Daily story: pleasant sleep

ಹರಿತಲೇಖನಿ ದಿನಕ್ಕೊಂದು ಕಥೆ: ಸುಖದಾಯಕ ನಿದ್ರೆಯನ್ನು ಹೇಗೆ ಪಡೆಯಬೇಕು..?

ಉಷಃಕಾಲದಲ್ಲಿ ಎದ್ದು ಸಾಧನೆಯನ್ನು ಮಾಡುವ ಮಹತ್ವವೇನು..?: ಉಷಃಕಾಲ ಅಥವಾ ಪ್ರಾತಃಕಾಲ ಎಂದರೆ ಸೂರ್ಯೋದಯಕ್ಕಿಂತ ಮುಂಚಿನ 05 ಘಳಿಗೆಗಳು. ಉಷಃಕಾಲವು ಸಾತ್ತ್ವಿಕ ಲಹರಿಗಳು ಭೂಮಿಯ ಮೇಲೆ ಬರುವ ಕಾಲವಾಗಿರುತ್ತದೆ.

ಈ ಸಮಯದಲ್ಲಿ ಅನೇಕ ದೇವತೆಗಳು ಗಂಧರೂಪದಲ್ಲಿ ಭೂಮಿಯ ಮೇಲೆ ಬರುತ್ತಿರುತ್ತಾರೆ. ಇಂತಹ ಸಮಯದಲ್ಲಿ ಜೀವವು ಸಾಧನೆಯನ್ನು ಮಾಡದೇ ಮಲಗಿಕೊಂಡಿದ್ದರೆ ಅದು ಅನೇಕ ಕನಿಷ್ಟ ದೇವತೆಗಳ ಕೋಪಕ್ಕೆ ಬಲಿಯಾಗುವ ಸಾಧ್ಯತೆಯಿರುತ್ತದೆ.

ಏಕೆಂದರೆ ಮಲಗಿಕೊಂಡಿರುವುದರಿಂದ ಜೀವದ ದೇಹವು ಪಾತಾಳದಿಂದ ಬರುವ ತೊಂದರೆದಾಯಕ ಸ್ಪಂದನಗಳಿಂದ ತುಂಬಿರುವುದರಿಂದ ಅದು ವಾಯುಮಂಡಲದಲ್ಲಿ ರಜ-ತಮ ಕಣಗಳ ಪ್ರಕ್ಷೇಪಣೆಯನ್ನು ಮಾಡಿ ಸಾತ್ತ್ವಿಕ ಲಹರಿಗಳ ಆಗಮನಕ್ಕೆ ತೊಂದರೆಗಳನ್ನು ತರುವ ಸಾಧ್ಯತೆಯಿರುತ್ತದೆ. ಆದುದರಿಂದ ದೇವತೆಗಳ ಚೈತನ್ಯದ ಲಾಭವನ್ನು ಪಡೆದುಕೊಳ್ಳಲು ಉಷಃಕಾಲದಲ್ಲಿ ಎದ್ದು ಸಾಧನೆಯನ್ನು ಮಾಡಬೇಕು ಎಂದು ಧರ್ಮಶಾಸ್ತ್ರಗಳಲ್ಲಿ ಹೇಳಲಾಗಿದೆ.

ಹಗಲಿನಲ್ಲಿ ಏಕೆ ಮಲಗಬಾರದು

ರಾತ್ರಿಯದಲ್ಲಿ ವಾತಾವರಣದಲ್ಲಿ ಕೆಟ್ಟಶಕ್ತಿಗಳ ಸಂಚಾರವು ಹೆಚ್ಚಾಗಿರುವುದರಿಂದ ಸಾಧನೆಗೆ ಈ ಸಮಯವು ಪ್ರತಿಕೂಲವಾಗಿರುತ್ತದೆ. ಈ ಸಮಯವು ಮಾಂತ್ರಿಕರಿಗೆ (ಮಾಂತ್ರಿಕರು ಎಂದರೆ ಪಾತಾಳದಲ್ಲಿನ ಬಲಾಢ್ಯ ಆಸುರೀ ಶಕ್ತಿಗಳು) ಪೂರಕವಾಗಿರುತ್ತದೆ. ಆದುದರಿಂದ ಎಲ್ಲ ಮಾಂತ್ರಿಕರು ಈ ತಮಕಾಲದಲ್ಲಿ ಸಾಧನೆಯನ್ನು ಮಾಡುತ್ತಾರೆ.

ಇದಕ್ಕೆ ವಿರುದ್ಧವಾಗಿ ಸಾತ್ತ್ವಿಕ ಜೀವಗಳು ಸಾತ್ತ್ವಿಕ ಕಾಲದಲ್ಲಿ (ಹಗಲಿನಲ್ಲಿ) ಸಾಧನೆಯನ್ನು ಮಾಡುತ್ತವೆ. ದಿನದಲ್ಲಿ ಆದಷ್ಟು ಹೆಚ್ಚು ಸಾಧನೆಯನ್ನು ಮಾಡಿ, ಆ ಸಾಧನೆಯ ಬಗ್ಗೆ ರಾತ್ರಿಯ ಸಮಯದಲ್ಲಿ ಚಿಂತನೆಯನ್ನು ಮಾಡುವುದು ಮತ್ತು ದಿನವಿಡೀ ಆದ ತಪ್ಪುಗಳನ್ನು ಸುಧಾರಿಸುವ ಸಂಕಲ್ಪ ಮಾಡಿ, ಮತ್ತೊಮ್ಮೆ ಮರುದಿನ ಪರಿಪೂರ್ಣ ಸಾಧನೆಯನ್ನು ಮಾಡಲು ಪ್ರಯತ್ನಿಸುವುದೇ ಈಶ್ವರನಿಗೆ ಅಪೇಕ್ಷಿತವಾಗಿರುತ್ತದೆ. ಆದುದರಿಂದ ಹಗಲು ಹೊತ್ತಿನಲ್ಲಿ ಮಲಗುವುದನ್ನು ಬಿಡಬೇಕು.

ಸುಖದಾಯಕ ನಿದ್ರೆಯನ್ನು ಹೇಗೆ ಪಡೆಯುವ ವಿಧಾನ

ಮಲಗುವ ಕೋಣೆಯಲ್ಲಿ ಸಂಪೂರ್ಣ ಕತ್ತಲೆಯನ್ನು ಮಾಡಿ ಮಲಗಬೇಡಿರಿ.

ಮಲಗುವಾಗ ಹಾಸಿಗೆಯ ಸುತ್ತಲೂ ದೇವತೆಗಳ ಸಾತ್ತ್ವ್ವಿಕ ನಾಮಪಟ್ಟಿಗಳ ಮಂಡಲವನ್ನು ಹಾಕಿರಿ. (ಇಂತಹ ಸಾತ್ತ್ವ್ವಿಕ ನಾಮಪಟ್ಟಿಗಳು ಸನಾತನದ ಮಾರಾಟ ಕೇಂದ್ರಗಳಲ್ಲಿ ಲಭ್ಯ !)

ದಿನವಿಡೀ ನಮ್ಮಿಂದಾದ ತಪ್ಪುಗಳ/ಅಪರಾಧಗಳ ಬಗ್ಗೆ ದೇವರಲ್ಲಿ ಕ್ಷಮೆ ಯಾಚಿಸಿರಿ.

ಉಪಾಸ್ಯದೇವತೆಗೆ, ‘ನಿನ್ನ ಸಂರಕ್ಷಣಾ-ಕವಚವು ನನ್ನ ಸುತ್ತಲೂ ಸತತವಾಗಿರಲಿ ಮತ್ತು ನಿದ್ರೆಯಲ್ಲಿಯೂ ನನ್ನ ನಾಮಜಪ ಅಖಂಡವಾಗಿ ನಡೆಯಲಿ ಎಂದು ಪ್ರಾರ್ಥನೆ ಮಾಡಿರಿ.

ಪೂರ್ವ-ಪಶ್ಚಿಮ ದಿಕ್ಕಿನಲ್ಲಿ ಮತ್ತು ಆದಷ್ಟು ಎಡಮಗ್ಗುಲಾಗಿ ಮಲಗಿರಿ.

ಅಂಕುಡೊಂಕಾಗಿ, ಅಂಗಾತ, ದಕ್ಷಿಣದಿಕ್ಕಿಗೆ ಕಾಲು ಮಾಡಿ ಹಾಗೂ ದೇವರ ಎದುರು ಅತೀ ಸಮೀಪ ಮಲಗಬೇಡಿರಿ.

ಮಲಗುವಾಗ ಚಿತ್ರಗೀತೆಗಳನ್ನು ಕೇಳಬೇಡಿ, ನಾಮಜಪ ಅಥವಾ ಸಂತರು ಹಾಡಿದ ಭಜನೆಗಳನ್ನು ಕೇಳಿ.

ಕೃಪೆ: ಸನಾತನ ಸಂಸ್ಥೆ.

ರಾಜಕೀಯ

ಅತಿ ಶೀಘ್ರವೇ ಕರ್ನಾಟಕ ಸೇರಿ ಹಲವು ರಾಜ್ಯಾಧ್ಯಕ್ಷರ ಘೋಷಣೆ: ಬಿ.ವೈ.ವಿಜಯೇಂದ್ರ

ಅತಿ ಶೀಘ್ರವೇ ಕರ್ನಾಟಕ ಸೇರಿ ಹಲವು ರಾಜ್ಯಾಧ್ಯಕ್ಷರ ಘೋಷಣೆ: ಬಿ.ವೈ.ವಿಜಯೇಂದ್ರ

ಅತಿ ಶೀಘ್ರವೇ ಕರ್ನಾಟಕವೂ ಒಳಗೊಂಡಂತೆ ಹಲವು ರಾಜ್ಯಾಧ್ಯಕ್ಷರ ಹೆಸರು ಘೋಷಣೆ ಆಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ (B.Y.Vijayendra) ತಿಳಿಸಿದ್ದಾರೆ

[ccc_my_favorite_select_button post_id="109998"]
ಅವರದ್ ಬಿಡ್ರೀ.. ನೀವ್ ಸಿಎಂ ಆಗಿದ್ದಾಗ ವರದಿಗಳನ್ನು ಏನ್ ಮಾಡ್ದೇ ಹೇಳು; ಹೆಚ್‌ಡಿಕೆಗೆ ಹೆಚ್.ಕೆ.ಪಾಟೀಲ್ ತಿರುಗೇಟು

ಅವರದ್ ಬಿಡ್ರೀ.. ನೀವ್ ಸಿಎಂ ಆಗಿದ್ದಾಗ ವರದಿಗಳನ್ನು ಏನ್ ಮಾಡ್ದೇ ಹೇಳು; ಹೆಚ್‌ಡಿಕೆಗೆ

ಈಗ ಅಕ್ರಮ ಗಣಿಗಾರಿಕೆ ಪತ್ರದ ಮಾತಾಡುವ ಹೆಚ್.ಡಿ.ಕುಮಾರಸ್ವಾಮಿ ಸಿಎಂ ಆಗಿದ್ದಾಗ ಅಭಿಷೇಕ ಮಾಡಿಕೊಂಡು ಕುಳಿತಿದ್ರಾ; ಸಚಿವ ಹೆಚ್.ಕೆ.ಪಾಟೀಲ್ (H.K.Patil)

[ccc_my_favorite_select_button post_id="109884"]
ದೇಶವು ವಿಶ್ವದಲ್ಲಿ ನಂ.1 ಆಗಲು ಮಾನವ ಸಂಪನ್ಮೂಲದ ಸದ್ಭಳಕೆ ಆಗಬೇಕು: ಪ್ರಲ್ಹಾದ ಜೋಶಿ

ದೇಶವು ವಿಶ್ವದಲ್ಲಿ ನಂ.1 ಆಗಲು ಮಾನವ ಸಂಪನ್ಮೂಲದ ಸದ್ಭಳಕೆ ಆಗಬೇಕು: ಪ್ರಲ್ಹಾದ ಜೋಶಿ

ವಿಶ್ವದ ಬೇರೆ ಬೇರೆ ದೇಶಗಳಿಗೆ ಹೊಲಿಕೆ ಮಾಡಿದಾಗ ಭಾರತವು ಹೇರಳವಾದ ಮಾನವ ಸಂಪನ್ಮೂಲ ಹೊಂದಿದೆ ಸಚಿವ ಪ್ರಲ್ಹಾದ ಜೋಶಿ (Pralhad Joshi)

[ccc_my_favorite_select_button post_id="108459"]
ಲಾಸ್ ಏಂಜಲೀಸ್‌ ಧಗಧಗ..!| Video ನೋಡಿ

ಲಾಸ್ ಏಂಜಲೀಸ್‌ ಧಗಧಗ..!| Video ನೋಡಿ

ಪ್ರಸ್ತುತ ವರದಿ ಪ್ರಕಾರ, ಡೊನಾಲ್ಡ್ ಟ್ರಂಪ್ ಅವರ ಐಸಿಇ ದಾಳಿಗಳನ್ನು ಧಿಕ್ಕರಿಸಿ ಲಾಸ್ ಏಂಜಲೀಸ್‌ನಲ್ಲಿ ದೊಡ್ಡಮಟ್ಟದದಲ್ಲಿ ಶಾಂತಿಯುತ ಪ್ರತಿಭಟನೆ Los Angeles

[ccc_my_favorite_select_button post_id="108829"]

ಕ್ರೀಡೆ

RCB ವಿಜಯೋತ್ಸವದ ವೇಳೆ ಕಾಲ್ತುಳಿತ; ತುರ್ತು ಅಧಿವೇಶನ ಕರೆಯಲು ಆರ್‌ ಅಶೋಕ ಆಗ್ರಹ

RCB ವಿಜಯೋತ್ಸವದ ವೇಳೆ ಕಾಲ್ತುಳಿತ; ತುರ್ತು ಅಧಿವೇಶನ ಕರೆಯಲು ಆರ್‌ ಅಶೋಕ ಆಗ್ರಹ

RCB ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಾದ ಕಾಲ್ತುಳಿತ ದುರಂತದ ಕುರಿತು ಚರ್ಚಿಸಲು ವಿಧಾನಮಂಡಲದ ತುರ್ತು ಅಧಿವೇಶನ ಕರೆಯುವಂತೆ ಪ್ರತಿಪಕ್ಷ ನಾಯಕ ಆರ್‌.ಅಶೋಕ

[ccc_my_favorite_select_button post_id="109276"]
ಲೈವ್ ಬೆತ್ತಲೆ ವಿಡಿಯೋ ಬ್ಯುಸಿನೆಸ್.. ದಂಪತಿಗಳು ಪೊಲೀಸರ ಅತಿಥಿ

ಲೈವ್ ಬೆತ್ತಲೆ ವಿಡಿಯೋ ಬ್ಯುಸಿನೆಸ್.. ದಂಪತಿಗಳು ಪೊಲೀಸರ ಅತಿಥಿ

HD ಕ್ಯಾಮೆರಾಗಳೊಂದಿಗೆ ದಂಪತಿಗಳು ಲೈವ್ ಬೆತ್ತಲೆ ವಿಡಿಯೋ (Live nude video) ವ್ಯವಹಾರ ನಡೆಸಿ ಪೊಲೀಸರ ಅತಿಥಿಯಾಗಿದ್ದಾರೆ.

[ccc_my_favorite_select_button post_id="109995"]
ಬೆಂ.ಗ್ರಾ.ಜಿಲ್ಲೆಯಲ್ಲಿ ಸಂಭವಿಸಿದ ರಸ್ತೆ ಅಪಘಾತದಿಂದ 297 ಸಾವು..! ಜಿಲ್ಲಾಧಿಕಾರಿ ಕಳವಳ

ಬೆಂ.ಗ್ರಾ.ಜಿಲ್ಲೆಯಲ್ಲಿ ಸಂಭವಿಸಿದ ರಸ್ತೆ ಅಪಘಾತದಿಂದ 297 ಸಾವು..! ಜಿಲ್ಲಾಧಿಕಾರಿ ಕಳವಳ

ಬೆಂ.ಗ್ರಾ.ಜಿಲ್ಲೆ: ಜಿಲ್ಲೆಯಲ್ಲಿ ದಿನೇ ದಿನೇ ರಸ್ತೆ ಅಪಘಾತಗಳು ಹೆಚ್ಚುತ್ತಲೇ ಇವೆ, ರಾಷ್ಟ್ರೀಯ ಹೆದ್ದಾರಿಗಳಲ್ಲಿ ಹೆಚ್ಚು ಅಪಘಾತಗಳು ಸಂಭವಿಸುತ್ತಿದ್ದೆ; ಜಿಲ್ಲಾಧಿಕಾರಿ ಎ.ಬಿ ಬಸವರಾಜು (Deputy Commissioner A.B. Basavaraju)

[ccc_my_favorite_select_button post_id="109939"]

ಆರೋಗ್ಯ

ಸಿನಿಮಾ

CET ಫಲಿತಾಂಶ ಪ್ರಕಟ| ಫಲಿತಾಂಶ ನೋಡಲು ಲಿಂಕ್ ಇಲ್ಲಿದೆ

CET ಫಲಿತಾಂಶ ಪ್ರಕಟ| ಫಲಿತಾಂಶ ನೋಡಲು ಲಿಂಕ್ ಇಲ್ಲಿದೆ

ವಿದ್ಯಾರ್ಥಿಗಳು ಸಾಕಷ್ಟು ಕಾತರದಿಂದ ಕಾಯುತ್ತಿದ್ದ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ 2025ರ (CET) ಫಲಿತಾಂಶ ಪ್ರಕಟಗೊಂಡಿದೆ.

[ccc_my_favorite_select_button post_id="107812"]