಾಡಿ, ವಿವಿಧ ಪ್ರಕಾರದ ಉಪಹಾರ ಸೆವಿಸಿದರು.

ಕ್ಯಾಂಟೀನ್‍ದಲ್ಲಿ ಸಚಿವ ಸಂತೋಷ ಲಾಡ್ ಹಾಗೂ ಡಿಸಿ ದಿವ್ಯ ಪ್ರಭು ಅವರು ಐದು ರೂ. ಹಣ ಕೊಟ್ಟು ಟೋಕನ್ ಖರೀದಿಸಿದರು. ನಂತರ ಸಚಿವರು ಜೋಳದ ರೊಟ್ಟಿ ಊಟ ಸವಿದರು. ಡಿಸಿ ದಿವ್ಯ ಪ್ರಭು ಅವರು ಇಡ್ಲಿ, ಅವಲಕ್ಕಿ ಮತ್ತು ಶ್ಯಾವಿಗೆ ಸಿಹಿ ಸವಿದರು. 

ಈ ಸಂದರ್ಭದಲ್ಲಿ ನವಲಗುಂದ ಶಾಸಕ ಎನ್.ಎಚ್.ಕೋನರಡ್ಡಿ, ಜಿಲ್ಲಾಧಿಕಾರಿ ದಿವ್ಯ ಪ್ರಭು, ಮಹಾನಗರ ಪಾಲಿಕೆ ಆಯುಕ್ತ ಡಾ.ಈಶ್ವರ ಉಳ್ಳಾಗಡ್ಡಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಅಜೀಜ್ ದೇಸಾಯಿ, ಪಾಲಿಕೆ ಸದಸ್ಯ ಡಾ.ಮಯೂರ ಮೋರೆ, ಸೇರಿದಂತೆ ವಿವಿಧ ಅಧಿಕಾರಿಗಳು, ಜನಪ್ರತಿನಿಧಿಗಳು ಇದ್ದರು.

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ 9 ಇಂದಿರಾ ಕ್ಯಾಂಟೀನ್‍ಗಳಿಗೆ ಎರಡು ಪ್ಯಾಕೇಜ್‍ಗಳ ಮೂಲಕ ಆಹಾರ ಸರಬರಾಜು ಮಾಡಲಾಗುತ್ತದೆ. 

ಹುಬ್ಬಳ್ಳಿ (ಪ್ಯಾಕೇಜ್ 1): ಪ್ಯಾಕೇಜ್ 1 ರಲ್ಲಿ ಹುಬ್ಬಳ್ಳಿಯ ಕಿಮ್ಸ್ ಆವರಣ, ಹೊಸ ಬಸ್ ನಿಲ್ದಾಣ, ಎಸ್.ಎಮ್.ಕೃಷ್ಣ ನಗರ, ನ್ಯೂ ಇಂಗ್ಲೀಷ ಶಾಲೆ, ಸೋನಿಯಾ ಗಾಂಧಿ ನಗರದಲ್ಲಿ ಇಂದಿರಾ ಕ್ಯಾಂಟೀನ್‍ಗಳಿಗೆ ಪ್ರತಿದಿನ ಪ್ರತಿ ಕ್ಯಾಂಟೀನ್‍ದಲ್ಲಿ ಬೆಳಗಿನ ಉಪಹಾರ 500, ಮಧ್ಯಾಹ್ನದ ಊಟ 500, ರಾತ್ರಿ ಊಟ 500 ಸೇರಿ ಒಟ್ಟು 1500 ಜನರಿಗೆ ಊಟ, ಉಪಹಾರ ಪೂರೈಸಲಾಗುತ್ತಿದೆ.

 ಒಟ್ಟಾರೆ ಒಂದು ವರ್ಷಕ್ಕೆ ಬೆಳಗಿನ ಉಪಹಾರ-912500, ಮಧ್ಯಾಹ್ನದ ಊಟ-912500, ರಾತ್ರಿ ಊಟ-912500, ಒಟ್ಟು 2737500 ಜನರಿಗೆ ಆಹಾರ ಪೂರೈಸಲಾಗುತ್ತಿದೆ.

  ಪ್ರತಿ ಒಬ್ಬ ಫಲಾನುಭವಿಗಳಿಗೆ ಬೆಳಿಗಿನ ಉಪಹಾರಕ್ಕೆ ನೀಡುವ ರೂ 5, ಮಧ್ಯಾಹ್ನ ಊಟ ರೂ 10, ರಾತ್ರಿ ಊಟ ರೂ.10 ಒಟ್ಟು 25 ಆಗುತ್ತದೆ. 

ಧಾರವಾಡ (ಪ್ಯಾಕೇಜ್ 2): ಪ್ಯಾಕೇಜ್ 2 ರಲ್ಲಿ ಧಾರವಾಡದ ಹೊಸ ಬಸ್ ನಿಲ್ದಾಣ, ಮಿನಿ ವಿಧಾನಸೌಧ, ಹುಬ್ಬಳ್ಳಿಯ ಉಣಕಲ್, ಬೆಂಗೇರಿ ಸಂತೆ ಮೈದಾನದಲ್ಲಿ ಇಂದಿರಾ ಕ್ಯಾಂಟೀನ್‍ಗಳಿಗೆ ಪ್ರತಿದಿನ ಬೆಳಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ನೀಡಲಾಗುತ್ತಿದೆ.

  ಪ್ರತಿ ಒಬ್ಬ ಫಲಾನುಭವಿಗಳಿಗೆ ಬೆಳಿಗಿನ ಉಪಹಾರಕ್ಕೆ ನೀಡುವ ರೂ 5, ಮಧ್ಯಾಹ್ನ ಊಟ ರೂ 10, ರಾತ್ರಿ ಊಟ ರೂ.10 ಒಟ್ಟು 25 ಆಗುತ್ತದೆ. ಅಂದಾಜು ದರ ಪಟ್ಟಿಯ ಪ್ರಕಾರ ಉಪಹಾರಕ್ಕೆ ನೀಡುವ ರೂ 12.4, ಮಧ್ಯಾಹ್ನ ಊಟ ರೂ 24.8, ರಾತ್ರಿ ಊಟ ರೂ. 24.8 ಒಟ್ಟು ರೂ.62 ಆಗುತ್ತದೆ.

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ 9 ಇಂದಿರಾ ಕ್ಯಾಂಟೀನ್‍ನಲ್ಲಿ ವಾರದ ಏಳು ದಿನಗಳಲ್ಲಿ ಬೆಳಗಿನ ಉಪಹಾರವು ಬೆಳಿಗ್ಗೆ 7.30 ರಿಂದ 10 ಗಂಟೆಯವರಿಗೆ, ಮಧ್ಯಾಹ್ನ ಊಟ ಮಧ್ಯಾಹ್ನ 12.30 ರಿಂದ 3 ಗಂಟೆಯವರೆಗೆ ಹಾಗೂ ರಾತ್ರಿ ಊಟ ಸಂಜೆ 6 ರಿಂದ 8 ರವರೆಗೆ ಆಹಾರದ ಒದಗಿಸಲಾಗುತ್ತದೆ. 

ಭಾನುವಾರ: ಬೆಳಗಿನ ಉಪಹಾರ: ಐಟಂ 1 ರಲ್ಲಿ 3 ಇಡ್ಲಿ (150 ಗ್ರಾಮ್ಸ್) ಪುದೀನಾ ಚಟ್ನಿ (100 ಗ್ರಾಮ್ಸ್), ಐಟಂ 2 ರಲ್ಲಿ ಕೇಸರಿ ಬಾತ್, ಖಾರಾ ಬಾತ್ (225 ಗ್ರಾಮ್ಸ್) ಚಟ್ನಿ (100 ಗ್ರಾಮ್ಸ್), 

ಮಧ್ಯಾಹ್ನದ ಊಟ: ಐಟಂ 1 ರಲ್ಲಿ ಅನ್ನ (300 ಗ್ರಾಮ್ಸ್), ಅಲ್ಸಂದೆ ಕಾಳು ಸಾಂಬಾರ್ (150 ಗ್ರಾಮ್ಸ್) ಹಾಗೂ ಕೀರ್ (75 ಎಂ.ಎಲ್), ಐಟಂ 2 ರಲ್ಲಿ ಜೋಳದ ರೋಟ್ಟಿ (2 ಸಂಖ್ಯೆ) ಸೊಪ್ಪು ಪಲ್ಯ (100 ಗ್ರಾಮ್ಸ್) ಕೀರ್ (75 ಎಂ.ಎಲ್)

ರಾತ್ರಿ ಊಟ: ಐಟಂ 1 ರಲ್ಲಿ ಅನ್ನ (300 ಗ್ರಾಮ್ಸ್), ಮೊಳಕೆ ಕಾಳು ಸಾಂಬಾರ್ (150 ಗ್ರಾಮ್ಸ್), ಐಟಂ 2 ರಲ್ಲಿ ಜೋಳದ ರೋಟ್ಟಿ (2 ಸಂಖ್ಯೆ) ಸೊಪ್ಪು ಪಲ್ಯ (100 ಗ್ರಾಮ್ಸ್)

ಸೋಮವಾರ: ಬೆಳಗಿನ ಉಪಹಾರ: ಐಟಂ 1 ರಲ್ಲಿ 3 ಇಡ್ಲಿ (150 ಗ್ರಾಮ್ಸ್) ಸಾಂಬರ್ (100 ಗ್ರಾಮ್ಸ್), ಐಟಂ 2 ರಲ್ಲಿ ಮಂಡಕ್ಕಿ (120 ಗ್ರಾಮ್ಸ್).

ಮಧ್ಯಾಹ್ನದ ಊಟ: ಐಟಂ 1 ರಲ್ಲಿ ಅನ್ನ (300 ಗ್ರಾಮ್ಸ್), ಮೂಲಂಗಿ ಸಾಂಬಾರ್ (150 ಗ್ರಾಮ್ಸ್) ಹಾಗೂ ಮೊಸರನ್ನ(100 ಗ್ರಾಮ್ಸ್), ಐಟಂ 2 ರಲ್ಲಿ ಚಪಾತಿ (2 ಸಂಖ್ಯೆ) ಸಾಗು (40 ಗ್ರಾಮ್ಸ್) ಮೊಸರನ್ನ(100 ಗ್ರಾಮ್ಸ್), 

ರಾತ್ರಿ ಊಟ: ಐಟಂ 1 ರಲ್ಲಿ ಅನ್ನ (300 ಗ್ರಾಮ್ಸ್), ಹಿರೇಕಾಯಿ ಸಾಂಬಾರ್ (150 ಗ್ರಾಮ್ಸ್), ಐಟಂ 2 ರಲ್ಲಿ ಚಪಾತಿ (2 ಸಂಖ್ಯೆ) ಸಾಗು (40 ಗ್ರಾಮ್ಸ್)

ಮಂಗಳವಾರ:

ಬೆಳಗಿನ ಉಪಹಾರ: ಐಟಂ 1 ರಲ್ಲಿ 3 ಇಡ್ಲಿ (150 ಗ್ರಾಮ್ಸ್) ಸಾಂಬರ್ (100 ಗ್ರಾಮ್ಸ್), ಐಟಂ 2 ರಲ್ಲಿ ಖಾರಾ ಬಾತ್ (225ಗ್ರಾಮ್ಸ್) ಚಟ್ನಿ (100)

ಮಧ್ಯಾಹ್ನದ ಊಟ: ಐಟಂ 1 ರಲ್ಲಿ ಅನ್ನ (300 ಗ್ರಾಮ್ಸ್), ಬದನೆಕಾಯಿ (150 ಗ್ರಾಮ್ಸ್) ಹಾಗೂ ರಾಗಿ ಅಂಬಲಿ (75 ಎಂ.ಎಲ್), ಐಟಂ 2 ರಲ್ಲಿ ಜೋಳದ ರೋಟ್ಟಿ (2 ಸಂಖ್ಯೆ) ಸೊಪ್ಪು ಪಲ್ಯ (100 ಗ್ರಾಮ್ಸ್) ರಾಗಿ ಅಂಬಲಿ (75 ಎಂ.ಎಲ್)

ರಾತ್ರಿ ಊಟ: ಐಟಂ 1 ರಲ್ಲಿ ಅನ್ನ (300 ಗ್ರಾಮ್ಸ್), ಕುಂಬಳಕಾಯಿ ಸಾಂಬಾರ್ (150 ಗ್ರಾಮ್ಸ್), ಐಟಂ 2 ರಲ್ಲಿ ಜೋಳದ ರೋಟ್ಟಿ (2 ಸಂಖ್ಯೆ) ಸೊಪ್ಪು ಪಲ್ಯ (100 ಗ್ರಾಮ್ಸ್)

ಬುಧವಾರ: ಬೆಳಗಿನ ಉಪಹಾರ: ಐಟಂ 1 ರಲ್ಲಿ 3 ಇಡ್ಲಿ (150 ಗ್ರಾಮ್ಸ್) ಕರಿಬೇವು ಚಟ್ನಿ (100 ಗ್ರಾಮ್ಸ್), ಐಟಂ 2 ರಲ್ಲಿ ಅವಲಕ್ಕಿ (225 ಗ್ರಾಮ್ಸ್) ಚಟ್ನಿ (100 ಗ್ರಾಮ್ಸ್)

ಮಧ್ಯಾಹ್ನದ ಊಟ: ಐಟಂ 1 ರಲ್ಲಿ ಅನ್ನ (300 ಗ್ರಾಮ್ಸ್), ಬೀನ್ಸ್ ಸಾಂಬಾರ್ (150 ಗ್ರಾಮ್ಸ್) ಹಾಗೂ ಮೊಸರನ್ನ (100 ಗ್ರಾಮ್ಸ್), ಐಟಂ 2 ರಲ್ಲಿ ಚಪಾತಿ (2 ಸಂಖ್ಯೆ) ಸಾಗು (40 ಗ್ರಾಮ್ಸ್) ಮೊಸರನ್ನ(100 ಗ್ರಾಮ್ಸ್), 

ರಾತ್ರಿ ಊಟ: ಐಟಂ 1 ರಲ್ಲಿ ಅನ್ನ (300 ಗ್ರಾಮ್ಸ್), ಮೂಲಂಗಿ ಸಾಂಬಾರ್ (150 ಗ್ರಾಮ್ಸ್), ಐಟಂ 2 ರಲ್ಲಿ ಚಪಾತಿ (2 ಸಂಖ್ಯೆ) ಸಾಗು (40 ಗ್ರಾಮ್ಸ್)

ಗುರುವಾರ: ಬೆಳಗಿನ ಉಪಹಾರ: ಐಟಂ 1 ರಲ್ಲಿ 3 ಇಡ್ಲಿ (150 ಗ್ರಾಮ್ಸ್) ಸಾಂಬರ್ (100 ಗ್ರಾಮ್ಸ್), ಐಟಂ 2 ರಲ್ಲಿ ವೆಜ್ ಪಲಾವ್ (225ಗ್ರಾಮ್ಸ್) ರೈತಾ (100)

ಮಧ್ಯಾಹ್ನದ ಊಟ: ಐಟಂ 1 ರಲ್ಲಿ ಅನ್ನ (300 ಗ್ರಾಮ್ಸ್), ಮೊಳಕೆಕಾಳು ಸಾಂಬಾರ್ (150 ಗ್ರಾಮ್ಸ್) ಹಾಗೂ ಕೀರ್ (75 ಎಂ.ಎಲ್), ಐಟಂ 2 ರಲ್ಲಿ ಜೋಳದ ರೋಟ್ಟಿ (2 ಸಂಖ್ಯೆ) ಸೊಪ್ಪು ಪಲ್ಯ (100 ಗ್ರಾಮ್ಸ್) ಕೀರ್ (75 ಎಂ.ಎಲ್)

ರಾತ್ರಿ ಊಟ: ಐಟಂ 1 ರಲ್ಲಿ ಅನ್ನ (300 ಗ್ರಾಮ್ಸ್), ಬದನೆಕಾಯಿ ಸಾಂಬಾರ್ (150 ಗ್ರಾಮ್ಸ್), ಐಟಂ 2 ರಲ್ಲಿ ಜೋಳದ ರೋಟ್ಟಿ (2 ಸಂಖ್ಯೆ) ಸೊಪ್ಪು ಪಲ್ಯ (100 ಗ್ರಾಮ್ಸ್)

ಶುಕ್ರವಾರ: ಬೆಳಗಿನ ಉಪಹಾರ: ಐಟಂ 1 ರಲ್ಲಿ 3 ಇಡ್ಲಿ (150 ಗ್ರಾಮ್ಸ್) ಸಾಂಬಾರ್ (100 ಗ್ರಾಮ್ಸ್), ಐಟಂ 2 ರಲ್ಲಿ ಚಿತ್ರನ್ನಾ (225 ಗ್ರಾಮ್ಸ್) ಚಟ್ನಿ (100 ಗ್ರಾಮ್ಸ್)

ಮಧ್ಯಾಹ್ನದ ಊಟ: ಐಟಂ 1 ರಲ್ಲಿ ಅನ್ನ (300 ಗ್ರಾಮ್ಸ್), ಹಿರೇಕಾಯಿ ಸಾಂಬಾರ್ (150 ಗ್ರಾಮ್ಸ್) ಹಾಗೂ ರಾಗಿ ಅಂಬಲಿ (75 ಎಂ.ಎಲ್), ಐಟಂ 2 ರಲ್ಲಿ ಚಪಾತಿ (2 ಸಂಖ್ಯೆ) ಸಾಗು (40 ಗ್ರಾಮ್ಸ್) ರಾಗಿ ಅಂಬಲಿ (75 ಎಂ.ಎಲ್),

ರಾತ್ರಿ ಊಟ: ಐಟಂ 1 ರಲ್ಲಿ ಅನ್ನ (300 ಗ್ರಾಮ್ಸ್), ಅಲ್ಸಂದೆಕಾಳು ಸಾಂಬಾರ್ (150 ಗ್ರಾಮ್ಸ್), ಐಟಂ 2 ರಲ್ಲಿ ಚಪಾತಿ (2 ಸಂಖ್ಯೆ) ಸಾಗು (40 ಗ್ರಾಮ್ಸ್)

ಶನಿವಾರ: ಬೆಳಗಿನ ಉಪಹಾರ: ಐಟಂ 1 ರಲ್ಲಿ 3 ಇಡ್ಲಿ (150 ಗ್ರಾಮ್ಸ್) ಸಾಂಬರ್ (100 ಗ್ರಾಮ್ಸ್), ಐಟಂ 2 ರಲ್ಲಿ ಆಲೂಬಾತ್ (225ಗ್ರಾಮ್ಸ್) ಚಟ್ನಿ (100)

ಮಧ್ಯಾಹ್ನದ ಊಟ: ಐಟಂ 1 ರಲ್ಲಿ ಅನ್ನ (300 ಗ್ರಾಮ್ಸ್), ಕುಂಬಳಕಾಯಿ ಸಾಂಬಾರ್ (150 ಗ್ರಾಮ್ಸ್) ಹಾಗೂ ಕೀರ್ (75 ಎಂ.ಎಲ್), ಐಟಂ 2 ರಲ್ಲಿ ಜೋಳದ ರೋಟ್ಟಿ (2 ಸಂಖ್ಯೆ) ಸೊಪ್ಪು ಪಲ್ಯ (100 ಗ್ರಾಮ್ಸ್) ಕೀರ್ (75 ಎಂ.ಎಲ್)

ರಾತ್ರಿ ಊಟ: ಐಟಂ 1 ರಲ್ಲಿ ಅನ್ನ (300 ಗ್ರಾಮ್ಸ್), ನುಗ್ಗೇಕಾಯಿ ಸಾಂಬಾರ್ (150 ಗ್ರಾಮ್ಸ್), ಐಟಂ 2 ರಲ್ಲಿ ಜೋಳದ ರೋಟ್ಟಿ (2 ಸಂಖ್ಯೆ) ಸೊಪ್ಪು ಪಲ್ಯ (100 ಗ್ರಾಮ್ಸ್)

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

ರಾಜಕೀಯ

ಮೋದಿ ಸರ್ಕಾರದ ಮಲತಾಯಿ ಧೋರಣೆ: ಕೇರಳದಲ್ಲಿ ಇಂದು ಬ್ಲ್ಯಾಕ್ ಡೇ..!

ಮೋದಿ ಸರ್ಕಾರದ ಮಲತಾಯಿ ಧೋರಣೆ: ಕೇರಳದಲ್ಲಿ ಇಂದು ಬ್ಲ್ಯಾಕ್ ಡೇ..!

ಪ್ರಧಾನಿ ನರೇಂದ್ರ ಮೋದಿ (Narendra Modi) ನೇತೃತ್ವದ ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಮಿತ್ರಪಕ್ಷ ಅಧಿಕಾರದಲ್ಲಿರುವ ಆಂಧ್ರಪ್ರದೇಶದ ಹೊರತುಪಡಿಸಿ ದಕ್ಷಿಣ ಭಾರತದ ರಾಜ್ಯಗಳಿಗೆ ನಿರ್ಲಕ್ಷ್ಯ ತೋರಿದೆ ಎಂಬ ಆಕ್ರೋಶ ವ್ಯಾಪಕವಾಗಿದೆ.

[ccc_my_favorite_select_button post_id="119088"]
ಕೇಂದ್ರ ಬಜೆಟ್.. ಕಾಂಗ್ರೆಸ್ ಸರ್ಕಾರದ ಟೀಕೆಗಳಿಗೆ ಉತ್ತರ: ಹೆಚ್.ಡಿ. ಕುಮಾರಸ್ವಾಮಿ

ಕೇಂದ್ರ ಬಜೆಟ್.. ಕಾಂಗ್ರೆಸ್ ಸರ್ಕಾರದ ಟೀಕೆಗಳಿಗೆ ಉತ್ತರ: ಹೆಚ್.ಡಿ. ಕುಮಾರಸ್ವಾಮಿ

ಕೇಂದ್ರದ ಹಣಕಾಸು ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ 2026-27ನೇ ಸಾಲಿನ ಆಯವ್ಯಯದ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರ ಮಾಡುತ್ತಿರುವ ಟೀಕೆಗಳಿಗೆ ಉತ್ತರ ಕೊಡಲಾಗಿದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು

[ccc_my_favorite_select_button post_id="119030"]
UGC ನಿಯಮಾವಳಿಗೆ ಸುಪ್ರೀಂ ತಡೆ.. ಕೇಂದ್ರ ಸರ್ಕಾರಕ್ಕೆ ನೋಟಿಸ್

UGC ನಿಯಮಾವಳಿಗೆ ಸುಪ್ರೀಂ ತಡೆ.. ಕೇಂದ್ರ ಸರ್ಕಾರಕ್ಕೆ ನೋಟಿಸ್

ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ತಾರತಮ್ಯವನ್ನು ತಡೆಗಟ್ಟಲು ವಿಶ್ವವಿದ್ಯಾಲಯ ಅನುದಾನ ಆಯೋಗ (UGC) ಇತ್ತೀಚೆಗೆ ಸೂಚಿಸಿದ ನಿಯಮಗಳನ್ನು ಸ್ಥಗಿತಗೊಳಿಸುವಂತೆ ಸುಪ್ರೀಂ ಕೋರ್ಟ್ ಗುರುವಾರ ಆದೇಶಿಸಿದ್ದು, ಕೇಂದ್ರ ಸರ್ಕಾರಕ್ಕೆ ನೋಟೀಸ್ ನೀಡಿದೆ.

[ccc_my_favorite_select_button post_id="118953"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ದೊಡ್ಡಬಳ್ಳಾಪುರದಲ್ಲಿ ಜಿಲ್ಲಾ ಕ್ರೀಡಾಂಗಣ.. 25 ಕೋಟಿ ರೂ. ಮಂಜೂರು: ಕೆ.ಹೆಚ್.ಮುನಿಯಪ್ಪ

ದೊಡ್ಡಬಳ್ಳಾಪುರದಲ್ಲಿ ಜಿಲ್ಲಾ ಕ್ರೀಡಾಂಗಣ.. 25 ಕೋಟಿ ರೂ. ಮಂಜೂರು: ಕೆ.ಹೆಚ್.ಮುನಿಯಪ್ಪ

2025-26 ನೇ ಸಾಲಿನ ಬೆಂಗಳೂರು ಗ್ರಾಮಾಂತರ ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಹೆಚ್.ಮುನಿಯಪ್ಪ (K.H. Muniyappa) ಮಾತನಾಡಿದರು.

[ccc_my_favorite_select_button post_id="118983"]
ಭೀಕರ ಜೋಡಿ ಕೊಲೆ ಪ್ರಕರಣ: ದಂಡುಪಾಳ್ಯ ಗ್ಯಾಂಗ್‌ನ ಮತ್ತೊಬ್ಬನ ಬಂಧನ.!

ಭೀಕರ ಜೋಡಿ ಕೊಲೆ ಪ್ರಕರಣ: ದಂಡುಪಾಳ್ಯ ಗ್ಯಾಂಗ್‌ನ ಮತ್ತೊಬ್ಬನ ಬಂಧನ.!

ಭೀಕರ ಜೋಡಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ದಂಡುಪಾಳ್ಯ ಗ್ಯಾಂಗ್‌ನ (Dandupalya gang) ಚಿಕ್ಕ ಹನುಮಂತಪ್ಪ (ಅಲಿಯಾಸ್ ಕೆ.ಕೃಷ್ಣಪ್ಪ) ಎಂಬಾತನನ್ನು ಆಂಧ್ರಪ್ರದೇಶದ ಮದನಪಳ್ಳೆ ಗ್ರಾಮದಲ್ಲಿ ಬಂಧಿಸಲಾಗಿದೆ.

[ccc_my_favorite_select_button post_id="118778"]
ದೊಡ್ಡಬಳ್ಳಾಪುರ: ಗೂಡ್ಸ್ ವಾಹನ ಡಿಕ್ಕಿ.. ವೃದ್ಧನಿಗೆ ಗಂಭೀರ ಗಾಯ

ದೊಡ್ಡಬಳ್ಳಾಪುರ: ಗೂಡ್ಸ್ ವಾಹನ ಡಿಕ್ಕಿ.. ವೃದ್ಧನಿಗೆ ಗಂಭೀರ ಗಾಯ

ಪೆಟ್ಟಿ ಅಂಗಡಿ ಬಳಿ ಕುಳಿತಿದ್ದ ವೃದ್ಧನಿಗೆ ನಿಯಂತ್ರಣ ತಪ್ಪಿದ ಗೂಡ್ಸ್ ವಾಹನ ಡಿಕ್ಕಿ ಹೊಡೆದ ಪರಿಣಾಮ (Accident) ವೃದ್ಧ ತೀವ್ರವಾಗಿ ಗಾಯಗೊಂಡಿರುವ ಘಟನೆ ತಾಲೂಕಿ‌ನ ****** ಇಂದು ಮಧ್ಯಾಹ್ನ ನಡೆದಿದೆ

[ccc_my_favorite_select_button post_id="119094"]

ಆರೋಗ್ಯ

ಸಿನಿಮಾ

2020 ಹಾಗೂ 2021 ರ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಪ್ರಕಟ

2020 ಹಾಗೂ 2021 ರ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಪ್ರಕಟ

ಕರ್ನಾಟಕ ಸರ್ಕಾರವು ಚಲನಚಿತ್ರ ರಂಗದಲ್ಲಿನ ಜೀವಮಾನ ಸಾಧನೆಗಾಗಿ ನೀಡುವ ಡಾ.ರಾಜಕುಮಾರ್, ಪುಟ್ಟಣ್ಣ ಕಣಗಾಲ್ ಹಾಗೂ ಡಾ.ವಿಷ್ಣುವರ್ಧನ್ ಪ್ರಶಸ್ತಿಗಳನ್ನು ಪ್ರಕಟಿಸಿದೆ (State Film Awards).

[ccc_my_favorite_select_button post_id="118307"]
error: Content is protected !!