Police arrest thief involved in 97 house burglaries..!

97 ಮನೆಗಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಕಳ್ಳನ ಎಡೆಮುರಿ ಕಟ್ಟಿದ ಪೊಲೀಸರು..!

ಚಿಕ್ಕಬಳ್ಳಾಪುರ: ಇವನು ಅಂತಿಂಥ ಕಳ್ಳನಲ್ಲ (Thief), ಪ್ರತಿ ದಿನವೂ ಒಂದಲ್ಲ ಒಂದು ಮನೆಗೆ ಕನ್ನ ಹಾಕೋದು ಇವನ ಕಾಯಕ, ಅವನ ಮೇಲೆ ಆಂಧ್ರ ಹಾಗೂ ತೆಲಂಗಾಣದಲ್ಲಿ ಇರೋದು 97 ಮನೆಗಳ್ಳತನ ಪ್ರಕರಣಗಳು, ಹೀಗೆ ಕನ್ನ ಹಾಕಿದ ಹಣದಲ್ಲಿ ಕುಡಿದು ತೂರಾಡಿ ಮೋಜು ಮಸ್ತಿ ಮಾಡೋದೆ ಅವನಿಗೆ ಚಟ.

ಇನ್ನೂ ಸ್ನೇಹಿತ ನೊಡೋಕೆ ಅಂತ ಕರ್ನಾಟಕಕ್ಕೆ ಬಂದವನು ಕರ್ನಾಟಕದಲ್ಲೂ ಮನೆಗಳ್ಳತನ ಮಾಡಿ ಎಸ್ಕೇಪ್ ಆಗಿದ್ದ. ಇಂತಹ ಖತರ್ನಾಕ್ ಕಳ್ಳನನ್ನ ಕರ್ನಾಟಕ ಪೊಲೀಸರು ಎಡೆಮುರಿ ಕಟ್ಟಿ ಜೈಲಿಗಟ್ಟಿದ್ದಾರೆ..

ಯಾರು ಈ ಕಳ್ಳ..?

ಹೌದು 97 ಮನೆಗಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿ ಈಗ ಕರ್ನಾಟಕ ಪೊಲೀಸರ ಅತಿಥಿಯಾಗಿ ಜೈಲು ಸೇರಿರೋ ಈ ಖತರ್ನಾಕ್ ಮನೆಗಳ್ಳನ ಹೆಸರು ರಾಹುಲ್ ಕುಮಾರ್ ಶರ್ಮಾ ಅಂತ, ಮೂಲತಃ ರಾಜಸ್ತಾನದವನಾದರೂ ತೆಲಂಗಾಣದಲ್ಲಿ ವಾಸವಾಗಿದ್ದಾನೆ.

15 ವರ್ಷಕ್ಕೆ ಮನೆಯಿಂದ ಹೊರ ಬಂದವನು ಮಾಡ್ತಿರೋ ವೃತ್ತಿಯೇ ಮನೆಗಳ್ಳತನ, ಸರಿಸುಮಾರು 38 ವರ್ಷದ ಈ ರಾಹುಲ್ ಇದುವರೆಗೂ ತೆಲಂಗಾಣ ಹಾಗೂ ಆಂಧ್ರಪ್ರದೇಶದಲ್ಲಿ 97 ಕಡೆ ಮನೆಗಳ್ಳತನ ಮಾಡಿ ಖತರ್ನಾಕ್ ಕಳ್ಳನಾಗಿದ್ದಾನೆ.

ಇನ್ನೂ ಇದೇ ರಾಹುಲ್ ಕುಮಾರ್ ಶರ್ಮಾ ತನ್ನ ಸ್ನೇಹಿತ ಸೈಯದ್ ಷರೀಫ್ ಜೊತೆ ಸೇರಿ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ಪಟ್ಟಣಕ್ಕೆ ಮತ್ತೋರ್ವ ಸ್ನೇಹಿತ ಅಲ್ಲಾ ಬಕಾಷ್ ನ ನೋಡೋಕೆ ಅಂತ ಬಂದಿದ್ದರು.. ಇನ್ನೂ ತೆಲಂಗಾಣದಿಂದ ಸ್ನೇಹಿತರು ಬಂದ್ರು ಅಂತ ಅಲ್ಲಾ ಬಕಾಷ್ ತಮ್ಮನಾಯಕನಹಳ್ಳಿ ಬಳಿಯ ಬಾರ್ ವೊಂದರಲ್ಲಿ ಪಾರ್ಟಿ ಸಹ ಕೊಡಿಸಿದ್ದ.

ಕುಡಿದು ಇನ್ನೇನು ತೆಲಂಗಾಣಕ್ಕೆ ವಾಪಾಸ್ ಹೋಗಬೇಕು ಅಂತ ಬಂದವರು, ಚಿಕ್ಕಬಳ್ಳಾಪುರದ ಅಣಕನೂರು ಬಳಿಯ ರಸ್ತೆ ಬದಿ ಬೇಕರಿವೊಂದರಲ್ಲಿ ಟೀ ಕುಡಿಯೋಕೆ ಅಂತ ಗಾಡಿ ನಿಲ್ಲಿಸಿದ್ರಂತೆ, ಈ ವೇಳೆ ಖತರ್ನಾಕ್ ಕಳ್ಳ ರಾಹುಲ್ ಕುಮಾರ್ ಶರ್ಮಾ ಮೂತ್ರ ವಿಸರ್ಜನೆಗೆ ಅಂತ ಹೋದವನು ರಸ್ತೆ ಬದಿಯಲ್ಲೇ ಬೀಗ ಹಾಕಿದ್ದ ಮನೆಯೊಂದು ಕಣ್ಣಿಗೆ ಕಂಡಿದ್ದೇ ತಡ, ಮನೆಯ ಬೀಗವನ್ನ ಕ್ಷಣ ಮಾತ್ರದಲ್ಲೇ ಒಡೆದು ಹಾಕಿ ಮನೆಯಲ್ಲಿದ್ದ ಚಿನ್ನಾಭರಣ ನಗದು ದೋಚಿದ್ದಾನೆ.

ಅಂದಹಾಗೆ ಅಣಕನೂರು ಗ್ರಾಮದ ಮುನಿಯಪ್ಪ ಮುನಿನರಸಮ್ಮ ದಂಪತಿ ಮನೆಗೆ ಬೀಗ ಹಾಕಿ ಹೊಲ ಕಟಾವಿಗೆ ಅಂತ ಜಮೀನಿನತ್ತ ತೆರಳಿದ್ರು, ಹೀಗಾಗಿ ಮನೆಯಲ್ಲಿ ಯಾರೂ ಇಲ್ಲ ಮನೆಗೆ ಬೀಗ ಹಾಕಿದೆ ಅಂತ ಖತರ್ನಾಕ್ ರಾಹುಲ್ ಕುಮಾರ್ ಶರ್ಮಾ ಹಿಂದೆ ಮುಂದೆ ಯೋಚನೆ ಮಾಡದೆ ಮನೆಯ ಬೀಗ ಹೊಡೆದು, ಬಿರುವಿನಲ್ಲಿದ್ದ 2 ಲಕ್ಷ 50 ಸಾವಿರ ನಗದು, 35 ಗ್ರಾಂ ತೂಕದ ಚಿನ್ನಾಭರಣಗಳನ್ನ ಕದ್ದಿದ್ದ.

ಇನ್ನು ಮಗಳ ಮದುವೆಗೆ ಅಂತ ಮಾಡಿಸಿದ್ದ ಚಿನ್ನಾಭರಣ ಕಳ್ಳನ ಪಾಲಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರು ಸಿಸಿಟಿವಿ ದೃಶ್ಯಾವಳಿ, ಫಿಂಗರ್ ಪ್ರಿಂಟ್ ಗಳ ಆಧಾರದ ಮೇಲೆ ಕಿಲಾಡಿ ಕಳ್ಳ ರಾಹುಲ್ ಕುಮಾರ್ ಶರ್ಮಾ, ಹಾಗೂ ಸೈಯದ್ ಷರೀಫ್ ಹಾಗೂ ಅಲ್ಲಾ ಬಕಾಷ್ ನನ್ನ ಬಂಧಿಸಿ ಜೈಲಿಗಟ್ಟಿದ್ದಾರೆ.

ಇನ್ನೂ ತೆಲಂಗಾಣ ಹಾಗೂ ಆಂಧ್ರಪ್ರದೇಶದಲ್ಲಿ 97 ಕಡೆ ಮನೆಗಳವು ಪ್ರಕರಣಗಳಲ್ಲಿ ಭಾಗಿಯಾಗಿರೋ ಈ ಖತರ್ನಾಕ್ ರಾಹುಲ್ ಕುಮಾರ್ ಶರ್ಮಾ ಇದೇ ಮೊದಲನೇ ಬಾರಿಗೆ ಕರ್ನಾಟಕದಲ್ಲಿ ಕಳ್ಳತನ ಮಾಡಿದ್ದ. ಆದ್ರೆ ಕರ್ನಾಟಕ ಪೊಲೀಸರು ಮೊದಲ ಪ್ರಕರಣದಲ್ಲೇ ಆರೋಪಿಗಳನ್ನ ಬಂಧಿಸಿ ಜೈಲಿಗಟ್ಟಿದ್ದಾರೆ.

ಬಂಧಿತನಿಂದ 20 ಗ್ರಾಂ ಚಿನ್ನಾಭರಣ ಹಾಗೂ 25 ಸಾವಿರ ನಗದು ಸೇರಿದಂತೆ ಕೃತ್ಯಕ್ಕೆ ಬಳಸಿದ ಬೈಕ್ ಸಹ ಸೀಝ್ ಮಾಡಿದ್ದಾರೆ.

ರಾಜಕೀಯ

ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಗೊಂದಲ..!?

ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಗೊಂದಲ..!?

ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಚುನಾವಣೆಯ (Bashettihalli Town Panchayat Election) 6 ಮತ್ತು 7ನೇ ವಾರ್ಡ್ನಲ್ಲಿ ಬಿಜೆಪಿ (BJP) ವತಿಯಿಂದ ಅಧಿಕೃತ ಅಭ್ಯರ್ಥಿಗಳು ಯಾರು ಎಂಬ ಗೊಂದಲ ಮುಖಂಡರು ಹಾಗೂ ಮತದಾರರಿಗೆ ಎದುರಾಗಿದೆ.

[ccc_my_favorite_select_button post_id="117550"]
ಕಲಾವಿದರಾದ ಉಮೇಶ್, ರಾಮಚಂದ್ರಯ್ಯ ಅವರಿಗೆ ದೊಡ್ಡಬಳ್ಳಾಪುರದಲ್ಲಿ ನುಡಿನಮನ

ಕಲಾವಿದರಾದ ಉಮೇಶ್, ರಾಮಚಂದ್ರಯ್ಯ ಅವರಿಗೆ ದೊಡ್ಡಬಳ್ಳಾಪುರದಲ್ಲಿ ನುಡಿನಮನ

ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕನ್ನಡ ಜಾಗೃತ ಪರಿಷತ್ತು ವತಿಯಿಂದ ಚಲನಚಿತ್ರ ಹಾಸ್ಯ ನಟ ಉಮೇಶ್ (Umesh) ಮತ್ತು ಜಾನಪದ ಕಲಾವಿದ ಶ್ಯಾಕಲದೇವನಪುರ ರಾಮಚಂದ್ರಯ್ಯ (Ramachandraiah) ಅವರಿಗೆ ನುಡಿನಮನ ಕಾರ್ಯಕ್ರಮ ನಡೆಯಿತು. 

[ccc_my_favorite_select_button post_id="117539"]
ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಅವರೊಂದಿಗೆ, ಸಂಘಟನೆಯ ಟ್ರಸ್ಟಿಯೂ ಆಗಿರುವ ಸಂಸದ ಡಾ.ಕೆ.ಸುಧಾಕರ್‌ (Dr.K.Sudhakar)

[ccc_my_favorite_select_button post_id="113863"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ದೊಡ್ಡಬಳ್ಳಾಪುರದ ಎಂ.ಆ‌ರ್.ಜಾಹ್ನವಿಗೆ ಬಾಲ ವಿಕಾಸ ಅಕಾಡೆಮಿ ಪ್ರಶಸ್ತಿ

ದೊಡ್ಡಬಳ್ಳಾಪುರದ ಎಂ.ಆ‌ರ್.ಜಾಹ್ನವಿಗೆ ಬಾಲ ವಿಕಾಸ ಅಕಾಡೆಮಿ ಪ್ರಶಸ್ತಿ

ಇಲ್ಲಿನ ನಿಸರ್ಗ ಯೋಗ ಕೇಂದ್ರದ ಯೋಗಪಟು ಎಂ. ಆರ್. ಜಾಹ್ನವಿ (M.R. Jahnavi) ಅವರಿಗೆ ಧಾರವಾಡದ ಕರ್ನಾಟಕ ಬಾಲ ವಿಕಾಸ ಅಕಾಡೆಮಿ ವತಿಯಿಂದ 2023-24ನೇ ಸಾಲಿಗೆ ನೀಡಲಾಗುವ ಅಕಾಡೆಮಿ ಬಾಲ ಗೌರವ ಪ್ರಶಸ್ತಿ ಬಾಲ

[ccc_my_favorite_select_button post_id="117462"]
ವಿದ್ಯುತ್ ಸ್ಪರ್ಶಿಸಿ ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿ ದುರ್ಮರಣ..!

ವಿದ್ಯುತ್ ಸ್ಪರ್ಶಿಸಿ ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿ ದುರ್ಮರಣ..!

ಗೆಳೆಯರೊಂದಿಗೆ ಕ್ರಿಕೆಟ್ ಆಟವಾಡುವ ವೇಳೆ ಆಕಸ್ಮಿಕವಾಗಿ ವಿದ್ಯುತ್ ತಂತಿ ತುಳಿದ ಪರಿಣಾಮ ಸದಲಗಾ ಪಟ್ಟಣದ ಮೊರಾರ್ಜಿ ವಸತಿ ಶಾಲೆಯ (Morarji Residential School) ವಿದ್ಯಾರ್ಥಿ ಮೃತಪಟ್ಟಿರುವ ಘಟನೆ ಗುರುವಾರ ಸಂಜೆ ನಡೆದಿದೆ.

[ccc_my_favorite_select_button post_id="117526"]
ವಿಮಾನ ಪತನ; ನಾಸ್ಕರ್‌ನ ಮಾಜಿ ಚಾಲಕ, ಅವರ ಕುಟುಂಬ ಸೇರಿದಂತೆ ಏಳು ಸಾವು

ವಿಮಾನ ಪತನ; ನಾಸ್ಕರ್‌ನ ಮಾಜಿ ಚಾಲಕ, ಅವರ ಕುಟುಂಬ ಸೇರಿದಂತೆ ಏಳು ಸಾವು

ಉತ್ತರ ಕೆರೊಲಿನಾದ ಪ್ರಾದೇಶಿಕ ವಿಮಾನ ನಿಲ್ದಾಣದಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ (Plane crash) ಸಾವನ್ನಪ್ಪಿದ ಏಳು ಜನರಲ್ಲಿ ಮಾಜಿ ನಾಸ್ಕರ್ ಚಾಲಕ ಮತ್ತು ಅವರ ಕುಟುಂಬ ಸೇರಿದೆ ಎಂದು ಕಾರು ರೇಸಿಂಗ್ ಸಂಸ್ಥೆ ತಿಳಿಸಿದೆ.

[ccc_my_favorite_select_button post_id="117528"]

ಆರೋಗ್ಯ

ಸಿನಿಮಾ

‘ದಿ ಡೆವಿಲ್’ ರಿಲೀಸ್; ದೊಡ್ಡಬಳ್ಳಾಪುರದಲ್ಲಿ ಮುಗಿಲು ಮುಟ್ಟಿದ ದರ್ಶನ್ ಅಭಿಮಾನಿಗಳ ಸಂಭ್ರಮ.!| Video ನೋಡಿ

‘ದಿ ಡೆವಿಲ್’ ರಿಲೀಸ್; ದೊಡ್ಡಬಳ್ಳಾಪುರದಲ್ಲಿ ಮುಗಿಲು ಮುಟ್ಟಿದ ದರ್ಶನ್ ಅಭಿಮಾನಿಗಳ ಸಂಭ್ರಮ.!| Video

ಅಭಿಮಾನಿಗಳ ದಾಸ, ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ (Darshan) ಅಭಿನಯದ ಬಹುನಿರೀಕ್ಷಿತ ಚಿತ್ರ 'ದಿ ಡೆವಿಲ್' ಇಂದು (ಡಿ.11) ರಾಜ್ಯಾದ್ಯಂತ ಅದ್ಧೂರಿಯಾಗಿ ರಿಲೀಸ್ ಆಗಿದ್ದು, ಯಶಸ್ವಿ ಪ್ರದರ್ಶನ ಕಾಣುತ್ತಿದೆ.

[ccc_my_favorite_select_button post_id="117242"]
error: Content is protected !!