Police arrest thief involved in 97 house burglaries..!

97 ಮನೆಗಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಕಳ್ಳನ ಎಡೆಮುರಿ ಕಟ್ಟಿದ ಪೊಲೀಸರು..!

ಚಿಕ್ಕಬಳ್ಳಾಪುರ: ಇವನು ಅಂತಿಂಥ ಕಳ್ಳನಲ್ಲ (Thief), ಪ್ರತಿ ದಿನವೂ ಒಂದಲ್ಲ ಒಂದು ಮನೆಗೆ ಕನ್ನ ಹಾಕೋದು ಇವನ ಕಾಯಕ, ಅವನ ಮೇಲೆ ಆಂಧ್ರ ಹಾಗೂ ತೆಲಂಗಾಣದಲ್ಲಿ ಇರೋದು 97 ಮನೆಗಳ್ಳತನ ಪ್ರಕರಣಗಳು, ಹೀಗೆ ಕನ್ನ ಹಾಕಿದ ಹಣದಲ್ಲಿ ಕುಡಿದು ತೂರಾಡಿ ಮೋಜು ಮಸ್ತಿ ಮಾಡೋದೆ ಅವನಿಗೆ ಚಟ.

ಇನ್ನೂ ಸ್ನೇಹಿತ ನೊಡೋಕೆ ಅಂತ ಕರ್ನಾಟಕಕ್ಕೆ ಬಂದವನು ಕರ್ನಾಟಕದಲ್ಲೂ ಮನೆಗಳ್ಳತನ ಮಾಡಿ ಎಸ್ಕೇಪ್ ಆಗಿದ್ದ. ಇಂತಹ ಖತರ್ನಾಕ್ ಕಳ್ಳನನ್ನ ಕರ್ನಾಟಕ ಪೊಲೀಸರು ಎಡೆಮುರಿ ಕಟ್ಟಿ ಜೈಲಿಗಟ್ಟಿದ್ದಾರೆ..

ಯಾರು ಈ ಕಳ್ಳ..?

ಹೌದು 97 ಮನೆಗಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿ ಈಗ ಕರ್ನಾಟಕ ಪೊಲೀಸರ ಅತಿಥಿಯಾಗಿ ಜೈಲು ಸೇರಿರೋ ಈ ಖತರ್ನಾಕ್ ಮನೆಗಳ್ಳನ ಹೆಸರು ರಾಹುಲ್ ಕುಮಾರ್ ಶರ್ಮಾ ಅಂತ, ಮೂಲತಃ ರಾಜಸ್ತಾನದವನಾದರೂ ತೆಲಂಗಾಣದಲ್ಲಿ ವಾಸವಾಗಿದ್ದಾನೆ.

15 ವರ್ಷಕ್ಕೆ ಮನೆಯಿಂದ ಹೊರ ಬಂದವನು ಮಾಡ್ತಿರೋ ವೃತ್ತಿಯೇ ಮನೆಗಳ್ಳತನ, ಸರಿಸುಮಾರು 38 ವರ್ಷದ ಈ ರಾಹುಲ್ ಇದುವರೆಗೂ ತೆಲಂಗಾಣ ಹಾಗೂ ಆಂಧ್ರಪ್ರದೇಶದಲ್ಲಿ 97 ಕಡೆ ಮನೆಗಳ್ಳತನ ಮಾಡಿ ಖತರ್ನಾಕ್ ಕಳ್ಳನಾಗಿದ್ದಾನೆ.

ಇನ್ನೂ ಇದೇ ರಾಹುಲ್ ಕುಮಾರ್ ಶರ್ಮಾ ತನ್ನ ಸ್ನೇಹಿತ ಸೈಯದ್ ಷರೀಫ್ ಜೊತೆ ಸೇರಿ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ಪಟ್ಟಣಕ್ಕೆ ಮತ್ತೋರ್ವ ಸ್ನೇಹಿತ ಅಲ್ಲಾ ಬಕಾಷ್ ನ ನೋಡೋಕೆ ಅಂತ ಬಂದಿದ್ದರು.. ಇನ್ನೂ ತೆಲಂಗಾಣದಿಂದ ಸ್ನೇಹಿತರು ಬಂದ್ರು ಅಂತ ಅಲ್ಲಾ ಬಕಾಷ್ ತಮ್ಮನಾಯಕನಹಳ್ಳಿ ಬಳಿಯ ಬಾರ್ ವೊಂದರಲ್ಲಿ ಪಾರ್ಟಿ ಸಹ ಕೊಡಿಸಿದ್ದ.

ಕುಡಿದು ಇನ್ನೇನು ತೆಲಂಗಾಣಕ್ಕೆ ವಾಪಾಸ್ ಹೋಗಬೇಕು ಅಂತ ಬಂದವರು, ಚಿಕ್ಕಬಳ್ಳಾಪುರದ ಅಣಕನೂರು ಬಳಿಯ ರಸ್ತೆ ಬದಿ ಬೇಕರಿವೊಂದರಲ್ಲಿ ಟೀ ಕುಡಿಯೋಕೆ ಅಂತ ಗಾಡಿ ನಿಲ್ಲಿಸಿದ್ರಂತೆ, ಈ ವೇಳೆ ಖತರ್ನಾಕ್ ಕಳ್ಳ ರಾಹುಲ್ ಕುಮಾರ್ ಶರ್ಮಾ ಮೂತ್ರ ವಿಸರ್ಜನೆಗೆ ಅಂತ ಹೋದವನು ರಸ್ತೆ ಬದಿಯಲ್ಲೇ ಬೀಗ ಹಾಕಿದ್ದ ಮನೆಯೊಂದು ಕಣ್ಣಿಗೆ ಕಂಡಿದ್ದೇ ತಡ, ಮನೆಯ ಬೀಗವನ್ನ ಕ್ಷಣ ಮಾತ್ರದಲ್ಲೇ ಒಡೆದು ಹಾಕಿ ಮನೆಯಲ್ಲಿದ್ದ ಚಿನ್ನಾಭರಣ ನಗದು ದೋಚಿದ್ದಾನೆ.

ಅಂದಹಾಗೆ ಅಣಕನೂರು ಗ್ರಾಮದ ಮುನಿಯಪ್ಪ ಮುನಿನರಸಮ್ಮ ದಂಪತಿ ಮನೆಗೆ ಬೀಗ ಹಾಕಿ ಹೊಲ ಕಟಾವಿಗೆ ಅಂತ ಜಮೀನಿನತ್ತ ತೆರಳಿದ್ರು, ಹೀಗಾಗಿ ಮನೆಯಲ್ಲಿ ಯಾರೂ ಇಲ್ಲ ಮನೆಗೆ ಬೀಗ ಹಾಕಿದೆ ಅಂತ ಖತರ್ನಾಕ್ ರಾಹುಲ್ ಕುಮಾರ್ ಶರ್ಮಾ ಹಿಂದೆ ಮುಂದೆ ಯೋಚನೆ ಮಾಡದೆ ಮನೆಯ ಬೀಗ ಹೊಡೆದು, ಬಿರುವಿನಲ್ಲಿದ್ದ 2 ಲಕ್ಷ 50 ಸಾವಿರ ನಗದು, 35 ಗ್ರಾಂ ತೂಕದ ಚಿನ್ನಾಭರಣಗಳನ್ನ ಕದ್ದಿದ್ದ.

ಇನ್ನು ಮಗಳ ಮದುವೆಗೆ ಅಂತ ಮಾಡಿಸಿದ್ದ ಚಿನ್ನಾಭರಣ ಕಳ್ಳನ ಪಾಲಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರು ಸಿಸಿಟಿವಿ ದೃಶ್ಯಾವಳಿ, ಫಿಂಗರ್ ಪ್ರಿಂಟ್ ಗಳ ಆಧಾರದ ಮೇಲೆ ಕಿಲಾಡಿ ಕಳ್ಳ ರಾಹುಲ್ ಕುಮಾರ್ ಶರ್ಮಾ, ಹಾಗೂ ಸೈಯದ್ ಷರೀಫ್ ಹಾಗೂ ಅಲ್ಲಾ ಬಕಾಷ್ ನನ್ನ ಬಂಧಿಸಿ ಜೈಲಿಗಟ್ಟಿದ್ದಾರೆ.

ಇನ್ನೂ ತೆಲಂಗಾಣ ಹಾಗೂ ಆಂಧ್ರಪ್ರದೇಶದಲ್ಲಿ 97 ಕಡೆ ಮನೆಗಳವು ಪ್ರಕರಣಗಳಲ್ಲಿ ಭಾಗಿಯಾಗಿರೋ ಈ ಖತರ್ನಾಕ್ ರಾಹುಲ್ ಕುಮಾರ್ ಶರ್ಮಾ ಇದೇ ಮೊದಲನೇ ಬಾರಿಗೆ ಕರ್ನಾಟಕದಲ್ಲಿ ಕಳ್ಳತನ ಮಾಡಿದ್ದ. ಆದ್ರೆ ಕರ್ನಾಟಕ ಪೊಲೀಸರು ಮೊದಲ ಪ್ರಕರಣದಲ್ಲೇ ಆರೋಪಿಗಳನ್ನ ಬಂಧಿಸಿ ಜೈಲಿಗಟ್ಟಿದ್ದಾರೆ.

ಬಂಧಿತನಿಂದ 20 ಗ್ರಾಂ ಚಿನ್ನಾಭರಣ ಹಾಗೂ 25 ಸಾವಿರ ನಗದು ಸೇರಿದಂತೆ ಕೃತ್ಯಕ್ಕೆ ಬಳಸಿದ ಬೈಕ್ ಸಹ ಸೀಝ್ ಮಾಡಿದ್ದಾರೆ.

ರಾಜಕೀಯ

ದೊಡ್ಡಬಳ್ಳಾಪುರದಲ್ಲಿ ಬೃಹತ್ ಶ್ರೀರಾಮ ಶೋಭಾಯಾತ್ರೆ: ಪೂರ್ವಭಾವಿಯಾಗಿ ಅಬ್ಬರದ ಬೈಕ್ ರ‍್ಯಾಲಿ

ದೊಡ್ಡಬಳ್ಳಾಪುರದಲ್ಲಿ ಬೃಹತ್ ಶ್ರೀರಾಮ ಶೋಭಾಯಾತ್ರೆ: ಪೂರ್ವಭಾವಿಯಾಗಿ ಅಬ್ಬರದ ಬೈಕ್ ರ‍್ಯಾಲಿ

ವಿಶ್ವ ಹಿಂದೂ ಪರಿಷದ್ ಬಜರಂಗದ ವತಿಯಿಂದ ಮೂರು ದಿನಗಳ ಕಾಲ ಹಮ್ಮಿಕೊಂಡಿರುವ ಬೃಹತ್ ಶ್ರೀರಾಮ ಶೋಭಾಯಾತ್ರೆ (Sri Rama Sobhayatre) ಹಿನ್ನಲೆಯಲ್ಲಿ ಮೊದಲ ದಿನ ಪೂರ್ವಭಾವಿಯಾಗಿ ಬೈಕ್ ರ‍್ಯಾಲಿ ನಡೆಸುವ ಮೂಲಕ ಶೋಭಾ ಯಾತ್ರೆಯ

[ccc_my_favorite_select_button post_id="120514"]
ಸಿದ್ದರಾಮಯ್ಯ ನವರ ದಿಕ್ಕೆಟ್ಟ ನೀತಿಗಳು ಸರ್ಕಾರಿ ನೌಕರರನ್ನು ಬೀದಿಗೆ ತಂದಿವೆ;ಆರ್. ಅಶೋಕ

ಸಿದ್ದರಾಮಯ್ಯ ನವರ ದಿಕ್ಕೆಟ್ಟ ನೀತಿಗಳು ಸರ್ಕಾರಿ ನೌಕರರನ್ನು ಬೀದಿಗೆ ತಂದಿವೆ;ಆರ್. ಅಶೋಕ

ತುಘಲಕ್‌ ನೀತಿಗಳಿಂದಲೇ ದುರಾಡಳಿತಕ್ಕೆ ಹೆಸರಾಗಿರುವ ಕಾಂಗ್ರೆಸ್ ಸರ್ಕಾರ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದೆ. ಇದರಿಂದ ಸರ್ಕಾರಿ ನೌಕರರಿಗೆ ಸಂಬಳ ಕೊಡುವುದಕ್ಕೂ ಸರ್ಕಾರದ ಬಳಿ ದುಡ್ಡಿಲ್ಲ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ (R. Ashoka)

[ccc_my_favorite_select_button post_id="120234"]
ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಮಧ್ಯಪ್ರಾಚ್ಯದಲ್ಲಿ ಯುದ್ದ ನಡೆಯುತ್ತಿರುವುದರಿಂದ ಭಾರತದ ಷೇರುಪೇಟೆ (Indian share market ) ತತ್ತರಿಸುತ್ತಿದ್ದು, ಕೋಟ್ಯಾಂತರ ರೂ ನಷ್ಟದ ಜೊತೆಗೆ, ತೈಲ ಬೆಲೆಯೇರಿಕೆಯಾಗುವ ಭೀತಿ ಉಂಟಾಗಿದೆ.

[ccc_my_favorite_select_button post_id="119892"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

IPLಗೆ ಕ್ಷಣಗಣನೆ.. ಟಿಕೆಟ್ ಬೇಡಿ ಮರ್ಯಾದೆ ಕಳೆದುಕೊಂಡ ಶಾಸಕರು

IPLಗೆ ಕ್ಷಣಗಣನೆ.. ಟಿಕೆಟ್ ಬೇಡಿ ಮರ್ಯಾದೆ ಕಳೆದುಕೊಂಡ ಶಾಸಕರು

ಇಂಡಿಯನ್ ಪ್ರೀಮಿಯರ್ ಲೀಗ್ (IPL) 19ನೇ ಆವೃತ್ತಿಯ ಉದ್ಘಾಟನಾ ಪಂದ್ಯ ಇಂದು (ಮಾರ್ಚ್ 28) ಚಿನ್ನಸ್ವಾಮಿಯಲ್ಲಿ ನಡೆಯಲಿದ್ದು, ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್‌ ರೈಸರ್ಸ್ ಹೈದರಾಬಾದ್ ತಂಡ ಮುಖಾಮುಖಿಯಾಗಲಿವೆ.

[ccc_my_favorite_select_button post_id="120518"]

RCB ಮಾರಾಟ: ವಿಜಯ್ ಮಲ್ಯ ಭಾವುಕ ಸಂದೇಶ

[ccc_my_favorite_select_button post_id="120461"]

RCBಗೆ ಕೆಎಂಎಫ್ ಪ್ರಾಯೋಜಕತ್ವ..!

[ccc_my_favorite_select_button post_id="120424"]

IPL ಟಿಕೆಟ್: ನಕಲಿ ಲಿಂಕ್ ಎಚ್ಚರಿಕೆ

[ccc_my_favorite_select_button post_id="120376"]
ಫೋಟೋಶೂಟ್ ವೇಳೆ ಫೊಟೋಗ್ರಾಫರ್‌‌ಗಳ ಮೇಲೆ ಹಲ್ಲೆ: 7 ಜನರ ಬಂಧನ

ಫೋಟೋಶೂಟ್ ವೇಳೆ ಫೊಟೋಗ್ರಾಫರ್‌‌ಗಳ ಮೇಲೆ ಹಲ್ಲೆ: 7 ಜನರ ಬಂಧನ

ಮದುವೆ ನಿಶ್ಚಯವಾಗಿದ್ದ ಜೋಡಿಯೊಂದರ ಪ್ರೀ ವೆಡ್ಡಿಂಗ್ ಫೋಟೋ ಶೂಟ್‌ಗೆಂದು (photoshoot) ತೆರಳಿದ್ದ ಫೋಟೋಗ್ರಾಫರ್‌ಗಳ (Photographers) ಮೇಲೆ ಸ್ಥಳೀಯ ಕೆಲವರು ಹಲ್ಲೆ ನಡೆಸಿರುವ ಘಟನೆ ಸಕಲೇಶಪುರ ತಾಲೂಕಿನ ಬೆಟ್ಟದ ಭೈರವೇಶ್ವರ ದೇವಾಲಯದ ಆವರಣದಲ್ಲಿ ನಡೆದಿದೆ.

[ccc_my_favorite_select_button post_id="120523"]
ದೊಡ್ಡಬಳ್ಳಾಪುರ: ಅಪಘಾತ.. ತಮ್ಮನ ಮನೆಗೆ ಬರುತ್ತಿದ್ದ ಮಹಿಳೆ ದುರ್ಮರಣ

ದೊಡ್ಡಬಳ್ಳಾಪುರ: ಅಪಘಾತ.. ತಮ್ಮನ ಮನೆಗೆ ಬರುತ್ತಿದ್ದ ಮಹಿಳೆ ದುರ್ಮರಣ

ಶ್ರೀರಾಮನವಮಿ ಹಬ್ಬಕ್ಕೆಂದು ತಮ್ಮನ ಮನೆಗೆ ಬರುತ್ತಿದ್ದ ಮಹಿಳೆಗೆ ಕ್ಯಾಂಟರ್ ಡಿಕ್ಕಿ ಹೊಡೆದ ಪರಿಣಾಮ (Accident) ಸ್ಥಳದಲ್ಲಿಯೇ ಸಾವನಪ್ಪಿರುವ ಘಟನೆ ಹಮಾಮ್ ಗೇಟ್ ಬಳಿ ಗುರುವಾರ ರಾತ್ರಿ ನಡೆದಿದೆ.

[ccc_my_favorite_select_button post_id="120487"]

ಆರೋಗ್ಯ

ಸಿನಿಮಾ

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ (Actor Darshan) ಅವರಿಗೆ ಇಂದು ಜನ್ಮದಿನದ (Birthday) ಸಡಗರ. 49ನೇ ವರ್ಷಕ್ಕೆ ದರ್ಶನ್ ಕಾಲಿಟ್ಟಿದ್ದಾರೆ.

[ccc_my_favorite_select_button post_id="119431"]
error: Content is protected !!