Harithalekhani: Ordinary photographer

ಹರಿತಲೇಖನಿ ದಿನಕ್ಕೊಂದು ಕಥೆ: ಸಾಮಾನ್ಯ ಫೋಟೋಗ್ರಾಫರ್..!

Harithalekhani: ನೀವು ಬ್ರಾಂಡನ್ ಸ್ಟಾಂಟನ್ ಬಗ್ಗೆ ಕೇಳಿದ್ದೀರೋ ಇಲ್ಲವೋ ಗೊತ್ತಿಲ್ಲ. ಒಬ್ಬ ಸಾಮಾನ್ಯ ವ್ಯಕ್ತಿ, ತೀರಾ ಸಾಮಾನ್ಯವೆನಿಸುವ ಕೆಲಸಗಳಿಂದಲೂ ಹೇಗೆ ಜಗತ್ತಿನ ಗಮನವನ್ನು ಸೆಳೆಯಬಹುದು ಎಂಬುದಕ್ಕೆ ಆತನೊಬ್ಬ ನಿದರ್ಶನವಾಗಿ ನನಗೆ ಕಾಣುತ್ತಾನೆ.

ಮೂಲತಃ ಅಮೆರಿಕದ ಅಟ್ಲಾಂಟಾದವನಾದ ಸ್ಟಾಂಟನ್, ಹೆಚ್ಚು ಓದಿದವನಲ್ಲ. ಇತಿಹಾಸ ವಿಷಯದಲ್ಲಿ ಸಾಮಾನ್ಯ ಅಂಕ ಗಳಿಸಿ ಪದವೀಧರನಾದವ. ಕಮಿಷನ್ ಏಜೆಂಟ್ ಆಗಿ ಕೆಲಸ ಮಾಡುವಾಗ, ತಂದೆಗೆ ಕಾಡಿ ಬೇಡಿ ಒಂದು ಸಾಮಾನ್ಯ ಕೆಮರಾ ಖರೀದಿಸಿದ. ಎಲ್ಲೆಂದರಲ್ಲಿ ಕಂಡಕಂಡವರ ಫೋಟೋ ತೆಗೆಯುವುದು ಅವನ ಹವ್ಯಾಸ.

ಒಮ್ಮೆ ತಡವಾಗಿ ಬಂದುದಕೆ ಕೋಪಗೊಂಡ ಆತನ ಬಾಸ್, ಸ್ಟಾಂಟನ್ ನನ್ನು ತರಾಟೆಗೆ ತೆಗೆದುಕೊಂಡ. ಅದಕ್ಕೆ ಕಾರಣ ಕೇಳಿದ್ದಕ್ಕೆ, ‘ಆಫೀಸಿನಿಂದ ಬರುವಾಗ ಕೆಲವು ವ್ಯಕ್ತಿಗಳ ಫೋಟೋ ತೆಗೆಯುತ್ತಿದ್ದೆ. ಅದಕ್ಕೆ ತಡವಾಯಿತು’ ಎಂದು ಹೇಳಿದ. ಅಷ್ಟಕ್ಕೇ ವ್ಯಗ್ರನಾದ ಆತನ ಬಾಸ್, ‘ಒಂದೋ ಕೆಲಸ ಮಾಡು, ಇಲ್ಲವೇ ಈ ಕೆಲಸ ಬಿಟ್ಟು ಫೋಟೋ ತೆಗೆ, ಹೋಗು’ ಎಂದು ಬಿಟ್ಟ.

ಸ್ಟಾಂಟನ್ ಎರಡನೇಯದನ್ನೇ ಆಯ್ಕೆ ಮಾಡಿಕೊಂಡ. ಪೂರ್ಣಾವಧಿ ಫೋಟೋಗ್ರಾಫರ್ ಆದ. ಇನ್ನು ಮುಂದೆ ಫೋಟೋ ತೆಗೆಯುವುದನ್ನೇ ಕಾಯಕ ಮಾಡಿಕೊಳ್ಳುತ್ತೇನೆ ಎಂದು ನಿರ್ಧರಿಸಿದ. ನ್ಯೂಯಾರ್ಕ್ ನಗರದ ಹಾದಿಬೀದಿಯಲ್ಲಿ ಹೋಗುವವರ, ಬರುವವರ, ಕುಂತವರ, ಮಲಗಿದವರ.. ಹೀಗೆ ಎಲ್ಲರ ಫೋಟೋಗಳನ್ನು ತೆಗೆದು, ಅವರ ಕಿರು ಸಂದರ್ಶನವನ್ನು ಸಂಗ್ರಹಿಸುತ್ತಾ ಹೋದ. ಈ ರೀತಿ ಸುಮಾರು ಹತ್ತು ಸಾವಿರ ಜನರ ಭಾವಚಿತ್ರ ಫೋಟೋ ತೆಗೆದ, ಸಂದರ್ಶನ ಮಾಡಿದ.

ಅನಂತರ ಸ್ನೇಹಿತರ ಸಹಾಯದಿಂದ ಒಂದು ಫೋಟೋ ಪ್ರದರ್ಶನ ಏರ್ಪಡಿಸಿದ. ಅಲ್ಲಿ ತಾನು ತೆಗೆದ ಹತ್ತು ಸಾವಿರ ಜನರ ಫೋಟೋಗಳನ್ನು ಪ್ರದರ್ಶಿಸಿದ. ಆತನ ಕೃತಿ ಅಪಾರ ಜನಮನ್ನಣೆಗೆ ಪಾತ್ರವಾಯಿತು. ಇದಕ್ಕಾಗಿ Humans of New York ಎಂಬ ಫೇಸ್ ಬುಕ್ ಪೇಜ್ ನ್ನು ತೆರೆದ. ಅದರಿಂದ ಆತನಿಗೆ ಜಾಗತಿಕ ಪ್ರಚಾರ ಲಭಿಸಿತು. ನಂತರ ಅದೇ ಹೆಸರಿನಲ್ಲಿ (Humans of New York) ಪುಸ್ತಕವನ್ನೂ ಪ್ರಕಟಿಸಿದ. ಈ ಪುಸ್ತಕ ಮಾರುಕಟ್ಟೆಗೆ ಬರುವುದಕ್ಕಿಂತ ಮುನ್ನವೇ ಮೂವತ್ತು ಸಾವಿರ ಪ್ರತಿಗಳಿಗೆ ಬೇಡಿಕೆ ಬಂದಿತು. 2013 ರಲ್ಲಿ ‘ನ್ಯೂಯಾರ್ಕ್ ಟೈಮ್ಸ್ ಬೆಸ್ಟ್ ಸೆಲ್ಲರ್ಸ್’ ಪುಸ್ತಕಗಳ ಪಟ್ಟಿಯಲ್ಲಿ ಈ ಕೃತಿ ಸತತ ಇಪ್ಪತ್ತಾರು ವಾರಗಳ ಕಾಲ ಮೊದಲ ಸ್ಥಾನದಲ್ಲಿತ್ತು.

ಅದೇ ವರ್ಷ ಪ್ರತಿಷ್ಠಿತ ‘ಟೈಮ್ಸ್’ ಮ್ಯಾಗಜಿನ್, “30 Under 30 People Changing The World” ಸರಣಿಯಲ್ಲಿ ಸ್ಟಾಂಟನ್ ನನ್ನೂ ಸೇರಿಸಿತು. ಇದರಿಂದ ಆತನಿಗೆ ಮತ್ತು ಅವನ ಕೃತಿಗೆ ಮತ್ತಷ್ಟು ಮಾನ್ಯತೆ ಸಿಕ್ಕಿತು. ಅದೇ ವರ್ಷ ವಿಶ್ವಸಂಸ್ಥೆ ಸ್ಟಾಂಟನ್ ನನ್ನು ಐವತ್ತು ದಿನಗಳ ಮಟ್ಟಿಗೆ ಮಧ್ಯ ಪ್ರಾಚ್ಯದ ಹತ್ತು ದೇಶಗಳಿಗೆ ಫೋಟೋ ತೆಗೆಯಲೆಂದೇ ಕಳುಹಿಸಿಕೊಟ್ಟಿತು. ಈ ಪ್ರವಾಸದಲ್ಲಿ ಕೊನೆಯಲ್ಲಿ, ತಾನು ಸಂಗ್ರಹಿಸಿದ 23 ಲಕ್ಷ ಡಾಲರ್ ಗಳನ್ನು ಆತ ಪಾಕಿಸ್ತಾನದ ಜೀತದಾಳುಗಳ ಕ್ಷೇಮಾಭಿವೃದ್ಧಿಗೆ ದಾನವಾಗಿ ನೀಡಿದ.

2015 ರಲ್ಲಿ ಸ್ಟಾಂಟನ್ ಗೆ ಒಂದು ಅಚ್ಚರಿ ಕಾದಿತ್ತು. ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ, ತಮ್ಮನ್ನು ಸಂದರ್ಶಿಸಿ, ಫೋಟೋ ತೆಗೆಯುವಂತೆ ಓವಲ್ ಆಫೀಸಿಗೆ ಸ್ಟಾಂಟನ್ ನನ್ನು ಆಮಂತ್ರಿಸಿದ್ದರು..

ಇಂದು ಸ್ಟಾಂಟನ್ ಕೆಮರಾ ಹಿಡಿದರೆ ಯಾರಾದರೂ ಪೋಸು ಕೊಡುತ್ತಾರೆ, ಜೋಳಿಗೆ ಹಿಡಿದರೆ ಕೈ ತುಂಬಾ ಹಣ ಕೊಡುತ್ತಾರೆ. ಆತ ಅದನ್ನು ಒಳ್ಳೆಯ ಉದ್ದೇಶಗಳಿಗೆ ದಾನ ಮಾಡುತ್ತಾನೆ. ಒಬ್ಬ ಸಾಮಾನ್ಯ ಬೀದಿ ಫೋಟೋಗ್ರಾಫರ್ ಇಂದು ‘ಏಕ ವ್ಯಕ್ತಿ ಪರೋಪಕಾರಿ’ಯಾಗಿದ್ದಾನೆ. ಈತನನ್ನು Emperor Of Empathy (ಪರಾನುಭೂತಿಯ ಚಕ್ರವರ್ತಿ) ಎಂದು ಮಾಧ್ಯಮಗಳು ಸಂಬೋಧಿಸುತ್ತವೆ.

ಅಗಾಧ ಸಾಧನೆ ಮಾಡಲು ಅಸಾಮಾನ್ಯ ಕೆಲಸಗಳನ್ನೇ ಮಾಡಬೇಕಿಲ್ಲ.

ಕೃಪೆ: ಖ್ಯಾತ ಸಂಪಾದಕರಾದ ವಿಶ್ವೇಶ್ವರ ಭಟ್, ‘ಫೇಸ್‌ಬುಕ್‌ ಪೇಜ್ ಪುಟ’

ರಾಜಕೀಯ

ಧರ್ಮದ ವಿಚಾರದಲ್ಲಿ ರಾಜಕೀಯ ಬೇಡ; ನಾವು ಅವರ ಪರವೂ ಇಲ್ಲ,‌ ಇವರ ಪರವೂ ಇಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್

ಧರ್ಮದ ವಿಚಾರದಲ್ಲಿ ರಾಜಕೀಯ ಬೇಡ; ನಾವು ಅವರ ಪರವೂ ಇಲ್ಲ,‌ ಇವರ ಪರವೂ

"ನಾವು ಅವರ (ಧರ್ಮಸ್ಥಳ) ಪರವೂ ಇಲ್ಲ, ಇವರ ಪರವೂ ಇಲ್ಲ. ನಾವು ನ್ಯಾಯದ ಪರ. ಧರ್ಮದ ವಿಚಾರದಲ್ಲಿ ರಾಜಕಾರಣ ಮಾಡಬೇಡಿ ಎಂದಷ್ಟೇ ನಾವು ಹೇಳುತ್ತಿದ್ದೇವೆ": ಡಿಸಿಎಂ ಡಿ.ಕೆ.ಶಿವಕುಮಾರ್ (D.K. Shivakumar)

[ccc_my_favorite_select_button post_id="113000"]
2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

ದಾವಣಗೆರೆ: ಬೆಂಗಳೂರು-ದಾವಣಗೆರೆ- ಬೆಳಗಾವಿಗೆ ವಂದೇ ಭಾರತ್ ಎಕ್ಸ್‍ಪ್ರೆಸ್ (Vande Bharat Express) ರೈಲು ಸೇವೆಯಿಂದ ಶಿಕ್ಷಣ, ಆರೋಗ್ಯ ಸೇವೆಯ ಅನುಕೂಲದ ಜೊತೆಗೆ ವ್ಯಾಪಾರ ವಹಿವಾಟು ವೃದ್ದಿಯಾಗಲಿದೆ ಎಂದು ಸಂಸದರಾದ ಡಾ; ಪ್ರಭಾ ಮಲ್ಲಿಕಾರ್ಜುನ್ (Dr.

[ccc_my_favorite_select_button post_id="112408"]
Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

ಹಳೆ ದ್ವೇಷದ ಹಿನ್ನೆಲೆ ಎರಡು ಗ್ಯಾಂಗ್‌ಗಳ ನಡುವೆ ಮಾರಾಮಾರಿ ನಡೆದಿದೆ. ದೊಣ್ಣೆ, ಮಾರಕಾಸ್ತ್ರಗಳಿಂದ ಪರಸ್ಪರ ಹೊಡೆ ದಾಡಿಕೊಂಡಿದ್ದಾರೆ. Crime News;

[ccc_my_favorite_select_button post_id="110866"]
ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಪ್ರವಾಸದಲ್ಲಿರುವ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ತಮ್ಮ ಪ್ರವಾಸದ ಎರಡನೇ ದಿನವೂ ಇಲ್ಲಿನ ಆಡಳಿತ

[ccc_my_favorite_select_button post_id="110371"]

ಕ್ರೀಡೆ

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಒಡಿಶಾದ ಭುವನೇಶ್ವರದಲ್ಲಿ‌ ಇದೇ ತಿಂಗಳ 10ರಂದು ನಡೆದ ವಿಶ್ವ ಅಥ್ಲೆಟಿಕ್ಸ್ ನ ಕಾಂಟಿನೆಂಟಲ್ ಕೂಟದ ಮಹಿಳೆಯರ ವಿಭಾಗದ 400 ಮೀಟರ್ ಓಟದಲ್ಲಿ ಚಿನ್ನದ ಪದಕ ಗಳಿಸಿದ ರಾಜ್ಯಕ್ಕೆ ಕೀರ್ತಿ ತಂದ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ

[ccc_my_favorite_select_button post_id="112580"]
ದೊಡ್ಡಬಳ್ಳಾಪುರ: ಹೆಂಡ ಸಾಗಿಸುತ್ತಿದ್ದ ಮಹಿಳೆಯ ಬಂಧನ.. 70 ಲೀಟರ್‌ ಹೆಂಡ ವಶ..!

ದೊಡ್ಡಬಳ್ಳಾಪುರ: ಹೆಂಡ ಸಾಗಿಸುತ್ತಿದ್ದ ಮಹಿಳೆಯ ಬಂಧನ.. 70 ಲೀಟರ್‌ ಹೆಂಡ ವಶ..!

ನೆರೆ ರಾಜ್ಯದಿಂದ ಅಕ್ರಮವಾಗಿ ಹೆಂಡ (Toddy) ಸಾಗಿಸುತ್ತಿದ್ದ ಮಹಿಳೆಯನ್ನು ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.

[ccc_my_favorite_select_button post_id="112911"]
ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ಮಳೆಯ ವೇಳೆ ವಾಹನ ಸವಾರರು ಎಷ್ಟು ಮುಂಜಾಗ್ರತೆ ಸಾಲದು. ಏಕೆಂದರೆ ನಿನ್ನೆ ಸಂಜೆ ಸುರಿದ ಭಾರಿ ಮಳೆಯ ಕಾರಣ ರಸ್ತೆ ಬದಿಯಲ್ಲಿ ಕೆಟ್ಟು ನಿಂತಿದ್ದ ಟ್ರಾಕ್ಟರ್ ಕಾಣದೆ Accident

[ccc_my_favorite_select_button post_id="112435"]

ಆರೋಗ್ಯ

ಸಿನಿಮಾ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಕಾಂಗ್ರೆಸ್ (Congress) ಮಾಡಿರುವ ಓಟ್ ಚೋರಿ ಆರೋಪ ದಿನೇದಿನೇ ತೀವ್ರ ಸ್ವರೂಪ ಪಡೆಯುತ್ತಿದ್ದು, ಚುನಾವಣೆ ಆಯೋಗ (Election Commission) ಹಾಗೂ ಕೇಂದ್ರ ಸರ್ಕಾರದ (Central Government) ವಿರುದ್ಧ ಅನುಮಾನ ಹೆಚ್ಚಿಸುವಂತೆ ಮಾಡುತ್ತಿದೆ‌.

[ccc_my_favorite_select_button post_id="112714"]
error: Content is protected !!