Harithalekhani story a day: horse that has become a slave..!

ಹರಿತಲೇಖನಿ ದಿನಕ್ಕೊಂದು ಕಥೆ: ಗುಲಾಮನಾದ ಕುದುರೆ..!

Harithalekhani story a day: ಅದೊಂದು ದೊಡ್ಡ ಕಾಡು. ಅಲ್ಲೊಂದು ಸರೋವರ, ಸಮೀಪವೇ ಸಾಕಷ್ಟು ಹಸಿರು ಹುಲ್ಲು ಬೆಳೆದಿತ್ತು. ಒಂದು ದಿನ ಅಲೆದಾಡುತ್ತಾ ಬರುತ್ತಿದ್ದ ಕುದುರೆಗೆ ಈ ಮೇವು ಕಂಡಿತು. ಅದು ಮೇವಿನ ರುಚಿ ಕಂಡು, ನೀರು ಕುಡಿದು ಅಲ್ಲೇ ಹಾಯಾಗಿರತೊಡಗಿತು.

ಮತ್ತೆ ಕೆಲವು ದಿನಗಳಲ್ಲಿ ಒಂದು ಕೋಣ ಬಂದು ಸೇರಿಕೊಂಡಿತು ಎರಡು ಗೆಳೆಯರಾದವು. ಸಾಕಷ್ಟು ಆಹಾರ ನೀರು ದೊರೆಯಿತು. ಕೋಣ ಮತ್ತು ಕುದುರೆ ತಿಂದು ಹಾಯಾಗಿ ಓಡಾಡಿಕೊಂಡು ಒಳ್ಳೆಯ ಸ್ನೇಹಿತರಾದವು. ಆದರೆ ಆ ವರ್ಷ ಸಾಕಷ್ಟು ಮಳೆ ಬರಲಿಲ್ಲ..! ಹಸಿರು ಹುಲ್ಲು ಸ್ವಲ್ಪ ಮಾತ್ರ ಬೆಳೆಯಿತು.

ಬೇಸಿಗೆಯಲ್ಲಿ ಅದೂ ಒಣಗಿ, ಸರೋವರವು ಬತ್ತಿತು. ಕುದುರೆ ಕೋಣಗಳಿಗೆ ಆಹಾರ ಸಾಕಾಗಲಿಲ್ಲ. ಇದರಿಂದ ಮನಸ್ತಾಪ ಉಂಟಾಯಿತು. ಒಂದು ದಿನ ಕೋಣ ಮೇವು ಮೇಯುತಿದ್ದಲ್ಲಿಗೆ ಬಂದ ಕುದುರೆ, ಕೋಣ ತಿನ್ನುತ್ತಿದ್ದ ಮೇವಿಗೆ ಬಾಯಿ ಹಾಕಿತು. ಕೋಣನಿಗೆ ಸಿಟ್ಟು ಬಂದು ತನ್ನ ಚೂಪಾದ ಕೋಡಿನಿಂದ ಕುದುರೆಯನ್ನು ತಿವಿಯಿತು. ಕುದುರೆಗೆ ಬಲವಾಗಿ ಪೆಟ್ಟಾಯಿತು. ಇದರಿಂದ ಕೋಣನ ಮೇಲೆ ಸಿಟ್ಟು ಬಂದಿತು.

ಕುದುರೆ ಕೋಣಕ್ಕೆ ಹೆದರಿಕೊಂಡು ಹತ್ತಿರ ಹೋಗಲು ಹೆದರಿತು. ಆಹಾರ ಇಲ್ಲವಾಯಿತು. ಏನಾದರೂ ಮಾಡಿ ಈ ಕೋಣವನ್ನು ಓಡಿಸಿದರೆ ಅಲ್ಲಿ ಬೆಳೆಯುವ ಹುಲ್ಲು ತನಗೆ ಸಾಕಾಗುತ್ತದೆ ಎಂದುಕೊಂಡಿತು. ಕೋಣನನ್ನು ಹೊಡೆದು ಸಾಯಿಸಬೇಕು ಇಲ್ಲ ಬೇರೆ ಕಡೆ ಓಡಿಸಬೇಕು ಏನು ಮಾಡಲಿ ಎಂದು ಯೋಚಿಸಿತು. ಕಾಡಿನ ಸಿಂಹಕ್ಕೆ ಹೇಳಬಹುದು ಆದರೆ ಕಾಡಿನ ಸಿಂಹ ತನ್ನನ್ನೇ ತಿಂದು ಬಿಟ್ಟರೆ, ಯೋಚನೆ ಬಂದ ಕೂಡಲೇ ಬೇಡ ಎಂದುಕೂಂಡು ಮತ್ತೊಂದು ಉಪಾಯ ಹುಡುಕಿತು.

ಕಾಡಿನ ಪ್ರಾಣಿಗಳ ಸಹವಾಸವೇ ಬೇಡ. ಕಾಡಿನ ಆಚೆ ಹಳ್ಳಿಗೆ ಹೋಗಿ ಮನುಷ್ಯನಿಗೆ ಹೇಳಿದರೆ ಈ ಕೆಲಸವಾಗುತ್ತದೆ ಎಂದು ಕೊಂಡು, ಒಂದು ಹಳ್ಳಿಗೆ ಬಂದಿತು.

ಅಲ್ಲೊಬ್ಬ ರೈತ ನೇಗಿಲಿಂದ ಹೊಲ ಉಳುತ್ತಿದ್ದ. ಅವನ ಹತ್ತಿರವಿದ್ದ ಒಂದೇ ಎತ್ತು, ಇನ್ನೊಂದು ಎತ್ತಿಗೆ ಬದಲಾಗಿ ಮಗನನ್ನೇ ನಿಲ್ಲಿಸಿ ಉಳುತ್ತಿದ್ದ. ಕುದುರೆ ನೋಡಿತು. ಈ ಮನುಷ್ಯ ಸರಿಯಾದ ವ್ಯಕ್ತಿ ಎಂದು ಅವನ ಬಳಿ ಬಂತು. ಮನುಷ್ಯ ನೀನು ಬಹಳಷ್ಟು ಕಷ್ಟ ಪಡುತ್ತಿರುವೆ. ನಿನಗೆ ನಾನೊಂದು ಉಪಾಯ ಹೇಳುತ್ತೇನೆ ನನ್ನ ಜೊತೆ ಬಲವಾದ ಕೋಣವಿದೆ. ನೀನು ಅದನ್ನು ತಂದುಕೊಂಡರೆ ಹೊಲ ಉಳಲು ಸಹಾಯವಾಗುತ್ತದೆ. ಆ ಕೋಣವನ್ನು ನಾನೇಕೆ ತರಬೇಕು ಎಂದ.

ಕುದುರೆ ತನ್ನ ಕಥೆಯನ್ನು ಹೇಳಿತು. ಆದರೆ ಆ ಕೋಣವನ್ನು ಅಲ್ಲಿಂದ ಹೇಗೆ ತರುವುದು ಎಂದು ಕೇಳಿದ. ಕುದುರೆ ಉಪಾಯ ಹೇಳಿತು. ಅದಕ್ಕೆ ಒಂದೆರಡು ಪೆಟ್ಟು ಕೊಟ್ಟರೆ ಕೆಳಗೆ ಬೀಳುತ್ತದೆ. ಹಗ್ಗ ಕಟ್ಟಿ ಮನೆಗೆ ತಂದರಾಯಿತು, ಮನುಷ್ಯನಿಗೆ ಮನಸ್ಸಿನಲ್ಲಿ ಸಂತೋಷವೋದರೂ, ತೋರ್ಪಡಿಸಿಕೊಳ್ಳದೆ ಹೌದು ಆ ಕೋಣವನ್ನು ತರುವುದರಿಂದ ನಿನಗೇನು ಅನುಕೂಲ ಎಂದನು. ಆಗ ಕುದುರೆ, ಮೇವಿಗಾಗಿ ಗುದ್ದಾಟವಾಗಿದ್ದು ಕೋಡಿನಿಂದ ಚುಚ್ಚಿದ್ದು, ಎಲ್ಲವನ್ನು ಒದರಿತು.

ರೈತ ಕೇಳಿದ. ನೀನು ಹೇಳುವುದು ಸರಿ. ಆದರೆ ಆ ಕಾಡುಕೋಣ ನನ್ನನ್ನೇ ಗುದ್ದಿದರೆ ನಾನೇನು ಮಾಡಲಿ ಎಂದು ಮನುಷ್ಯ ಕೇಳಿದ. ಕುದುರೆ ಉತ್ಸಾಹದಿಂದ ಹೇಳಿತು. ನೀನು ಚಿಂತಿಸಬೇಡ ನಾನು ನಿನಗೆ ಸಹಾಯ ಮಾಡುವೆ ನನ್ನ ಬೆನ್ನ ಮೇಲೆ ನೀನು ಕೂತರೆ, ನಾನು ಓಡುವೆ ಕೋಣನ ಹತ್ತಿರವೇ ಓಡುತ್ತೇನೆ ನೀನು ಬಾರುಕೋಲಿನಿಂದ ಹೊಡಿ, ನಾನು ಅಲ್ಲಿಂದ ಇಲ್ಲಿಗೆ ಓಡಾಡುತ್ತೇನೆ ಮತ್ತೆರಡು ಹೊಡೆತ ಹೊಡಿ, ಏಟು ತಾಳಲಾರದೆ ಬೀಳುತ್ತದೆ ನೀನು ತಂದು ಕೊಟ್ಟಿಗೆಯಲ್ಲಿ ಕಟ್ಟಿಕೊ ಎಂದಿತು.

ರೈತನಿಗೆ ಅದರ ಸಲಹೆ ಹಿಡಿಸಿತು. ಆದರೆ ಅವನಿಗೆ ಕುದುರೆ ಸವಾರಿ ಗೊತ್ತಿಲ್ಲ.
ಇದನ್ನು ಹೇಳಿದಾಗ ಕುದುರೆ ಇದಕ್ಕೂ ಸಲಹೆ ಹೇಳಿತು. ನೀನು ನನ್ನ ಬೆನ್ನ ಮೇಲೆ ಕೂರು ನಾನು ಹಗುರವಾಗಿ ಓಡುತ್ತೇನೆ ಎರಡು ಮೂರು ದಿನ ಹೋದರೆ ನಿನಗೆ ಚೆನ್ನಾಗಿ ಅಭ್ಯಾಸವಾಗುತ್ತದೆ ಎಂದಿತು. ಆದರೆ ನನಗೆ ಹತ್ತಲು ಬರುವುದಿಲ್ಲ ಎಂದನು.

ಕುದುರೆ ಉಪಾಯ ಹೇಳಿತು ನನ್ನ ಬೆನ್ನಿಗೆ ಜೀನು ಕಟ್ಟಿ, ಮುಖಕ್ಕೆ ಲಗಾಮು ಹಾಕು. ರೈತ ಅದು ಹೇಳಿದಂತೆ ಮಾಡಿದ ಅದರ ಸಹಾಯದಿಂದ ಕುದುರೆ ಬೆನ್ನ ಏರಿ ಕುಳಿತ. ಹೀಗೆ ಒಂದೆರಡು ಸಲ ಓಡಾಡಿದಾಗ ಮನುಷ್ಯನಿಗೆ ಕುದುರೆ ಸವಾರಿ ರೂಡಿಯಾಯಿತು.

ಮತ್ತೊಂದು ದಿನ, ಕೈಯಲ್ಲಿ ಬಾರು ಕೋಲು ಹಿಡಿದು, ಕುದುರೆ ಹತ್ತಿ ಸವಾರಿ ಮಾಡುತ್ತಾ, ಕೋಣನನ್ನು ಹಿಡಿದು ತರಲು ಕಾಡಿನ ಕಡೆ ಹೋದ.‌ ಕೋಣ ಹುಲ್ಲು ಮೇಯುತ್ತಿತ್ತು. ಕುದುರೆ ಅದರ ಹತ್ತಿರವೇ ಓಡಿತು ಮನುಷ್ಯ ಬಾರು ಕೋಲಿನಿಂದ ಚೆನ್ನಾಗಿ ಹೊಡೆದ, ಮತ್ತೆ ಕುದುರೆ ತಿರುಗಿ ಬಂದು ಕೋಣನ ಹತ್ತಿರವೇ ಓಡಿತು ಮತ್ತೆ ಹೊಡೆದ, ಹೀಗೆ ಮನುಷ್ಯ ಎರಡು ಮೂರು ಸಲ ಹೊಡೆಯುತ್ತಿದ್ದಂತೆ ಕೋಣ ನೆಲಕ್ಕೆ ಬಿತ್ತು. ಆಮೇಲೆ ಅದನ್ನು ಹಗ್ಗದಿಂದ ಕಟ್ಟಿ ತನ್ನ ಮನೆಗೆ ತಂದು ಕಟ್ಟಿ ಹಾಕಿದ.

ಕುದುರೆಗೆ ಬಹಳ ಖುಷಿಯಾಯಿತು ಇನ್ನು ಯಾರ ಹಂಗೂ ಇಲ್ಲ ಆ ಹುಲ್ಲು ಪೂರ್ತಿ ನನ್ನದೇ ಎಂದುಕೊಂಡಿತು. ರೈತ ಹತ್ತಿರ ಬಂದ ಕುದುರೆ ಹೇಳಿತು. ಇನ್ನು ನನ್ನ ಜೀನು ಬಿಚ್ಚಿ , ಲಗಾಮು ತೆಗೆದು ನನ್ನನ್ನು ಮುಕ್ತಗೊಳಿಸು ಎಂದಿತು.

ರೈತ ಗಹಗಹ ನಕ್ಕು ಹೇಳಿದ ಇನ್ನು ನಿನ್ನ ಜೀನು ಬಿಚ್ಚುವುದು ಲಗಾಮು ತೆಗೆವ ತಾಪತ್ರಯ ನನಗಿಲ್ಲ. ನೀನು ಮುಕ್ತನಾಗುವ ಯೋಚನೆಯನ್ನು ಮಾಡಬೇಡ ಅದರಲ್ಲೇ ನಿನ್ನ ಸಂತೋಷ ಇರುವುದು. ನಿನ್ನ ಮೇಲೆ ಕುಳಿತು ನಾನು ಎಲ್ಲಾ ಕಡೆ ಸಂಚರಿಸುತ್ತೇನೆ. ಸವಾರಿ ಮಾಡುವುದು ನನಗೆ ಬಹಳ ಖುಷಿಕೊಡುತ್ತಿದೆ ಆಕಾಶಕ್ಕೆ ಹಾರಿದಷ್ಟು ಸಂತೋಷ ಪುಟಿಯುತ್ತೆ ನನ್ನ ಮನೆಯಲ್ಲಿ ಇರು ಎಂದನು…!!

ಇದನ್ನು ಕೇಳಿದ ಕುದುರೆ ಅಯ್ಯೋ ನಾನೆಂಥ ಮೂರ್ಖ, ಕೋಣನನ್ನು ಹಿಡಿದುಕೊಡಲು ಹೋಗಿ ನಾನೇ ಬಂದು ರೈತನ ಗುಲಾಮನಾದೆನಲ್ಲಾ ಬೇಜಾರು ಮಾಡಿಕೊಂಡಿತು.

‘ಮಾಡಬಾರದ್ದನ್ನು ಮಾಡಿದರೆ ಆಗಬಾರದೇ ಆಗುವುದು’

ಕೃಪೆ: ಸಾಮಾಜಿಕ ಜಾಲತಾಣ

ರಾಜಕೀಯ

ಪಕ್ಷ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧ: ಕುಮಾರ ಬಂಗಾರಪ್ಪ

ಪಕ್ಷ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧ: ಕುಮಾರ ಬಂಗಾರಪ್ಪ

ಬಿಜೆಪಿ (BJP) ರಾಜ್ಯ ಘಟಕದ ಅಧ್ಯಕ್ಷರ ನೇಮ ಕದ ವಿಚಾರದಲ್ಲಿ ಪಕ್ಷದ ವರಿಷ್ಠರ ತೀರ್ಮಾನಕ್ಕೆ ನಾವು ನಮ್ಮ ಬದ್ದರಾಗಿದ್ದೇವೆ ಎಂದು ಮಾಜಿ ಸಚಿವ ಕುಮಾರ ಬಂಗಾರಪ್ಪ (Kumara Bangarappa) ಹೇಳಿದರು.

[ccc_my_favorite_select_button post_id="116983"]
ಕರ್ನಾಟಕದ 9 ಜಿಲ್ಲೆ ಒಳಗೊಂಡ ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಕಾರ್ಯಕ್ರಮ (NICDP): ಗೋಯೆಲ್‌ ಜೊತೆ ಕೇಂದ್ರ ಸಚಿವ ಹೆಚ್.ಡಿ.ಕೆ ಮಹತ್ವದ ಚರ್ಚೆ

ಕರ್ನಾಟಕದ 9 ಜಿಲ್ಲೆ ಒಳಗೊಂಡ ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಕಾರ್ಯಕ್ರಮ (NICDP):

ಕರ್ನಾಟಕದ ಕೈಗಾರಿಕಾಭಿವೃದ್ದಿಗೆ ಪರಿವರ್ತನಾತ್ಮಕ ಹೆಜ್ಜೆ ಎಂದೇ ನಂಬಲಾಗಿರುವ 9 ಜಿಲ್ಲೆಗಳನ್ನು ಒಳಗೊಂಡ ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಯೋಜನೆಯನ್ನು (NICDP- National Industrial Corridor Development Programme) ಅನುಷ್ಠಾನಗೊಳಿಸಬೇಕೆಂದು ಕೋರಿ ಕೇಂದ್ರದ ಬೃಹತ್‌ ಕೈಗಾರಿಕೆ

[ccc_my_favorite_select_button post_id="116156"]
ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಅವರೊಂದಿಗೆ, ಸಂಘಟನೆಯ ಟ್ರಸ್ಟಿಯೂ ಆಗಿರುವ ಸಂಸದ ಡಾ.ಕೆ.ಸುಧಾಕರ್‌ (Dr.K.Sudhakar)

[ccc_my_favorite_select_button post_id="113863"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ವಿಶ್ವಕಪ್ ವಿಜೇತ ಅಂಧ ಮಹಿಳಾ ಕ್ರಿಕೆಟ್ ತಂಡಕ್ಕೆ ನಗದು ಬಹುಮಾನ, ಸರ್ಕಾರಿ ಉದ್ಯೋಗ ಘೋಷಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

ವಿಶ್ವಕಪ್ ವಿಜೇತ ಅಂಧ ಮಹಿಳಾ ಕ್ರಿಕೆಟ್ ತಂಡಕ್ಕೆ ನಗದು ಬಹುಮಾನ, ಸರ್ಕಾರಿ ಉದ್ಯೋಗ

ವಿಶ್ವಕಪ್ ವಿಜೇತ ಭಾರತದ ಅಂಧ ಮಹಿಳಾ ಕ್ರಿಕೆಟ್ ತಂಡಕ್ಕೆ ಶುಭ ಹಾರೈಸಿ ಅಭಿನಂದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ (Cmsiddaramaiah) ಕರ್ನಾಟಕದ ಕ್ರಿಕೆಟ್ ಪಟುಗಳಿಗೆ ತಲಾ ಹತ್ತು ಲಕ್ಷ ನಗದು ಬಹುಮಾನದ ಜೊತೆಗೆ ಸರ್ಕಾರಿ ಉದ್ಯೋಗ ಘೋಷಿಸಿದರು.

[ccc_my_favorite_select_button post_id="116681"]
ಕೆಲವೇ ಗಂಟೆಗಳಲ್ಲಿ ಸರಗಳ್ಳನ ಬಂಧನ.. ಸರ್ಕಲ್ ಇನ್ಸ್ಪೆಕ್ಟರ್ ಬಿ.ಕೆ.ಪಾಟೀಲ್ ತಂಡಕ್ಕೆ ವ್ಯಾಪಕ ಪ್ರಶಂಸೆ

ಕೆಲವೇ ಗಂಟೆಗಳಲ್ಲಿ ಸರಗಳ್ಳನ ಬಂಧನ.. ಸರ್ಕಲ್ ಇನ್ಸ್ಪೆಕ್ಟರ್ ಬಿ.ಕೆ.ಪಾಟೀಲ್ ತಂಡಕ್ಕೆ ವ್ಯಾಪಕ ಪ್ರಶಂಸೆ

ಮಹಿಳೆಯ ಮಾಂಗಲ್ಯ ಸರವನ್ನು ಕಿತ್ತು ಬೈಕ್‌ನಲ್ಲಿ ಪರಾರಿಯಾಗಿರುವ ಘಟನೆ ನಡೆದು ಕೆಲವೇ ಗಂಟೆಯೊಳಗೆ ಆರೋಪಿಯನ್ನು (Chain snatcher) ಬಂಧಿಸುವಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ಬಿ.ಕೆ.ಪಾಟೀಲ್ ನೇತೃತ್ವದ

[ccc_my_favorite_select_button post_id="116820"]
ದೊಡ್ಡಬಳ್ಳಾಪುರ: ನಿಂತಿದ್ದ ಬಸ್‌ಗೆ ಆಟೋ ಡಿಕ್ಕಿ.. ಮೂವರಿಗೆ ಪೆಟ್ಟು

ದೊಡ್ಡಬಳ್ಳಾಪುರ: ನಿಂತಿದ್ದ ಬಸ್‌ಗೆ ಆಟೋ ಡಿಕ್ಕಿ.. ಮೂವರಿಗೆ ಪೆಟ್ಟು

ಖಾಸಗಿ ಬಸ್ಗೆ ಹಿಂದಿನಿಂದ ಪ್ಯಾಸೆಂಜರ್ ಆಟೋ ಡಿಕ್ಕಿ ಹೊಡೆದ ಪರಿಣಾಮ (Accident) ಆಟೋದಲ್ಲಿ ಪ್ರಯಾಣಿಸುತ್ತಿದ್ದ ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಇಂದು ಸಂಜೆ ತಾಲೂಕಿನ ಕಂಟನಕುಂಟೆ ಸಮೀಪ ಸಂಭವಿಸಿದೆ.

[ccc_my_favorite_select_button post_id="116950"]

ಆರೋಗ್ಯ

ಸಿನಿಮಾ

ದರ್ಶನ್ ಸೆಲೆಬ್ರಿಟಿಸ್ಗೆ ಗುಡ್‌ನ್ಯೂಸ್: ಡೆವಿಲ್ ಸಿನಿಮಾದ 3ನೇ ಸಾಂಗ್ ಬಿಡುಗಡೆ| Video ಲಿಂಕ್ ಇಲ್ಲಿದೆ ನೋಡಿ

ದರ್ಶನ್ ಸೆಲೆಬ್ರಿಟಿಸ್ಗೆ ಗುಡ್‌ನ್ಯೂಸ್: ಡೆವಿಲ್ ಸಿನಿಮಾದ 3ನೇ ಸಾಂಗ್ ಬಿಡುಗಡೆ| Video ಲಿಂಕ್

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ( Actor Darshan) ಅಭಿನಯದ "ದಿ ಡೆವಿಲ್" (The Devil) ಸಿನಿಮಾದ ಮೂರನೇ ಗೀತೆ ಬಿಡುಗಡೆಯಾಗಿದೆ.

[ccc_my_favorite_select_button post_id="116277"]
error: Content is protected !!