Donate blood to an elephant

ಹರಿತಲೇಖನಿ ದಿನಕ್ಕೊಂದು ಕಥೆ: ಆನೆಗೆ ರಕ್ತ ದಾನ

Daily story: ಕಾಡಿನಲ್ಲಿ ಗಜರಾಜ, ಹೊಟ್ಟೆಯ ಕೆಳಗೆ ಚೂಪಾದ ಕಲ್ಲು ತರಚಿ ಗಾಯವಾಗಿ ಒಂದು ದೊಡ್ಡ ಆಲದಮರದ ಕೆಳಗೆ ಮಲಗಿತ್ತು. ಗಾಯ ಆದ ಜಾಗದಲ್ಲಿ ರಕ್ತ ಸ್ರಾವ ಆಗುತ್ತಿತ್ತು.

ಅದಕ್ಕೆ ಉಪಚಾರ ಮಾಡಲು ಪಶುವೈದ್ಯರನ್ನು ಕರೆಸಲಾಯಿತು. ಪಶುವೈದ್ಯರು ‘ಆನೆಗೆ ಬಹಳ ರಕ್ತ ಹೋಗಿದೆ. ತಕ್ಷಣ ಪ್ರಾಣಿಗಳು ರಕ್ತ ನೀಡಲು ಮುಂದೆ ಬರಬೇಕು’ ಎಂದರು.

ಗಜರಾಜ ಗಾಯಗೊಂಡ ಸುದ್ದಿ ಕೇಳಿ ಎಲ್ಲಾ ಪ್ರಾಣಿ, ಪಕ್ಷಿ, ಕೀಟಗಳು ಸೇರಿದ್ದವು. ಎಲ್ಲರೂ ತಮ್ಮ ವರ್ಗದಲ್ಲಿ ರಕ್ತ ದಾನ ಮಾಡಲು ಅಭಿಪ್ರಾಯ ಮಂಡಿಸಿದವು.

ಕೀಟಸಂಕುಲದ ಪರವಾಗಿ ಚಿಟ್ಟೆ ತಮಗೆ ಮೊದಲು ರಕ್ತದಾನ ಮಾಡಲು ಅವಕಾಶ ನೀಡಲು ಕೋರಿತು. ಎಲ್ಲಾ ಪ್ರಾಣಿಗಳು ನಗಲು ಪ್ರಾರಂಭಿಸಿದವು. ಬೃಹತ್ ಆಕಾರದ ದೇಹವನ್ನು ಹೊಂದಿರುವ ಗಜರಾಜನಿಗೆ ನಿನ್ನ ರಕ್ತ ಎಲ್ಲಿ ಸಾಲುತ್ತದೆ ಎಂದು ಅಪಹಾಸ್ಯ ಮಾಡಿದವು.

ಪಕ್ಷಿ ಸಂಕುಲದ ಪರವಾಗಿ ಗಿಳಿಯು ರೆಕ್ಕೆಯನ್ನು ರಪ ರಪ ಬಡಿಯುತ್ತಾ ‘ನಾವು ಕೂಡ ಈ ಕಾಡಿನಲ್ಲಿ ಗಜರಾಜನ ಒಡನಾಡಿಗಳು. ಹಾಗಾಗಿ ನಾವೂ ರಕ್ತದಾನ ಮಾಡುತ್ತೇವೆ ಎಂದಿತು. ಮತ್ತೆ ಎಲ್ಲ ಕೆಲವು ಪ್ರಾಣಿಗಳು ನಗಲು ಪ್ರಾರಂಭಿಸಿದವು.

ಗರಿಗಳುಳ್ಳ, ತಕ-ತಕ ಕುಣಿಯುವ, ನಾಟ್ಯ ಪ್ರವೀಣೆ ನವಿಲು ಮತ್ತು ಪ್ರಾಣಿವರ್ಗದಿಂದ ಚಾತುರ್ಯವುಳ್ಳ ನರಿಯು ತನ್ನ ಸೊಂಟವನ್ನು ಸರಿ ಮಾಡಿಕೊಳ್ಳುತ್ತಾ ಎದ್ದು ನಿಂತು, ‘ನಾನು ಎಲ್ಲ ಪ್ರಾಣಿ ವರ್ಗಕ್ಕಿಂತ ಗಾತ್ರದಲ್ಲಿ ಚಿಕ್ಕವರಾದರೂ ಬುದ್ದಿವಂತಿಕೆಯಿಂದ ಶುತ್ರುಗಳ ಎದೆಯಲ್ಲಿ ನಡುಕ ಹುಟ್ಟಿಸಬಲ್ಲೆ. ಹಾಗಾಗಿ ನಾನು ರಕ್ತ ಕೊಡುತ್ತೇನೆ’ ಎಂದು ಜಂಬದ ಮಾತು ಹೇಳಿ ತಕ್ಷಣವೇ ‘ನನ್ನನ್ನು ಯಾರೋ ಕರೆಯುತ್ತಿದ್ದಾರೆ’ ಎಂದು ಹೇಳುತ್ತಾ ಆ ಸ್ಥಳದಿಂದ ಜಾಗ ಖಾಲಿ ಮಾಡಿ ಹೊರಟು ಹೋಯಿತು.

ಹಾಗೆಯೇ ಜೇಡ, ಹದ್ದು, ಕಾಗೆ, ಬಲಿಷ್ಠ ಸಿಂಹ, ಹುಲಿ, ಕಾಡು ಕೋಣ, ಕರಡಿ… ಹೀಗೆ ಇನ್ನೂ ಅನೇಕ ಪ್ರಾಣಿಗಳು ಮುಂದೆ ಬರಲಿಲ್ಲ. ಅದೇ ಸಮಯದಲ್ಲಿ ಅತಿಚಿಕ್ಕ ಇರುವೆಗಳು ದಾರಿಯಲ್ಲಿ ಬರಬರನೇ ಓಡುತ್ತಿದ್ದವು. ಅದನ್ನು ಎಲ್ಲಾ ಪ್ರಾಣಿಗಳು ನೋಡಿದವು.

‘ಎಲ್ಲಿಗೆ ಹೊರಟಿರುವೆ ಇರುವೆ?’ ಎಂದು ಮಾತನಾಡಿಸಿದವು. ಆಗ ಒಂದು ಇರುವೆ ಹೇಳಿತು, ‘ನಮ್ಮ ಗಜರಾಜನಿಗೆ ಚೂಪಾದ ಕಲ್ಲು ತರಚಿ, ಗಾಯವಾಗಿ ರಕ್ತ ಹೋಗುತ್ತಿದೆ. ವೈದ್ಯರು ತಕ್ಷಣ ರಕ್ತ ಕೊಡಿ ಎಂದು ಹೇಳಿದ್ದಾರೆ. ಅದಕ್ಕೆ ನಾವು ರಕ್ತ ಕೊಡಲು ಹೊರಟಿದ್ದೇವೆ’ ಎಂದು ಹೇಳಿ ಅಲ್ಲಿಂದು ಹೊರಟು ವೈದ್ಯರ ಬಳಿ ಹೋಗಿ ‘ನಾನು ಗಜರಾಜನಿಗೆ ರಕ್ತ ಕೊಡುತ್ತನೆ. ನನ್ನ ರಕ್ತ ತಗೆದುಕೊಳ್ಳಿ’ ಎಂದು ಹೇಳಿತು. ಆದರೆ ವೈದ್ಯರು ಇರುವೆಯ ಧೈರ್ಯಕ್ಕೆ ಅಭಿನಂದನೆ ಸಲ್ಲಿಸಿದರು.

ಅಪಹಾಸ್ಯ ಮಾಡದೆ ‘ಗಜರಾಜನ ಗಾಯಕ್ಕೆ ಹೊಲಿಗೆ ಹಾಕಿ ರಕ್ತ ಹೋಗುವುದು ನಿಂತಿದೆ. ಅದಕ್ಕೆ ನಿನ್ನ ರಕ್ತದ ಅಗತ್ಯ ಇಲ್ಲ’ ಎಂದು ಹೇಳಿದರು. ಆಗ ಕೆಲವು ಪ್ರಾಣಿಗಳು ನಾವು ಮಾತನಾಡುವುದು ಬಿಟ್ಟು ಧೈರ್ಯದಿಂದ ರಕ್ತ ಕೊಡಲು ವೈದ್ಯರ ಹತ್ತಿರ ಹೋಗಲೇ ಇಲ್ಲ ಎನ್ನುವ ತಪ್ಪಿನ ಅರಿವು ಮಾಡಿಕೊಂಡವು.

ಇರುವೆಯ ಸಾಹಸ ಮತ್ತು ಧೈರ್ಯ ಮೆಚ್ಚಿ ಎಲ್ಲಾ ಪ್ರಾಣಿಗಳು ಕೊಂಡಾಡಿದವು.

ಕೃಪೆ: ಬಸವರಾಜ.ರಾ.ಅಗಸರ ( ಸಾಮಾಜಿಕ ಜಾಲತಾಣ)

ರಾಜಕೀಯ

ಷಡ್ಯಂತ್ರ ಬಹಳ ದಿನ ಗುಟ್ಟಾಗಿ ಉಳಿಯಲು ಸಾಧ್ಯವಿಲ್ಲ: ಬಿ.ವೈ. ವಿಜಯೇಂದ್ರ

ಷಡ್ಯಂತ್ರ ಬಹಳ ದಿನ ಗುಟ್ಟಾಗಿ ಉಳಿಯಲು ಸಾಧ್ಯವಿಲ್ಲ: ಬಿ.ವೈ. ವಿಜಯೇಂದ್ರ

"ಶ್ರೀ ಕ್ಷೇತ್ರ ಧರ್ಮಸ್ಥಳದ ಕುರಿತು ನಿರಂತರ ಅಪಪ್ರಚಾರದ ಹಿಂದೆ ಯಾರಿದ್ದಾರೆ? ಯಾರ ಷಡ್ಯಂತ್ರ ಇದರ ಹಿಂದಿದೆ ಎಂಬುದು ಬಹಳ ದಿನ ಗುಟ್ಟಾಗಿ ಉಳಿಯಲು ಸಾಧ್ಯವಿಲ್ಲ"; B.Y. Vijayendra

[ccc_my_favorite_select_button post_id="112839"]
2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

ದಾವಣಗೆರೆ: ಬೆಂಗಳೂರು-ದಾವಣಗೆರೆ- ಬೆಳಗಾವಿಗೆ ವಂದೇ ಭಾರತ್ ಎಕ್ಸ್‍ಪ್ರೆಸ್ (Vande Bharat Express) ರೈಲು ಸೇವೆಯಿಂದ ಶಿಕ್ಷಣ, ಆರೋಗ್ಯ ಸೇವೆಯ ಅನುಕೂಲದ ಜೊತೆಗೆ ವ್ಯಾಪಾರ ವಹಿವಾಟು ವೃದ್ದಿಯಾಗಲಿದೆ ಎಂದು ಸಂಸದರಾದ ಡಾ; ಪ್ರಭಾ ಮಲ್ಲಿಕಾರ್ಜುನ್ (Dr.

[ccc_my_favorite_select_button post_id="112408"]
Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

ಹಳೆ ದ್ವೇಷದ ಹಿನ್ನೆಲೆ ಎರಡು ಗ್ಯಾಂಗ್‌ಗಳ ನಡುವೆ ಮಾರಾಮಾರಿ ನಡೆದಿದೆ. ದೊಣ್ಣೆ, ಮಾರಕಾಸ್ತ್ರಗಳಿಂದ ಪರಸ್ಪರ ಹೊಡೆ ದಾಡಿಕೊಂಡಿದ್ದಾರೆ. Crime News;

[ccc_my_favorite_select_button post_id="110866"]
ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಪ್ರವಾಸದಲ್ಲಿರುವ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ತಮ್ಮ ಪ್ರವಾಸದ ಎರಡನೇ ದಿನವೂ ಇಲ್ಲಿನ ಆಡಳಿತ

[ccc_my_favorite_select_button post_id="110371"]

ಕ್ರೀಡೆ

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಒಡಿಶಾದ ಭುವನೇಶ್ವರದಲ್ಲಿ‌ ಇದೇ ತಿಂಗಳ 10ರಂದು ನಡೆದ ವಿಶ್ವ ಅಥ್ಲೆಟಿಕ್ಸ್ ನ ಕಾಂಟಿನೆಂಟಲ್ ಕೂಟದ ಮಹಿಳೆಯರ ವಿಭಾಗದ 400 ಮೀಟರ್ ಓಟದಲ್ಲಿ ಚಿನ್ನದ ಪದಕ ಗಳಿಸಿದ ರಾಜ್ಯಕ್ಕೆ ಕೀರ್ತಿ ತಂದ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ

[ccc_my_favorite_select_button post_id="112580"]
ದೊಡ್ಡಬಳ್ಳಾಪುರ: ರೈಲ್ವೇ ಸ್ಟೇಷನ್ ಬಳಿ ನಡೆದಿದ್ದು ಕೊಲೆ..! ಪ್ರಕರಣ ದಾಖಲು

ದೊಡ್ಡಬಳ್ಳಾಪುರ: ರೈಲ್ವೇ ಸ್ಟೇಷನ್ ಬಳಿ ನಡೆದಿದ್ದು ಕೊಲೆ..! ಪ್ರಕರಣ ದಾಖಲು

ಮಂಗಳವಾರ ಬೆಳಗ್ಗೆ ವ್ಯಕ್ತಿಯೋರ್ವನ ಮೃತ ದೇಹ ನಗರದ ಹೊರವಲಯದಲ್ಲಿರುವ ರೈಲ್ವೇ ನಿಲ್ದಾಣದ ಬಳಿ ಪತ್ತೆಯಾಗಿದ್ದು, ಹತ್ಯೆ (Murder) ನಡೆದಿರುವ ಕುರಿತು ಸಿಸಿ ಟಿವಿಯಲ್ಲಿ ದೃಶ್ಯ ಸೆರೆ

[ccc_my_favorite_select_button post_id="112854"]
ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ಮಳೆಯ ವೇಳೆ ವಾಹನ ಸವಾರರು ಎಷ್ಟು ಮುಂಜಾಗ್ರತೆ ಸಾಲದು. ಏಕೆಂದರೆ ನಿನ್ನೆ ಸಂಜೆ ಸುರಿದ ಭಾರಿ ಮಳೆಯ ಕಾರಣ ರಸ್ತೆ ಬದಿಯಲ್ಲಿ ಕೆಟ್ಟು ನಿಂತಿದ್ದ ಟ್ರಾಕ್ಟರ್ ಕಾಣದೆ Accident

[ccc_my_favorite_select_button post_id="112435"]

ಆರೋಗ್ಯ

ಸಿನಿಮಾ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಕಾಂಗ್ರೆಸ್ (Congress) ಮಾಡಿರುವ ಓಟ್ ಚೋರಿ ಆರೋಪ ದಿನೇದಿನೇ ತೀವ್ರ ಸ್ವರೂಪ ಪಡೆಯುತ್ತಿದ್ದು, ಚುನಾವಣೆ ಆಯೋಗ (Election Commission) ಹಾಗೂ ಕೇಂದ್ರ ಸರ್ಕಾರದ (Central Government) ವಿರುದ್ಧ ಅನುಮಾನ ಹೆಚ್ಚಿಸುವಂತೆ ಮಾಡುತ್ತಿದೆ‌.

[ccc_my_favorite_select_button post_id="112714"]
error: Content is protected !!