Harithalekhani: Sacred relationships

ಹರಿತಲೇಖನಿ ದಿನಕ್ಕೊಂದು ಕಥೆ: ಪವಿತ್ರ ಸಂಬಂಧಗಳು

Harithalekhani: ಐದಾರು ತಲೆಮಾರುಗಳ ಕುಟುಂಬದ ಕುಡಿಗಳೆಲ್ಲ ಕೂಡಿ ಇರುವ ಆ ಅವಿಭಕ್ತ ಕುಟುಂಬದ ಹಿರಿಯನಿಗೆ 93 ವರ್ಷ.

ಅದೊಂದು ದಿನ ಯಾವುದೋ ಕೌಟುಂಬಿಕ ವಿಷಯದಲ್ಲಿ ಮಾತು ಬೆಳೆದು, ಆ ಹಿರಿಯ ತನ್ನ 69 ವಯಸ್ಸಿನ ಮಗನನ್ನು ಆತನ ಮಕ್ಕಳು, ಮೊಮ್ಮಕ್ಕಳೆದುರೇ ಹೊಡೆದು ಬಿಡುತ್ತಾನೆ. ಆಗ ಮತ್ಯಾರು ಮಾತನಾಡಲು ಅಲ್ಲಿ ಏನೂ ಉಳಿದಿರುವುದಿಲ್ಲ. ಆವರೆಗೆ ಕಂಬಗಳ ಮರೆಯಲ್ಲಿ, ಬಾಗಿಲು ಕಿಟಿಕಿಯ ಹಿಂದೆ ನಿಂತು ನಡೆಯುವುದನ್ನು ಕದ್ದು ನೋಡುತ್ತಿದ್ದ ಹೆಂಗಸರು, ಚಿಕ್ಕವರೆಲ್ಲಾ ಒಳಗೆ ಸರಿದು ಬಿಡುತ್ತಾರೆ.

ಆ ರಾತ್ರಿ ತುಂಬಿದ ಇಡೀ ಮನೆಯಲ್ಲಿ ಮೌನ ಆವರಿಸಿದೆ. ಆ ಎರಡು ರೂಮಿನಲ್ಲಿರುವವರನ್ನು ಬಿಟ್ಟು.

ಹಿರಿಯನಿಗೆ ನಿದ್ದೆ ಬರುತ್ತಿಲ್ಲ. ಈ ಕಡೆಯಿಂದ ಆ ಕಡೆಗೆ, ಆ ಕಡೆಯಿಂದ ಈ ಕಡೆಗೆ ಆಗಾಗ ಮಗ್ಗಲು ಬದಲಿಸುತ್ತಿರುತ್ತಾನೆ. ಪಕ್ಕದಲ್ಲಿರುವ ಅಜ್ಜಿಗೆ ಯಜಮಾನ ಯಾವುದೋ ಚಿಂತೆಯಲ್ಲಿದ್ದಾನೆಂದು ಅನುಭವದಿಂದ ಗೊತ್ತಾಗುತ್ತಿದೆ, ಆದರೆ ಕೇಳಲು ಭಯ. ಕೊನೆಗೆ..

“ಯಾಕ್ರಿ? ನಿದ್ದಿ ಬರ್ತಿಲ್ಲೇನು? ನೀರೇನಾದ್ರೂ ಕೊಡ್ಲಾ?” ಕೇಳುತ್ತಾಳೆ..

“ಬ್ಯಾಡ” ಎಂದಷ್ಟೇ ಹೇಳಿ, ಸ್ವಲ್ಪ ಸಮಯದ ನಂತರ “ಆವಾಗ ನಿನ್ನ ಮಗನ ಮುಖ ನೋಡ್ದೇನು?” ಎನ್ನುತ್ತಾನೆ.

“ಹುಂ..” ಎಂದಷ್ಟೇ ಹೇಳುತ್ತಾಳೆ ಅಜ್ಜಿ..

“ಮೊದಲೆಲ್ಲಾ ಹೊಡದಾಗ ಅವ್ನ ಕಣ್ಣಾಗ ನೀರು ಬರ್ತಿರ್ಲಿಲ್ಲ, ಇವತ್ತು ಕಣ್ತುಂಬ ನೀರು ತುಂಬಿಕೊಂಡಿದ್ದ” ಅಂದ ಹಿರಿಯ, ಅದನ್ನಾಕೆಯೂ ಗಮನಿಸಿದ್ಲು..

“ನಾ ಜೋರಾಗಿ ಹೊಡ್ದನೇನೋ?, ಪೆಟ್ಟು ಜೋರಾಗಿ ಬಿತ್ತೇನೋ?” ಎಂದು ನೊಂದು ಕೊಂಡಿದ್ದ..

ಇನ್ನೊಂದು ರೂಮಿನಲ್ಲಿದ್ದ ಮಗನಿಗೂ ನಿದ್ದೆ ಬರುತ್ತಿಲ್ಲ. ಆತನಿಗೆ ನಿದ್ದೆ ಬರದೇ ಆತನ ಹೆಂಡತಿಗೂ ನಿದ್ದೆಯಿರಲಿಲ್ಲ.

“ಮೊದ್ಲ್ಯಾವಾಗ್ಲೂ ಇಷ್ಟು ಮನಸಿಗೆ ಹಚ್ಗೊಳ್ಲಾರ್ದೊರು ಇವತ್ಯಾಕ ಬಾಳ ಬ್ಯಾಸರ ಮಾಡ್ಕೊಂಡೇರಿ?” ಎಂದು ಹೇಳುತ್ತಾ… “ದೊಡ್ಡೋರು ಮೊದ್ಲು ಎಷ್ಟು ಸಲ ಹೊಡದ್ರೂ ನಿಮ್ ಕಣ್ಣಾಗ ನೀರ ಬಂದಿದ್ದಿಲ್ಲ?” ಕಳಕಳಿಯಿಂದ ಕೇಳಿದಳು..

“ಅಪ್ಪ, ಹಿಂದಿನ ಸಲ ಹೊಡ್ದಾಗ ಪೆಟ್ಟು ಜೋರಾಗಿತ್ತು. ಈ ಸಲ ಹೊಡ್ದಂಗೆ ಅನ್ಸಲಿಲ್ಲ, ನಮ್ಮಪ್ಪನ ಕೈಯಾಗ ಶಕ್ತಿ ಕಡಿಮಿ ಆಗೇದ” ನೋವಿನಿಂದ ಹೇಳಿದಾತ.

“ಅಪ್ಪನ್ನ ಕಳ್ಕೊಂಡ್ರ ನಾವು ಪರದೇಶಿ ಆದಂಗಾಗ್ತೇವಿ, ಇನ್ಮ್ಯಾಲೆ ಅಪ್ಪನ್ನ ಇನ್ನೂ ಕಾಳಜಿಲಿಂದ ನೋಡ್ಕೋಬೇಕು” ಅಂದ

ಇಂಥಾ ಪವಿತ್ರ ಸಂಬಂಧಗಳು ಈಗ ಎಷ್ಟು ಹುಡುಕಿದರೂ ಸಿಗುವುದಿಲ್ಲ. ಕಳೆದುಕೊಂಡ ಮೇಲೆಯೇ ನಿಜವಾದ ಮೌಲ್ಯ ಗೊತ್ತಾಗೋದು, ಅಲ್ಲವೇ?

ಕೃಪೆ: ಲೇಖಕರ ಮಾಹಿತಿ ಲಭ್ಯವಿಲ್ಲ. (ಸಾಮಾಜಿಕ ಜಾಲತಾಣ)

ರಾಜಕೀಯ

2 ಕೋಟಿ ಬಾಂಗ್ಲಾ ಪ್ರಜೆಗಳು ಭಾರತಕ್ಕೆ ಬಂದಿದ್ದಾರೆ: ಆರ್‌.ಅಶೋಕ

2 ಕೋಟಿ ಬಾಂಗ್ಲಾ ಪ್ರಜೆಗಳು ಭಾರತಕ್ಕೆ ಬಂದಿದ್ದಾರೆ: ಆರ್‌.ಅಶೋಕ

2 ಕೋಟಿ ಬಾಂಗ್ಲಾ ಪ್ರಜೆಗಳು ಭಾರತಕ್ಕೆ ಬಂದಿದ್ದು, ಅಪರಾಧಿ ಚಟುವಟಿಕೆಗಳಲ್ಲಿ ತೊಡಗುತ್ತಿದ್ದಾರೆ; ಆರ್. ಅಶೋಕ (R.AShoka)

[ccc_my_favorite_select_button post_id="118528"]
ರಾಜ್ಯ ಸರ್ಕಾರಿ ನೌಕರ ಸಂಘದ ಕ್ಯಾಲೆಂಡರ್ ಬಿಡುಗಡೆ

ರಾಜ್ಯ ಸರ್ಕಾರಿ ನೌಕರ ಸಂಘದ ಕ್ಯಾಲೆಂಡರ್ ಬಿಡುಗಡೆ

ರಾಜ್ಯ ಸರ್ಕಾರಿ ನೌಕರ ಸಂಘದ (State Government Employees Association) 2026ನೇ ವರ್ಷದ ಕ್ಯಾಲೆಂಡರ್ (Calendar) ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ (Cmsiddaramaiah) ಅವರು ಬಿಡುಗಡೆ ಮಾಡಿ, ಸರ್ಕಾರಿ ನೌಕರರಿಗೆ ಹೊಸ ವರ್ಷದ ಶುಭಾಶಯ ಕೋರಿದರು.‌

[ccc_my_favorite_select_button post_id="117770"]
ಭಾರತ ಹಿಂದೂ ರಾಷ್ಟ್ರ, ಯಾವುದೇ ಸಾಂವಿಧಾನಿಕ ಅನುಮೋದನೆ ಬೇಕಿಲ್ಲ: ಮೋಹನ್ ಭಾಗವತ್

ಭಾರತ ಹಿಂದೂ ರಾಷ್ಟ್ರ, ಯಾವುದೇ ಸಾಂವಿಧಾನಿಕ ಅನುಮೋದನೆ ಬೇಕಿಲ್ಲ: ಮೋಹನ್ ಭಾಗವತ್

ಭಾರತ ಹಿಂದೂ ರಾಷ್ಟ್ರ ಎಂಬುದು ಸತ್ಯ. ಅದಕ್ಕೆ ಯಾವುದೇ ಸಾಂವಿಧಾನಿಕ ಅನುಮೋದನೆ ಅಗತ್ಯವಿಲ್ಲ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಮುಖ್ಯಸ್ಥ ಮೋಹನ್ ಭಾಗವತ್ (Mohan Bhagwat) ಹೇಳಿದ್ದಾರೆ.

[ccc_my_favorite_select_button post_id="117699"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ಕ್ರೀಡಾಪಟುಗಳಿಂದ ಪ್ರೋತ್ಸಾಹ ಧನಕ್ಕಾಗಿ ಅರ್ಜಿ ಆಹ್ವಾನ

ಕ್ರೀಡಾಪಟುಗಳಿಂದ ಪ್ರೋತ್ಸಾಹ ಧನಕ್ಕಾಗಿ ಅರ್ಜಿ ಆಹ್ವಾನ

ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ಕ್ರೀಡಾ ಸ್ಪಧೆಯಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ (Athletes) 2025-26ನೇ ಸಾಲಿನಲ್ಲಿ ಪ್ರೋತ್ಸಾಹಧನಕ್ಕೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ (Applications invited).

[ccc_my_favorite_select_button post_id="118180"]
ಮಾಂಜಾ ದಾರ ಕುತ್ತಿಗೆಗೆ ಸಿಲುಕಿ ಬೈಕ್ ಸವಾರ ಸಾವು..!

ಮಾಂಜಾ ದಾರ ಕುತ್ತಿಗೆಗೆ ಸಿಲುಕಿ ಬೈಕ್ ಸವಾರ ಸಾವು..!

ದ್ವಿಚಕ್ರ ವಾಹನದಲ್ಲಿ ತೆರಳುವ ವೇಳೆ ಗಾಳಿಪಟ ಹಾರಿಸುವ ಮಾಂಜಾ ದಾರ (Maanja thread) ಕುತ್ತಿಗೆ ಸೀಳಿ ವ್ಯಕ್ತಿಯೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಚಿಟಗುಪ್ಪ ತಾಲೂಕಿನ ತಾಳಮಡಗಿ ಗ್ರಾಮದ ಸೇತುವೆ ಸಮೀಪ ನಡೆದಿದೆ.

[ccc_my_favorite_select_button post_id="118471"]
ದೊಡ್ಡಬಳ್ಳಾಪುರ: 2 ಪ್ರತ್ಯೇಕ ಕಾರು ಅಪಘಾತ.. ಗಾಯಾಳುಗಳು ಆಸ್ಪತ್ರೆಗೆ

ದೊಡ್ಡಬಳ್ಳಾಪುರ: 2 ಪ್ರತ್ಯೇಕ ಕಾರು ಅಪಘಾತ.. ಗಾಯಾಳುಗಳು ಆಸ್ಪತ್ರೆಗೆ

ಇಂದು ಸಂಭವಿಸಿದ ಎರಡು ಪ್ರತ್ಯೇಕ ಕಾರುಗಳ ಅಪಘಾತದಲ್ಲಿ (Accident) ಇಬ್ಬರು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡು, ಆಸ್ಪತ್ರೆಗೆ ದಾಖಲಾಗಿದ್ದಾರೆ.

[ccc_my_favorite_select_button post_id="118357"]

ಆರೋಗ್ಯ

ಸಿನಿಮಾ

2020 ಹಾಗೂ 2021 ರ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಪ್ರಕಟ

2020 ಹಾಗೂ 2021 ರ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಪ್ರಕಟ

ಕರ್ನಾಟಕ ಸರ್ಕಾರವು ಚಲನಚಿತ್ರ ರಂಗದಲ್ಲಿನ ಜೀವಮಾನ ಸಾಧನೆಗಾಗಿ ನೀಡುವ ಡಾ.ರಾಜಕುಮಾರ್, ಪುಟ್ಟಣ್ಣ ಕಣಗಾಲ್ ಹಾಗೂ ಡಾ.ವಿಷ್ಣುವರ್ಧನ್ ಪ್ರಶಸ್ತಿಗಳನ್ನು ಪ್ರಕಟಿಸಿದೆ (State Film Awards).

[ccc_my_favorite_select_button post_id="118307"]
error: Content is protected !!