Karnataka BJP is in ICU, Amit Shah should know the reality; Yatnal

ಮಾಧ್ಯಮಗಳಿಗೆ ಮಾನ ಮರ್ಯಾದೆ ಇಲ್ವಾ..?; ಯತ್ನಾಳ್ ಹಿಗ್ಗಾಮುಗ್ಗಾ ವಾಗ್ದಾಳಿ

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಮತ್ತು ಯಡಿಯೂರಪ್ಪ ಬಿಜೆಪಿಗೆ ಅನಿವಾರ್ಯ ಎಂಬಂತೆ ಬೇಕಾಬಿಟ್ಟಿ ವರದಿ ಪ್ರಸಾರ ಮಾಡುತ್ತಿದ್ದಾರೆಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಖಾಸಗಿ ಸುದ್ದಿವಾಹಿನಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಶಿಸ್ತು ಸಮಿತಿಯ ಶೋಕಾಸ್ ನೋಟಿಸ್‌ಗೆ ಉತ್ತರ ಏನು ಕೊಟ್ಟಿದ್ದೀರಿ ಎಂಬ ಸುದ್ದಿವಾಹಿನಿಗಳ ಪ್ರಶ್ನೆಗೆ ಗರಂ ಆದ ಯತ್ನಾಳ್, ನನಗೆ ನೋಟಿಸ್ ಬರುವ ಮುನ್ನವೇ ನಿಮಗೆ ನೋಟಿಸ್ ತಲುಪಿಸಿದ್ದು ವಿಜಯೇಂದ್ರ ಅವನನ್ನೇ ಹೋಗಿ ಕೇಳಿ, ನನ್ನ ಏನ್ ಕೇಳ್ತಿರಿ.

ನನಗೆ ನೋಟಿಸ್ ಬರೋ ಮುಂಚೆ ಖಾಸಗಿ ಸುದ್ದಿ ವಾಹಿನಿಗಳು ವಿಜೃಂಭಿಸಿ ವರದಿ ಮಾಡಿದವು‌, ನನಗೆ ಬಂದಿಲ್ಲ ಬಂದ ನಂತರ ಉತ್ತರ ಕೊಡುವೆ ಎಂದು ಟ್ವಿಟ್ ಮಾಡಿದೆ. ಆದರೆ ನೀವೆ ವರದಿ ಮಾಡ್ತೀರಿ.. ಯತ್ನಾಳ್ ನೋಟಿಸ್ ಗೆ ಕ್ಯಾರೆ ಅನ್ನೋದಿಲ್ಲ, ಇಂತವ್ ಬಹಳ ಬಂದಿದೆ ಅಂತ.. ಇದನ್ನ ನಾ ಎಲ್ ಹೇಳಿದ್ದೀನಿ, ಎಲ್ಲಾದ್ರೂ ಸಾಕ್ಷಿ ಇದೆಯಾ.? ಯಾವ್ ಮಾಧ್ಯಮದವ್ರತ್ರ ಇದೆ ಹೇಳಿ ನೋಡುವ‌.

ನೀವೇ ಸೃಷ್ಟಿ ಮಾಡ್ಕೋತಾ ಇದ್ದೀರಿ, ನಿಮಗೆ ಬೇಕಾಗಿರೋದ್ ವಿಜಯೇಂದ್ರ, ಅವರಪ್ಪ. ಮೀಡಿಯಾದೋರ್ ಏನ್ ಮಾಡುದ್ರು ನನಗೇನು ಆಗೋದಿಲ್ಲ.

ಅಲ್ರಿ ನಿನ್ನೆ ಒಂದ್ ಹೊಡೆದಿದ್ದೀರಿ, ಕ್ಯಾಕರಿಸಿ ಉಗ್ದಿದ್ದಾರೆ ಅಂತ..ಮಾನ ಮರ್ಯಾದೆ ಇದೆಯೇನ್ರಿ ಮಾಧ್ಯಮಗಳಿಗೆ, ಕ್ಯಾಕರಿಸಿ ಉಗ್ದಿರೋದಕ್ಕೆ ಸಾಕ್ಷಿ ಏನ್ ಇದೆ..? ಏನ್ ಉಗುದ್ರು ನನಗೆ ಬರಬೇಕಲ್ವಾ..? ನಿಮ್ಮ ಮೀಡಿಯಾ ದವರಿಗೆ ಮೌಲ್ಯಗಳಿದ್ದರೆ ಬಿಡುಗಡೆ ಮಾಡಿ ಕ್ಯಾಕರಿಸಿ ಉಗ್ದಿರೋದು.

ಸುಮ್ ಸುಮ್ನೆ ನಿಮ್ಮ ಟಿಆರ್‌ಪಿ ಹೆಚ್ಚು ಮಾಡಿಕೊಳ್ಳೋದಕ್ಕೆ, ವಿಜಯೇಂದ್ರ ಅವರಪ್ಪನ ವೈಭವಿಕರ ಮಾಡೋದಕ್ಕೆ, ವಿಜಯೇಂದ್ರ ಅನಿವಾರ್ಯ ಬಿಜೆಪಿ ಅಂತ ಬಿಂಬಿಸೋದಕ್ಕೆ, ಕೆಲವೊಂದು ಮಾಧ್ಯಮಗಳು ವ್ಯವಸ್ಥಿತವಾಗಿ ಮಾಡ್ತಾ ಇರೋದು ನೈತಿಕತೆ ಬಿಟ್ಟು ಈ ಕೆಲಸ ಮಾಡಿ.

ಶಿಸ್ತು ಸಮಿತಿ ಕ್ಯಾಕರಿಸಿ ಉಗ್ದಿದೆ ಅಂತ ಸುದ್ದಿ ಮಾಡ್ತೀರಿ, ಬಾಯಿಗ್ ಬಂದಾಗ್ ಮಾಡ್ತಿರಿ, ಇವತ್ ಪೇಪರಲ್ಲೂ ಬಂದಿದೆ, ನಿಮಗೆ ವಿಜಯೇಂದ್ರ, ವಿಜಯೇಂದ್ರ ಆಗೋಗಿದೆ ಎಂದು ಹರಿಹಾಯ್ದರು.

ಈ ವೇಳೆ ಸುದ್ದಿಗಾರರು ಎಲ್ಲಾ ಮಾಧ್ಯಮಗಳ ಬಗ್ಗೆ ಮಾತಾಡಬೇಡಿ, ಆ ರೀತಿ ಮಾಡಿರುವ ಮಾಧ್ಯಮದ ಬಗ್ಗೆ ಮಾತ್ರ ಮಾತಾಡಿ ಎಂದಿದಕ್ಕೆ, ಯಾರ್ ಮಾಡಿದ್ದಾನೋ ಅವನಿಗೆ ಆಗುತ್ತೆ ಬಿಡಿ, ಅವನಿಗೆ ಗೊತ್ತಿರುತ್ತೆ.

ಯಾವ ಮಾಧ್ಯಮಕ್ಕೆ ಯತ್ನಾಳ್ ಬಗ್ಗೆ ಅಭಿಮಾನ ಇಲ್ವೋ ಬಿಟ್ ಬಿಡಿ, ವಿಜಯೇಂದ್ರನ ಮನೆ ಮುಂದೆ ಭಜನೆ ಮಾಡ್ಕೊಂಡ್ ಕೂತ್ಕೊಳಿ.

ಅಲ್ಲಾ ರೀ ನನಗೆ ಹೈಕಮಾಂಡ್ ನೋಡಿಸ್ ಕೊಟ್ಟಿರುವ ಬಗ್ಗೆ ಅವನಿಗೆ ಹೇಗೆ ಗೊತ್ತಾಯ್ತು ರೀ? ಯಾರು ಈ ವಿಜಯೇಂದ್ರ ಎಂದು ಕುಟುಕಿದರು.

ಶೋಕಾಸ್‌ ನೋಟಿಸ್‌ ಪ್ರತಿ ಮೀಡಿಯಾಗಳಿಗೆ ಯಾರು ಕೊಟ್ಟವರು? ವಿಜಯೇಂದ್ರ ತಾನೇ? ಆ ನೋಟಿಸ್ ಗೆ ಉತ್ತರ ಕೊಟ್ಟಿದ್ದೀನೋ, ಇಲ್ಲವೋ ಅಂತಾ ಅವನ ಬಳಿಯೇ ಕೇಳಿಕೊಳ್ಳಿ ನನಗೆ ಮೇಲ್ ಗೆ ನೋಟಿಸ್‌ ಬರುವ ಮುನ್ನವೇ ಬಹಿರಂಗ ಆಗುತ್ತೆ ಎಂದರೆ ಏನರ್ಥ?

ನನಗೆ ನೋಟಿಸ್‌ ಕೊಟ್ಟಿದ್ದಾರೆ ಅಂದರೆ, ನೋಟೀಸ್‌ಗೆ ಉತ್ತರನೂ ಅವನೇ ಕೊಟ್ಟಿರಬೇಕಲ್ವಾ? ಅದನ್ನು ರಿಲೀಸ್ ಮಾಡಿದ್ದೇ ವಿಜಯೇಂದ್ರ ಎಂದು ಕೆಂಡಾಮಂಡಲರಾದರು.

ಸೋಷಿಯಲ್‌ ಮೀಡಿಯಾದಲ್ಲಿ ಬೇಕಾಬಿಟ್ಟಿ ಮಾತನಾಡಿಸುವುದು. ನಮ್ಮ ಉತ್ತರ ಕರ್ನಾಟಕ ನಮ್ಮ ಭಾಷೆ ಉಪಯೋಗ ಮಾಡಿದರೆ ವಿಜಯೇಂದ್ರ ಅಲ್ಲ ಅವರ ಅಪ್ಪನೂ ಏನೂ ಮಾಡೋಕಾಗಲ್ಲ ಎಂದು ಗುಡುಗಿದರು.

ರಾಜಕೀಯ

ಶ್ರೀಗಳು, ಜನ, ಕಾರ್ಯಕರ್ತರು ಬಯಸಿದ್ದು ತಪ್ಪು ಎಂದು ಹೇಳಲು ಆಗುವುದಿಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್

ಶ್ರೀಗಳು, ಜನ, ಕಾರ್ಯಕರ್ತರು ಬಯಸಿದ್ದು ತಪ್ಪು ಎಂದು ಹೇಳಲು ಆಗುವುದಿಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್

"ಬಹಿರಂಗವಾಗಿ ನಾನು ಏಕೆ ಮಾತನಾಡಲಿ? ನಾನುಂಟು, ಪಕ್ಷವುಂಟು. ನಾವೆಲ್ಲರೂ ಒಟ್ಟಿಗೆ ಪಕ್ಷದಲ್ಲಿ ಕೆಲಸ ಮಾಡುತ್ತಿದ್ದೇವೆ" ಎಂದು ತಿಳಿಸಿದರು. D.K. Shivakumar

[ccc_my_favorite_select_button post_id="110708"]
ಬಮೂಲ್ ನಿರ್ದೇಶಕ ಬಿ.ಸಿ.ಆನಂದ್ ಕುಮಾರ್‌ ಅವರಿಗೆ ಬಿ.ವೈ.ವಿಜಯೇಂದ್ರ ಸನ್ಮಾನ

ಬಮೂಲ್ ನಿರ್ದೇಶಕ ಬಿ.ಸಿ.ಆನಂದ್ ಕುಮಾರ್‌ ಅವರಿಗೆ ಬಿ.ವೈ.ವಿಜಯೇಂದ್ರ ಸನ್ಮಾನ

ಬಮೂಲ್ (Bamul) ನಿರ್ದೇಶಕ ಸ್ಥಾನಕ್ಕೆ ದೊಡ್ಡಬಳ್ಳಾಪುರದಿಂದ ವಿಜೇತರಾದ ಬಿ.ಸಿ.ಆನಂದ್ ಕುಮಾರ್ (B.C.Ananad Kumar) ಅವರನ್ನು ಬಿ.ವೈ.ವಿಜಯೇಂದ್ರ (B.Y.Vijayendra)

[ccc_my_favorite_select_button post_id="110404"]
ದೇಶವು ವಿಶ್ವದಲ್ಲಿ ನಂ.1 ಆಗಲು ಮಾನವ ಸಂಪನ್ಮೂಲದ ಸದ್ಭಳಕೆ ಆಗಬೇಕು: ಪ್ರಲ್ಹಾದ ಜೋಶಿ

ದೇಶವು ವಿಶ್ವದಲ್ಲಿ ನಂ.1 ಆಗಲು ಮಾನವ ಸಂಪನ್ಮೂಲದ ಸದ್ಭಳಕೆ ಆಗಬೇಕು: ಪ್ರಲ್ಹಾದ ಜೋಶಿ

ವಿಶ್ವದ ಬೇರೆ ಬೇರೆ ದೇಶಗಳಿಗೆ ಹೊಲಿಕೆ ಮಾಡಿದಾಗ ಭಾರತವು ಹೇರಳವಾದ ಮಾನವ ಸಂಪನ್ಮೂಲ ಹೊಂದಿದೆ ಸಚಿವ ಪ್ರಲ್ಹಾದ ಜೋಶಿ (Pralhad Joshi)

[ccc_my_favorite_select_button post_id="108459"]
ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಪ್ರವಾಸದಲ್ಲಿರುವ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ತಮ್ಮ ಪ್ರವಾಸದ ಎರಡನೇ ದಿನವೂ ಇಲ್ಲಿನ ಆಡಳಿತ

[ccc_my_favorite_select_button post_id="110371"]

ಕ್ರೀಡೆ

RCB ವಿಜಯೋತ್ಸವದ ವೇಳೆ ಕಾಲ್ತುಳಿತ; ತುರ್ತು ಅಧಿವೇಶನ ಕರೆಯಲು ಆರ್‌ ಅಶೋಕ ಆಗ್ರಹ

RCB ವಿಜಯೋತ್ಸವದ ವೇಳೆ ಕಾಲ್ತುಳಿತ; ತುರ್ತು ಅಧಿವೇಶನ ಕರೆಯಲು ಆರ್‌ ಅಶೋಕ ಆಗ್ರಹ

RCB ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಾದ ಕಾಲ್ತುಳಿತ ದುರಂತದ ಕುರಿತು ಚರ್ಚಿಸಲು ವಿಧಾನಮಂಡಲದ ತುರ್ತು ಅಧಿವೇಶನ ಕರೆಯುವಂತೆ ಪ್ರತಿಪಕ್ಷ ನಾಯಕ ಆರ್‌.ಅಶೋಕ

[ccc_my_favorite_select_button post_id="109276"]
ಗ್ರಾಪಂ ಅಧ್ಯಕ್ಷೆಗೆ I Love You ಎಂದು PDO ಮೆಸೇಜ್..!; ರಾಜೀನಾಮೆಗೆ ಮುಂದಾದ ಮಹಿಳೆ

ಗ್ರಾಪಂ ಅಧ್ಯಕ್ಷೆಗೆ I Love You ಎಂದು PDO ಮೆಸೇಜ್..!; ರಾಜೀನಾಮೆಗೆ ಮುಂದಾದ

ಗ್ರಾಮಪಂಚಾಯಿತಿ ಅದ್ಯಕ್ಷೆಗೆ ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿ (PDO) ಐ ಲವ್ ಯು (I Love You) ಎಂದು ಕಿರುಕುಳ ಆರೋಪ ಹಿನ್ನೆಲೆ, ಮಹಿಳೆಯೋರ್ವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿರುವ

[ccc_my_favorite_select_button post_id="110702"]
ಬ್ರೇಕ್ ಫೇಲ್: 5 ಬಸ್ಸುಗಳ ನಡುವೆ ಅಪಘಾತ.. 6 ಭಕ್ತರಿಗೆ ಗಂಭೀರ ಪೆಟ್ಟು..!

ಬ್ರೇಕ್ ಫೇಲ್: 5 ಬಸ್ಸುಗಳ ನಡುವೆ ಅಪಘಾತ.. 6 ಭಕ್ತರಿಗೆ ಗಂಭೀರ ಪೆಟ್ಟು..!

ಯಾತ್ರೆಗೆ ತೆರಳುತ್ತಿದ್ದ 5 ಬಸ್ಸುಗಳ ನಡುವೆ ಡಿಕ್ಕಿ ಸಂಭವಿಸಿ (Accident) 6 ಮಂದಿ ಭಕ್ತರು ಗಂಭೀರವಾಗಿ ಗಾಯಗೊಂಡಿರುವ ಘಟನೆ

[ccc_my_favorite_select_button post_id="110578"]

ಆರೋಗ್ಯ

ಸಿನಿಮಾ

ನಟಿ ಶೆಫಾಲಿ ಜರಿವಾಲಾ ಅನುಮಾನಾಸ್ಪದ ಸಾವು..!

ನಟಿ ಶೆಫಾಲಿ ಜರಿವಾಲಾ ಅನುಮಾನಾಸ್ಪದ ಸಾವು..!

ಕಾಂಟಾ ಲಾಗಾ ಪ್ರಸಿದ್ಧ ಹಿಂದಿ ಗೀತೆಯ ನಟಿ ಶೆಫಾಲಿ ಜರಿವಾಲಾ (Shefali Jariwala) ಶುಕ್ರವಾರ ರಾತ್ರಿ ಅನುಮಾನಾಸ್ಪದವಾಗಿ ಸಾವನಪ್ಪಿದ್ದಾರೆ‌.

[ccc_my_favorite_select_button post_id="110113"]
error: Content is protected !!