Protesting injustice is also a duty

Daily story: ಹರಿತಲೇಖನಿ ದಿನಕ್ಕೊಂದು ಕಥೆ: ಅನ್ಯಾಯದ ಪ್ರತಿಭಟನೆಯೂ ಕರ್ತವ್ಯವೇ

Daily story: ಮಾನವನ ಬದುಕಿನಲ್ಲಿ ಅನೇಕ ಬಾರಿ ಅನೇಕ ತರಹದ ಅಪ್ರಿಯ, ಅಸಹ್ಯ ಘಟನೆಗಳು ಜರಗುವುದಿದೆ. ಆಗ ಶಾಂತಿ ಪ್ರೇಮಿಗಳು ಅಂಥ ಪ್ರಸಂಗದಲ್ಲಿ ಅಹಿಂಸಾವಾದಿಗಳಾಗಿ, ಶಾಂತಿಯಿಂದ ಸಹಿಸಿಕೊಳ್ಳಬೇಕು.

ಅಶಾಂತರಾಗಿ ಹಿಂಸಾಪ್ರಿಯರಂತೆ ವಿರೋಧಿಸಬಾರದು ಎಂದು ಅಹಿಂಸಾವಾದಿಗಳು ವಾದಿಸುವುದು, ಉಪದೇಶಿಸುವುದು ಉಂಟು. ಆದರೆ ಹಿಂಸಾ ಪ್ರೇಮಿಗಳ ಅನ್ಯಾಯ, ಅತ್ಯಾಚಾರಗಳನ್ನು ಹೇಗೆ ಮತ್ತು ಏಕೆ ಪ್ರತಿಭಟಿಸಬೇಕೆಂಬುದನ್ನು ನಿರೂಪಿಸುವಂತಹ ಸ್ವಾಮಿ ವಿವೇಕಾನಂದರ ಬದುಕಿನ ಒಂದು ಮಾರ್ಗದರ್ಶಕ ಪ್ರಸಂಗ ಅತೀವ ಸ್ವಾರಸ್ಯಕರವಾಗಿದೆ.

ಇದು ಬ್ರಿಟಿಷ್‌ ಆಡಳಿತ ಕಾಲದ ಪ್ರಸಂಗ ‌ ಸ್ವಾಮಿ ವಿವೇಕಾನಂದರು ಒಮ್ಮೆ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದರು. ಅವರು ಕುಳಿತಿದ್ದ ಕಂಪಾರ್ಟ್‌ಮೆಂಟ್‌ನಲ್ಲಿ ಒಬ್ಬ ಭಾರತೀಯ ಮಹಿಳೆಯೂ ತನ್ನ ಮಗುವಿನೊಂದಿಗೆ ಪ್ರಯಾಣಿಸುತ್ತಿದ್ದಳು, ಮುಂದಕ್ಕೆ ಒಂದು ರೈಲ್ವೆ ಸ್ಟೇಶನ್‌ನಲ್ಲಿ ಇಬ್ಬರು ಆಂಗ್ಲ ಅಧಿಕಾರಿಗಳು ಬಂದು ಅದೇ ಕಂಪಾರ್ಟ್‌ಮೆಂಟ್‌ನಲ್ಲಿ ಮಹಿಳೆಯ ಎದುರಿನ ಸೀಟಿನಲ್ಲಿ ಕುಳಿತರು.

ಆಂಗ್ಲರ ಆಡಳಿತ ಕಾಲವಾದ್ದರಿಂದ ಭಾರತೀಯರೊಂದಿಗೆ ಅಸಭ್ಯ ವ್ಯವಹಾರ ಮಾಡುವುದು ಸಹಜವೆಂಬಂತೆ ಆ ಮಹಿಳೆಯೆದುರು ವರ್ತಿಸತೊಡಗಿದರು.

ಮೊದಲಿಗೆ ಆ ಮಹಿಳೆಯ ಜತೆಗಿದ್ದ ಮಗುವಿನ ಕಿವಿಯನ್ನು ಹಿಂಡುವುದು, ಕೆನ್ನೆಯನ್ನು ಚಿವುಟುವುದು ಮೊದಲಾದ ಕೀಟಲೆ ಮಾಡತೊಡಗಿದರು ಇದರಿಂದ ಬೇಸರಗೊಂಡ ಮಹಿಳೆಯು ಮುಂದಿನ ಸ್ಟೇಶನ್‌ ಬಂದಾಗ, ಬೇರೆ ಕಂಪಾರ್ಟ್‌ಮೆಂಟ್‌ನಲ್ಲಿದ್ದ ಒಬ್ಬ ಭಾರತೀಯ ಪೊಲೀಸ್‌ ಅಧಿಕಾರಿಗೆ ದೂರು ನೀಡಿದಳು.

ಆ ದೂರಿನಂತೆ ಆ ಪೊಲೀಸ್‌ ಅಧಿಕಾರಿ ಬಂದರೂ ದೂರು ಬ್ರಿಟಿಷರ ವಿರುದ್ಧ ಎಂದು ಗೊತ್ತಾದಾಗ, ಆತ ಏನೂ ಹೇಳದೆ ಹೊರಟು ಹೋದರು ಇದನ್ನು ಕಂಡ ಆ ಆಂಗ್ಲ ಅಧಿಕಾರಿಗಳು ಮತ್ತೆ ಕೀಟಲೆ ಆರಂಭಿಸಿದರು.

ಇದೆಲ್ಲವನ್ನೂ ಬಹು ಹೊತ್ತಿನಿಂದ ಗಮನಿಸುತ್ತಿದ್ದ ವಿವೇಕಾನಂದರು ಈ ಆಂಗ್ಲ ಅಧಿಕಾರಿಗಳಿಗೆ ಸೂಕ್ತ ಪಾಠ ಕಲಿಸಬೇಕೆಂದು ನಿರ್ಧರಿಸಿದರು ತಕ್ಷಣ ತಾವು ಕುಳಿತಲ್ಲಿಂದ ಎದ್ದು, ಆಂಗ್ಲ ಅಧಿಕಾರಿಗಳ ಎದುರುಗಡೆ ನಿಂತುಬಿಟ್ಟರು.

ಅವರ ಬಲಿಷ್ಠ ಕಾಯವನ್ನು ವೀಕ್ಷಿಸಿದ ಆಂಗ್ಲರು ಗಾಬರಿಯಾದರು ಮೊದಲಿಗೆ ವಿವೇಕಾನಂದರು ಅವರಿಬ್ಬರ ಕಣ್ಣುಗಳನ್ನು ದಿಟ್ಟಿಸಿ ನೋಡಿದರು. ಬಳಿಕ ಎಡಗೈಯ ಶರ್ಟ್‌ನ ತೋಳನ್ನು ಮೇಲಕ್ಕೆ ಸರಿಸಿದರು ಮತ್ತು ಕೈಯನ್ನು ತಿರುಗಿಸಿ ಅವರಿಗೆ ತಮ್ಮ ಬಾಹುಗಳ ಸುಪುಷ್ಟವೂ, ಬಲಿಷ್ಠವೂ ಆದ ಮಾಂಸ ಖಂಡಗಳನ್ನು ತೋರಿಸಿದರು.

ಸ್ವಾಮಿ ವಿವೇಕಾನಂದರ ಈ ನಡವಳಿಕೆಯನ್ನು ಕಂಡು ಇಬ್ಬರೂ ಆಂಗ್ಲ ಅಧಿಕಾರಿಗಳು ಗಾಬರಿಯಾದರು ಮತ್ತು ಮುಂದಿನ ಸ್ಟೇಶನ್‌ ಬಂದೊಡನೆ ಇಳಿದು ಇನ್ನೊಂದು ಕಂಪಾರ್ಟ್‌ಮೆಂಟ್‌ಗೆ ಹತ್ತಿಕೊಂಡರು.

ಸ್ವಾಮಿ ವಿವೇಕಾನಂದರು ಭಾರತೀಯ ಸಂಸ್ಕೃತಿಯ ಶ್ರೇಷ್ಠತೆ, ಹಿರಿಮೆ, ಗರಿಮೆಗಳನ್ನು ಅರಿತಿದ್ದ ಧೀಮಂತ ಪುರುಷರಾಗಿದ್ದು ತಮ್ಮ ಪ್ರವಚನಗಳಲ್ಲಿ ಈ ಉದಾಹರಣೆಯನ್ನು ನೀಡುತ್ತಿದ್ದರು.

ಅವರು ಹಿಂಸೆಯ ಪರವಾಗಿರಲಿಲ್ಲ ಆದರೆ ಹಿಂಸಾತ್ಮಕವಾಗಿರುವವರನ್ನು ಎದುರಿಸಲು ಕೆಲವೊಮ್ಮೆ ದೃಢವಾದ ಶಾರೀರಿಕ ನಿಲುವುಗಳೇ ಬೇಕು.

ದೃಢವಾದ ದೇಹವನ್ನೂ ವಿವೇಕಯುತವಾದ ಪ್ರಜ್ಞೆಯನ್ನೂ ಸ್ವಾಮಿ ವಿವೇಕಾನಂದರು ಪ್ರತಿಪಾದಿಸುತ್ತಿದ್ದರು ನಾವು ಅನ್ಯಾಯವನ್ನು ಪ್ರತಿಭಟಿಸದೆ, ಸಹಿಸುತ್ತಾ ಮುನ್ನಡೆದರೆ ಅನ್ಯಾಯ ಮಾಡುವವರು ಮತ್ತಷ್ಟು ಬಲಿಷ್ಠರಾಗುತ್ತಾರೆ.

ಆದ್ದರಿಂದ ಅಧರ್ಮ, ಅನೀತಿ, ಅನ್ಯಾಯ ಮಾಡುವವರನ್ನು ಪ್ರತಿಭಟಿಸುವುದೂ ಕೂಡ ನ್ಯಾಯ, ನೀತಿ, ಧರ್ಮಗಳ ರಕ್ಷಣೆಯೇ ಆಗಿದೆ ಎಂಬುದನ್ನು ಮರೆಯುವಂತಿಲ್ಲ.

ಕೃಪೆ: ಸಾಮಾಜಿಕತಾಣ. (ಲೇಖಕರ ಮಾಹಿತಿ ಲಭ್ಯವಿಲ್ಲ)

ರಾಜಕೀಯ

ಕಸ ಗುಡಿಸುವ ಮಷಿನ್‌ ಬಾಡಿಗೆ 613 ಕೋಟಿ ಖರ್ಚು, ಬಾಡಿಗೆ ಬದಲು ಖರೀದಿಗೆ 1.3-3ಕೋಟಿ: ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ

ಕಸ ಗುಡಿಸುವ ಮಷಿನ್‌ ಬಾಡಿಗೆ 613 ಕೋಟಿ ಖರ್ಚು, ಬಾಡಿಗೆ ಬದಲು ಖರೀದಿಗೆ

ರಾಜ್ಯ ಸರ್ಕಾರದ ಕ್ಯಾಬಿನೆಟ್ ನಲ್ಲಿ 46 ಕಸ ಗುಡಿಸುವ ಯಂತ್ರಗಳನ್ನು 7 ವರ್ಷದವರೆಗೂ ಬಾಡಿಗೆ ಆಧಾರದ ಮೇಲೆ ಪಡೆಯಲು ಒಪ್ಪಿಗೆ ನೀಡಿದೆ.ಬಾಡಿಗೆ ನೆಪದಲ್ಲಿ ಕಮೀಷನ್ ಗೋಲ್ ಮಾಲ್ ಎಂದು ನಿಖಿಲ್ ಕುಮಾರಸ್ವಾಮಿ (Nikhil Kumaraswamy)

[ccc_my_favorite_select_button post_id="116356"]
ಕರ್ನಾಟಕದ 9 ಜಿಲ್ಲೆ ಒಳಗೊಂಡ ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಕಾರ್ಯಕ್ರಮ (NICDP): ಗೋಯೆಲ್‌ ಜೊತೆ ಕೇಂದ್ರ ಸಚಿವ ಹೆಚ್.ಡಿ.ಕೆ ಮಹತ್ವದ ಚರ್ಚೆ

ಕರ್ನಾಟಕದ 9 ಜಿಲ್ಲೆ ಒಳಗೊಂಡ ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಕಾರ್ಯಕ್ರಮ (NICDP):

ಕರ್ನಾಟಕದ ಕೈಗಾರಿಕಾಭಿವೃದ್ದಿಗೆ ಪರಿವರ್ತನಾತ್ಮಕ ಹೆಜ್ಜೆ ಎಂದೇ ನಂಬಲಾಗಿರುವ 9 ಜಿಲ್ಲೆಗಳನ್ನು ಒಳಗೊಂಡ ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಯೋಜನೆಯನ್ನು (NICDP- National Industrial Corridor Development Programme) ಅನುಷ್ಠಾನಗೊಳಿಸಬೇಕೆಂದು ಕೋರಿ ಕೇಂದ್ರದ ಬೃಹತ್‌ ಕೈಗಾರಿಕೆ

[ccc_my_favorite_select_button post_id="116156"]
ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಅವರೊಂದಿಗೆ, ಸಂಘಟನೆಯ ಟ್ರಸ್ಟಿಯೂ ಆಗಿರುವ ಸಂಸದ ಡಾ.ಕೆ.ಸುಧಾಕರ್‌ (Dr.K.Sudhakar)

[ccc_my_favorite_select_button post_id="113863"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ: ದೊಡ್ಡಬಳ್ಳಾಪುರ ಬಾಲಕ ರಾಷ್ಟ್ರ ಮಟ್ಟಕ್ಕೆ ಆಯ್ಕೆ..!

ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ: ದೊಡ್ಡಬಳ್ಳಾಪುರ ಬಾಲಕ ರಾಷ್ಟ್ರ ಮಟ್ಟಕ್ಕೆ ಆಯ್ಕೆ..!

ರಾಜ್ಯಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ (Shuttle Badminton Tournament) ಅಂಡರ್ 17 ಬಾಲಕರ ವಿಭಾಗದಲ್ಲಿ ದೊಡ್ಡಬಳ್ಳಾಪುರದ ಬಾಲಕ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾನೆ.

[ccc_my_favorite_select_button post_id="116353"]
ಪತ್ನಿಗೆ ವಿಡಿಯೊ ಕಾಲ್ ಮಾಡಿ ಪತಿ ಆತ್ಮಹತ್ಯೆ

ಪತ್ನಿಗೆ ವಿಡಿಯೊ ಕಾಲ್ ಮಾಡಿ ಪತಿ ಆತ್ಮಹತ್ಯೆ

ಜೈಲು ಪಾಲಾಗಿದ್ದ ಯುವಕ ಜಾಮೀನಿನಲ್ಲಿ ಹೊರಗೆ ಬಂದ ಎರಡು ವಾರಗಳ ನಂತರ ಪತ್ನಿಗೆ ಲೈವ್ ವಿಡಿಯೊ ಮಾಡಿ ನೇಣಿಗೆ ಕೊರಳೊಡ್ಡಿ ಆತ್ಮಹತ್ಯೆ (Suicide) ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ

[ccc_my_favorite_select_button post_id="116294"]
ದೊಡ್ಡಬಳ್ಳಾಪುರ; ಭೀಕರ ಅಪಘಾತ.. ಎಂಬಿಎ ವಿದ್ಯಾರ್ಥಿ ದುರ್ಮರಣ

ದೊಡ್ಡಬಳ್ಳಾಪುರ; ಭೀಕರ ಅಪಘಾತ.. ಎಂಬಿಎ ವಿದ್ಯಾರ್ಥಿ ದುರ್ಮರಣ

ಮುಂದೆ ಸಾಗುತ್ತಿದ್ದ ಲಾರಿ ಚಾಲಕನ ನಿರ್ಲಕ್ಷ್ಯದಿಂದ ಹಿಂಬದಿಯಲ್ಲಿ ಬರುತ್ತಿದ್ದ ಕಾರು ಭೀಕರ ಅಫಘಾತಕ್ಕೆ (Accident) ಒಳಗಾಗಿ ದೊಡ್ಡಬಳ್ಳಾಪುರ ನಗರದ ನಿವಾಸಿ, ಎಂಬಿಎ ವಿದ್ಯಾರ್ಥಿ ಸಾವನಪ್ಪಿರುವ ಘಟನೆ ನಾರನಹಳ್ಳಿ ಬಳಿ ಸಂಭವಿಸಿದೆ.

[ccc_my_favorite_select_button post_id="116301"]

ಆರೋಗ್ಯ

ಸಿನಿಮಾ

ದರ್ಶನ್ ಸೆಲೆಬ್ರಿಟಿಸ್ಗೆ ಗುಡ್‌ನ್ಯೂಸ್: ಡೆವಿಲ್ ಸಿನಿಮಾದ 3ನೇ ಸಾಂಗ್ ಬಿಡುಗಡೆ| Video ಲಿಂಕ್ ಇಲ್ಲಿದೆ ನೋಡಿ

ದರ್ಶನ್ ಸೆಲೆಬ್ರಿಟಿಸ್ಗೆ ಗುಡ್‌ನ್ಯೂಸ್: ಡೆವಿಲ್ ಸಿನಿಮಾದ 3ನೇ ಸಾಂಗ್ ಬಿಡುಗಡೆ| Video ಲಿಂಕ್

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ( Actor Darshan) ಅಭಿನಯದ "ದಿ ಡೆವಿಲ್" (The Devil) ಸಿನಿಮಾದ ಮೂರನೇ ಗೀತೆ ಬಿಡುಗಡೆಯಾಗಿದೆ.

[ccc_my_favorite_select_button post_id="116277"]
error: Content is protected !!