Story : Torn Arrogance

ಹರಿತಲೇಖನಿ ದಿನಕ್ಕೊಂದು ಕಥೆ: ಹರಿದುಹೋದ ಅಹಂಕಾರ

Story: ಒಂದೂರಿನಲ್ಲಿ ಒಬ್ಬ ನೇಕಾರನಿದ್ದ. ಆತ ಶಾಂತ ಸ್ವಭಾವದ ಮನುಷ್ಯ; ನಿಗರ್ವಿ, ತುಂಬ ಪ್ರಾಮಾಣಿಕ. ಆತ ಸಿಟ್ಟಾಗಿದ್ದುದನ್ನು ಯಾರೂ ನೋಡಿಯೇ ಇರಲಿಲ್ಲ.

ಆ ಊರಿನ ಕೆಲ ಯುವಕರಿಗೆ ಒಂದು ತರಲೆ ಯೋಚನೆ ಹೊಳೆಯಿತು. ಅದೇನೆಂದರೆ, ಹೇಗಾದರೂ ಮಾಡಿ ಆ ನೇಕಾರನಿಗೆ ಸಿಟ್ಟು ಬರಿಸೋದು.

ಒಂದು ದಿನ ಯುವಕರ ಗುಂಪು ನೇಕಾರನ ಅಂಗಡಿಗೆ ಹೋಯಿತು. ಆ ಗುಂಪಿನ ನಾಯಕ ಶ್ರೀಮಂತ ವ್ಯಾಪಾರಿಯೊಬ್ಬನ ಮಗನಾಗಿದ್ದ. ಅವನು ನೇಕಾರನ ಅಂಗಡಿಯಲ್ಲಿ ಬೆಲೆಬಾಳುವ ಸೀರೆಯನ್ನು ಆಯ್ಕೆ ಮಾಡಿ, ಬೆಲೆ ವಿಚಾರಿಸಿದ.

ನಗುಮೋಗದ ನೇಕಾರ ಹತ್ತು ನಾಣ್ಯಗಳೆಂದ. ನೇಕಾರನನ್ನು ಕೆಣಕುವ ಉದ್ದೇಶದಿಂದ, ಆ ಶ್ರೀಮಂತ ‘ನನಗೆ ಈ ಪೂರ್ತಿ ಸೀರೆ ಬೇಡ. ಅರ್ಧ ಸಾಕು’ ಎನ್ನುತ್ತ ಸೀರೆಯನ್ನು ಹರಿದು ಎರಡು ಭಾಗ ಮಾಡಿ, ಒಂದು ಭಾಗದ ಬೆಲೆ ಏನೆಂದು ವಿಚಾರಿಸಿದ.

ವಿಚಲಿತನಾಗದ ನೇಕಾರ, ಶಾಂತಚಿತ್ತದಿಂದ, ಬೆಲೆ ಐದು ನಾಣ್ಯಗಳೆಂದ. ಹೀಗೇ ಯುವಕ ಸೀರೆಯನ್ನು ತುಂಡು ಮಾಡುತ್ತಲೇ ಹೋದ. ಕೊನೆಗೆ, ‘ಈ ಸೀರೆ ಯಾವುದೇ ಉಪಯೋಗಕ್ಕೆ ಬಾರದು’ ಎಂದು ಕೈಚೆಲ್ಲಿದ.

ಇಷ್ಟಾದರೂ, ಆ ನೇಕಾರ ಸಿಟ್ಟಿಗೇಳದುದನ್ನು ಕಂಡು ಯುವಕನಿಗೆ ನಾಚಿಕೆಯಾಯಿತು. ‘ಕ್ಷಮಿಸಿ, ನನ್ನಿಂದ ನಿಮಗೆ ನಷ್ಟವಾಯಿತು. ಸೀರೆಯ ಪೂರ್ಣಬೆಲೆಯನ್ನು ಸ್ವೀಕರಿಸಿ’ ಎಂದ. ‘ನೀನು ನನ್ನಿಂದ ಸೀರೆ ಕೊಂಡಿಲ್ಲ. ಆದುದರಿಂದ ಹಣ ಪಡೆಯಲಾರೆ’ ಎಂದ ನೇಕಾರ.

ಈ ಮಾತುಗಳನ್ನು ಕೇಳುತ್ತಲೇ ಆತನ ಅಹಂಗೆ ಧಕ್ಕೆಯಾಗಿ, ‘ನಾನು ಶ್ರೀಮಂತನ ಮಗ. ಹಣ ಕೊಟ್ಟರೆ ನನಗೇನೂ ನಷ್ಟವಿಲ್ಲ. ನೀನಾದರೋ ಬಡವ. ಹಣ ತಗೋ’ ಎಂದ. ನೇಕಾರ ನಗುತ್ತ ಹೇಳಿದ-‘ಮಗು ನೀನು ಹರಿದು ಹೋದ ಈ ಸೀರೆಯಿಂದ ಆಗಿರುವ ನಷ್ಟವನ್ನು ಭರಿಸಲಾರೆ.

ಒಮ್ಮೆ ಯೋಚಿಸು. ಈ ಸೀರೆಯನ್ನು ನೇಯಲು ಬೇಕಾದ ಹತ್ತಿಯನ್ನು ಬೆಳೆಸಲು ರೈತ ಎಷ್ಟು ಶ್ರಮ ಪಟ್ಟಿದ್ದಾನೆ, ಆ ಹತ್ತಿಯಿಂದ ನೂಲು ತೆಗೆಯುವಲ್ಲಿ, ಸೀರೆ ನೇಯುವಲ್ಲಿ, ಅದಕ್ಕೆ ಬಣ್ಣ ಹಾಕುವಲ್ಲಿ ನಮ್ಮ ಕುಟುಂಬದವರ ಎಷ್ಟೊಂದು ಶ್ರಮವಿದೆ! ಇಷ್ಟು ಶ್ರಮ ಸಾರ್ಥಕವಾಗೋದು ಆ ಸೀರೆಯನ್ನು ಯಾರಾದರೂ ಓರ್ವ ಮಹಿಳೆ ಉಟ್ಟು ಸಂತೋಷ ಪಟ್ಟಾಗ ಮಾತ್ರವಲ್ಲವೇ? ಆದರೆ ನೀನು ಸೀರೆಯನ್ನು ಯಾರೂ ಉಡಲಾಗದಂತೆ ತುಂಡು ತುಂಡು ಮಾಡಿಬಿಟ್ಟೆಯಲ್ಲ. ಎಲ್ಲರನ್ನೂ ಆ ಸಂತೋಷದಿಂದ ವಂಚಿತರನ್ನಾಗಿ ಮಾಡಿ ಬಿಟ್ಟೆಯಲ್ಲ! ಕೇವಲ ಹಣ ಕೊಡೋದರಿಂದ ನೀನು ನಮಗೆಲ್ಲರಿಗೂ ಆದ ನಷ್ಟವನ್ನು ತುಂಬಲಾರೆ’.

ನೇಕಾರನ ದನಿಯಲ್ಲಿ ಸಿಟ್ಟು, ಆಕ್ರೋಶದ ಬದಲಾಗಿ, ಕಳಕಳಿ ಇತ್ತು. ನೋವಿತ್ತು. ಯುವಕ ಪಶ್ಚಾತ್ತಾಪದಿಂದ ನೇಕಾರನ ಕಾಲು ಹಿಡಿದು ಬಿಕ್ಕಿ ಬಿಕ್ಕಿ ಅಳತೊಡಗಿದ.

ನೇಕಾರ ಪ್ರೀತಿಯಿಂದ ಅವನನ್ನು ಎಬ್ಬಿಸಿ-‘ಮಗು, ನಾನು ನಿನ್ನಿಂದ ಹಣ ಪಡೆದುಕೊಳ್ಳುತ್ತಿದ್ದರೆ, ನನಗೇನೋ ನನ್ನ ಹಣ ವಾಪಸು ಬರುತ್ತಿತ್ತು. ಆದರೆ ನಿನ್ನ ಬದುಕಿನಲ್ಲಿ ಯಾವ ಬದಲಾವಣೆಯೂ ಬರುತ್ತಿರಲಿಲ್ಲ! ಸೀರೆ ಒಂದು ಹೋದರೆ, ಇನ್ನೊಂದನ್ನು ನೇಯಬಹುದು. ಆದರೆ ಬದುಕು ಇರೋದು ಒಂದೇ ಅಲ್ಲವೇ? ಈ ಬದುಕು ಅಹಂಕಾರದಿಂದ ನಷ್ಟವಾಗಿ ಹೋದರೆ, ಇನ್ನೊಂದು ಬದುಕನ್ನು ಎಲ್ಲಿಂದ ತರೋಣ?’ ಹೀಗೆ ತನ್ನ ಅಂತಃಕರಣದ ನುಡಿಗಳಿಂದ ಆತನ ಕಣ್ಣು ತೆರೆಸಿದ. ಆ ನೇಕಾರ ಯಾರು ಗೊತ್ತೆ?-ಸಂತ ಕಬೀರದಾಸ!

ತಾತ್ಪರ್ಯ ಇಷ್ಟೇ: ಅಹಂಕಾರವೆನ್ನುವುದು ಕಣ್ಣಿನ ಮೇಲೆ ಬಿದ್ದ ಧೂಳಿನಂತೆ. ಆ ಧೂಳನ್ನು ತೆಗೆಯದೆ ಹೋದರೆ, ಯಾವುದೂ ನಮಗೆ ಸ್ಪಷ್ಟವಾಗಿ ಕಾಣದು.

ಕೃಪೆ: ಡಾ.ಕೆ.ಪಿ.ಪುತ್ತೂರಾಯ (ಸಾಮಾಜಿಕ ಜಾಲತಾಣ)

ರಾಜಕೀಯ

ಷಡ್ಯಂತ್ರ ಬಹಳ ದಿನ ಗುಟ್ಟಾಗಿ ಉಳಿಯಲು ಸಾಧ್ಯವಿಲ್ಲ: ಬಿ.ವೈ. ವಿಜಯೇಂದ್ರ

ಷಡ್ಯಂತ್ರ ಬಹಳ ದಿನ ಗುಟ್ಟಾಗಿ ಉಳಿಯಲು ಸಾಧ್ಯವಿಲ್ಲ: ಬಿ.ವೈ. ವಿಜಯೇಂದ್ರ

"ಶ್ರೀ ಕ್ಷೇತ್ರ ಧರ್ಮಸ್ಥಳದ ಕುರಿತು ನಿರಂತರ ಅಪಪ್ರಚಾರದ ಹಿಂದೆ ಯಾರಿದ್ದಾರೆ? ಯಾರ ಷಡ್ಯಂತ್ರ ಇದರ ಹಿಂದಿದೆ ಎಂಬುದು ಬಹಳ ದಿನ ಗುಟ್ಟಾಗಿ ಉಳಿಯಲು ಸಾಧ್ಯವಿಲ್ಲ"; B.Y. Vijayendra

[ccc_my_favorite_select_button post_id="112839"]
2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

ದಾವಣಗೆರೆ: ಬೆಂಗಳೂರು-ದಾವಣಗೆರೆ- ಬೆಳಗಾವಿಗೆ ವಂದೇ ಭಾರತ್ ಎಕ್ಸ್‍ಪ್ರೆಸ್ (Vande Bharat Express) ರೈಲು ಸೇವೆಯಿಂದ ಶಿಕ್ಷಣ, ಆರೋಗ್ಯ ಸೇವೆಯ ಅನುಕೂಲದ ಜೊತೆಗೆ ವ್ಯಾಪಾರ ವಹಿವಾಟು ವೃದ್ದಿಯಾಗಲಿದೆ ಎಂದು ಸಂಸದರಾದ ಡಾ; ಪ್ರಭಾ ಮಲ್ಲಿಕಾರ್ಜುನ್ (Dr.

[ccc_my_favorite_select_button post_id="112408"]
Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

ಹಳೆ ದ್ವೇಷದ ಹಿನ್ನೆಲೆ ಎರಡು ಗ್ಯಾಂಗ್‌ಗಳ ನಡುವೆ ಮಾರಾಮಾರಿ ನಡೆದಿದೆ. ದೊಣ್ಣೆ, ಮಾರಕಾಸ್ತ್ರಗಳಿಂದ ಪರಸ್ಪರ ಹೊಡೆ ದಾಡಿಕೊಂಡಿದ್ದಾರೆ. Crime News;

[ccc_my_favorite_select_button post_id="110866"]
ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಪ್ರವಾಸದಲ್ಲಿರುವ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ತಮ್ಮ ಪ್ರವಾಸದ ಎರಡನೇ ದಿನವೂ ಇಲ್ಲಿನ ಆಡಳಿತ

[ccc_my_favorite_select_button post_id="110371"]

ಕ್ರೀಡೆ

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಒಡಿಶಾದ ಭುವನೇಶ್ವರದಲ್ಲಿ‌ ಇದೇ ತಿಂಗಳ 10ರಂದು ನಡೆದ ವಿಶ್ವ ಅಥ್ಲೆಟಿಕ್ಸ್ ನ ಕಾಂಟಿನೆಂಟಲ್ ಕೂಟದ ಮಹಿಳೆಯರ ವಿಭಾಗದ 400 ಮೀಟರ್ ಓಟದಲ್ಲಿ ಚಿನ್ನದ ಪದಕ ಗಳಿಸಿದ ರಾಜ್ಯಕ್ಕೆ ಕೀರ್ತಿ ತಂದ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ

[ccc_my_favorite_select_button post_id="112580"]
ದೊಡ್ಡಬಳ್ಳಾಪುರ: ರೈಲ್ವೇ ಸ್ಟೇಷನ್ ಬಳಿ ನಡೆದಿದ್ದು ಕೊಲೆ..! ಪ್ರಕರಣ ದಾಖಲು

ದೊಡ್ಡಬಳ್ಳಾಪುರ: ರೈಲ್ವೇ ಸ್ಟೇಷನ್ ಬಳಿ ನಡೆದಿದ್ದು ಕೊಲೆ..! ಪ್ರಕರಣ ದಾಖಲು

ಮಂಗಳವಾರ ಬೆಳಗ್ಗೆ ವ್ಯಕ್ತಿಯೋರ್ವನ ಮೃತ ದೇಹ ನಗರದ ಹೊರವಲಯದಲ್ಲಿರುವ ರೈಲ್ವೇ ನಿಲ್ದಾಣದ ಬಳಿ ಪತ್ತೆಯಾಗಿದ್ದು, ಹತ್ಯೆ (Murder) ನಡೆದಿರುವ ಕುರಿತು ಸಿಸಿ ಟಿವಿಯಲ್ಲಿ ದೃಶ್ಯ ಸೆರೆ

[ccc_my_favorite_select_button post_id="112854"]
ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ಮಳೆಯ ವೇಳೆ ವಾಹನ ಸವಾರರು ಎಷ್ಟು ಮುಂಜಾಗ್ರತೆ ಸಾಲದು. ಏಕೆಂದರೆ ನಿನ್ನೆ ಸಂಜೆ ಸುರಿದ ಭಾರಿ ಮಳೆಯ ಕಾರಣ ರಸ್ತೆ ಬದಿಯಲ್ಲಿ ಕೆಟ್ಟು ನಿಂತಿದ್ದ ಟ್ರಾಕ್ಟರ್ ಕಾಣದೆ Accident

[ccc_my_favorite_select_button post_id="112435"]

ಆರೋಗ್ಯ

ಸಿನಿಮಾ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಕಾಂಗ್ರೆಸ್ (Congress) ಮಾಡಿರುವ ಓಟ್ ಚೋರಿ ಆರೋಪ ದಿನೇದಿನೇ ತೀವ್ರ ಸ್ವರೂಪ ಪಡೆಯುತ್ತಿದ್ದು, ಚುನಾವಣೆ ಆಯೋಗ (Election Commission) ಹಾಗೂ ಕೇಂದ್ರ ಸರ್ಕಾರದ (Central Government) ವಿರುದ್ಧ ಅನುಮಾನ ಹೆಚ್ಚಿಸುವಂತೆ ಮಾಡುತ್ತಿದೆ‌.

[ccc_my_favorite_select_button post_id="112714"]
error: Content is protected !!