Donate blood to an elephant

ಹರಿತಲೇಖನಿ ದಿನಕ್ಕೊಂದು ಕಥೆ: ಆನೆಗೆ ರಕ್ತ ದಾನ

Daily story: ಕಾಡಿನಲ್ಲಿ ಗಜರಾಜ, ಹೊಟ್ಟೆಯ ಕೆಳಗೆ ಚೂಪಾದ ಕಲ್ಲು ತರಚಿ ಗಾಯವಾಗಿ ಒಂದು ದೊಡ್ಡ ಆಲದಮರದ ಕೆಳಗೆ ಮಲಗಿತ್ತು. ಗಾಯ ಆದ ಜಾಗದಲ್ಲಿ ರಕ್ತ ಸ್ರಾವ ಆಗುತ್ತಿತ್ತು.

ಅದಕ್ಕೆ ಉಪಚಾರ ಮಾಡಲು ಪಶುವೈದ್ಯರನ್ನು ಕರೆಸಲಾಯಿತು. ಪಶುವೈದ್ಯರು ‘ಆನೆಗೆ ಬಹಳ ರಕ್ತ ಹೋಗಿದೆ. ತಕ್ಷಣ ಪ್ರಾಣಿಗಳು ರಕ್ತ ನೀಡಲು ಮುಂದೆ ಬರಬೇಕು’ ಎಂದರು.

ಗಜರಾಜ ಗಾಯಗೊಂಡ ಸುದ್ದಿ ಕೇಳಿ ಎಲ್ಲಾ ಪ್ರಾಣಿ, ಪಕ್ಷಿ, ಕೀಟಗಳು ಸೇರಿದ್ದವು. ಎಲ್ಲರೂ ತಮ್ಮ ವರ್ಗದಲ್ಲಿ ರಕ್ತ ದಾನ ಮಾಡಲು ಅಭಿಪ್ರಾಯ ಮಂಡಿಸಿದವು.

ಕೀಟಸಂಕುಲದ ಪರವಾಗಿ ಚಿಟ್ಟೆ ತಮಗೆ ಮೊದಲು ರಕ್ತದಾನ ಮಾಡಲು ಅವಕಾಶ ನೀಡಲು ಕೋರಿತು. ಎಲ್ಲಾ ಪ್ರಾಣಿಗಳು ನಗಲು ಪ್ರಾರಂಭಿಸಿದವು. ಬೃಹತ್ ಆಕಾರದ ದೇಹವನ್ನು ಹೊಂದಿರುವ ಗಜರಾಜನಿಗೆ ನಿನ್ನ ರಕ್ತ ಎಲ್ಲಿ ಸಾಲುತ್ತದೆ ಎಂದು ಅಪಹಾಸ್ಯ ಮಾಡಿದವು.

ಪಕ್ಷಿ ಸಂಕುಲದ ಪರವಾಗಿ ಗಿಳಿಯು ರೆಕ್ಕೆಯನ್ನು ರಪ ರಪ ಬಡಿಯುತ್ತಾ ‘ನಾವು ಕೂಡ ಈ ಕಾಡಿನಲ್ಲಿ ಗಜರಾಜನ ಒಡನಾಡಿಗಳು. ಹಾಗಾಗಿ ನಾವೂ ರಕ್ತದಾನ ಮಾಡುತ್ತೇವೆ ಎಂದಿತು. ಮತ್ತೆ ಎಲ್ಲ ಕೆಲವು ಪ್ರಾಣಿಗಳು ನಗಲು ಪ್ರಾರಂಭಿಸಿದವು.

ಗರಿಗಳುಳ್ಳ, ತಕ-ತಕ ಕುಣಿಯುವ, ನಾಟ್ಯ ಪ್ರವೀಣೆ ನವಿಲು ಮತ್ತು ಪ್ರಾಣಿವರ್ಗದಿಂದ ಚಾತುರ್ಯವುಳ್ಳ ನರಿಯು ತನ್ನ ಸೊಂಟವನ್ನು ಸರಿ ಮಾಡಿಕೊಳ್ಳುತ್ತಾ ಎದ್ದು ನಿಂತು, ‘ನಾನು ಎಲ್ಲ ಪ್ರಾಣಿ ವರ್ಗಕ್ಕಿಂತ ಗಾತ್ರದಲ್ಲಿ ಚಿಕ್ಕವರಾದರೂ ಬುದ್ದಿವಂತಿಕೆಯಿಂದ ಶುತ್ರುಗಳ ಎದೆಯಲ್ಲಿ ನಡುಕ ಹುಟ್ಟಿಸಬಲ್ಲೆ. ಹಾಗಾಗಿ ನಾನು ರಕ್ತ ಕೊಡುತ್ತೇನೆ’ ಎಂದು ಜಂಬದ ಮಾತು ಹೇಳಿ ತಕ್ಷಣವೇ ‘ನನ್ನನ್ನು ಯಾರೋ ಕರೆಯುತ್ತಿದ್ದಾರೆ’ ಎಂದು ಹೇಳುತ್ತಾ ಆ ಸ್ಥಳದಿಂದ ಜಾಗ ಖಾಲಿ ಮಾಡಿ ಹೊರಟು ಹೋಯಿತು.

ಹಾಗೆಯೇ ಜೇಡ, ಹದ್ದು, ಕಾಗೆ, ಬಲಿಷ್ಠ ಸಿಂಹ, ಹುಲಿ, ಕಾಡು ಕೋಣ, ಕರಡಿ… ಹೀಗೆ ಇನ್ನೂ ಅನೇಕ ಪ್ರಾಣಿಗಳು ಮುಂದೆ ಬರಲಿಲ್ಲ. ಅದೇ ಸಮಯದಲ್ಲಿ ಅತಿಚಿಕ್ಕ ಇರುವೆಗಳು ದಾರಿಯಲ್ಲಿ ಬರಬರನೇ ಓಡುತ್ತಿದ್ದವು. ಅದನ್ನು ಎಲ್ಲಾ ಪ್ರಾಣಿಗಳು ನೋಡಿದವು.

‘ಎಲ್ಲಿಗೆ ಹೊರಟಿರುವೆ ಇರುವೆ?’ ಎಂದು ಮಾತನಾಡಿಸಿದವು. ಆಗ ಒಂದು ಇರುವೆ ಹೇಳಿತು, ‘ನಮ್ಮ ಗಜರಾಜನಿಗೆ ಚೂಪಾದ ಕಲ್ಲು ತರಚಿ, ಗಾಯವಾಗಿ ರಕ್ತ ಹೋಗುತ್ತಿದೆ. ವೈದ್ಯರು ತಕ್ಷಣ ರಕ್ತ ಕೊಡಿ ಎಂದು ಹೇಳಿದ್ದಾರೆ. ಅದಕ್ಕೆ ನಾವು ರಕ್ತ ಕೊಡಲು ಹೊರಟಿದ್ದೇವೆ’ ಎಂದು ಹೇಳಿ ಅಲ್ಲಿಂದು ಹೊರಟು ವೈದ್ಯರ ಬಳಿ ಹೋಗಿ ‘ನಾನು ಗಜರಾಜನಿಗೆ ರಕ್ತ ಕೊಡುತ್ತನೆ. ನನ್ನ ರಕ್ತ ತಗೆದುಕೊಳ್ಳಿ’ ಎಂದು ಹೇಳಿತು. ಆದರೆ ವೈದ್ಯರು ಇರುವೆಯ ಧೈರ್ಯಕ್ಕೆ ಅಭಿನಂದನೆ ಸಲ್ಲಿಸಿದರು.

ಅಪಹಾಸ್ಯ ಮಾಡದೆ ‘ಗಜರಾಜನ ಗಾಯಕ್ಕೆ ಹೊಲಿಗೆ ಹಾಕಿ ರಕ್ತ ಹೋಗುವುದು ನಿಂತಿದೆ. ಅದಕ್ಕೆ ನಿನ್ನ ರಕ್ತದ ಅಗತ್ಯ ಇಲ್ಲ’ ಎಂದು ಹೇಳಿದರು. ಆಗ ಕೆಲವು ಪ್ರಾಣಿಗಳು ನಾವು ಮಾತನಾಡುವುದು ಬಿಟ್ಟು ಧೈರ್ಯದಿಂದ ರಕ್ತ ಕೊಡಲು ವೈದ್ಯರ ಹತ್ತಿರ ಹೋಗಲೇ ಇಲ್ಲ ಎನ್ನುವ ತಪ್ಪಿನ ಅರಿವು ಮಾಡಿಕೊಂಡವು.

ಇರುವೆಯ ಸಾಹಸ ಮತ್ತು ಧೈರ್ಯ ಮೆಚ್ಚಿ ಎಲ್ಲಾ ಪ್ರಾಣಿಗಳು ಕೊಂಡಾಡಿದವು.

ಕೃಪೆ: ಬಸವರಾಜ.ರಾ.ಅಗಸರ ( ಸಾಮಾಜಿಕ ಜಾಲತಾಣ)

ರಾಜಕೀಯ

ಮೋದಿ ಸರ್ಕಾರದ ಮಲತಾಯಿ ಧೋರಣೆ: ಕೇರಳದಲ್ಲಿ ಇಂದು ಬ್ಲ್ಯಾಕ್ ಡೇ..!

ಮೋದಿ ಸರ್ಕಾರದ ಮಲತಾಯಿ ಧೋರಣೆ: ಕೇರಳದಲ್ಲಿ ಇಂದು ಬ್ಲ್ಯಾಕ್ ಡೇ..!

ಪ್ರಧಾನಿ ನರೇಂದ್ರ ಮೋದಿ (Narendra Modi) ನೇತೃತ್ವದ ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಮಿತ್ರಪಕ್ಷ ಅಧಿಕಾರದಲ್ಲಿರುವ ಆಂಧ್ರಪ್ರದೇಶದ ಹೊರತುಪಡಿಸಿ ದಕ್ಷಿಣ ಭಾರತದ ರಾಜ್ಯಗಳಿಗೆ ನಿರ್ಲಕ್ಷ್ಯ ತೋರಿದೆ ಎಂಬ ಆಕ್ರೋಶ ವ್ಯಾಪಕವಾಗಿದೆ.

[ccc_my_favorite_select_button post_id="119088"]
ಕೇಂದ್ರ ಬಜೆಟ್.. ಕಾಂಗ್ರೆಸ್ ಸರ್ಕಾರದ ಟೀಕೆಗಳಿಗೆ ಉತ್ತರ: ಹೆಚ್.ಡಿ. ಕುಮಾರಸ್ವಾಮಿ

ಕೇಂದ್ರ ಬಜೆಟ್.. ಕಾಂಗ್ರೆಸ್ ಸರ್ಕಾರದ ಟೀಕೆಗಳಿಗೆ ಉತ್ತರ: ಹೆಚ್.ಡಿ. ಕುಮಾರಸ್ವಾಮಿ

ಕೇಂದ್ರದ ಹಣಕಾಸು ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ 2026-27ನೇ ಸಾಲಿನ ಆಯವ್ಯಯದ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರ ಮಾಡುತ್ತಿರುವ ಟೀಕೆಗಳಿಗೆ ಉತ್ತರ ಕೊಡಲಾಗಿದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು

[ccc_my_favorite_select_button post_id="119030"]
UGC ನಿಯಮಾವಳಿಗೆ ಸುಪ್ರೀಂ ತಡೆ.. ಕೇಂದ್ರ ಸರ್ಕಾರಕ್ಕೆ ನೋಟಿಸ್

UGC ನಿಯಮಾವಳಿಗೆ ಸುಪ್ರೀಂ ತಡೆ.. ಕೇಂದ್ರ ಸರ್ಕಾರಕ್ಕೆ ನೋಟಿಸ್

ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ತಾರತಮ್ಯವನ್ನು ತಡೆಗಟ್ಟಲು ವಿಶ್ವವಿದ್ಯಾಲಯ ಅನುದಾನ ಆಯೋಗ (UGC) ಇತ್ತೀಚೆಗೆ ಸೂಚಿಸಿದ ನಿಯಮಗಳನ್ನು ಸ್ಥಗಿತಗೊಳಿಸುವಂತೆ ಸುಪ್ರೀಂ ಕೋರ್ಟ್ ಗುರುವಾರ ಆದೇಶಿಸಿದ್ದು, ಕೇಂದ್ರ ಸರ್ಕಾರಕ್ಕೆ ನೋಟೀಸ್ ನೀಡಿದೆ.

[ccc_my_favorite_select_button post_id="118953"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ದೊಡ್ಡಬಳ್ಳಾಪುರದಲ್ಲಿ ಜಿಲ್ಲಾ ಕ್ರೀಡಾಂಗಣ.. 25 ಕೋಟಿ ರೂ. ಮಂಜೂರು: ಕೆ.ಹೆಚ್.ಮುನಿಯಪ್ಪ

ದೊಡ್ಡಬಳ್ಳಾಪುರದಲ್ಲಿ ಜಿಲ್ಲಾ ಕ್ರೀಡಾಂಗಣ.. 25 ಕೋಟಿ ರೂ. ಮಂಜೂರು: ಕೆ.ಹೆಚ್.ಮುನಿಯಪ್ಪ

2025-26 ನೇ ಸಾಲಿನ ಬೆಂಗಳೂರು ಗ್ರಾಮಾಂತರ ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಹೆಚ್.ಮುನಿಯಪ್ಪ (K.H. Muniyappa) ಮಾತನಾಡಿದರು.

[ccc_my_favorite_select_button post_id="118983"]
ಭೀಕರ ಜೋಡಿ ಕೊಲೆ ಪ್ರಕರಣ: ದಂಡುಪಾಳ್ಯ ಗ್ಯಾಂಗ್‌ನ ಮತ್ತೊಬ್ಬನ ಬಂಧನ.!

ಭೀಕರ ಜೋಡಿ ಕೊಲೆ ಪ್ರಕರಣ: ದಂಡುಪಾಳ್ಯ ಗ್ಯಾಂಗ್‌ನ ಮತ್ತೊಬ್ಬನ ಬಂಧನ.!

ಭೀಕರ ಜೋಡಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ದಂಡುಪಾಳ್ಯ ಗ್ಯಾಂಗ್‌ನ (Dandupalya gang) ಚಿಕ್ಕ ಹನುಮಂತಪ್ಪ (ಅಲಿಯಾಸ್ ಕೆ.ಕೃಷ್ಣಪ್ಪ) ಎಂಬಾತನನ್ನು ಆಂಧ್ರಪ್ರದೇಶದ ಮದನಪಳ್ಳೆ ಗ್ರಾಮದಲ್ಲಿ ಬಂಧಿಸಲಾಗಿದೆ.

[ccc_my_favorite_select_button post_id="118778"]
ದೊಡ್ಡಬಳ್ಳಾಪುರ: ಗೂಡ್ಸ್ ವಾಹನ ಡಿಕ್ಕಿ.. ವೃದ್ಧನಿಗೆ ಗಂಭೀರ ಗಾಯ

ದೊಡ್ಡಬಳ್ಳಾಪುರ: ಗೂಡ್ಸ್ ವಾಹನ ಡಿಕ್ಕಿ.. ವೃದ್ಧನಿಗೆ ಗಂಭೀರ ಗಾಯ

ಪೆಟ್ಟಿ ಅಂಗಡಿ ಬಳಿ ಕುಳಿತಿದ್ದ ವೃದ್ಧನಿಗೆ ನಿಯಂತ್ರಣ ತಪ್ಪಿದ ಗೂಡ್ಸ್ ವಾಹನ ಡಿಕ್ಕಿ ಹೊಡೆದ ಪರಿಣಾಮ (Accident) ವೃದ್ಧ ತೀವ್ರವಾಗಿ ಗಾಯಗೊಂಡಿರುವ ಘಟನೆ ತಾಲೂಕಿ‌ನ ****** ಇಂದು ಮಧ್ಯಾಹ್ನ ನಡೆದಿದೆ

[ccc_my_favorite_select_button post_id="119094"]

ಆರೋಗ್ಯ

ಸಿನಿಮಾ

2020 ಹಾಗೂ 2021 ರ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಪ್ರಕಟ

2020 ಹಾಗೂ 2021 ರ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಪ್ರಕಟ

ಕರ್ನಾಟಕ ಸರ್ಕಾರವು ಚಲನಚಿತ್ರ ರಂಗದಲ್ಲಿನ ಜೀವಮಾನ ಸಾಧನೆಗಾಗಿ ನೀಡುವ ಡಾ.ರಾಜಕುಮಾರ್, ಪುಟ್ಟಣ್ಣ ಕಣಗಾಲ್ ಹಾಗೂ ಡಾ.ವಿಷ್ಣುವರ್ಧನ್ ಪ್ರಶಸ್ತಿಗಳನ್ನು ಪ್ರಕಟಿಸಿದೆ (State Film Awards).

[ccc_my_favorite_select_button post_id="118307"]
error: Content is protected !!