Karnataka BJP is in ICU, Amit Shah should know the reality; Yatnal

ಮಾಧ್ಯಮಗಳಿಗೆ ಮಾನ ಮರ್ಯಾದೆ ಇಲ್ವಾ..?; ಯತ್ನಾಳ್ ಹಿಗ್ಗಾಮುಗ್ಗಾ ವಾಗ್ದಾಳಿ

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಮತ್ತು ಯಡಿಯೂರಪ್ಪ ಬಿಜೆಪಿಗೆ ಅನಿವಾರ್ಯ ಎಂಬಂತೆ ಬೇಕಾಬಿಟ್ಟಿ ವರದಿ ಪ್ರಸಾರ ಮಾಡುತ್ತಿದ್ದಾರೆಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಖಾಸಗಿ ಸುದ್ದಿವಾಹಿನಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಶಿಸ್ತು ಸಮಿತಿಯ ಶೋಕಾಸ್ ನೋಟಿಸ್‌ಗೆ ಉತ್ತರ ಏನು ಕೊಟ್ಟಿದ್ದೀರಿ ಎಂಬ ಸುದ್ದಿವಾಹಿನಿಗಳ ಪ್ರಶ್ನೆಗೆ ಗರಂ ಆದ ಯತ್ನಾಳ್, ನನಗೆ ನೋಟಿಸ್ ಬರುವ ಮುನ್ನವೇ ನಿಮಗೆ ನೋಟಿಸ್ ತಲುಪಿಸಿದ್ದು ವಿಜಯೇಂದ್ರ ಅವನನ್ನೇ ಹೋಗಿ ಕೇಳಿ, ನನ್ನ ಏನ್ ಕೇಳ್ತಿರಿ.

ನನಗೆ ನೋಟಿಸ್ ಬರೋ ಮುಂಚೆ ಖಾಸಗಿ ಸುದ್ದಿ ವಾಹಿನಿಗಳು ವಿಜೃಂಭಿಸಿ ವರದಿ ಮಾಡಿದವು‌, ನನಗೆ ಬಂದಿಲ್ಲ ಬಂದ ನಂತರ ಉತ್ತರ ಕೊಡುವೆ ಎಂದು ಟ್ವಿಟ್ ಮಾಡಿದೆ. ಆದರೆ ನೀವೆ ವರದಿ ಮಾಡ್ತೀರಿ.. ಯತ್ನಾಳ್ ನೋಟಿಸ್ ಗೆ ಕ್ಯಾರೆ ಅನ್ನೋದಿಲ್ಲ, ಇಂತವ್ ಬಹಳ ಬಂದಿದೆ ಅಂತ.. ಇದನ್ನ ನಾ ಎಲ್ ಹೇಳಿದ್ದೀನಿ, ಎಲ್ಲಾದ್ರೂ ಸಾಕ್ಷಿ ಇದೆಯಾ.? ಯಾವ್ ಮಾಧ್ಯಮದವ್ರತ್ರ ಇದೆ ಹೇಳಿ ನೋಡುವ‌.

ನೀವೇ ಸೃಷ್ಟಿ ಮಾಡ್ಕೋತಾ ಇದ್ದೀರಿ, ನಿಮಗೆ ಬೇಕಾಗಿರೋದ್ ವಿಜಯೇಂದ್ರ, ಅವರಪ್ಪ. ಮೀಡಿಯಾದೋರ್ ಏನ್ ಮಾಡುದ್ರು ನನಗೇನು ಆಗೋದಿಲ್ಲ.

ಅಲ್ರಿ ನಿನ್ನೆ ಒಂದ್ ಹೊಡೆದಿದ್ದೀರಿ, ಕ್ಯಾಕರಿಸಿ ಉಗ್ದಿದ್ದಾರೆ ಅಂತ..ಮಾನ ಮರ್ಯಾದೆ ಇದೆಯೇನ್ರಿ ಮಾಧ್ಯಮಗಳಿಗೆ, ಕ್ಯಾಕರಿಸಿ ಉಗ್ದಿರೋದಕ್ಕೆ ಸಾಕ್ಷಿ ಏನ್ ಇದೆ..? ಏನ್ ಉಗುದ್ರು ನನಗೆ ಬರಬೇಕಲ್ವಾ..? ನಿಮ್ಮ ಮೀಡಿಯಾ ದವರಿಗೆ ಮೌಲ್ಯಗಳಿದ್ದರೆ ಬಿಡುಗಡೆ ಮಾಡಿ ಕ್ಯಾಕರಿಸಿ ಉಗ್ದಿರೋದು.

ಸುಮ್ ಸುಮ್ನೆ ನಿಮ್ಮ ಟಿಆರ್‌ಪಿ ಹೆಚ್ಚು ಮಾಡಿಕೊಳ್ಳೋದಕ್ಕೆ, ವಿಜಯೇಂದ್ರ ಅವರಪ್ಪನ ವೈಭವಿಕರ ಮಾಡೋದಕ್ಕೆ, ವಿಜಯೇಂದ್ರ ಅನಿವಾರ್ಯ ಬಿಜೆಪಿ ಅಂತ ಬಿಂಬಿಸೋದಕ್ಕೆ, ಕೆಲವೊಂದು ಮಾಧ್ಯಮಗಳು ವ್ಯವಸ್ಥಿತವಾಗಿ ಮಾಡ್ತಾ ಇರೋದು ನೈತಿಕತೆ ಬಿಟ್ಟು ಈ ಕೆಲಸ ಮಾಡಿ.

ಶಿಸ್ತು ಸಮಿತಿ ಕ್ಯಾಕರಿಸಿ ಉಗ್ದಿದೆ ಅಂತ ಸುದ್ದಿ ಮಾಡ್ತೀರಿ, ಬಾಯಿಗ್ ಬಂದಾಗ್ ಮಾಡ್ತಿರಿ, ಇವತ್ ಪೇಪರಲ್ಲೂ ಬಂದಿದೆ, ನಿಮಗೆ ವಿಜಯೇಂದ್ರ, ವಿಜಯೇಂದ್ರ ಆಗೋಗಿದೆ ಎಂದು ಹರಿಹಾಯ್ದರು.

ಈ ವೇಳೆ ಸುದ್ದಿಗಾರರು ಎಲ್ಲಾ ಮಾಧ್ಯಮಗಳ ಬಗ್ಗೆ ಮಾತಾಡಬೇಡಿ, ಆ ರೀತಿ ಮಾಡಿರುವ ಮಾಧ್ಯಮದ ಬಗ್ಗೆ ಮಾತ್ರ ಮಾತಾಡಿ ಎಂದಿದಕ್ಕೆ, ಯಾರ್ ಮಾಡಿದ್ದಾನೋ ಅವನಿಗೆ ಆಗುತ್ತೆ ಬಿಡಿ, ಅವನಿಗೆ ಗೊತ್ತಿರುತ್ತೆ.

ಯಾವ ಮಾಧ್ಯಮಕ್ಕೆ ಯತ್ನಾಳ್ ಬಗ್ಗೆ ಅಭಿಮಾನ ಇಲ್ವೋ ಬಿಟ್ ಬಿಡಿ, ವಿಜಯೇಂದ್ರನ ಮನೆ ಮುಂದೆ ಭಜನೆ ಮಾಡ್ಕೊಂಡ್ ಕೂತ್ಕೊಳಿ.

ಅಲ್ಲಾ ರೀ ನನಗೆ ಹೈಕಮಾಂಡ್ ನೋಡಿಸ್ ಕೊಟ್ಟಿರುವ ಬಗ್ಗೆ ಅವನಿಗೆ ಹೇಗೆ ಗೊತ್ತಾಯ್ತು ರೀ? ಯಾರು ಈ ವಿಜಯೇಂದ್ರ ಎಂದು ಕುಟುಕಿದರು.

ಶೋಕಾಸ್‌ ನೋಟಿಸ್‌ ಪ್ರತಿ ಮೀಡಿಯಾಗಳಿಗೆ ಯಾರು ಕೊಟ್ಟವರು? ವಿಜಯೇಂದ್ರ ತಾನೇ? ಆ ನೋಟಿಸ್ ಗೆ ಉತ್ತರ ಕೊಟ್ಟಿದ್ದೀನೋ, ಇಲ್ಲವೋ ಅಂತಾ ಅವನ ಬಳಿಯೇ ಕೇಳಿಕೊಳ್ಳಿ ನನಗೆ ಮೇಲ್ ಗೆ ನೋಟಿಸ್‌ ಬರುವ ಮುನ್ನವೇ ಬಹಿರಂಗ ಆಗುತ್ತೆ ಎಂದರೆ ಏನರ್ಥ?

ನನಗೆ ನೋಟಿಸ್‌ ಕೊಟ್ಟಿದ್ದಾರೆ ಅಂದರೆ, ನೋಟೀಸ್‌ಗೆ ಉತ್ತರನೂ ಅವನೇ ಕೊಟ್ಟಿರಬೇಕಲ್ವಾ? ಅದನ್ನು ರಿಲೀಸ್ ಮಾಡಿದ್ದೇ ವಿಜಯೇಂದ್ರ ಎಂದು ಕೆಂಡಾಮಂಡಲರಾದರು.

ಸೋಷಿಯಲ್‌ ಮೀಡಿಯಾದಲ್ಲಿ ಬೇಕಾಬಿಟ್ಟಿ ಮಾತನಾಡಿಸುವುದು. ನಮ್ಮ ಉತ್ತರ ಕರ್ನಾಟಕ ನಮ್ಮ ಭಾಷೆ ಉಪಯೋಗ ಮಾಡಿದರೆ ವಿಜಯೇಂದ್ರ ಅಲ್ಲ ಅವರ ಅಪ್ಪನೂ ಏನೂ ಮಾಡೋಕಾಗಲ್ಲ ಎಂದು ಗುಡುಗಿದರು.

ರಾಜಕೀಯ

ಭಾರತ ಯುದ್ಧವನ್ನು ಕೊನೆಗೊಳಿಸಬಹುದು: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್

ಭಾರತ ಯುದ್ಧವನ್ನು ಕೊನೆಗೊಳಿಸಬಹುದು: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್

ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ (RSS chief Mohan Bhagwat) ಅವರು ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಸಂಘರ್ಷವನ್ನು ಭಾರತವು ಕೊನೆಗೊಳಿಸಬಹುದು ಎಂದು ಶುಕ್ರವಾರ ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಹೆಗಲಿಗೆ ಜವಾಬ್ದಾರಿ ಹೊರೆಸಿದ್ದಾರೆ.

[ccc_my_favorite_select_button post_id="120350"]
ಸಿದ್ದರಾಮಯ್ಯ ನವರ ದಿಕ್ಕೆಟ್ಟ ನೀತಿಗಳು ಸರ್ಕಾರಿ ನೌಕರರನ್ನು ಬೀದಿಗೆ ತಂದಿವೆ;ಆರ್. ಅಶೋಕ

ಸಿದ್ದರಾಮಯ್ಯ ನವರ ದಿಕ್ಕೆಟ್ಟ ನೀತಿಗಳು ಸರ್ಕಾರಿ ನೌಕರರನ್ನು ಬೀದಿಗೆ ತಂದಿವೆ;ಆರ್. ಅಶೋಕ

ತುಘಲಕ್‌ ನೀತಿಗಳಿಂದಲೇ ದುರಾಡಳಿತಕ್ಕೆ ಹೆಸರಾಗಿರುವ ಕಾಂಗ್ರೆಸ್ ಸರ್ಕಾರ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದೆ. ಇದರಿಂದ ಸರ್ಕಾರಿ ನೌಕರರಿಗೆ ಸಂಬಳ ಕೊಡುವುದಕ್ಕೂ ಸರ್ಕಾರದ ಬಳಿ ದುಡ್ಡಿಲ್ಲ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ (R. Ashoka)

[ccc_my_favorite_select_button post_id="120234"]
ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಮಧ್ಯಪ್ರಾಚ್ಯದಲ್ಲಿ ಯುದ್ದ ನಡೆಯುತ್ತಿರುವುದರಿಂದ ಭಾರತದ ಷೇರುಪೇಟೆ (Indian share market ) ತತ್ತರಿಸುತ್ತಿದ್ದು, ಕೋಟ್ಯಾಂತರ ರೂ ನಷ್ಟದ ಜೊತೆಗೆ, ತೈಲ ಬೆಲೆಯೇರಿಕೆಯಾಗುವ ಭೀತಿ ಉಂಟಾಗಿದೆ.

[ccc_my_favorite_select_button post_id="119892"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಗಳ ಆಯೋಜನೆಗೆ ಅನುಮತಿ: ಡಿಸಿಎಂ ಡಿ.ಕೆ. ಶಿವಕುಮಾರ್

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಗಳ ಆಯೋಜನೆಗೆ ಅನುಮತಿ: ಡಿಸಿಎಂ ಡಿ.ಕೆ. ಶಿವಕುಮಾರ್

"ಯುವಕರು ಹಾಗೂ ಕ್ರಿಕೆಟ್ ಕ್ರೀಡೆಯ ಹಿತದೃಷ್ಟಿಯಿಂದ ಇನ್ನುಮುಂದೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ಆಯೋಜನೆಗೆ ಸರ್ಕಾರ ಅನುಮತಿ ನೀಡುತ್ತಿದೆ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (D.K. Shivakumar) ಅವರು ತಿಳಿಸಿದರು.

[ccc_my_favorite_select_button post_id="119372"]
ಪೊಲೀಸ್‌ ಕಸ್ಟಡಿಯಲ್ಲಿದ್ದ ವ್ಯಕ್ತಿ ಸಾವು..!: ಲಾಕಪ್ ಡೆತ್ ಆರೋಪ

ಪೊಲೀಸ್‌ ಕಸ್ಟಡಿಯಲ್ಲಿದ್ದ ವ್ಯಕ್ತಿ ಸಾವು..!: ಲಾಕಪ್ ಡೆತ್ ಆರೋಪ

ಯುಗಾದಿ ಹಬ್ಬದ ದಿನ ಜೂಜಾಟದಲ್ಲಿ ತೊಡಗಿದ್ದವರ ಬಂಧಿಸಿದ್ದ ಪೊಲೀಸರು ಇಕ್ಕಟ್ಟಿಗೆ ಸಿಲುಕಿದ್ದು, ಬಂಧಿತರಲ್ಲಿ ಓರ್ವ ಸಾವನಪ್ಪಿರುವ ಕಾರಣ, ಲಾಕಪ್ ಡೆತ್ (lockup death) ಆರೋಪ ಕೇಳಿಬಂದಿದೆ.

[ccc_my_favorite_select_button post_id="120325"]
ದೊಡ್ಡಬಳ್ಳಾಪುರ: ಬೆಳ್ಳಂಬೆಳಗ್ಗೆ ಕ್ಯಾಂಟರ್..ಕಂಟೈನರ್ ನಡುವೆ ಅಪಘಾತ.. ಬೈಕ್ ಸವಾರನಿಗೆ ಗಂಭೀರ ಪೆಟ್ಟು..!

ದೊಡ್ಡಬಳ್ಳಾಪುರ: ಬೆಳ್ಳಂಬೆಳಗ್ಗೆ ಕ್ಯಾಂಟರ್..ಕಂಟೈನರ್ ನಡುವೆ ಅಪಘಾತ.. ಬೈಕ್ ಸವಾರನಿಗೆ ಗಂಭೀರ ಪೆಟ್ಟು..!

ಬೆಳ್ಳಂಬೆಳಗ್ಗೆ ಕ್ಯಾಂಟರ್ ಹಾಗೂ ಕಂಟೈನರ್ ನಡುವೆ ಡಿಕ್ಕಿ ಸಂಭವಿಸಿ (Accident), ಬೈಕ್ ಸವಾರ ಗಾಯಗೊಂಡಿರುವ ಘಟನೆ ಚನ್ನಾದೇವಿ ಅಗ್ರಹಾರದ ಬಳಿ ಇಂದು ಮುಂಜಾನೆ 5,30 ರ ವೇಳೆಗೆ ಸಂಭವಿಸಿದೆ.

[ccc_my_favorite_select_button post_id="120173"]

ಆರೋಗ್ಯ

ಸಿನಿಮಾ

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ (Actor Darshan) ಅವರಿಗೆ ಇಂದು ಜನ್ಮದಿನದ (Birthday) ಸಡಗರ. 49ನೇ ವರ್ಷಕ್ಕೆ ದರ್ಶನ್ ಕಾಲಿಟ್ಟಿದ್ದಾರೆ.

[ccc_my_favorite_select_button post_id="119431"]
error: Content is protected !!