ಹರಿತಲೇಖನಿ ದಿನಕ್ಕೊಂದು ಕಥೆ: ಬೇಟೆಗಾರ ಮತ್ತು ಟುವ್ವಿ ಹಕ್ಕಿ

ಒಂದೂರಿನಲ್ಲಿ ಒಬ್ಬ ಬೇಟೆಗಾರನಿದ್ದ. ಅವನು ಕಾಡಿನಲ್ಲಿ ಹಕ್ಕಿಗಳನ್ನು ಹಿಡಿದು ಮಾರಿ ಜೀವನ ಸಾಗಿಸುತ್ತಿದ್ದ. ಪ್ರತಿಸಲ ಪರಿವಾಳ, ಗಿಳಿಗಳು ಮುಂತಾದ ಹಕ್ಕಿಗಳನ್ನು ಹಿಡಿದು ಮಾರಿ ಬೇಜಾರಾಗಿದ್ದ ಅವನೊಮ್ಮೆ ವಿಶೇಷ ಹಕ್ಕಿಯನ್ನು ಹಿಡಿದು ಮಾರಿ ಅಧಿಕ ಹಣ ಸಂಪಾದಿಸಬೇಕೆಂದು ಅಂದುಕೊಂಡ.

ಹಕ್ಕಿ ಹಿಡಿಯಲು ಹೊರಟವನು ವಿಶೇಷವಾದ ಹಕ್ಕಿ ಹಿಡಿಯಬೇಕೆಂಬ ಛಲದಿಂದ ದಟ್ಟ ಕಾಡಿನಲ್ಲಿ ತುಂಬಾ ದೂರದವರೆಗೂ ಹೋದ. ದಾರಿಯಲ್ಲಿ ಅವನಿಗೆ ಪಾರಿವಾಳ, ಗಿಳಿಗಳು ಎದುರಾದರೂ ಅವುಗಳನ್ನು ಹಿಡಿಯದೆ ಕಾಡಿನೊಳಕ್ಕೆ ಹೋಗುತ್ತಲೇ ಇದ್ದನು.

ಆಗ ಅವನಿಗೆ ವಿಶೇಷ ಧ್ವನಿಯಲ್ಲಿ ಕೂಗುತ್ತಿದ್ದ ಹಕ್ಕಿಯ ಕೂಗು ಕೇಳಿಸಿತು. ಅದು ಟುವ್ವಿ ಟುವ್ವಿ ಟುವ್ವಿ ಎಂದು ಇಂಪಾಗಿ ಹಾಡುತ್ತಿತ್ತು. ಒಹ್‌! ಎಂಥ ಮಧುರ ಧ್ವನಿ ಎಂದುಕೊಂಡ ಆತ. ಅವನು ಅಲ್ಲಿಯವರೆಗೂ ಆ ಥರದ ಧ್ವನಿಯ ಹಕ್ಕಿಯನ್ನು ನೋಡಿಯೇ ಇರಲಿಲ್ಲ. ಇದರ ಧ್ವನಿಯೇ ಇಷ್ಟು ದೊಡ್ಡದಿದೆ. ಇನ್ನು ಹಕ್ಕಿ ಇನ್ನೆಷ್ಟು ದೊಡ್ಡದಿರಬೇಡ? ಇವತ್ತು ನನಗೆ ಅದೃಷ್ಟ ಖುಲಾಯಿಸಿತು. ಹೇಗಾದರೂ ಆ ಹಕ್ಕಿಯನ್ನು ಹಿಡಿದು ಹೆಚ್ಚಿನ ಬೆಲೆಗೆ ಮಾರಬೇಕೆಂದು ಆತ ನಿರ್ಧರಿಸಿದ.

ಆ ಧ್ವನಿ ಬಂದ ಕಡೆಯೇ ಬೇಟೆಗಾರ ನಿಧಾನವಾಗಿ ಹೋಗಲಾರಂಭಿಸಿದ. ಹೋಗುತ್ತಾ ಹೋಗುತ್ತಾ ಧ್ವನಿ ಇನ್ನಷ್ಟು ಹತ್ತಿರವಾಗುತ್ತಾ ಬಂತು. ಧ್ವನಿ ಬರುತ್ತಿದ್ದ ದಿಕ್ಕಿನಿಂದ ಹಕ್ಕಿ ಇಷ್ಟೇ ದೂರದಲ್ಲಿರಬಹುದೆಂದು ಆತ ಅಂದಾಜಿಸಿದ್ದ. ಧ್ವನಿಯನ್ನೇ ಹಿಂಬಾಲಿಸಿದವನಿಗೆ ಒಂದು ಪೊದೆ ಕಾಣಿಸಿತು. ಹಕ್ಕಿಯ ಧ್ವನಿ ಅಲ್ಲಿಂದಲೇ ಬರುತ್ತಿತ್ತು. ಸರಿ ಇಲ್ಲೇ ಇದೆ ಹಕ್ಕಿ ಎಂದು ಮೆಲ್ಲಗೆ ಹೋಗಿ ಬಲೆ ಬೀಸಿದ.

ನಿಧಾನವಾಗಿ ಬಲೆ ಎಳೆದುಕೊಂಡವನಿಗೆ ಆಶ್ಚರ್ಯ ಕಾದಿತ್ತು. ದೊಡ್ಡ ಬಲೆಯಲ್ಲಿ ಒಂದು ಸಣ್ಣ ಹಕ್ಕಿ ಸಿಕ್ಕಿತ್ತು. ಅಯ್ಯೋ ನನ್ನ ಬುದ್ಧಿಗೆ ಏನೆನ್ನಬೇಕು, ಧ್ವನಿ ದೊಡ್ಡದಿದ್ದರೆ ಹಕ್ಕಿಯೂ ದೊಡ್ಡದಿರಬಹುದೆಂದು ತಿಳಿದೆನಲ್ಲ. ದೊಡ್ಡ ಧ್ವನಿಯ ಚಿಕ್ಕ ಹಕ್ಕಿ ಹಿಡಿದೆನಲ್ಲಾ. ಇವತ್ತು ನಾನು ಮೋಸ ಹೋದೆ. ಇನ್ನು ಮುಂದೆ ಹೀಗೆ ಧ್ವನಿಯ ಬೆನ್ನತ್ತಿ ಹೋಗಬಾರದೆಂದು ತೀರ್ಮಾನಿಸಿದ.

ಆಗಲೇ ಕತ್ತಲಾಗುತ್ತಾ ಬಂದಿದ್ದರಿಂದ ಬರಿಗೈಯಲ್ಲಿ ಮನೆಗೆ ಹಿಂದಿರುಗಿದ. ಕೇಳಿದ್ದು, ನೋಡಿದ್ದು ಕೆಲವೊಮ್ಮೆ ಸುಳ್ಳಾಗಬಹುದು. ನಿಧಾನವಾಗಿ ಯೋಚಿಸಿದರೆ ನಿಜದ ಅರಿವಾಗುವುದು ಎಂಬುದೇ ಈ ಕಥೆಯ ನೀತಿ.

ಆಧಾರ: ಪ್ರಕಾಶ್‌.ಕೆ.ನಾಡಿಗ್‌

ರಾಜಕೀಯ

ಬಾಶೆಟ್ಟಿಹಳ್ಳಿ ಪ.ಪಂ. ಚುನಾವಣೆ; ರಾಜ್ಯ ಚುನಾವಣೆ ಆಯುಕ್ತ ಭೇಟಿ

ಬಾಶೆಟ್ಟಿಹಳ್ಳಿ ಪ.ಪಂ. ಚುನಾವಣೆ; ರಾಜ್ಯ ಚುನಾವಣೆ ಆಯುಕ್ತ ಭೇಟಿ

ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಚುನಾವಣೆ (Bashettihalli town panchayat election ಬಿರುಸಿನ ಮತದಾನನಡೆಯುತ್ತಿದ್ದು, ರಾಜ್ಯ ಚುನಾವಣೆ ಆಯುಕ್ತ ಜಿ.ಎಸ್. ಸಂಗೇಶ್ರೀ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

[ccc_my_favorite_select_button post_id="117618"]
ಕಲಾವಿದರಾದ ಉಮೇಶ್, ರಾಮಚಂದ್ರಯ್ಯ ಅವರಿಗೆ ದೊಡ್ಡಬಳ್ಳಾಪುರದಲ್ಲಿ ನುಡಿನಮನ

ಕಲಾವಿದರಾದ ಉಮೇಶ್, ರಾಮಚಂದ್ರಯ್ಯ ಅವರಿಗೆ ದೊಡ್ಡಬಳ್ಳಾಪುರದಲ್ಲಿ ನುಡಿನಮನ

ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕನ್ನಡ ಜಾಗೃತ ಪರಿಷತ್ತು ವತಿಯಿಂದ ಚಲನಚಿತ್ರ ಹಾಸ್ಯ ನಟ ಉಮೇಶ್ (Umesh) ಮತ್ತು ಜಾನಪದ ಕಲಾವಿದ ಶ್ಯಾಕಲದೇವನಪುರ ರಾಮಚಂದ್ರಯ್ಯ (Ramachandraiah) ಅವರಿಗೆ ನುಡಿನಮನ ಕಾರ್ಯಕ್ರಮ ನಡೆಯಿತು. 

[ccc_my_favorite_select_button post_id="117539"]
ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಅವರೊಂದಿಗೆ, ಸಂಘಟನೆಯ ಟ್ರಸ್ಟಿಯೂ ಆಗಿರುವ ಸಂಸದ ಡಾ.ಕೆ.ಸುಧಾಕರ್‌ (Dr.K.Sudhakar)

[ccc_my_favorite_select_button post_id="113863"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ದೊಡ್ಡಬಳ್ಳಾಪುರದ ಎಂ.ಆ‌ರ್.ಜಾಹ್ನವಿಗೆ ಬಾಲ ವಿಕಾಸ ಅಕಾಡೆಮಿ ಪ್ರಶಸ್ತಿ

ದೊಡ್ಡಬಳ್ಳಾಪುರದ ಎಂ.ಆ‌ರ್.ಜಾಹ್ನವಿಗೆ ಬಾಲ ವಿಕಾಸ ಅಕಾಡೆಮಿ ಪ್ರಶಸ್ತಿ

ಇಲ್ಲಿನ ನಿಸರ್ಗ ಯೋಗ ಕೇಂದ್ರದ ಯೋಗಪಟು ಎಂ. ಆರ್. ಜಾಹ್ನವಿ (M.R. Jahnavi) ಅವರಿಗೆ ಧಾರವಾಡದ ಕರ್ನಾಟಕ ಬಾಲ ವಿಕಾಸ ಅಕಾಡೆಮಿ ವತಿಯಿಂದ 2023-24ನೇ ಸಾಲಿಗೆ ನೀಡಲಾಗುವ ಅಕಾಡೆಮಿ ಬಾಲ ಗೌರವ ಪ್ರಶಸ್ತಿ ಬಾಲ

[ccc_my_favorite_select_button post_id="117462"]
ದೊಡ್ಡಬಳ್ಳಾಪುರ: ನೀರಿಲ್ಲದ ಪಾಳು ಬಾವಿಗೆ ಬಿದ್ದು ವ್ಯಕ್ತಿ ಸಾವು..!

ದೊಡ್ಡಬಳ್ಳಾಪುರ: ನೀರಿಲ್ಲದ ಪಾಳು ಬಾವಿಗೆ ಬಿದ್ದು ವ್ಯಕ್ತಿ ಸಾವು..!

ಸುಮಾರು 40 ಅಡಿ ಆಳದ ಪಾಳು ಬಾವಿಗೆ (Water well) ಬಿದ್ದು ವ್ಯಕ್ತಿಯೋರ್ವ ಸಾವನಪ್ಪಿರುವ ಘಟನೆ ತಾಲೂಕಿನ ಪುಟ್ಟಯ್ಯನ ಅಗ್ರಹಾರದಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದ್ದು, ಶನಿವಾರ ಬೆಳಕಿಗೆ ಬಂದಿದೆ.

[ccc_my_favorite_select_button post_id="117569"]
ದೊಡ್ಡಬಳ್ಳಾಪುರ; ಕಂಟೇನರ್‌ಗೆ ಡಿಕ್ಕಿ.. ಬೈಕ್ ಸವಾರ ಸಾವು..

ದೊಡ್ಡಬಳ್ಳಾಪುರ; ಕಂಟೇನರ್‌ಗೆ ಡಿಕ್ಕಿ.. ಬೈಕ್ ಸವಾರ ಸಾವು..

ಕಂಟೇನರ್ (container) ಚಾಲಕ ನಿರ್ಲಕ್ಷ್ಯದಿಂದ ಏಕಾಏಕಿ ತಿರುವ ಪಡೆದ ವೇಳೆ ಎದುರು ರಸ್ತೆಯಲ್ಲಿ ಬರುತ್ತಿದ್ದ ದ್ವಿಚಕ್ರ ವಾಹನ‌ ಡಿಕ್ಕಿ ಹೊಡೆದ ಪರಿಣಾಮ (Accident) ಬೈಕ್ (Bike) ಸವಾರ ಸಾವನಪ್ಪಿರುವ ಘಟನೆ ಕನ್ನಮಂಗಲ ಗೇಟ್ ಬಳಿ

[ccc_my_favorite_select_button post_id="117565"]

ಆರೋಗ್ಯ

ಸಿನಿಮಾ

‘ದಿ ಡೆವಿಲ್’ ರಿಲೀಸ್; ದೊಡ್ಡಬಳ್ಳಾಪುರದಲ್ಲಿ ಮುಗಿಲು ಮುಟ್ಟಿದ ದರ್ಶನ್ ಅಭಿಮಾನಿಗಳ ಸಂಭ್ರಮ.!| Video ನೋಡಿ

‘ದಿ ಡೆವಿಲ್’ ರಿಲೀಸ್; ದೊಡ್ಡಬಳ್ಳಾಪುರದಲ್ಲಿ ಮುಗಿಲು ಮುಟ್ಟಿದ ದರ್ಶನ್ ಅಭಿಮಾನಿಗಳ ಸಂಭ್ರಮ.!| Video

ಅಭಿಮಾನಿಗಳ ದಾಸ, ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ (Darshan) ಅಭಿನಯದ ಬಹುನಿರೀಕ್ಷಿತ ಚಿತ್ರ 'ದಿ ಡೆವಿಲ್' ಇಂದು (ಡಿ.11) ರಾಜ್ಯಾದ್ಯಂತ ಅದ್ಧೂರಿಯಾಗಿ ರಿಲೀಸ್ ಆಗಿದ್ದು, ಯಶಸ್ವಿ ಪ್ರದರ್ಶನ ಕಾಣುತ್ತಿದೆ.

[ccc_my_favorite_select_button post_id="117242"]
error: Content is protected !!