ಹರಿತಲೇಖನಿ ದಿನಕ್ಕೊಂದು ಕಥೆ: ಕವಿ ಕಾಳಿದಾಸರ ಕುಶಾಗ್ರ ಬುದ್ಧಿ

The genius of the poet Kalidasa

Daily story; ಮಿತ್ರರೇ ಪ್ರಾಚೀನ ಕಾಲದಲ್ಲಿ ರಾಜಾ ಭೋಜ ಹೆಸರಿನ ಪ್ರಸಿದ್ಧ ರಾಜನಿದ್ದನು. ಅವನ ದರಬಾರಿನಲ್ಲಿ ಅನೇಕ ವಿದ್ವಾಂಸರಿದ್ದರು. ರಾಜಾ ಭೋಜರ ಸಭೆಯಲ್ಲಿ ಕಾಳಿದಾಸ ಹೆಸರಿನ ಮಹಾನ್ ಕವಿಗಳಿದ್ದರು. ಕವಿ ಕಾಳಿದಾಸರ ಹೆಸರನ್ನು ನೀವು ಕೇಳಿರಬಹುದು.

ಅವರ ಬುದ್ಧಿವಂತಿಕೆಯ ಕೀರ್ತಿಯು ನಾಲ್ಕೂ ದಿಕ್ಕಿನಲ್ಲಿ ಹರಡಿತ್ತು. ಸ್ವಯಂ ರಾಜಾ ಭೋಜರು ಅನೇಕ ತೀರ್ಮಾನಗಳನ್ನು ತೆಗೆದುಕೊಳ್ಳುವ ಮೊದಲು ಅವರ ಅಭಿಪ್ರಾಯವನ್ನು ಪಡೆದುಕೊಳ್ಳುತ್ತಿದ್ದರು.

ಕಾಳಿದಾಸರು ಎಲ್ಲಾ ವಿದ್ವಾಂಸರನ್ನೂ ಗೌರವಿಸುತ್ತಿದ್ದರು. ಅವರು ವಿದ್ವಾಂಸರಿಗೆ ಅವರ ಯೋಗ್ಯತೆಗೆ ತಕ್ಕಂತೆ ಸಹಾಯ ಮಾಡುತ್ತಿದ್ದರು.

ಹೀಗೆ ಒಂದು ದಿನನಡೆದ ವಿಷಯವಿದು. ಓರ್ವ ಬಡ ಬ್ರಾಹ್ಮಣನು ಕಾಳಿದಾಸರ ಹತ್ತಿರ ಬಂದನು. ಅವನು ಕಾಳಿದಾಸರಿಗೆ ಸಮಾನವಾದ ಕವಿಯಾಗಿರಲಿಲ್ಲ. ಆದರೆ ಯೋಗ್ಯ-ಅಯೋಗ್ಯವನ್ನು ಅರಿಯುವವನಾಗಿದ್ದನು.

ಸರಳ-ಸಾಮಾನ್ಯ, ಆದರೆ ಸನ್ಮಾರ್ಗದಲ್ಲಿ ನಡೆಯುವವನಾಗಿದ್ದನು. ಅವನು ರಾಜಾ ಭೋಜನ ಬಳಿ ಏನಾದರೂ ಸಹಾಯ ಸಿಗಬಹುದೆಂಬ ಆಸೆಯಿಂದ ಬಂದಿದ್ದನು. ಅವನು ಈ ಅಭಿಲಾಷೆಯೊಂದಿಗೆ ಧಾರಾನಗರವನ್ನು ಪ್ರವೇಶಿಸಿದನು.

ರಾಜನಿಗೆ ನೀಡಲು ಏನಾದರೂ ಉಡುಗೊರೆಯನ್ನು ತಂದಿದ್ದೀರಾ?

ಕಾಳಿದಾಸರು ಅವನ ಸಂಪೂರ್ಣ ಸ್ಥಿತಿಯನ್ನು ಅರಿತುಕೊಂಡರು. ಅನಂತರ ಕಾಳಿದಾಸರು ಅವನನ್ನು ‘ರಾಜಸಭೆಯಲ್ಲಿ ರಾಜನನ್ನು ಭೇಟಿಯಾಗಲು ಬರಿಗೈಯಲ್ಲಿ ಹೋಗುವುದಿಲ್ಲ. ರಾಜನಿಗೆ ನೀಡಲು ಏನಾದರೂ ಉಡುಗೊರೆಯನ್ನು ತಂದಿದ್ದೀರಾ? ಎಂದು ಕೇಳಿದರು.

ಅದಕ್ಕೆ ಆ ಬಡ ಬ್ರಾಹ್ಮಣನು ‘ಕವಿರಾಜ, ನಾನಂತೂ ಕಡುಬಡವ ಹಾಗೂ ರಾಜನಿಗೆ ನೀಡಲು ನನ್ನ ಬಳಿ ಏನೂ ಇಲ್ಲ. ಆದರೆ ನನ್ನ ಮನೆಯ ಪಕ್ಕದಲ್ಲಿರುವ ರೈತನಿಂದ ಭಿಕ್ಷೆ ಬೇಡಿ ಸ್ವಲ್ಪ ಕಬ್ಬನ್ನು ತಂದಿದ್ದೇನೆ.

ಅದನ್ನೇ ಅವರಿಗೆ ಕೊಡುತ್ತೇನೆ’ ಎಂದು ಹೇಳಿ ತಾನು ತಂದಿದ್ದ ಕಬ್ಬನ್ನು ತೋರಿಸಿದನು. ಅದಕ್ಕೆ ಕಾಳಿದಾಸರು ‘ಸರಿ ಹಾಗಾದರೆ, ನಾಳೆ ಆ ಕಬ್ಬನ್ನು ತೆಗೆದುಕೊಂಡು ದರಬಾರಿಗೆ ಬನ್ನಿ’ ಎಂದು ಹೇಳಿದರು.

ಬ್ರಾಹ್ಮಣನು ರಾತ್ರಿ ತಂಗಲು ಸ್ಥಳೀಯ ಧರ್ಮಶಾಲೆಯಲ್ಲಿ ಒಂದು ಜಾಗ ಹುಡುಕಿ, ರಾತ್ರಿ ಕಳೆದ ಮೇಲೆ ಬೆಳಗ್ಗೆ ಬೇಗ ಎದ್ದು ಸಂಧ್ಯಾದಿ ಕರ್ಮಗಳನ್ನು ಮಾಡಿ ರಾಜಸಭೆಗೆ ಹೋಗಲು ನಿಶ್ಚಯಿಸಿದನು.

ಎಲ್ಲಾ ಕಡೆಯಲ್ಲಿಯೂ ಸ್ವಲ್ಪ ಕೆಟ್ಟ ಜನರು ಇರುತ್ತಾರೆ ಎನ್ನುವುದು ನಿಮಗೆ ತಿಳಿದಿದೆ. ಅದೇ ರೀತಿ ಆ ಧರ್ಮಶಾಲೆಯಲ್ಲಿದ್ದ ಕೆಲವು ಕೆಟ್ಟ ಜನರು ಆ ಬಡಬ್ರಾಹ್ಮಣನ ಹತ್ತಿರವಿದ್ದ ಗಂಟಿನಲ್ಲಿ ಏನಿದೆ ಎಂದು ಅದನ್ನು ಕದ್ದು ನೋಡಿದರು.

ಅದರಲ್ಲಿದ್ದ ಕಬ್ಬನ್ನು ತೆಗೆದುಕೊಂಡು ತಿಂದರು ಹಾಗೂ ಅಲ್ಲೇ ಒಲೆಯಿಂದ ಅರ್ಧ ಸುಟ್ಟಿದ್ದ ಕಟ್ಟಿಗೆಗಳನ್ನು ಆ ಗಂಟಿನೊಳಗೆ ಇಟ್ಟು ಮೊದಲಿನಂತೆ ಇಟ್ಟುಬಿಟ್ಟರು. ಇದರಿಂದ ಬ್ರಾಹ್ಮಣನು ಬೆಳಗ್ಗೆ ಎದ್ದು ನೋಡಿದಾಗ ಅವನಿಗೆ ತಾನು ರಾಜನಿಗೋಸ್ಕರ ತಂದಿದ್ದ ಕಬ್ಬನ್ನು ಯಾರೋ ಕದ್ದು ತಿಂದಿದ್ದಾರೆ ಎನ್ನುವುದು ಗೊತ್ತಾಗಲೇ ಇಲ್ಲ.

ಬ್ರಾಹ್ಮಣನು ಮುಂಜಾನೆ ಎದ್ದು ತನ್ನ ನಿತ್ಯ ಕರ್ಮಗಳನ್ನು ಮುಗಿಸಿ ರಾಜಸಭೆಯನ್ನು ತಲುಪಿದನು. ರಾಜನು ದರಬಾರಿನವರೊಂದಿಗೆ ಬಂದು ತನ್ನ ಸಿಂಹಾಸನದ ಮೇಲೆ ಕುಳಿತುಕೊಂಡನು. ಕಾಳಿದಾಸರು ಒಂದು ಪ್ರಮುಖ ಆಸನದ ಮೇಲೆ ಕುಳಿತುಕೊಂಡಿದ್ದರು.

ಬೇರೆ ಗೌರವಾನ್ವಿತ ವ್ಯಕ್ತಿಗಳು ಕೂಡ ಅಲ್ಲಿ ಉಪಸ್ಥಿತರಿದ್ದರು. ಬ್ರಾಹ್ಮಣನು ಸ್ವಲ್ಪ ಅಂಜಿಕೆಯಿಂದಲೇ ನಿಧಾನವಾಗಿ ಮುಂದೆ ಬಂದನು ಹಾಗೂ ರಾಜನಿಗೆ ಸಾದರ ಪ್ರಣಾಮಗಳನ್ನು ಸಲ್ಲಿಸಿದನು.

ಅವನು ರಾಜನಿಗೆ ‘ಹೇ ಮಹಾರಾಜಾ, ರಾಜರು, ದೇವರು ಹಾಗೂ ಗುರುಗಳ ಬಳಿಗೆ ಬರಿಗೈಯಲ್ಲಿ ಹೋಗಬಾರದು ಎನ್ನುವುದನ್ನು ನಾನು ಕೇಳಿದ್ದೇನೆ.

ಆದ್ದರಿಂದ ದಯವಿಟ್ಟು ನನ್ನ ಈ ತುಚ್ಛ ಕಾಣಿಕೆಯನ್ನು ಸ್ವೀಕರಿಸಿ’ ಎಂದು ಹೇಳಿ ಅವನು ತನ್ನ ಗಂಟನ್ನು ಬಿಚ್ಚಿದನು. ಅವನು ತನ್ನ ಗಂಟನ್ನು ಬಿಚ್ಚಿದ ತಕ್ಷಣ ಅವನಿಗೆ ಕಬ್ಬಿನ ಬದಲಾಗಿ ಅಲ್ಲಿ ಅರ್ಧ ಸುಟ್ಟ ಕಟ್ಟಿಗೆಗಳು ಕಂಡವು ! ಬ್ರಾಹ್ಮಣನು ಗಾಬರಿಗೊಂಡನು.

ಅವನ ಬಳಿ ಸ್ಪಷ್ಟೀಕರಣ ನೀಡಲು ಶಬ್ದಗಳೇ ಇರಲಿಲ್ಲ. ಅವನು ತುಂಬ ಗಾಬರಿಗೊಂಡನು. ಅವನಿಗೆ ಕಬ್ಬಿನ ಜಾಗದಲ್ಲಿ ಯಾರು ಆ ಸುಟ್ಟ ಕಟ್ಟಿಗೆಗಳನ್ನು ಇಟ್ಟಿದ್ದಾರೆ ಎನ್ನುವುದು ತಿಳಿಯಲಿಲ್ಲ.

ಇದಂತೂ ರಾಜನ ಅವಮಾನವಾಗಿತ್ತು. ರಾಜ ದರಬಾರಿನಲ್ಲಿ ‘ಬ್ರಾಹ್ಮಣನನ್ನು ಶಿಕ್ಷಿಸಿ’ ಎಂಬ ಕೂಗು ಎದ್ದ ಕೇಳಿಸಿತು.

ಇಷ್ಟರವರೆಗೆ ಕವಿ ಕಾಳಿದಾಸರು ಸುಮ್ಮನೆ ಇದ್ದರು. ಅವರು ಬ್ರಾಹ್ಮಣನ ಪರಿಸ್ಥಿತಿಯನ್ನು ಅರಿತರು. ಅವರು ಎದ್ದುನಿಂತು ರಾಜದರಬಾರಿನಲ್ಲಿದ್ದ ಜನರನ್ನು ಸುಮ್ಮನಾಗಿಸಿದರು. ಮತ್ತು ರಾಜ ದರಬಾರನ್ನು ಸಂಬೋಧಿಸುತ್ತಾ ‘ಈ ಬ್ರಾಹ್ಮಣನು ಅಪರಾಧಿಯಲ್ಲ.

ಧರ್ಮ-ಕರ್ಮ

ಅವನಂತೂ ಧರ್ಮ-ಕರ್ಮವನ್ನು ಅರಿಯುವವನಾಗಿದ್ದಾನೆ. ಆದರೆ ಅವನು ಬಡವ. ಇಂತಹ ಸುಖ ಸಮೃದ್ಧಿಯಿರುವ ರಾಜ್ಯದಲ್ಲಿ ತನ್ನ ಸ್ಥಿತಿ ಹೀಗಿರುವ ಬಗ್ಗೆ ಆ ಬಡ ಬ್ರಾಹ್ಮಣನು ಮಾತಿನಲ್ಲಿ ಹೇಗೆ ತಾನೆ ಹೇಳಬಹುದು.

ಆ ಕಟ್ಟಿಗೆಗಳು ಅರ್ಧ ಸುಟ್ಟಿವೆ. ಇದರರ್ಥವೇನೆಂದರೆ, ಬಡತನವು ಅವನನ್ನು ಸಾಯಲೂ ಬಿಡುತ್ತಿಲ್ಲ ಹಾಗೂ ಸರಿಯಾಗಿ ಜೀವಿಸಲು ಆಗುತ್ತಿಲ್ಲ.

ಅವನ ಈ ಅವಸ್ಥೆ ಬಹಳ ದಯನೀಯವಾಗಿದೆ! ಈ ಅರ್ಧ ಸುಟ್ಟುಹೋಗಿರುವ ಕಟ್ಟಿಗೆಯಿಂದ ಅವನ ಈ ಅವಸ್ಥೆ ಪ್ರಕಟವಾಗುತ್ತಿದೆ. ಆದ್ದರಿಂದ ರಾಜರು ಅವನಿಗೆ ಹಣವನ್ನು ನೀಡಿ ಅವನ ಎಲ್ಲ ಚಿಂತೆಯನ್ನೂ ದೂರಗೊಳಿಸಲಬೇಕಾಗಿ ವಿನಂತಿಸುತ್ತೇನೆ’ ಎಂದು ಹೇಳಿದನು.

ಕಾಳಿದಾಸರ ಈ ಮಾತುಗಳನ್ನು ಕೇಳಿ ಸಂಪೂರ್ಣ ರಾಜ ದರಬಾರವು ಆಶ್ಚರ್ಯಗೊಂಡಿತು. ಯಾರೂ ಕೂಡ ಅವರ ಮಾತನ್ನು ಖಂಡಿಸಲಿಲ್ಲ.

ಸ್ವತಃ ರಾಜಾ ಭೋಜರೂ ಕಾಳಿದಾಸರ ಈ ಮಾತನ್ನು ಕೇಳಿ ತಲೆದೂಗಿದರು. ಅವರು ಸ್ವರ್ಣ ಮುದ್ರೆಗಳನ್ನು ನೀಡಿ ಆ ಬ್ರಾಹ್ಮಣನನ್ನು ಗೌರವಿಸಿದರು.

ಧನಹೀನ ಬ್ರಾಹ್ಮಣನು ಸ್ವರ್ಣಮುದ್ರೆಗಳಿಂದ ತುಂಬಿರುವ ಜೋಳಿಗೆಯನ್ನು ತೆಗೆದುಕೊಂಡು ಮರಳಿ ಊರಿಗೆ ಹೋದನು. ಹೊರಡುವ ಮುಂಚೆ ಅವನು ಕಾಳಿದಾಸರಿಗೆ ಕೃತಜ್ಞತೆಯನ್ನು ಅರ್ಪಿಸಿದನು.

ಕೃಪೆ: ಹಿಂದೂ ಜಾಗೃತಿ

ರಾಜಕೀಯ

ಉತ್ತರ ಭಾರತದ ಕ್ಷೇತ್ರಗಳನ್ನು ಹೆಚ್ಚು ಮಾಡಲು ಹೊರಟಿರುವುದನ್ನ ಸಹಿಸಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್

ಉತ್ತರ ಭಾರತದ ಕ್ಷೇತ್ರಗಳನ್ನು ಹೆಚ್ಚು ಮಾಡಲು ಹೊರಟಿರುವುದನ್ನ ಸಹಿಸಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್

ದಕ್ಷಿಣ ಭಾರತದ ಕ್ಷೇತ್ರಗಳನ್ನು ಕತ್ತರಿಸಿ ಉತ್ತರ ಭಾರತದ ಕ್ಷೇತ್ರಗಳನ್ನು ಹೆಚ್ಚು ಮಾಡಲು ಹೊರಟಿರುವುದು ಸರಿಯಲ್ಲ. ಇದನ್ನು ಸಹಿಸಲು ಸಾಧ್ಯವಿಲ್ಲ: ಡಿ.ಕೆ. ಶಿವಕುಮಾರ್ (D.K. Shivakumar)

[ccc_my_favorite_select_button post_id="121132"]
ದಕ್ಷಿಣ ಭಾರತದಲ್ಲಿ ಸರ್ವೋಚ್ಛ ನ್ಯಾಯಾಲಯದ ಪೀಠ ಸ್ಥಾಪನೆಯಾಗಬೇಕಿದೆ: ಸಿಎಂ ಸಿದ್ದರಾಮಯ್ಯ

ದಕ್ಷಿಣ ಭಾರತದಲ್ಲಿ ಸರ್ವೋಚ್ಛ ನ್ಯಾಯಾಲಯದ ಪೀಠ ಸ್ಥಾಪನೆಯಾಗಬೇಕಿದೆ: ಸಿಎಂ ಸಿದ್ದರಾಮಯ್ಯ

ದಕ್ಷಿಣ ಭಾರತದಲ್ಲಿ ಸರ್ವೋಚ್ಛ ನ್ಯಾಯಾಲಯದ ಪೀಠ ಸ್ಥಾಪನೆಯಾದರೆ ನ್ಯಾಯವನ್ನು ಖಾತ್ರಿಪಡಿಸುವ ನಿಟ್ಟಿನಲ್ಲಿ ಬಹು ದೊಡ್ಡ ಹೆಜ್ಜೆಯನ್ನು ಇರಿಸಿದಂತಾಗುತ್ತದೆ: ಸಿಎಂ ಸಿದ್ದರಾಮಯ್ಯ (Cm Siddaramaiah)

[ccc_my_favorite_select_button post_id="121121"]
ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಮಧ್ಯಪ್ರಾಚ್ಯದಲ್ಲಿ ಯುದ್ದ ನಡೆಯುತ್ತಿರುವುದರಿಂದ ಭಾರತದ ಷೇರುಪೇಟೆ (Indian share market ) ತತ್ತರಿಸುತ್ತಿದ್ದು, ಕೋಟ್ಯಾಂತರ ರೂ ನಷ್ಟದ ಜೊತೆಗೆ, ತೈಲ ಬೆಲೆಯೇರಿಕೆಯಾಗುವ ಭೀತಿ ಉಂಟಾಗಿದೆ.

[ccc_my_favorite_select_button post_id="119892"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ದೋಸ, ಇಡ್ಲಿ, ಸಾಂಬಾರ್, ಚಟ್ನಿ, ಚಟ್ನಿ ಗೀತೆ ಬಳಸಿ ಅವಮಾನಿಸುತ್ತಾರೆ.. CSK ದೂರು.!

ದೋಸ, ಇಡ್ಲಿ, ಸಾಂಬಾರ್, ಚಟ್ನಿ, ಚಟ್ನಿ ಗೀತೆ ಬಳಸಿ ಅವಮಾನಿಸುತ್ತಾರೆ.. CSK ದೂರು.!

ಇತ್ತೀಚೆಗೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್‌ಸಿಬಿ (RCB) ಮತ್ತು ಸಿಎಸ್‌ಕೆ (CSK) ಪಂದ್ಯದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಡಿಜೆ ಸಿಎಸ್​ಕೆ ಅಭಿಮಾನಿಗಳನ್ನು ಹಾಗೂ ಆಟಗಾರರನ್ನು ಅವಮಾನಿಸಿದ್ದಾರೆ ಎಂದು ಚೆನ್ನೈ ಸೂಪರ್ ಕಿಂಗ್ಸ್ ಮ್ಯಾನೇಜ್ಮೆಂಟ್

[ccc_my_favorite_select_button post_id="121029"]
ದೊಡ್ಡಬಳ್ಳಾಪುರ: ನೇಣುಬಿಗಿದು ಕೊಂಡು ಇಬ್ಬರ ಆತ್ಮಹತ್ಯೆ..!

ದೊಡ್ಡಬಳ್ಳಾಪುರ: ನೇಣುಬಿಗಿದು ಕೊಂಡು ಇಬ್ಬರ ಆತ್ಮಹತ್ಯೆ..!

ಕೆಲವೇ ಗಂಟೆಗಳ ಅಂತರದಲ್ಲಿ ಇಬ್ಬರು ಪುರುಷರು ಆತ್ಮಹತ್ಯೆ (Suicide) ಮಾಡಿಕೊಂಡಿರುವ ಘಟನೆ ಸೋಮವಾರ ಸಂಜೆ ದೊಡ್ಡಬಳ್ಳಾಪುರ ಗ್ರಾಮಾಂತರ ಹಾಗೂ ದೊಡ್ಡಬೆಳವಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

[ccc_my_favorite_select_button post_id="120943"]
ದೊಡ್ಡಬಳ್ಳಾಪುರ: ಕ್ಯಾಂಟರ್- ಟ್ರ್ಯಾಕ್ಟರ್ ನಡುವೆ ಬೆಳ್ಳಂಬೆಳಗ್ಗೆ ಅಪಘಾತ.. ಓರ್ವ ಸಾವು

ದೊಡ್ಡಬಳ್ಳಾಪುರ: ಕ್ಯಾಂಟರ್- ಟ್ರ್ಯಾಕ್ಟರ್ ನಡುವೆ ಬೆಳ್ಳಂಬೆಳಗ್ಗೆ ಅಪಘಾತ.. ಓರ್ವ ಸಾವು

ಕ್ಯಾಂಟರ್ ಹಾಗೂ ಟ್ರಾಕ್ಟರ್ ನಡುವೆ ಡಿಕ್ಕಿ (Accident) ಸಂಭವಿಸಿ, ಓರ್ವ ಸಾವನಪ್ಪಿರುವ ಘಟನೆ ತಾಲೂಕಿನ *** ಬಳಿ ಇಂದು ಬೆಳಗ್ಗಿನ ಜಾವ ಸಂಭವಿಸಿದೆ.

[ccc_my_favorite_select_button post_id="121087"]

ಆರೋಗ್ಯ

ಸಿನಿಮಾ

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ (Actor Darshan) ಅವರಿಗೆ ಇಂದು ಜನ್ಮದಿನದ (Birthday) ಸಡಗರ. 49ನೇ ವರ್ಷಕ್ಕೆ ದರ್ಶನ್ ಕಾಲಿಟ್ಟಿದ್ದಾರೆ.

[ccc_my_favorite_select_button post_id="119431"]
error: Content is protected !!