ಹರಿತಲೇಖನಿ ದಿನಕ್ಕೊಂದು ಕಥೆ: ಯಾರ ನೋವು ದೊಡ್ಡದು..?

Daily story; Whose pain is bigger..?

Daily story; ನಾವು-ನೀವು ಎಲ್ಲರೂ ಬದುಕಿನಲ್ಲಿ ಆಗೊಮ್ಮೆ ಈಗೊಮ್ಮೆ ಯಾವ್ಯಾವುದೋ ನೋವಿನಿಂದ ನರಳಿರಬಹುದಲ್ಲವೇ? ಆ ನೋವಿನ ಪ್ರಮಾಣ ಅಥವಾ ಅವಧಿ ಬೇರೆ ಬೇರೆ ಇರಬಹುದು! ಆದರೆ ನೋವೇ ಇಲ್ಲದವರು ಯಾರಾದರೂ ಇದ್ದಾರೆಯೇ? ಇರಲಿಕ್ಕಿಲ್ಲ ಅಲ್ಲವೇ? ನೋವಿನ ಬಗೆಗಿನ ಕತೆಯೊಂದು ಇಲ್ಲಿದೆ.

ಒಬ್ಬ ರಾಜಕುಮಾರ ಇದ್ದರಂತೆ. ವೈಭವೋಪೇತ ಅರಮನೆಯಲ್ಲಿ ವಾಸ. ಇಂತಹದ್ದು ಬೇಕು ಎಂದು ಬಾಯ್ಬಿಡುವ ಮುಂಚೆಯೇ ಅದನ್ನು ತಂದು ಮುಂದಿಡುವ ತಾಯ್ತಂದೆಯರು, ಕೂತು ಉಂಡರೂ ಮುಗಿಯದಷ್ಟು ಸಿರಿವಂತಿಕೆ.

ಇವೆಲ್ಲ ಇದ್ದರೂ ಆ ರಾಜಕುಮಾರರಿಗೆ ಮನಃಶಾಂತಿ ಇರಲಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಅವರು ಬೌದ್ಧ ಧರ್ಮದ ಪ್ರಭಾವಕ್ಕೆ ಒಳಗಾದರು.
ತಮ್ಮ ಎಲ್ಲಾ ತುಡಿತಗಳಿಗೂ ಅಲ್ಲಿ ಉತ್ತರ ಸಿಗಬಹುದು ಎನಿಸಿತು.

ರಾಜ ಪರಿವಾರವನ್ನು ತೊರೆದರು. ಬೌದ್ಧ ಭಿಕ್ಷು ಆದರು. ಆನಂತರ ಅವರು ಕುಟೀರದಲ್ಲಿ ವಾಸಿಸುತ್ತಿದ್ದರು. ಚಾಪೆಯ ಮೇಲೆ ಮಲಗುತ್ತಿದರು. ಭಿಕ್ಷಾಟನೆಯಿಂದ ಸಿಗುತ್ತಿದ್ದ ಅನ್ನಾಹಾರಗಳ ಸೇವನೆ. ಧ್ಯಾನ-ಅಧ್ಯಯನಗಳಲ್ಲಿ ಮಗ್ನ.

ಮೊದಲಿನ ಸಿರಿವಂತ ಬದುಕಿಗೂ ಈಗಿನ ಬಡತನದ ಬದುಕಿಗೂ ಆಕಾಶ ಭೂಮಿಗಳಷ್ಟು ಅಂತರ. ಆದರೂ ಅವರಿಗೆ ಏನೋ ಸಾಧಿಸುತ್ತೇನೆಂಬ ಹುಮ್ಮಸ್ಸು. ಎಲ್ಲರ ಬದುಕಿನಲ್ಲೂ ಆಗುವಂತೆ ಎಲ್ಲವೂ ಚೆನ್ನಾಗಿದೆ ಎಂದು ಅವರು ಅಂದುಕೊಳ್ಳುತ್ತಿರುವ ಸಮಯದಲ್ಲೇ ಅವರಿಗೊಂದು ಸಮಸ್ಯೆ ಎದುರಾಯಿತು.

ಅವರ ಆರೋಗ್ಯದಲ್ಲಿ ಏರುಪೇರುಂಟಾಯಿತು. ಅವರನ್ನು ಸಂಧಿವಾತ ನೋವು ಕಾಡತೊಡಗಿತು. ಏನೋ ನೋವು ಬಂದಿದೆ.

ಒಂದೆರಡು ದಿನವಿದ್ದು ಹೊರಟು ಹೋಗುತ್ತದೆಂದು ಭಾವಿಸಿದ್ದ ನೋವು ಅವರಿಗೆ ಒಂದೇ ಸಮನೆ ಬಾಧಿಸತೊಡಗಿತು. ನಡೆಯಲಾಗುತ್ತಿರಲಿಲ್ಲ. ಕುಳಿತುಕೊಳ್ಳಲಾಗುತ್ತಿರಲಿಲ್ಲ. ಮಲಗಲೂ ಆಗುತ್ತಿರಲಿಲ್ಲ. ಅಷ್ಟೊಂದು ನೋವು! ಹೀಗಾಗಿ ಅವರು ಅಧ್ಯಯನ, ಧ್ಯಾನ, ಸಂಚಾರಗಳೆಲ್ಲವನ್ನೂ ಬಿಡಬೇಕಾಗಿ ಬಂದಿತು.

ಯಾವ ಔಷಧಿಯೂ ಅವರ ನೋವನ್ನು ಕಡಿಮೆ ಮಾಡಲಿಲ್ಲ. ಯಾರಿಗೆ ಹೇಳಿಕೊಳ್ಳಲೂ ಸಾಧ್ಯವಿಲ್ಲ. ಹೇಳಿಕೊಂಡರೂ ಪ್ರಯೋಜನವಿಲ್ಲ. ಇನ್ನು ಬದುಕುವುದೇ ಬೇಡವೆನ್ನಿಸುವಷ್ಟು ನೋವು ಅವರನ್ನು ಕಾಡುತ್ತಿತ್ತು.
ಈ ಪರಿಯ ನೋವಿನಿಂದ ನರಳುತ್ತಲಿದ್ದ ಅವರು ಒಂದು ದಿನ ಊರಿನಲ್ಲಿ ಸುತ್ತಾಡುವಾಗ ಮಕ್ಕಳು ಆಡುತ್ತಿರುವುದನ್ನು ಕಂಡರು.

ಮಕ್ಕಳೆಲ್ಲ ಕೇಕೆ ಹೊಡೆದು ಆನಂದದಿಂದ ಕಿರುಚಾಡುತ್ತಾ ಆಟವಾಡುತ್ತಿದ್ದರು. ಸುತ್ತ ಮುತ್ತಲಿನ ಪರಿವೆಯೇ ಇಲ್ಲದೆ ಆನಂದದಿಂದ ಆಡುತ್ತಿದ್ದ ಆ ಮಕ್ಕಳನ್ನು ನೋಡಿ ಈ ಬೌದ್ಧ ಭಿಕ್ಷುವಿಗೆ ಆಶ್ಚರ್ಯವಾಯಿತು. ಅವರು ಮತ್ತೂ ಗಮನವಿಟ್ಟು ಆ ಮಕ್ಕಳನ್ನು ನೋಡಿದರು. ಆಗ ಅವರಿಗೆ ಮಕ್ಕಳ ಗುಂಪಿನ ಮಧ್ಯೆ ಆಡುತ್ತಿದ್ದ ಒಬ್ಬ ಪುಟ್ಟ ಹುಡುಗಿಯು ಅವರ ಗಮನ ಸೆಳೆಯಿತು. ಆಕೆಗೆ ಒಂದು ಕಾಲಿರಲಿಲ್ಲ.

ಊರುಗೋಲಿನ ಸಹಾಯದಿಂದ, ಇರುವ ಒಂದೇ ಕಾಲಿನ ಆಸರೆಯಿಂದ, ಆಕೆ ಇತರ ಮಕ್ಕಳೊಂದಿಗೆ ಆಡುತ್ತಿದ್ದಳು. ಕುಣಿಯುತ್ತಿದ್ದಳು. ಕುಪ್ಪಳಿಸುತ್ತಿದ್ದಳು. ಆಕೆಯನ್ನು ನೋಡಿದ ತಕ್ಷಣ ಬೌದ್ಧ ಭಿಕ್ಷುವಿಗೆ ‘ಈ ಪುಟ್ಟ
ಹುಡುಗಿಗೆ ಒಂದು ಕಾಲೇ ಇಲ್ಲ. ಆದರೆ ಅದರ ಪರಿವೆಯೇ ಇಲ್ಲದೆ ಆನಂದದಿಂದ ಆಡುತ್ತಿದ್ದಾಳೆ.

ನನಗೆ ಎರಡೂ ಕಾಲುಗಳಿವೆ, ಕೈಗಳಿವೆ. ಆದರೆ ಸ್ವಲ್ಪ ನೋವಿದೆ. ಆ ನೋವನ್ನು ತಡೆಯಲಾಗದೆ ಬದುಕುವುದೇ ಬೇಡ ಎಂದುಕೊಳ್ಳುತ್ತಿದ್ದೇನಲ್ಲಾ ನಾನೆಂಥ ದಡ್ಡ?’ ಎಂಬ ಯೋಚನೆ ಮೂಡಿತು.

ತಕ್ಷಣ ಅವರ ಮುಖದಲ್ಲಿ ನಗು ಅರಳಿತು. ಆ ಕ್ಷಣವೇ ಅವರ ಆಚಾರ- ವಿಚಾರಗಳು ಬದಲಾದವು. ಆಶ್ಚರ್ಯವೆಂದರೆ ಕೆಲವೇ ದಿನಗಳಲ್ಲಿ ಅವರ ನೋವು ಅವರನ್ನು ಬಾದಿಸುತ್ತಿರಲಿಲ್ಲ! ಎಂದೋ ಓದಿದ್ದ ಈ ಪುಟ್ಟ ಕತೆಯೊಂದಿಗೆ ಮತ್ತೊಂದು ಮಾತೂ ನೆನಪಿಗೆ ಬರುತ್ತಿದೆ.

ಬದುಕಿನಲ್ಲಿ ನೋವುಗಳನ್ನು ಎದುರಿಸಬೇಕಾಗಿ ಬಂದಾಗ ನಮಗಿಂತ ಹೆಚ್ಚು ನೋವಿನಿಂದ ನರಳುತ್ತಿರುವವರನ್ನು ನೋಡಿ, ನಮಗೆ ನಾವೇ ಸಾಂತ್ವನ ಹೇಳಿಕೊಳ್ಳಬೇಕಂತೆ! ಹಾಗೆಯೇ ನಲಿವು ಬಂದಾಗ ನಮಗಿಂತ ಕಡಿಮೆ ನಲಿವಿನಲ್ಲಿಯೂ ನಗು-ನಗುತ್ತಿರುವವರನ್ನು ನೋಡಿ ಸಮಾಧಾನ ಮಾಡಿಕೊಳ್ಳಬೇಕಂತೆ! ಅದಿರಲಿ. ನೋವು-ನಲಿವುಗಳು ದೈಹಿಕವೋ? ಮಾನಸಿಕವೋ? ಯಾರ ನೋವು ದೊಡ್ಡದು? ನಮ್ಮದೋ? ಅವರದ್ದೋ?

ಕೃಪೆ: ಎಸ್.ಷಡಕ್ಷರಿ.

ರಾಜಕೀಯ

ಮೋದಿ ಅವರ ಬಲಿಷ್ಠ ನಾಯಕತ್ವ, ಸಮರ್ಪಣಾ ಮನೋಭಾವ ಎಲ್ಲರ ಹೃದಯದಲ್ಲಿ ಬೇರೂರಿದೆ: ಹೆಚ್.ಡಿ. ಕುಮಾರಸ್ವಾಮಿ

ಮೋದಿ ಅವರ ಬಲಿಷ್ಠ ನಾಯಕತ್ವ, ಸಮರ್ಪಣಾ ಮನೋಭಾವ ಎಲ್ಲರ ಹೃದಯದಲ್ಲಿ ಬೇರೂರಿದೆ: ಹೆಚ್.ಡಿ.

ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಸದೃಢ ನಾಯಕತ್ವ ಹಾಗೂ ರಾಷ್ಟ್ರ ನಿರ್ಮಾಣದಲ್ಲಿನ ಅವರ ಸಮರ್ಪಣ ಭಾವವು ಸಮಸ್ತ ಭಾರತೀಯರ ಹೃದಯಂತರಹದಲ್ಲಿ ಹಾಳವಾಗಿ ನೆಲೆಸಿದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು

[ccc_my_favorite_select_button post_id="120986"]
ಈ ಉಪ ಚುನಾವಣೆಯು ಕಾಂಗ್ರೆಸ್ ಸರ್ಕಾರವನ್ನು ಕಿತ್ತುಹಾಕಲು ಅವಕಾಶ: ಆರ್.ಅಶೋಕ

ಈ ಉಪ ಚುನಾವಣೆಯು ಕಾಂಗ್ರೆಸ್ ಸರ್ಕಾರವನ್ನು ಕಿತ್ತುಹಾಕಲು ಅವಕಾಶ: ಆರ್.ಅಶೋಕ

ಈ ಉಪಚುನಾವಣೆಯಲ್ಲಿ ಬಡವರು ಹಾಗೂ ಶ್ರೀಮಂತರ ನಡುವೆ ಸ್ಪರ್ಧೆ ನಡೆಯಲಿದೆ. ಇದರಲ್ಲಿ ಕಾಂಗ್ರೆಸ್ ಸೋತು ಮುಂದಿನ ರಾಜ್ಯದ ಭವಿಷ್ಯ ತೀರ್ಮಾನವಾಗಲಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ (R. Ashoka) ಹೇಳಿದರು.

[ccc_my_favorite_select_button post_id="120773"]
ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಮಧ್ಯಪ್ರಾಚ್ಯದಲ್ಲಿ ಯುದ್ದ ನಡೆಯುತ್ತಿರುವುದರಿಂದ ಭಾರತದ ಷೇರುಪೇಟೆ (Indian share market ) ತತ್ತರಿಸುತ್ತಿದ್ದು, ಕೋಟ್ಯಾಂತರ ರೂ ನಷ್ಟದ ಜೊತೆಗೆ, ತೈಲ ಬೆಲೆಯೇರಿಕೆಯಾಗುವ ಭೀತಿ ಉಂಟಾಗಿದೆ.

[ccc_my_favorite_select_button post_id="119892"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

IPLಗೆ ಕ್ಷಣಗಣನೆ.. ಟಿಕೆಟ್ ಬೇಡಿ ಮರ್ಯಾದೆ ಕಳೆದುಕೊಂಡ ಶಾಸಕರು

IPLಗೆ ಕ್ಷಣಗಣನೆ.. ಟಿಕೆಟ್ ಬೇಡಿ ಮರ್ಯಾದೆ ಕಳೆದುಕೊಂಡ ಶಾಸಕರು

ಇಂಡಿಯನ್ ಪ್ರೀಮಿಯರ್ ಲೀಗ್ (IPL) 19ನೇ ಆವೃತ್ತಿಯ ಉದ್ಘಾಟನಾ ಪಂದ್ಯ ಇಂದು (ಮಾರ್ಚ್ 28) ಚಿನ್ನಸ್ವಾಮಿಯಲ್ಲಿ ನಡೆಯಲಿದ್ದು, ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್‌ ರೈಸರ್ಸ್ ಹೈದರಾಬಾದ್ ತಂಡ ಮುಖಾಮುಖಿಯಾಗಲಿವೆ.

[ccc_my_favorite_select_button post_id="120518"]

RCB ಮಾರಾಟ: ವಿಜಯ್ ಮಲ್ಯ ಭಾವುಕ ಸಂದೇಶ

[ccc_my_favorite_select_button post_id="120461"]

RCBಗೆ ಕೆಎಂಎಫ್ ಪ್ರಾಯೋಜಕತ್ವ..!

[ccc_my_favorite_select_button post_id="120424"]

IPL ಟಿಕೆಟ್: ನಕಲಿ ಲಿಂಕ್ ಎಚ್ಚರಿಕೆ

[ccc_my_favorite_select_button post_id="120376"]
ದೊಡ್ಡಬಳ್ಳಾಪುರ: ನೇಣುಬಿಗಿದು ಕೊಂಡು ಇಬ್ಬರ ಆತ್ಮಹತ್ಯೆ..!

ದೊಡ್ಡಬಳ್ಳಾಪುರ: ನೇಣುಬಿಗಿದು ಕೊಂಡು ಇಬ್ಬರ ಆತ್ಮಹತ್ಯೆ..!

ಕೆಲವೇ ಗಂಟೆಗಳ ಅಂತರದಲ್ಲಿ ಇಬ್ಬರು ಪುರುಷರು ಆತ್ಮಹತ್ಯೆ (Suicide) ಮಾಡಿಕೊಂಡಿರುವ ಘಟನೆ ಸೋಮವಾರ ಸಂಜೆ ದೊಡ್ಡಬಳ್ಳಾಪುರ ಗ್ರಾಮಾಂತರ ಹಾಗೂ ದೊಡ್ಡಬೆಳವಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

[ccc_my_favorite_select_button post_id="120943"]
ದೊಡ್ಡಬಳ್ಳಾಪುರ: ಎರಡು ಪ್ರತ್ಯೇಕ ಅಪಘಾತ.. ಇಬ್ಬರ ದುರ್ಮರಣ..!

ದೊಡ್ಡಬಳ್ಳಾಪುರ: ಎರಡು ಪ್ರತ್ಯೇಕ ಅಪಘಾತ.. ಇಬ್ಬರ ದುರ್ಮರಣ..!

ಮಂಗಳವಾರ ಸಂಭವಿಸಿದ ಎರಡು ಪ್ರತ್ಯೇಕ ಅಪಘಾತದಲ್ಲಿ (Accident) ಇಬ್ಬರು ಸಾವನಪ್ಪಿರುವ ಘಟನೆ ತಾಲೂಕಿನ..*** ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವರದಿಯಾಗಿದೆ.

[ccc_my_favorite_select_button post_id="120965"]

ಆರೋಗ್ಯ

ಸಿನಿಮಾ

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ (Actor Darshan) ಅವರಿಗೆ ಇಂದು ಜನ್ಮದಿನದ (Birthday) ಸಡಗರ. 49ನೇ ವರ್ಷಕ್ಕೆ ದರ್ಶನ್ ಕಾಲಿಟ್ಟಿದ್ದಾರೆ.

[ccc_my_favorite_select_button post_id="119431"]