ಹಾವೇರಿ: ಬೊಮ್ಮಾಯಿ ಅನ್ನುವ ಹೆಸರಿಗೆ ಒಂದು ತೂಕ ಇದೆ. ಆ ತೂಕ ಬಂದಿರುವುದೇ ಜನರಿಂದ ಎಂದು ಇಬ್ಬನಿ ಭರತ್ ಬೊಮ್ಮಾಯಿ ಅಭಿಪ್ರಾಯ ಪಟ್ಟಿದ್ದಾರೆ.
ಅವರು ಶಿಗ್ಗಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತಮ್ಮ ಪತಿ ಭರತ್ ಬೊಮ್ಮಾಯಿ ಪರ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದರು.
ವರ ನಟ ಡಾಕ್ಟರ್ ರಾಜಕುಮಾರ್ ಅವರು ಜನರಿಂದ ನಾನು ಮೇಲೆ ಬಂದೆ, ಜನರಿದ್ದರೆ ನನ್ನ ಹಿಂದೆ ಹೋರಡಲು ನಾನು ಮುಂದೆ ಎಂದು ಹೇಳಿದ್ದರು. ಅದನ್ನು ನಮ್ಮ ಮಾವ ಬಸವರಾಜ ಬೊಮ್ಮಾಯಿಯವರು ಪಾಲಿಸಿಕೊಂಡು ಬಂದಿದ್ದಾರೆ ಎಂದರು.
ಬಸವರಾಜ ಬೊಮ್ಮಾಯಿ ಹಾಗೂ ಭರತ್ ಬೊಮ್ಮಾಯಿ ಇಬ್ಬರೂ ಒಂದೇ ನಾಣ್ಯದ ಎರಡು ಮುಖಗಳು ಇದ್ದ ಹಾಗೆ, ಅವರು ಇಬ್ಬರೂ ಸೇರಿ ಕ್ಷೇತ್ರದ ಅಭಿವೃದ್ಧಿ ಮಾಡುತ್ತಾರೆ. ನೀವೆಲ್ಲರೂ ಸೇರಿ ಭರತ್ ಬೊಮಾಯಿಯನ್ನು ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಬೇಕು. ಬಿಜೆಪಿಯ ಗುರುತು ಕಮಲ, ಕಮಲದ ಮೇಲೆ ಲಕ್ಷ್ಮೀ ಕುಳಿತಿದ್ದಾಳೆ, ಬಿಜೆಪಿಗೆ ಮತ ಹಾಕಿ ನಿಮಗೂ ಲಕ್ಷ್ಮೀ ಒಲಿಯುತ್ತಾಳೆ ಎಂದು ಹೇಳಿದರು.
ಕಾಂಗ್ರೆಸ್ ನವರಿಗೆ ಕ್ಷೇತ್ರದ ಬಗ್ಗೆ ಹೇಳಲು ಏನೂ ಇಲ್ಲ, ಹೀಗಾಗಿ ಹಾಡು ಹಾಕಿಕೊಂಡು ಬ್ಯಾನರ್ ಕಟ್ಟಿಕೊಂಡು ತಿರುಗಾಡುತ್ತಿದ್ದಾರೆ ಎಂದು ಹೇಳಿದರು.