Daily story; Whose pain is bigger..?

ಹರಿತಲೇಖನಿ ದಿನಕ್ಕೊಂದು ಕಥೆ: ಯಾರ ನೋವು ದೊಡ್ಡದು..?

Daily story; ನಾವು-ನೀವು ಎಲ್ಲರೂ ಬದುಕಿನಲ್ಲಿ ಆಗೊಮ್ಮೆ ಈಗೊಮ್ಮೆ ಯಾವ್ಯಾವುದೋ ನೋವಿನಿಂದ ನರಳಿರಬಹುದಲ್ಲವೇ? ಆ ನೋವಿನ ಪ್ರಮಾಣ ಅಥವಾ ಅವಧಿ ಬೇರೆ ಬೇರೆ ಇರಬಹುದು! ಆದರೆ ನೋವೇ ಇಲ್ಲದವರು ಯಾರಾದರೂ ಇದ್ದಾರೆಯೇ? ಇರಲಿಕ್ಕಿಲ್ಲ ಅಲ್ಲವೇ? ನೋವಿನ ಬಗೆಗಿನ ಕತೆಯೊಂದು ಇಲ್ಲಿದೆ.

ಒಬ್ಬ ರಾಜಕುಮಾರ ಇದ್ದರಂತೆ. ವೈಭವೋಪೇತ ಅರಮನೆಯಲ್ಲಿ ವಾಸ. ಇಂತಹದ್ದು ಬೇಕು ಎಂದು ಬಾಯ್ಬಿಡುವ ಮುಂಚೆಯೇ ಅದನ್ನು ತಂದು ಮುಂದಿಡುವ ತಾಯ್ತಂದೆಯರು, ಕೂತು ಉಂಡರೂ ಮುಗಿಯದಷ್ಟು ಸಿರಿವಂತಿಕೆ.

ಇವೆಲ್ಲ ಇದ್ದರೂ ಆ ರಾಜಕುಮಾರರಿಗೆ ಮನಃಶಾಂತಿ ಇರಲಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಅವರು ಬೌದ್ಧ ಧರ್ಮದ ಪ್ರಭಾವಕ್ಕೆ ಒಳಗಾದರು.
ತಮ್ಮ ಎಲ್ಲಾ ತುಡಿತಗಳಿಗೂ ಅಲ್ಲಿ ಉತ್ತರ ಸಿಗಬಹುದು ಎನಿಸಿತು.

ರಾಜ ಪರಿವಾರವನ್ನು ತೊರೆದರು. ಬೌದ್ಧ ಭಿಕ್ಷು ಆದರು. ಆನಂತರ ಅವರು ಕುಟೀರದಲ್ಲಿ ವಾಸಿಸುತ್ತಿದ್ದರು. ಚಾಪೆಯ ಮೇಲೆ ಮಲಗುತ್ತಿದರು. ಭಿಕ್ಷಾಟನೆಯಿಂದ ಸಿಗುತ್ತಿದ್ದ ಅನ್ನಾಹಾರಗಳ ಸೇವನೆ. ಧ್ಯಾನ-ಅಧ್ಯಯನಗಳಲ್ಲಿ ಮಗ್ನ.

ಮೊದಲಿನ ಸಿರಿವಂತ ಬದುಕಿಗೂ ಈಗಿನ ಬಡತನದ ಬದುಕಿಗೂ ಆಕಾಶ ಭೂಮಿಗಳಷ್ಟು ಅಂತರ. ಆದರೂ ಅವರಿಗೆ ಏನೋ ಸಾಧಿಸುತ್ತೇನೆಂಬ ಹುಮ್ಮಸ್ಸು. ಎಲ್ಲರ ಬದುಕಿನಲ್ಲೂ ಆಗುವಂತೆ ಎಲ್ಲವೂ ಚೆನ್ನಾಗಿದೆ ಎಂದು ಅವರು ಅಂದುಕೊಳ್ಳುತ್ತಿರುವ ಸಮಯದಲ್ಲೇ ಅವರಿಗೊಂದು ಸಮಸ್ಯೆ ಎದುರಾಯಿತು.

ಅವರ ಆರೋಗ್ಯದಲ್ಲಿ ಏರುಪೇರುಂಟಾಯಿತು. ಅವರನ್ನು ಸಂಧಿವಾತ ನೋವು ಕಾಡತೊಡಗಿತು. ಏನೋ ನೋವು ಬಂದಿದೆ.

ಒಂದೆರಡು ದಿನವಿದ್ದು ಹೊರಟು ಹೋಗುತ್ತದೆಂದು ಭಾವಿಸಿದ್ದ ನೋವು ಅವರಿಗೆ ಒಂದೇ ಸಮನೆ ಬಾಧಿಸತೊಡಗಿತು. ನಡೆಯಲಾಗುತ್ತಿರಲಿಲ್ಲ. ಕುಳಿತುಕೊಳ್ಳಲಾಗುತ್ತಿರಲಿಲ್ಲ. ಮಲಗಲೂ ಆಗುತ್ತಿರಲಿಲ್ಲ. ಅಷ್ಟೊಂದು ನೋವು! ಹೀಗಾಗಿ ಅವರು ಅಧ್ಯಯನ, ಧ್ಯಾನ, ಸಂಚಾರಗಳೆಲ್ಲವನ್ನೂ ಬಿಡಬೇಕಾಗಿ ಬಂದಿತು.

ಯಾವ ಔಷಧಿಯೂ ಅವರ ನೋವನ್ನು ಕಡಿಮೆ ಮಾಡಲಿಲ್ಲ. ಯಾರಿಗೆ ಹೇಳಿಕೊಳ್ಳಲೂ ಸಾಧ್ಯವಿಲ್ಲ. ಹೇಳಿಕೊಂಡರೂ ಪ್ರಯೋಜನವಿಲ್ಲ. ಇನ್ನು ಬದುಕುವುದೇ ಬೇಡವೆನ್ನಿಸುವಷ್ಟು ನೋವು ಅವರನ್ನು ಕಾಡುತ್ತಿತ್ತು.
ಈ ಪರಿಯ ನೋವಿನಿಂದ ನರಳುತ್ತಲಿದ್ದ ಅವರು ಒಂದು ದಿನ ಊರಿನಲ್ಲಿ ಸುತ್ತಾಡುವಾಗ ಮಕ್ಕಳು ಆಡುತ್ತಿರುವುದನ್ನು ಕಂಡರು.

ಮಕ್ಕಳೆಲ್ಲ ಕೇಕೆ ಹೊಡೆದು ಆನಂದದಿಂದ ಕಿರುಚಾಡುತ್ತಾ ಆಟವಾಡುತ್ತಿದ್ದರು. ಸುತ್ತ ಮುತ್ತಲಿನ ಪರಿವೆಯೇ ಇಲ್ಲದೆ ಆನಂದದಿಂದ ಆಡುತ್ತಿದ್ದ ಆ ಮಕ್ಕಳನ್ನು ನೋಡಿ ಈ ಬೌದ್ಧ ಭಿಕ್ಷುವಿಗೆ ಆಶ್ಚರ್ಯವಾಯಿತು. ಅವರು ಮತ್ತೂ ಗಮನವಿಟ್ಟು ಆ ಮಕ್ಕಳನ್ನು ನೋಡಿದರು. ಆಗ ಅವರಿಗೆ ಮಕ್ಕಳ ಗುಂಪಿನ ಮಧ್ಯೆ ಆಡುತ್ತಿದ್ದ ಒಬ್ಬ ಪುಟ್ಟ ಹುಡುಗಿಯು ಅವರ ಗಮನ ಸೆಳೆಯಿತು. ಆಕೆಗೆ ಒಂದು ಕಾಲಿರಲಿಲ್ಲ.

ಊರುಗೋಲಿನ ಸಹಾಯದಿಂದ, ಇರುವ ಒಂದೇ ಕಾಲಿನ ಆಸರೆಯಿಂದ, ಆಕೆ ಇತರ ಮಕ್ಕಳೊಂದಿಗೆ ಆಡುತ್ತಿದ್ದಳು. ಕುಣಿಯುತ್ತಿದ್ದಳು. ಕುಪ್ಪಳಿಸುತ್ತಿದ್ದಳು. ಆಕೆಯನ್ನು ನೋಡಿದ ತಕ್ಷಣ ಬೌದ್ಧ ಭಿಕ್ಷುವಿಗೆ ‘ಈ ಪುಟ್ಟ
ಹುಡುಗಿಗೆ ಒಂದು ಕಾಲೇ ಇಲ್ಲ. ಆದರೆ ಅದರ ಪರಿವೆಯೇ ಇಲ್ಲದೆ ಆನಂದದಿಂದ ಆಡುತ್ತಿದ್ದಾಳೆ.

ನನಗೆ ಎರಡೂ ಕಾಲುಗಳಿವೆ, ಕೈಗಳಿವೆ. ಆದರೆ ಸ್ವಲ್ಪ ನೋವಿದೆ. ಆ ನೋವನ್ನು ತಡೆಯಲಾಗದೆ ಬದುಕುವುದೇ ಬೇಡ ಎಂದುಕೊಳ್ಳುತ್ತಿದ್ದೇನಲ್ಲಾ ನಾನೆಂಥ ದಡ್ಡ?’ ಎಂಬ ಯೋಚನೆ ಮೂಡಿತು.

ತಕ್ಷಣ ಅವರ ಮುಖದಲ್ಲಿ ನಗು ಅರಳಿತು. ಆ ಕ್ಷಣವೇ ಅವರ ಆಚಾರ- ವಿಚಾರಗಳು ಬದಲಾದವು. ಆಶ್ಚರ್ಯವೆಂದರೆ ಕೆಲವೇ ದಿನಗಳಲ್ಲಿ ಅವರ ನೋವು ಅವರನ್ನು ಬಾದಿಸುತ್ತಿರಲಿಲ್ಲ! ಎಂದೋ ಓದಿದ್ದ ಈ ಪುಟ್ಟ ಕತೆಯೊಂದಿಗೆ ಮತ್ತೊಂದು ಮಾತೂ ನೆನಪಿಗೆ ಬರುತ್ತಿದೆ.

ಬದುಕಿನಲ್ಲಿ ನೋವುಗಳನ್ನು ಎದುರಿಸಬೇಕಾಗಿ ಬಂದಾಗ ನಮಗಿಂತ ಹೆಚ್ಚು ನೋವಿನಿಂದ ನರಳುತ್ತಿರುವವರನ್ನು ನೋಡಿ, ನಮಗೆ ನಾವೇ ಸಾಂತ್ವನ ಹೇಳಿಕೊಳ್ಳಬೇಕಂತೆ! ಹಾಗೆಯೇ ನಲಿವು ಬಂದಾಗ ನಮಗಿಂತ ಕಡಿಮೆ ನಲಿವಿನಲ್ಲಿಯೂ ನಗು-ನಗುತ್ತಿರುವವರನ್ನು ನೋಡಿ ಸಮಾಧಾನ ಮಾಡಿಕೊಳ್ಳಬೇಕಂತೆ! ಅದಿರಲಿ. ನೋವು-ನಲಿವುಗಳು ದೈಹಿಕವೋ? ಮಾನಸಿಕವೋ? ಯಾರ ನೋವು ದೊಡ್ಡದು? ನಮ್ಮದೋ? ಅವರದ್ದೋ?

ಕೃಪೆ: ಎಸ್.ಷಡಕ್ಷರಿ.

ರಾಜಕೀಯ

ದೇಶದಲ್ಲಿ ಬೆಂಗಳೂರಿಗೆ ಸರಿಸಮನಾದ ನಗರ ಮತ್ತೊಂದಿಲ್ಲ: ನಾರಾ ಲೋಕೇಶ್‌ಗೆ ಡಿಸಿಎಂ ಡಿ.ಕೆ. ಶಿವಕುಮಾರ್ ತಿರುಗೇಟು

ದೇಶದಲ್ಲಿ ಬೆಂಗಳೂರಿಗೆ ಸರಿಸಮನಾದ ನಗರ ಮತ್ತೊಂದಿಲ್ಲ: ನಾರಾ ಲೋಕೇಶ್‌ಗೆ ಡಿಸಿಎಂ ಡಿ.ಕೆ. ಶಿವಕುಮಾರ್

“ಮೂಲಸೌಕರ್ಯ, ಮಾನವ ಸಂಪನ್ಮೂಲ, ನವೋದ್ಯಮ, ಅನ್ವೇಷಣೆ ವಿಚಾರದಲ್ಲಿ ದೇಶದಲ್ಲಿ ಬೆಂಗಳೂರಿಗೆ ಸರಿಸಮನಾದ ನಗರ ಮತ್ತೊಂದಿಲ್ಲ. ಬೇರೆಯವರು ತಮ್ಮನ್ನು ಮಾರ್ಕೆಟಿಂಗ್ ಮಾಡಿಕೊಳ್ಳಲು ಬೆಂಗಳೂರಿನ ಬಗ್ಗೆ ಮಾತನಾಡುತ್ತಾರೆ” ಎಂದು ಆಂಧ್ರ ಐಟಿ ಸಚಿವ ನಾರಾ ಲೋಕೇಶ್ (Nara

[ccc_my_favorite_select_button post_id="115011"]

ಬೆದರಿಕೆ ಕರೆ.. Video ಪೋಸ್ಟ್ ಮಾಡಿದ ಸಚಿವ

[ccc_my_favorite_select_button post_id="115009"]

300 ರೂ. ಊಟ ಕೊಟ್ಟು 300 ಕೋಟಿ

[ccc_my_favorite_select_button post_id="114973"]

Bihar Election; ಬಿಜೆಪಿ ಪಟ್ಟಿ ಬಿಡುಗಡೆ

[ccc_my_favorite_select_button post_id="114963"]
ಪ್ರಾಣಿ ಸಂಪತ್ತು ಕೊಲ್ಲುವವರ ವಿರುದ್ಧ ಕಠಿಣ ಕ್ರಮ ಶತಸಿದ್ಧ: Cm ಸಿದ್ದರಾಮಯ್ಯ ಎಚ್ಚರಿಕೆ

ಪ್ರಾಣಿ ಸಂಪತ್ತು ಕೊಲ್ಲುವವರ ವಿರುದ್ಧ ಕಠಿಣ ಕ್ರಮ ಶತಸಿದ್ಧ: Cm ಸಿದ್ದರಾಮಯ್ಯ ಎಚ್ಚರಿಕೆ

ಪ್ರಾಣಿ ಸಂಪತ್ತು ಇಲ್ಲದೆ ಅರಣ್ಯ ಸಂಪತ್ತಿಗೆ ಮೌಲ್ಯವೇ ಇಲ್ಲ. ಹೀಗಾಗಿ ಪ್ರಾಣಿ ಸಂಪತ್ತನ್ನು ಕೊಲ್ಲುವವರ ವಿರುದ್ಧ ಕಠಿಣ ಕ್ರಮ ಶತಸಿದ್ಧ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Cm Siddaramaiah) ಅವರು ಸ್ಪಷ್ಟ ಎಚ್ಚರಿಕೆ ನೀಡಿದರು.

[ccc_my_favorite_select_button post_id="114725"]
ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಅವರೊಂದಿಗೆ, ಸಂಘಟನೆಯ ಟ್ರಸ್ಟಿಯೂ ಆಗಿರುವ ಸಂಸದ ಡಾ.ಕೆ.ಸುಧಾಕರ್‌ (Dr.K.Sudhakar)

[ccc_my_favorite_select_button post_id="113863"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ಯೋಗ ಚಾಂಪಿಯನ್‌ಶಿಪ್: ವಿ.ವರ ಪ್ರಸಾದ್‌ಗೆ ಚಿನ್ನದ ಪದಕ

ಯೋಗ ಚಾಂಪಿಯನ್‌ಶಿಪ್: ವಿ.ವರ ಪ್ರಸಾದ್‌ಗೆ ಚಿನ್ನದ ಪದಕ

ನಿಸರ್ಗ ಯೋಗ ಕೇಂದ್ರದ ಹಾಗೂ ರಾಜ್ಯ ಬಾಲಕರ ಯೋಗ ತಂಡದ ನಾಯಕ ವಿ.ವರ ಪ್ರಸಾದ್ (V. Vara Prasad) 50ನೇ ಗೋಲ್ಡನ್‌ ಜುಬ್ಲಿ ರಾಷ್ಟ್ರೀಯ ಯೋಗ ಚಾಂಪಿಯನ್‌ಶಿಪ್ (Yoga Championship) ನಲ್ಲಿ ಭಾಗವಹಿಸಿ ಚಿನ್ನದ

[ccc_my_favorite_select_button post_id="114944"]
ದೊಡ್ಡಬಳ್ಳಾಪುರ: ಅರಸಮ್ಮ ದೇವಾಲಯದಲ್ಲಿ ಕಳವು

ದೊಡ್ಡಬಳ್ಳಾಪುರ: ಅರಸಮ್ಮ ದೇವಾಲಯದಲ್ಲಿ ಕಳವು

ಅರಸಮ್ಮ ದೇವಾಲಯದ (Arasamma Temple) ಬಾಗಿಲಿನ ಬೀಗ ಹೊಡೆದು ಹುಂಡಿ ಹಾಗೂ ದೇವರ ಆಭರಣಗಳನ್ನು ಕಳವು ಮಾಡಿರುವ ಪ್ರಕರಣ ಭಾನುವಾರ ರಾತ್ರಿ ನಡೆದಿದೆ.

[ccc_my_favorite_select_button post_id="114950"]
ದೊಡ್ಡಬಳ್ಳಾಪುರದಲ್ಲಿ ಸತತ 3ನೇ ಅಪಘಾತ..! ಬೈಕ್ ಸವಾರನ ಸ್ಥಿತಿ ಗಂಭೀರ

ದೊಡ್ಡಬಳ್ಳಾಪುರದಲ್ಲಿ ಸತತ 3ನೇ ಅಪಘಾತ..! ಬೈಕ್ ಸವಾರನ ಸ್ಥಿತಿ ಗಂಭೀರ

ಮಂಗಳವಾರ ರಾತ್ರಿಯಿಂದ ಬುಧವಾರ ಬೆಳಗ್ಗೆ 9.15 ರ ವರೆಗೆ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಸತತ 3ನೇ ಅಪಘಾತ (Accident) ಪ್ರಕರಣ ವರದಿಯಾಗುತ್ತಿದೆ.

[ccc_my_favorite_select_button post_id="114999"]

ಆರೋಗ್ಯ

ಸಿನಿಮಾ

ದಿನ ಭವಿಷ್ಯ: ಈ ರಾಶಿಯವರಿಂದು ಅತಿಯಾದ ಒತ್ತಡಕ್ಕೆ ಸಿಲುಕದಿರಿ

ದಿನ ಭವಿಷ್ಯ: ಈ ರಾಶಿಯವರಿಂದು ಅತಿಯಾದ ಒತ್ತಡಕ್ಕೆ ಸಿಲುಕದಿರಿ

ರಾಹುಕಾಲ: 07:30AM ರಿಂದ 09:00AM, ಗುಳಿಕಕಾಲ: 01:30PM ರಿಂದ 03:00PM, ಯಮಗಂಡಕಾಲ: 10:30AM ರಿಂದ 12:00PM, Astrology

[ccc_my_favorite_select_button post_id="114397"]
error: Content is protected !!