Harithalekhani story: Revenge for injustice

ಹರಿತಲೇಖನಿ ದಿನಕ್ಕೊಂದು ಕಥೆ: ಅನ್ಯಾಯಕ್ಕೆ ಪ್ರತೀಕಾರ

Harithalekhani story: ಸಂತರ ದಯೆ-ಕರುಣೆಗೆ ಮಿತಿಯಿಲ್ಲ ಎಂದು ನಿಮಗೆಲ್ಲ ತಿಳಿದಿದೆ. ಆದರೆ ಅವರು ಅನ್ಯಾಯದ ವಿರುದ್ಧ ಪ್ರತೀಕಾರ ಸಹ ಮಾಡುತ್ತಾರೆ ಮತ್ತು ಅನ್ಯಾಯ ಮಾಡುವವರಿಗೆ ಶಿಕ್ಷೆಯನ್ನೂ ವಿಧಿಸುತ್ತಾರೆ ಎಂದು ಈ ಕಥೆಯಿಂದ ನಮಗೆ ಕಲಿಯಲು ಸಿಗಲಿದೆ.

ಸಮರ್ಥ ರಾಮದಾಸ ಸ್ವಾಮಿ ಒಬ್ಬ ಶ್ರೇಷ್ಠ ಸಂತರು ಮತ್ತು ಶಿವಾಜಿ ಮಹಾರಾಜರ ಗುರುಗಳೂ ಆಗಿದ್ದರು. ಸಮರ್ಥ ರಾಮದಾಸ ಸ್ವಾಮಿಯವರ ಶಿಷ್ಯರು ಪ್ರಚಾರಕ್ಕಾಗಿ ಎಲ್ಲೆಡೆ ಪ್ರಯಾಣಿಸುತ್ತಿದ್ದರು. ಇದು ಶಿವಾಜಿ ಮಹಾರಾಜರು ಉದಯಕ್ಕೆ (ಪ್ರವರ್ಧಮಾನಕ್ಕೆ) ಬರುತ್ತಿದ್ದಂತಹ ಕಾಲವಾಗಿತ್ತು. ಹಿಂಸಾಚಾರಿ ಮೊಘಲರು ಭಾರತದ ವಿವಿಧ ಸ್ಥಳಗಳಲ್ಲಿ ಜನರನ್ನು ಪೀಡಿಸುತ್ತಿದ್ದರು. ಮಹಾರಾಷ್ಟ್ರದ ಸತಾರಾ ಪ್ರದೇಶವು ವಿಜಾಪುರದ ಆದಿಲಶಾಹ ನ ನಿಯಂತ್ರಣದಲ್ಲಿತ್ತು. ಅವನ ಮೊಘಲ್ ಠಾಣೇದಾರನೊಬ್ಬನು ಸಂಗಮ ಮಾಹುಲಿ ಎಂಬ ಊರಿನಲ್ಲಿ ವಾಸಿಸುತ್ತಿದ್ದನು. ಈ ಠಾಣೇದಾರನು ಕ್ರೂರ ಅತ್ಯಾಚಾರಿಯಾಗಿದ್ದನು. ಅವನು ಯಾವಾಗಲೂ ಸಜ್ಜನ ಬ್ರಾಹ್ಮಣರು, ಸಾಧುಗಳು, ಸನ್ಯಾಸಿಗಳು, ತಪಸ್ವಿಗಳನ್ನು ಹಿಂಸಿಸುತ್ತಿದ್ದನು. ಅವನು ಬ್ರಾಹ್ಮಣರ ಸ್ನಾನ-ಸಂಧ್ಯಾ, ಯಜ್ಞ ಮತ್ತು ಯಾಗಗಳನ್ನು ನಿಲ್ಲಿಸಿ ಬಿಟ್ಟಿದ್ದನು. ಪುರಾಣ-ಓದುವುದು ಮತ್ತು ಕೀರ್ತನೆ ಮಾಡುವುದನ್ನು ಸಹ ನಿಲ್ಲಿಸಿದ್ದನು.

ಅದೇ ಸಮಯದಲ್ಲಿ ಶ್ರೀ ಸಮರ್ಥ ರಾಮದಾಸ ಸ್ವಾಮಿಯವರ ಶಿಷ್ಯ ಉದ್ಧವ ಸ್ವಾಮಿ ಮಾಹುಲಿಯಲ್ಲಿ ನೆಲೆಸಿದ್ದರು. ಅವರು ತಮ್ಮ ಭಕ್ತರೊಂದಿಗೆ ಸ್ನಾನ, ಸಂಧ್ಯಾ, ಪೂಜೆಯನ್ನು ಪ್ರಾರಂಭಿಸಿದರು. ಕೃಷ್ಣ ನದಿಯ ಘಟ್ಟಗಳಲ್ಲಿ ಪ್ರವಚನವನ್ನು ಪ್ರಾರಂಭಿಸಲಾಯಿತು. ಈ ವಿಷಯವನ್ನು ತಿಳಿದ ಠಾಣೇದಾರನು, ತಕ್ಷಣವೇ ಕೃಷ್ಣಾ ನದಿಯ ಘಟ್ಟಕ್ಕೆ ತಲುಪಿ ಉದ್ಧವ ಸ್ವಾಮಿಜಿಯನ್ನು ಹಿಡಿದು ಅವರನ್ನು ಥಳಿಸಿ ಉದ್ಧವ ಸ್ವಾಮಿಜಿ ಮತ್ತು ಅವರ ನಾಲ್ಕು ಶಿಷ್ಯರನ್ನು ಬಂಧಿಸಿ ಕತ್ತಲ ಕೋಣೆಯಲ್ಲಿ ಕೂಡಿಹಾಕಿದನು. ಎಲ್ಲ ಜನರು ಭಯಭೀತರಾಗಿ ಓಡಲು ಪ್ರಾರಂಭಿಸಿದರು. ಸಮರ್ಥ ರಾಮದಾಸ ಸ್ವಾಮೀಜಿಯವರ ಒಬ್ಬ ಶಿಷ್ಯನು ಅವಕಾಶ ಸಿಕ್ಕಿದ ತಕ್ಷಣ ಓಡಿಹೋದನು.

ಆ ಸಮಯದಲ್ಲಿ ಶ್ರೀ ಸಮರ್ಥರು ಚಾಫಳ ಎಂಬ ಗ್ರಾಮದಲ್ಲಿದ್ದರು. ಆ ಶಿಷ್ಯನು ಓಡಿಹೋಗಿ ಮರುದಿನ ಬೆಳಗ್ಗೆ ಚಾಫಳ ತಲುಪಿದನು. ನಡೆದ ಘಟನೆಯನ್ನು ಶ್ರೀ ಸಮರ್ಥ ರಾಮದಾಸಸ್ವಾಮಿಜಿಯವರಿಗೆ ತಿಳಿಸಿದನು. ಸಮರ್ಥರು ಕೋಪದಿಂದ ಕೆಂಡಾಮಂಡಲವಾದರು. ಅವರು ತಮ್ಮ ಎರಡನೆಯ ಶಿಷ್ಯ ಕಲ್ಯಾಣಸ್ವಾಮಿಗೆ ಬೆತ್ತವನ್ನು ತರಲು ಆದೇಶಿಸಿ ಪೀಠದಿಂದ ಎದ್ದರು ಮತ್ತು ನೇರವಾಗಿ ಮಾಹುಲಿಯತ್ತ ಪ್ರಯಾಣ ಬೆಳೆಸಿದರು. ಸಮರ್ಥರು ಏನನ್ನೂ ತಿನ್ನದೇ ಕುಡಿಯದೆ ಹೊರಟಿದ್ದರು.

ಸೂರ್ಯಾಸ್ತದ ಒಂದು ಗಂಟೆ ಮೊದಲು ಅವರು ಮಾಹುಲಿಯನ್ನು ತಲುಪಿ ನೇರವಾಗಿ ಠಾಣೆದಾರನ ಮನೆ ಪ್ರವೇಶಿಸಿದರು. ಆ ಸಮಯದಲ್ಲಿ ಠಾಣೆದಾರನು ಹುಕ್ಕಾ ಸೇದುತ್ತಾ ಕುಳಿತಿದ್ದನು. ಅವರು ಠಾಣೇದಾರನ ಕುತ್ತಿಗೆಯನ್ನು ಹಿಡಿದು ಅವನನ್ನು ಎಳೆದು ಅರ್ಧ ಜೀವವಾಗುವ ತನಕ ತಮ್ಮ ಕೈಯಲ್ಲಿದ್ದ ಬೆತ್ತದಿಂದ ಹೊಡೆದರು. ಸಮರ್ಥರು ಅವನನ್ನು ಎಳೆದುಕೊಂಡು ರಸ್ತೆಗೆ ಕರೆತಂದರು. ಠಾಣೇದಾರನ ಚೀರಾಟವು ವಾತಾವರಣದಲ್ಲಿ ಪ್ರತಿಧ್ವನಿಸುತ್ತಿತ್ತು. ಠಾಣೆದಾರನ ಸೇವಕರೋ, ಒಂದೇ ಒಂದು ಶಬ್ದ ಬಾಯಿಂದ ಹೊರ ತೆಗೆಯದೆ ನಿಂತಿದ್ದರು. ಸಮರ್ಥ ಸ್ವಾಮೀಜಿಯವರ ಉಗ್ರನರಸಿಂಹನ ಕೋಪದ ರೂಪವನ್ನು ನೋಡಿ ಎಲ್ಲರೂ ಗಾಬರಿಗೊಂಡರು. ಠಾಣೆದಾರನನ್ನು ಬಿಡಿಸುವ ಧೈರ್ಯ ಯಾರಲ್ಲಿಯೂ ಇರಲಿಲ್ಲ.

ಠಾಣೇದಾರನ ದೇಹದಿಂದ ರಕ್ತ ಹರಿಯುತ್ತಿತ್ತು. ಅವನು ಕರುಣೆಗಾಗಿ ಬೇಡಿಕೊಳ್ಳುತ್ತ ಸಮರ್ಥ ಮಹಾರಾಜರ ಚರಣಗಳಲ್ಲಿ ಎರಗಿದನು. ಕತ್ತಲು ಕೋಣೆಯಲಿರುವವರನ್ನು ಮೊದಲು ಬಿಡುಗಡೆ ಮಾಡು ಎಂದು ಶ್ರೀ ಸಮರ್ಥ ಮಹಾರಾಜರು ಗರ್ಜಿಸಿದರು. ಠಾಣೆದಾರನು ಜೀವ ಉಳಿಸಲು ತನ್ನ ಸೇವಕರಿಗೆ ಆದೇಶಿಸಿದನು. ಕತ್ತಲು ಕೋಣೆಯನ್ನು ತೆರೆಯಲಾಯಿತು. ಉದ್ಧವಸ್ವಾಮಿ ಮತ್ತು ಅವರ ಭಕ್ತರು ಸಮರ್ಥರ ಚರಣಗಳಲ್ಲಿ ಬಿದ್ದರು. ಠಾಣೆದಾರನು ಶ್ರೀ ಸಮರ್ಥ ಮಹಾರಾಜರಿಂದ ಬಹಳ ಪ್ರಭಾವಿತನಾದನು. ಅವನು ಸಮರ್ಥ ಮಹಾರಾಜರ ಚರಣಗಳನ್ನು ಹಿಡಿದು ಕ್ಷಮೆಯಾಚಿಸಿದನು ಮತ್ತು ಭವಿಷ್ಯದಲ್ಲಿ ಯಾರನ್ನೂ ಹಿಂಸಿಸುವುದಿಲ್ಲ, ಭಜನೆ-ಕೀರ್ತನೆ ಮತ್ತು ಪುರಾಣ ಓದುವುದನ್ನು ನಿಲ್ಲಿಸುವುದಿಲ್ಲ ಮತ್ತು ಯಾರಿಗೂ ಅನ್ಯಾಯ ಮಾಡುವುದಿಲ್ಲ , ಎಂದು ಆಣೆ ಮಾಡಿದನು.

ಅನಂತರ, ದಯಾಮಯ ಅಂತಃಕರಣದಿಂದ ಶ್ರೀ ಸಮರ್ಥ ರಾಮದಾಸ್ವಾಮಿಯವರು ಅವನನ್ನು ಕ್ಷಮಿಸಿದರು ಮತ್ತು ಅವನ ಗಾಯಗಳಿಗೆ ಔಷಧಿ ಗಿಡಮೂಲಿಕೆಗಳ ಲೇಪ ಹಚ್ಚಿಸಿ ಚಿಕಿತ್ಸೆ ನೀಡಿದರು. ಶ್ರೀ ಸಮರ್ಥ ಮಹಾರಾಜರು ದಿನವಿಡಿ ಏನನ್ನೂ ತಿನ್ನಲಿಲ್ಲ ಎಂದು ಗ್ರಾಮಸ್ಥರಿಗೆ ತಿಳಿದಾಗ, ಗ್ರಾಮದ ಜನರು ಸಮರ್ಥ ರಾಮದಾಸ್ವಾಮಿ ಮತ್ತು ಉದ್ಧವಸ್ವಾಮಿ ಮತ್ತು ಇತರ ಎಲ್ಲರಿಗೂ ಊಟದ ವ್ಯವಸ್ಥೆಯನ್ನು ಸಹ ಮಾಡಿದರು.

ಆ ರಾತ್ರಿ ಶ್ರೀ ಸಮರ್ಥ ಸ್ವಾಮೀಜಿಯವರು ಮಾಹುಲಿಯ ಘಟ್ಟದಲ್ಲಿ ವಿವಿಧ ದೃಷ್ಟಾಂತ ಹಾಗೂ ಉದಾಹರಣೆಗಳೊಂದಿಗೆ ಪ್ರವಚನವನ್ನು ನೀಡಿದರು. ಈ ಪ್ರವಚನವನ್ನು ಕೇಳಿದ ಮಾಹುಲಿಯ ಜನರು ತೃಪ್ತರಾದರು.
ಕೃಪೆ: ಹಿಂದೂ ಜಾಗೃತಿ (ಸಾಂದರ್ಭಿಕ ಚಿತ್ರ ಬಳಸಲಾಗಿದೆ)

ರಾಜಕೀಯ

ಕಾಂಗ್ರೆಸ್ ಯೋಜನೆಗಳಿಂದ ಬಡವರ ಜೇಬಿಗೆ 1 ಲಕ್ಷ ಕೋಟಿ ಹಣ: ಡಿಸಿಎಂ ಡಿ.ಕೆ. ಶಿವಕುಮಾರ್

ಕಾಂಗ್ರೆಸ್ ಯೋಜನೆಗಳಿಂದ ಬಡವರ ಜೇಬಿಗೆ 1 ಲಕ್ಷ ಕೋಟಿ ಹಣ: ಡಿಸಿಎಂ ಡಿ.ಕೆ.

“ಕಾಂಗ್ರೆಸ್ ಸರ್ಕಾರಗಳ ವಿವಿಧ ಜನಪರ ಯೋಜನೆಗಳಿಂದ ಬಡವರ ಜೇಬಿಗೆ 1 ಲಕ್ಷ ಕೋಟಿ ಹಣವನ್ನು ಹಾಕುತ್ತಿದ್ದೇವೆ”: ಡಿಸಿಎಂ ಡಿ.ಕೆ. ಶಿವಕುಮಾರ್ (D.K. Shivakumar)

[ccc_my_favorite_select_button post_id="112873"]
2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

ದಾವಣಗೆರೆ: ಬೆಂಗಳೂರು-ದಾವಣಗೆರೆ- ಬೆಳಗಾವಿಗೆ ವಂದೇ ಭಾರತ್ ಎಕ್ಸ್‍ಪ್ರೆಸ್ (Vande Bharat Express) ರೈಲು ಸೇವೆಯಿಂದ ಶಿಕ್ಷಣ, ಆರೋಗ್ಯ ಸೇವೆಯ ಅನುಕೂಲದ ಜೊತೆಗೆ ವ್ಯಾಪಾರ ವಹಿವಾಟು ವೃದ್ದಿಯಾಗಲಿದೆ ಎಂದು ಸಂಸದರಾದ ಡಾ; ಪ್ರಭಾ ಮಲ್ಲಿಕಾರ್ಜುನ್ (Dr.

[ccc_my_favorite_select_button post_id="112408"]
Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

ಹಳೆ ದ್ವೇಷದ ಹಿನ್ನೆಲೆ ಎರಡು ಗ್ಯಾಂಗ್‌ಗಳ ನಡುವೆ ಮಾರಾಮಾರಿ ನಡೆದಿದೆ. ದೊಣ್ಣೆ, ಮಾರಕಾಸ್ತ್ರಗಳಿಂದ ಪರಸ್ಪರ ಹೊಡೆ ದಾಡಿಕೊಂಡಿದ್ದಾರೆ. Crime News;

[ccc_my_favorite_select_button post_id="110866"]
ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಪ್ರವಾಸದಲ್ಲಿರುವ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ತಮ್ಮ ಪ್ರವಾಸದ ಎರಡನೇ ದಿನವೂ ಇಲ್ಲಿನ ಆಡಳಿತ

[ccc_my_favorite_select_button post_id="110371"]

ಕ್ರೀಡೆ

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಒಡಿಶಾದ ಭುವನೇಶ್ವರದಲ್ಲಿ‌ ಇದೇ ತಿಂಗಳ 10ರಂದು ನಡೆದ ವಿಶ್ವ ಅಥ್ಲೆಟಿಕ್ಸ್ ನ ಕಾಂಟಿನೆಂಟಲ್ ಕೂಟದ ಮಹಿಳೆಯರ ವಿಭಾಗದ 400 ಮೀಟರ್ ಓಟದಲ್ಲಿ ಚಿನ್ನದ ಪದಕ ಗಳಿಸಿದ ರಾಜ್ಯಕ್ಕೆ ಕೀರ್ತಿ ತಂದ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ

[ccc_my_favorite_select_button post_id="112580"]
ದೊಡ್ಡಬಳ್ಳಾಪುರ: ರೈಲ್ವೇ ಸ್ಟೇಷನ್ ಬಳಿ ನಡೆದಿದ್ದು ಕೊಲೆ..! ಪ್ರಕರಣ ದಾಖಲು

ದೊಡ್ಡಬಳ್ಳಾಪುರ: ರೈಲ್ವೇ ಸ್ಟೇಷನ್ ಬಳಿ ನಡೆದಿದ್ದು ಕೊಲೆ..! ಪ್ರಕರಣ ದಾಖಲು

ಮಂಗಳವಾರ ಬೆಳಗ್ಗೆ ವ್ಯಕ್ತಿಯೋರ್ವನ ಮೃತ ದೇಹ ನಗರದ ಹೊರವಲಯದಲ್ಲಿರುವ ರೈಲ್ವೇ ನಿಲ್ದಾಣದ ಬಳಿ ಪತ್ತೆಯಾಗಿದ್ದು, ಹತ್ಯೆ (Murder) ನಡೆದಿರುವ ಕುರಿತು ಸಿಸಿ ಟಿವಿಯಲ್ಲಿ ದೃಶ್ಯ ಸೆರೆ

[ccc_my_favorite_select_button post_id="112854"]
ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ಮಳೆಯ ವೇಳೆ ವಾಹನ ಸವಾರರು ಎಷ್ಟು ಮುಂಜಾಗ್ರತೆ ಸಾಲದು. ಏಕೆಂದರೆ ನಿನ್ನೆ ಸಂಜೆ ಸುರಿದ ಭಾರಿ ಮಳೆಯ ಕಾರಣ ರಸ್ತೆ ಬದಿಯಲ್ಲಿ ಕೆಟ್ಟು ನಿಂತಿದ್ದ ಟ್ರಾಕ್ಟರ್ ಕಾಣದೆ Accident

[ccc_my_favorite_select_button post_id="112435"]

ಆರೋಗ್ಯ

ಸಿನಿಮಾ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಕಾಂಗ್ರೆಸ್ (Congress) ಮಾಡಿರುವ ಓಟ್ ಚೋರಿ ಆರೋಪ ದಿನೇದಿನೇ ತೀವ್ರ ಸ್ವರೂಪ ಪಡೆಯುತ್ತಿದ್ದು, ಚುನಾವಣೆ ಆಯೋಗ (Election Commission) ಹಾಗೂ ಕೇಂದ್ರ ಸರ್ಕಾರದ (Central Government) ವಿರುದ್ಧ ಅನುಮಾನ ಹೆಚ್ಚಿಸುವಂತೆ ಮಾಡುತ್ತಿದೆ‌.

[ccc_my_favorite_select_button post_id="112714"]
error: Content is protected !!