ಬೆಂ.ಗ್ರಾ.ಜಿಲ್ಲೆ: ನಾಳೆ (ಜುಲೈ 02) ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿಗಿರಿಧಾಮದಲ್ಲಿ (Nandi Hills) 2025 ನೇ ಸಾಲಿನ 14ನೇ ಸಚಿವ ಸಂಪುಟ ಸಭೆಯನ್ನು (Cabinet meeting) ಹಮ್ಮಿಕೊಳ್ಳಲಾಗಿದೆ.
ಈ ಹಿನ್ನೆಲೆಯಲ್ಲಿ ಜುಲೈ 02 ರಂದು ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ದೇವನಹಳ್ಳಿ ಟೌನ್ ರಾಣಿ ಸರ್ಕಲ್ನಿಂದ ಜಿಲ್ಲಾ ವ್ಯಾಪ್ತಿಗೆ ಒಳಪಡುವ ನಂದಿಬೆಟ್ಟದ ತಪ್ಪಲಿನ ಪ್ರದೇಶದವರೆಗೂ ವಾಹನಗಳ ನಿರ್ಭಂಧ ವಿಧಿಸಲಾಗಿದೆ.
ಅಲ್ಲದೆ ರಸ್ತೆ ಬದಿ ವ್ಯಾಪಾರ ವಹಿವಾಟನ್ನು ನಿಷೇಧಿಸಿ ಜಿಲ್ಲಾಧಿಕಾರಿ ಎ.ಬಿ.ಬಸವರಾಜು ಅವರು ಆದೇಶಿಸಿದ್ದಾರೆ.