ನವದೆಹಲಿ: ಉತ್ತರಪ್ರದೇಶದ ಪ್ರಯಾಗ್ ರಾಜ್ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಭೀಕರ ಕಾಲ್ತುಳಿತ (maha KumbhaMela stampede) ಸಂಭವಿಸಿದೆ.
ಘಟನೆಯಲ್ಲಿ 100 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, 10 ಕ್ಕೂ ಹೆಚ್ಚು ಮಂದಿ ಜೀವಬಿಟ್ಟಿದ್ದಾರೆಂದು ವರದಿಯಾಗಿದೆ. ಈ ಘಟನೆ ಕುರಿತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವು ನಾಯಕರು ಸಾಮಾಜಿಕ ಜಾಲತಾಣದಲ್ಲಿ ಸಂತಾಪ ಸೂಚಿಸಿದ್ದಾರೆ.
ಮಲ್ಲಿಖಾರ್ಜುನ ಕರ್ಗೆ ಟ್ವಿಟ್; ತ್ರಿವೇಣಿ ಸಂಗಮದಲ್ಲಿ ನಡೆದಿರುವ ದುರಂತಕ್ಕೆ ತೀವ್ರ ವಿಷಾದವಿದೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ. ಗಾಯಾಳುಗಳು ಬೇಗ ಗುಣಮುಖರಾಗಲಿ ಎಂದು ಹಾರೈಸುತ್ತೇನೆ ಎಂದು ಬರೆದುಕೊಂಡಿದ್ದಾರೆ.
ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರು ಕೂಡಲೇ ಸಂತ್ರಸ್ತರ ನೆರವಿಗೆ ಬರುವಂತೆ ಮಲ್ಲಿಕಾರ್ಜುನ ಖರ್ಗೆ ಸೂಚನೆ ನೀಡಿದ್ದಾರೆ.
इन चार पहियों वाहन के कारण श्रद्धालुओं के बीच अफरा तफरी का माहौल बन रहा है अगर भगदड़ मची तो श्रद्धालुओं की जान की जिम्मेदारी कौन लेगा?@Uppolice #MahaKumbh2025 #PrayagrajMahakumbh #mah pic.twitter.com/euXwTKFojV
— shubham chaudhary🇮🇳 (@chaudharyshubh_) January 29, 2025
ಅಖಿಲೇಶ್ ಯಾದವ್; ಮಹಾಕುಂಭದಲ್ಲಿ ಅವ್ಯವಸ್ಥೆಯಿಂದ ಸಂಭವಿಸಿದ ಅಪಘಾತದಲ್ಲಿ ಭಕ್ತರು ಸಾವನ್ನಪ್ಪಿದ ಸುದ್ದಿ ತುಂಬಾ ದುಃಖಕರವಾಗಿದೆ.
ಮಹಾಕುಂಭಕ್ಕೆ ಆಗಮಿಸಿದ ಸಂತರು ಮತ್ತು ಭಕ್ತರಲ್ಲಿ ವ್ಯವಸ್ಥೆಯ ಬಗ್ಗೆ ವಿಶ್ವಾಸ ಮೂಡಿಸಲು ಮಹಾಕುಂಭದ ಆಡಳಿತ ಮತ್ತು ನಿರ್ವಹಣೆಯನ್ನು ಉತ್ತರ ಪ್ರದೇಶದ ಆಡಳಿತದ ಬದಲು ಸೇನೆಗೆ ತಕ್ಷಣವೇ ಹಸ್ತಾಂತರಿಸುವುದು ಅಗತ್ಯವಾಗಿದೆ.
‘ವಿಶ್ವ ದರ್ಜೆಯ ವ್ಯವಸ್ಥೆ’ ಮಾಡುವುದಾಗಿ ಅಪಪ್ರಚಾರ ಮಾಡುತ್ತಿರುವಾಗಲೇ ಸತ್ಯಾಸತ್ಯತೆ ಮುಖವಾಡ ಹೊರಬಿದ್ದಿದೆ, ಇಂತಹ ಸುಳ್ಳು ಪ್ರಚಾರ ಮಾಡುತ್ತಿರುವವರು ಸೋತವರ ನೈತಿಕ ಹೊಣೆ ಹೊತ್ತು ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕು.
ಸರ್ಕಾರಕ್ಕೆ ಮನವಿ
- ಗಂಭೀರವಾಗಿ ಗಾಯಗೊಂಡವರನ್ನು ಏರ್ ಆಂಬ್ಯುಲೆನ್ಸ್ ಸಹಾಯದಿಂದ ಹತ್ತಿರದ ಉತ್ತಮ ಆಸ್ಪತ್ರೆಗಳಿಗೆ ಕರೆದೊಯ್ಯುವ ಮೂಲಕ ತಕ್ಷಣದ ವೈದ್ಯಕೀಯ ವ್ಯವಸ್ಥೆಗಳನ್ನು ಮಾಡಬೇಕು.
- ಮೃತರ ಶವಗಳನ್ನು ಗುರುತಿಸಿ ಅವರ ಕುಟುಂಬದವರಿಗೆ ಹಸ್ತಾಂತರಿಸಿ ಅವರ ನಿವಾಸಕ್ಕೆ ಕಳುಹಿಸಲು ವ್ಯವಸ್ಥೆ ಮಾಡಬೇಕು.
- ಬೇರ್ಪಟ್ಟವರನ್ನು ಮತ್ತೆ ಒಂದುಗೂಡಿಸಲು ತ್ವರಿತ ಪ್ರಯತ್ನಗಳನ್ನು ಮಾಡಬೇಕು.
- ಹೆಲಿಕಾಪ್ಟರ್ಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಮೂಲಕ ಕಣ್ಗಾವಲು ಹೆಚ್ಚಿಸಬೇಕು.
- ಸತ್ಯಯುಗದಿಂದಲೂ ನಡೆಯುತ್ತಿರುವ ಅವಿಚ್ಛಿನ್ನ ಮತ್ತು ಅಮರವಾದ ‘ಶಾಹಿ ಸ್ನಾನ’ ಸಂಪ್ರದಾಯವನ್ನು ಉಳಿಸಿಕೊಂಡು, ಪರಿಹಾರ ಕಾರ್ಯಗಳಿಗೆ ಸಮಾನಾಂತರವಾಗಿ ಸುರಕ್ಷಿತ ನಿರ್ವಹಣೆಯ ನಡುವೆ ‘ಮೌನಿ ಅಮಾವಾಸ್ಯೆಯ ಶಾಹಿ ಸ್ನಾನ’ ನಡೆಸಲು ವ್ಯವಸ್ಥೆ ಮಾಡಬೇಕು.
ಈ ಕಷ್ಟದ ಸಮಯದಲ್ಲಿ ಸಂಯಮ ಮತ್ತು ತಾಳ್ಮೆಯನ್ನು ಅನುಸರಿಸಲು ಮತ್ತು ತಮ್ಮ ತೀರ್ಥಯಾತ್ರೆಯನ್ನು ಶಾಂತಿಯುತವಾಗಿ ಪೂರ್ಣಗೊಳಿಸಲು ನಾವು ಭಕ್ತರಿಗೆ ಮನವಿ ಮಾಡುತ್ತೇವೆ.
महाकुंभ में अव्यवस्थाजन्य हादसे में श्रद्धालुओं के हताहत होने का समाचार बेहद दुखद है। श्रद्धांजलि!
— Akhilesh Yadav (@yadavakhilesh) January 29, 2025
हमारी सरकार से अपील है कि:
– गंभीर रूप से घायलों को एअर एंबुलेंस की मदद से निकटतम सर्वश्रेष्ठ हॉस्पिटलों तक पहुंचाकर तुरंत चिकित्सा व्यवस्था की जाए।
– मृतकों के शवों को चिन्हित… pic.twitter.com/xZcaU940cO
ಇಂದಿನ ಘಟನೆಯಿಂದ ಪಾಠ ಕಲಿತು ಭಕ್ತಾದಿಗಳಿಗೆ ಉಳಿದುಕೊಳ್ಳಲು ವಸತಿ, ಊಟ, ನೀರು ಮತ್ತಿತರ ಸೌಕರ್ಯಗಳಿಗೆ ಸರಕಾರ ಹೆಚ್ಚುವರಿ ವ್ಯವಸ್ಥೆ ಮಾಡಬೇಕು.
ಅಪಘಾತದಲ್ಲಿ ಗಾಯಗೊಂಡ ಎಲ್ಲರಿಗೂ ಶೀಘ್ರ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ ಎಂದಿದ್ದಾರೆ.
आस्था के सहारे… रैन बसेरा! pic.twitter.com/euTkDpSrvN
— Akhilesh Yadav (@yadavakhilesh) January 28, 2025