ದೊಡ್ಡಬಳ್ಳಾಪುರ (Doddaballapura): ನಗರದ ಗ್ರಾಮಾಂತರ ಪೊಲೀಸ್ ಠಾಣೆ ಮುಂಭಾಗದಲ್ಲಿರುವ ಸೋಮೇಶ್ವರ ದೇವಾಲಯದಲ್ಲಿ ಇಂದು ಸ್ವಯಂಭುವೇಶ್ವರ ಸ್ವಾಮಿಯ ಬ್ರಹ್ಮರಥೋತ್ಸವ ಅದ್ದೂರಿಯಾಗಿ ನೆರವೇರಿತು.
ಮಧ್ಯಾಹ್ನ 12 ರಿಂದ 1ರೊಳಗೆ ಸಲ್ಲುವ ಶುಭ ಅಭಿಜಿನ್ ಮೂಹೂರ್ಥದಲ್ಲಿ ಗಿರಿಜಾ ಸಮೇತ ಸ್ವಯಂಭುವೇಶ್ವರ ಸ್ವಾಮಿ ಬ್ರಹ್ಮರಥೋತ್ಸವವು ನೆರವೇರಿತು.
ನಗರದ ಸೋಮೇಶ್ವರ ದೇವಾಲಯ ಬೀದಿಯಲ್ಲಿ ರಥವು ಸಾಗಿತ್ತು.
ಈ ಉತ್ಸವದಲ್ಲಿ ನಗರದ ದೇಶದ ಪೇಟೆ ವೀರ ಶೈವ ಸಂಘದ ಸದಸ್ಯರು ಸೇರಿದಂತೆ ತಾಲ್ಲೂಕಿನ ಭಕ್ತರು ಉತ್ಸಾಹದಿಂದ ಭಾಗವಹಿಸಿದ್ದರು.
ಇಂದು ಸಂಜೆ ಕಲಶಾರಾಧನೆ, ನಿತ್ಯಹೋಮ, ಬಲಿಪ್ರಧಾನ, ಧೂಳೋತ್ಸವ, ಅಷ್ಟವಧಾನ ಸೇವೆ, ಮಹಾಮಂಗಳಾರತಿ, ತಿರ್ಥಪ್ರಸಾದ ವಿನಿಯೋಗ ನಡೆಯಲಿದೆ.
ಏಪ್ರಿಲ್ 10 ರಿಂದ ಆರಂಭವಾದ ಉತ್ಸವಗಳು 13ರ ಸಂಜೆ ಮಹಾಮಂಗಳಾರತಿಯಿಂದಿಗೆ ಮುಕ್ತಾಯವಾಗಲಿದೆ.