ಜನವರಿ: ಸದ್ಗುರುಗಳಿಂದ (Sadhguru) ಪ್ರತಿಷ್ಠಾಪಿಸಲಾಗಿರುವ ಪವಿತ್ರ ಸ್ಥಳವಾದ ಸದ್ಗುರು ಸನ್ನಿಧಿಯು ಜನವರಿ 14, 2026 ಬುಧವಾರದಂದು ದಿನವಿಡೀ ಮಕರ ಸಂಕ್ರಾಂತಿ (Makara Sankranti) ಆಚರಣೆಗಳೊಂದಿಗೆ ಚೈತನ್ಯಭರಿತವಾಗಿರಲಿದೆ.
ಜ.14ರ ಸಂಜೆ 5 ರಿಂದ 6 ರವರೆಗೆ ಸದ್ಗುರುಗಳ ಸಾನ್ನಿಧ್ಯದಲ್ಲಿ ಭವ್ಯ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸಂಜೆ 7 ಗಂಟೆಗೆ ವಿಶೇಷ ಸಾಂಸ್ಕೃತಿಕ ಪ್ರದರ್ಶನ ನಡೆಯಲಿದೆ.
ಮಕರ ಸಂಕ್ರಾಂತಿಯು ಸೂರ್ಯನ ಉತ್ತರಾಭಿಮುಖ ಪಯಣವನ್ನು ಸೂಚಿಸುತ್ತದೆ ಮತ್ತು ಇದನ್ನು ಸಾಂಪ್ರದಾಯಿಕವಾಗಿ ಪ್ರಕೃತಿಯ ಕೊಡುಗೆ ಹಾಗೂ ರೈತರ ಶ್ರಮವನ್ನು ಗೌರವಿಸುವ ಸಮಯವಾಗಿ ಆಚರಿಸಲಾಗುತ್ತದೆ.
ಹಬ್ಬದ ಸಾರವನ್ನು ಸದ್ಗುರುಗಳು ಈ ರೀತಿಯಾಗಿ ವಿವರಿಸುತ್ತಾರೆ, “ಮಕರ ಸಂಕ್ರಾಂತಿಯು ವಸಂತಕಾಲದೆಡೆಗೆ ಭೂಮಿತಾಯಿಯ ಮೊದಲ ಹೆಜ್ಜೆಯನ್ನು ಸೂಚಿಸುತ್ತದೆ.” ಸದ್ಗುರು ಸನ್ನಿಧಿ ಬೆಂಗಳೂರಿನಲ್ಲಿ ಈ ಹಬ್ಬವನ್ನು ಸದ್ಗುರುಗಳ ಸಾನ್ನಿಧ್ಯದಲ್ಲಿ ಕೃತಜ್ಞತೆ, ಭಕ್ತಿ, ಸಂಸ್ಕೃತಿ ಮತ್ತು ಜನರ ಭಾಗವಹಿಸುವಿಕೆಯೊಂದಿಗೆ ಪೂರ್ಣ ದಿನದ ಸಂಭ್ರಮಾಚರಣೆಯಾಗಿ ಆಚರಿಸಲಾಗುವುದು.
ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸದ್ಗುರುಗಳು, ಪ್ರಕೃತಿಯ ಶಕ್ತಿ ಮತ್ತು ಜೀವಶಕ್ತಿಗಳಿಗೆ ಕೃತಜ್ಞತೆ ಸಲ್ಲಿಸುವ ಪ್ರಜ್ಞಾಪೂರ್ವಕ ಅಭಿವ್ಯಕ್ತಿಯಾಗಿ ಸಂಕ್ರಾಂತಿಯನ್ನು ಹೇಗೆ ಆಚರಿಸಬೇಕು ಎಂಬುದರ ಕುರಿತು ಭಕ್ತರಿಗೆ ಮಾರ್ಗದರ್ಶನ ನೀಡಲಿದ್ದಾರೆ.
ಈ ಕಾರ್ಯಕ್ರಮವು ಧ್ವನಿ, ಬೆಳಕು ಮತ್ತು ಭಕ್ತಿಪೂರ್ವಕ 14 ನಿಮಿಷಗಳ ಅದ್ಭುತ ದೃಶ್ಯ ವೈಭವವಾದ ‘ಆದಿಯೋಗಿ ದಿವ್ಯ ದರ್ಶನ’ದೊಂದಿಗೆ ಮುಕ್ತಾಯಗೊಳ್ಳಲಿದೆ.
ಆಚರಣೆಯ ಭಾಗವಾಗಿ ಸದ್ಗುರು ಸನ್ನಿಧಿಯಲ್ಲಿ ವೈಭವಪೂರ್ಣ ಜಾತ್ರೆ ನಡೆಯಲಿದ್ದು, ಇದು ಕರ್ನಾಟಕದ ಸಾಂಪ್ರದಾಯಿಕ ಜಾತ್ರೆಗಳ ಬಣ್ಣ, ರುಚಿ ಮತ್ತು ಸಮುದಾಯ ಚೈತನ್ಯಕ್ಕೆ ಜೀವ ತುಂಬಲಿದೆ.
ಸಂಕ್ರಾಂತಿಯ ಸಂಭ್ರಮದ ಜೊತೆಗೆ ನಡೆಯುವ ಜಾತ್ರೆಯು ಆಗಮಿಸುವ ಕುಟುಂಬಗಳು ಮತ್ತು ಸಂದರ್ಶಕರಿಗೆ ಈ ಪವಿತ್ರ ಆವರಣದಲ್ಲಿ ಗ್ರಾಮೀಣ ಹಬ್ಬದ ಪರಿಸರವನ್ನು ಅನುಭವಿಸುವ ಅವಕಾಶವನ್ನು ನೀಡುತ್ತದೆ.
https://www.instagram.com/reels/DTQAzVNEZV4/
ಸ್ಥಳೀಯ ಉತ್ಪನ್ನಗಳು,
ಸಾಂಪ್ರದಾಯಿಕ ಕರಕುಶಲ ವಸ್ತುಗಳು, ಕೈಮಗ್ಗದ ಬಟ್ಟೆಗಳು ಮತ್ತು ಮನೆಯಲ್ಲಿ ತಯಾರಿಸಿದ ಉತ್ಪನ್ನಗಳ ಮಳಿಗೆಗಳನ್ನು ಸಂದರ್ಶಕರು ವೀಕ್ಷಿಸಬಹುದು. ಇದು ಗ್ರಾಮೀಣ ಕುಶಲಕರ್ಮಿಗಳಿಗೆ ಮತ್ತು ಸಣ್ಣ ಉತ್ಪಾದಕರಿಗೆ ಒಂದು ವೇದಿಕೆಯನ್ನು ಒದಗಿಸುತ್ತದೆ.
ಈ ಜಾತ್ರೆಯಲ್ಲಿ ಮಕ್ಕಳಿಗಾಗಿ ಮೋಜಿನ ಆಟಗಳು ಮತ್ತು ಚಟುವಟಿಕೆಗಳೂ ಇರಲಿದ್ದು, ಬೆಂಗಳೂರು ಹಾಗೂ ಇತರ ಸ್ಥಳಗಳಿಂದ ಬರುವವರಿಗೆ ಒಂದು ಪರಿಪೂರ್ಣವಾದ ಪ್ರವಾಸವಾಗಲಿದೆ.
ಸಂಭ್ರಮಾಚರಣೆಯು ರಾಜ್ಯದ ವಿವಿಧ ಕಲಾವಿದರಿಂದ ಜಾನಪದ ಪ್ರದರ್ಶನಗಳ ಮೂಲಕ ಕರ್ನಾಟಕದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಪ್ರದರ್ಶಿಸಲಿದ್ದು, ಇದರಲ್ಲಿ ಡೊಳ್ಳು ಕುಣಿತದಂತಹ ವೈಭವಯುತ ಸಾಂಪ್ರದಾಯಿಕ ನೃತ್ಯ ಪ್ರಕಾರಗಳೂ ಸೇರಿವೆ. ‘ಸೌಂಡ್ಸ್ ಆಫ್ ಈಶ’ ಸಂಗೀತ ತಂಡವು ಭಕ್ತಿ ಮತ್ತು ಆಂತರಿಕ ನಿಶ್ಚಲತೆಯ ವಾತಾವರಣವನ್ನು ಸೃಷ್ಟಿಸುವ ಸುಮಧುರ ಸಂಗೀತದ ಲಹರಿಯನ್ನು ಅರ್ಪಿಸಲಿದೆ.
ಇದರೊಂದಿಗೆ, ‘ಸದ್ಗುರು ಗುರುಕುಲಂ’ನ ಈಶ ಸಂಸ್ಕೃತಿ ತಂಡವು ಸಾಂಪ್ರದಾಯಿಕ ಕಲೆ ಮತ್ತು ಸಾಂಸ್ಕೃತಿಕ ಪ್ರದರ್ಶನಗಳನ್ನು ಪ್ರಸ್ತುತಪಡಿಸಲಿದ್ದು, ನಗರವಾಸಿಗಳಿಗೂ ಅರ್ಥವಾಗುವಂತೆ ಶಾಸ್ತ್ರೀಯ ಮತ್ತು ಜಾನಪದ ಪ್ರಕಾರಗಳಿಗೆ ಜೀವ ತುಂಬಲಿದೆ. ಒಟ್ಟಾರೆಯಾಗಿ, ಈ ಪ್ರದರ್ಶನಗಳನ್ನು ಕೇವಲ ಮನರಂಜನೆಯಾಗಿ ಮಾತ್ರವಲ್ಲದೆ, ಪ್ರೇಕ್ಷಕರಿಗೆ ತಮ್ಮ ಸಾಂಸ್ಕೃತಿಕ ಮೂಲದೊಂದಿಗೆ ಮರುಸಂಪರ್ಕ ಸಾಧಿಸಲು ಒಂದು ಮಾರ್ಗವಾಗಿ ರೂಪಿಸಲಾಗಿದೆ.
ಸದ್ಗುರು ಸನ್ನಿಧಿಯಲ್ಲಿ ಮಕರ ಸಂಕ್ರಾಂತಿಗೆಂದು ವಿಶೇಷವಾಗಿ ವಿನ್ಯಾಸಗೊಳಿಸಲಾದ ಕೆಳಕಂಡ ಹಲವಾರು ಪವಿತ್ರ ಅರ್ಪಣೆಗಳಲ್ಲಿ ಭಕ್ತರು ಭಾಗವಹಿಸಬಹುದು.
ಧಾನ್ಯ ಸಮರ್ಪಣೆ: ಸಮೃದ್ಧಿಯ ಸಂಕೇತವಾಗಿ, ಸುಗ್ಗಿಯ ಕೃತಜ್ಞತೆಯಾಗಿ ಮತ್ತು ಕುಟುಂಬದ ಯೋಗಕ್ಷೇಮಕ್ಕಾಗಿ ಧಾನ್ಯಗಳ ಅರ್ಪಣೆ.
ಸಪ್ತ ಪುಷ್ಪಾಂಜಲಿ; ಯೋಗೇಶ್ವರ ಲಿಂಗಕ್ಕೆ ಏಳು ಪವಿತ್ರ ಹೂವುಗಳನ್ನು ಅರ್ಪಿಸುವ ಮೂಲಕ ಆದರಭಾವ ಮತ್ತು ಭಕ್ತಿಯನ್ನು ವ್ಯಕ್ತಪಡಿಸುವುದು.
ತುಪ್ಪದ ದೀಪ ಅರ್ಪಣೆ: ಅಜ್ಞಾನದಿಂದ ಸ್ಪಷ್ಟತೆ ಮತ್ತು ಜ್ಞಾನೋದಯದ ಕಡೆಗಿನ ಪಯಣವನ್ನು ಸೂಚಿಸುವ ತುಪ್ಪದ ದೀಪಗಳ ಅರ್ಪಣೆ.
ಭಾಗವಹಿಸುವವರು ಈ ಸುಸಂದರ್ಭದ ಆಧ್ಯಾತ್ಮಿಕ ಶಕ್ತಿಗೆ ಅನುಗುಣವಾಗಿ ಪ್ರಾಣಪ್ರತಿಷ್ಠಿತ ಸ್ಥಳಗಳಲ್ಲಿ ಇತರ ಸಾಂಪ್ರದಾಯಿಕ ಅರ್ಪಣೆಗಳನ್ನು ಮತ್ತು ಸೇವೆಯನ್ನು ಸಲ್ಲಿಸಬಹುದು. ಈ ಅರ್ಪಣೆಗಳನ್ನು ಖುದ್ದಾಗಿ ಸಲ್ಲಿಸಬಹುದು, ಹಾಗೂ ಇವುಗಳಲ್ಲಿ ಕೆಲವನ್ನು ಮುಂಚಿತವಾಗಿಯೇ ಕಾಯ್ದಿರಿಸುವ ಅವಕಾಶವೂ ಲಭ್ಯವಿದೆ.