Sleeping position

ಹರಿತಲೇಖನಿ ದಿನಕ್ಕೊಂದು ಕಥೆ: ಮಲಗುವ ವಿಧಾನ

Harithalekhani: ದಿನವಿಡೀ ಕಾರ್ಯನಿರತವಾಗಿರುವ ಶರೀರಕ್ಕೆ ವಿಶ್ರಾಂತಿ ಸಿಗಲೆಂದು ನಾವು ಮಲಗುತ್ತೇವೆ. ಆದುದರಿಂದ ‘ಯಾವ ರೀತಿಯಲ್ಲಿ ಅಥವಾ ಭಂಗಿಯಲ್ಲಿ ಮಲಗುವುದರಿಂದ ಶರೀರಕ್ಕೆ ಹೆಚ್ಚಿನ ವಿಶ್ರಾಂತಿ ಸಿಗುತ್ತದೆಯೋ, ಆ ಭಂಗಿಯು ಒಳ್ಳೆಯದು’ ಎಂಬುವುದು ಒಂದು ಸಾಮಾನ್ಯ ನಿಯಮ.

ಪ್ರತಿಯೊಬ್ಬರ ಪ್ರಕೃತಿ ಮತ್ತು ಆ ಸಮಯದ ಸ್ಥಿತಿಗನುಗುಣವಾಗಿ ವಿಶ್ರಾಂತಿ ಸಿಗುವ ಭಂಗಿಯು ಬೇರೆ ಬೇರೆ ಆಗಿರಬಹುದು. ನಾವು ಯಾವ ಭಂಗಿಯಲ್ಲಿ ಮಲಗಬೇಕು ಎಂಬುವುದು ನಮಗೆ ನಿದ್ದೆ ಬರುವ ತನಕ ಮಾತ್ರ ನಾವು ನಿರ್ಧರಿಸಬಹುದು, ಏಕೆಂದರೆ ನಿದ್ದೆ ಬಂದ ನಂತರ ನಮ್ಮ ಶರೀರದ ಸ್ಥಿತಿಯು ನಮ್ಮ ನಿಯಂತ್ರಣದಲ್ಲಿರುವುದಿಲ್ಲ.

ಅ. ಮಗುಚಿ (ಕೆಳಮುಖವಾಗಿ) ಮಲಗುವುದು

ನವಜಾತ ಶಿಶುಗಳನ್ನು ಮತ್ತು ಚಿಕ್ಕ ಮಕ್ಕಳನ್ನು ಈ ರೀತಿ ಮಲಗಿಸಿದರೆ ಅವರಿಗೆ ಶ್ವಾಸ ತೆಗೆದುಕೊಳ್ಳಲು ಅಡಚಣೆಯಾಗಬಹುದು. ಆದುದರಿಂದ ಮಕ್ಕಳನ್ನು ಈ ರೀತಿ ಮಲಗಿಸಬಾರದು. ಹಾಗೆಯೇ ಮಗುಚಿ ಮಲಗುವುದರಿಂದ ಇತರ ವಿಧಾನಗಳ ತುಲನೆಯಲ್ಲಿ ಬೆನ್ನೆಲುಬಿನ ಮೇಲೆ ಹೆಚ್ಚಿನ ಒತ್ತಡ ಬರುತ್ತದೆ.

ಆ. ಅಂಗಾತ (ಬೆನ್ನಿನ ಮೇಲೆ) ಮಲಗುವುದು

ನಾವು ನಿಂತುಕೊಂಡಾಗ ನಮ್ಮ ಬೆನ್ನೆಲುಬಿನ ಮೇಲೆ ಶೇ.100 ರಷ್ಟು ಒತ್ತಡವಿರುತ್ತದೆ ಎಂದುಕೊಳ್ಳೋಣ, ನಾವು ಅಂಗಾತ ಮಲಗಿದಾಗ ಈ ಒತ್ತಡವು ಶೇ. 75 ರಷ್ಟು ಕಡಿಮೆಯಾಗಿ ಕೇವಲ ಶೇ.35 ರಷ್ಟೇ ಉಳಿಯುತ್ತದೆ.

ಈ ರೀತಿ ಮಲಗಿದಾಗ ಬೆನ್ನಿನ ಎಲುಬುಗಳ ಮೇಲಿನ ಒತ್ತಡವು ಇತರ ಭಂಗಿಗಳ ತುಲನೆಯಲ್ಲಿ ಅತ್ಯಂತ ಕಡಿಮೆಯಾಗಿರುತ್ತದೆ. ಆದುದರಿಂದ ಬೆನ್ನೆಲುಬಿನ ತೊಂದರೆಗಳಿರುವವರು ಈ ರೀತಿ ಮಲಗಿದರೆ ಅವರಿಗೆ ಸುಖಕರ ನಿದ್ದೆ ಸಿಗುತ್ತದೆ. ಅಂಗಾತ ಮಲಗುವಾಗ ಮಂಡಿಗಳ ಕೆಳಗೆ ಒಂದು ಚಿಕ್ಕ ದಿಂಬನ್ನು ಇಟ್ಟುಕೊಂಡರೆ ಬೆನ್ನೆಲುಬಿನ ಒತ್ತಡ ಇನ್ನಷ್ಟು ಕಡಿಮೆಯಾಗುತ್ತದೆ.

ಅಂಗಾತ (ಬೆನ್ನಿನ ಮೇಲೆ) ಮಲಗುವುದು ಮತ್ತು ಗೊರಕೆ ಹೊಡೆಯುವುದರ ಸಂಬಂಧವೇನು?

ಯಾರಿಗಾದರೂ ಗೊರಕೆ ಹೊಡೆಯುವ ಅಭ್ಯಾಸವಿದ್ದರೆ, ಅವರು ಅಂಗಾತ ಮಲಗಿದರೆ ಅದು ಹೆಚ್ಚಾಗುತ್ತದೆ. ನಿದ್ದೆಯಲ್ಲಿದ್ದಾಗ ಅನೇಕ ಕಾರಣಗಳಿಂದ ಉಸಿರಾಟಕ್ಕೆ ತೊಂದರೆಯಾದಾಗ ಜನರು ಗೊರಕೆ ಹೊಡೆಯುತ್ತಾರೆ.

ಅಂಗಾತ ಮಲಗಿದಾಗ ಶ್ವಾಸನಳಿಕೆಯಲ್ಲಿ ಅಡಚಣೆಗಳು ನಿರ್ಮಾಣವಾಗುವ ಸಾಧ್ಯತೆ ಹೆಚ್ಚಿರುತ್ತದೆ. ಯಾವುದಾದರೊಂದು ಮಗ್ಗುಲಿನಲ್ಲಿ ಮಲಗುವುದರಿಂದ ಶ್ವಾಸನಳಿಕೆಯಲ್ಲಿ ಅಡಚಣೆಯು (ಉದಾಹರಣೆಗೆ ಶಿಥಿಲವಾದ ಸ್ನಾಯುಗಳಿಂದಾಗಿ ಶ್ವಾಸ ನಳಿಕೆಯಲ್ಲಿ ಅಡ್ಡಿ ಬಂದು ಶ್ವಾಸೋಚ್ಛ್ವಾಸಕ್ಕೆ ಆಗುವ ತೊಂದರೆ) ದೂರವಾಗಿ ಗೊರಕೆ ಹೊಡೆಯುವುದನ್ನು ತಡೆಯಬಹುದು. ಈ ರೀತಿ ಮಗ್ಗುಲಿನಲ್ಲಿ ಮಲಗುವ ಅನೇಕರಿಗೆ ಶಾಂತ ನಿದ್ರೆಯ ಅನುಭವವು ಸಿಕ್ಕಿದೆ.

ಇ. ಒಂದು ಮಗ್ಗುಲಿನಲ್ಲಿ ಮಲಗುವುದು

ಮಗ್ಗುಲಿನಲ್ಲಿ ಮಲಗುವುದರಿಂದ ಬೆನ್ನೆಲುಬಿನ ಮೇಲೆ ನಿಂತಿಕೊಂಡಿರುವ ಸ್ಥಿತಿಯ ಶೇ.75 ರಷ್ಟು ಒತ್ತಡವಿರುತ್ತದೆ. ಬಲ ಮಗ್ಗುಲಿನಲ್ಲಿ ಮಲಗುವುದರಿಂದ ಚಂದ್ರನಾಡಿಯು, ಎಡ ಮಗ್ಗುಲಿನಲ್ಲಿ ಮಲಗುವುದರಿಂದ ಸೂರ್ಯನಾಡಿಯು ಸಕ್ರಿಯವಾಗಲು ಸಹಾಯವಾಗುತ್ತದೆ.

ಮಲಗುವಾಗ ಪೂರ್ವ ದಿಕ್ಕಿಗೆ ಅಥವಾ ದಕ್ಷಿಣ ದಿಕ್ಕಿಗೆ ತಲೆ ಮಾಡಿ, ಒಂದು ಮಗ್ಗುಲಿನಲ್ಲಿ ಮಲಗಬೇಕು.

ಧರ್ಮಶಾಸ್ತ್ರಗಳಲ್ಲಿ ‘ಮಗ್ಗುಲಿನಲ್ಲಿ ಮಲಗಬೇಕು’ ಎಂದು ಹೇಳಿರುವುದರಿಂದ, ಬೇರೆ ಭಂಗಿಯಲ್ಲಿ ಮಲಗಲು ಯಾವುದೇ ವೈದ್ಯಕೀಯ ಕಾರಣವಿಲ್ಲದಿದ್ದರೆ, ಅಂತಹವರು ಮಗ್ಗುಲಿನಲ್ಲೇ ಮಲಗಲು ಪ್ರಯತ್ನಿಸಬೇಕು.

ನಾವು ಯಾವುದಾದರೊಂದು ಮಗ್ಗುಲಿನಲ್ಲಿ ಮಲಗುವುದರಿಂದ ಕೆಳಗಿನ ದಿಕ್ಕಿನಲ್ಲಿ ಇರುವ ಮೂಗಿನ ಹೊಳ್ಳೆಯು ನಿಧಾನವಾಗಿ ಮುಚ್ಚಿಕೊಳ್ಳುತ್ತದೆ. ಅದು ಸಾಧ್ಯವಾದಷ್ಟು ಮುಚ್ಚಿಕೊಂಡ ಮೇಲೆ ನಾವು ನಿದ್ದೆಯಲ್ಲಿಯೇ ಮಗ್ಗುಲನ್ನು ಬದಲಿಸುತ್ತೇವೆ. ಆಗ ಮೂಗಿನ ಆ ಹೊಳ್ಳೆಯು ನಿಧಾನವಾಗಿ ತೆರೆದು ಇನ್ನೊಂದು ಹೊಳ್ಳೆಯು ಮುಚ್ಚಿಕೊಳ್ಳುತ್ತದೆ.

ಈ ರೀತಿ ಅದಲು-ಬದಲಾಗಿ ಮೂಗಿನ ಹೊಳ್ಳೆಗಳು ಮುಚ್ಚಿಕೊಳ್ಳುವುದರಿಂದ ನಾವು ನಿದ್ದೆಯಲ್ಲಿಯೇ ಸ್ವಲ್ಪ-ಸ್ವಲ್ಪ ಸಮಯದ ನಂತರ ಮಗ್ಗುಲು ಬದಲಿಸುತ್ತೇವೆ.

ನಾವು ದಿನದ ಕಾಲು ಭಾಗದಷ್ಟು ಸಮಯ ನಿದ್ದೆಗೆಂದು ನೀಡುತ್ತೇವೆ. ಪ್ರತಿ ದಿವಸ ಇಷ್ಟು ಕಾಲಾವಧಿಯನ್ನು ಒಂದೇ ಸ್ಥಿತಿಯಲ್ಲಿ ಕಳೆದರೆ ಚರ್ಮದ ಮೇಲೆ ಸತತವಾಗಿ ಒತ್ತಡ ಬೀಳುವುದರಿಂದ ಹಾಸಿಗೆ ಹುಣ್ಣುಗಳು (ಬೆಡ್-ಸೋರ್) ಆಗುವ ಸಾಧ್ಯತೆ ಇದೆ. ನಿದ್ದೆಯಲ್ಲಿ ನಮ್ಮ ಸ್ಥಿತಿಯನ್ನು ಮಧ್ಯ-ಮಧ್ಯದಲ್ಲಿ ಬಸಲಾಯಿಸಿದರೆ ಯಾವುದೇ ಒಂದು ಅವಯವದ ಮೇಲೆ ಹೆಚ್ಚಿನ ಒತ್ತಡ ಬರುವುದಿಲ್ಲ.

ಕೃಪೆ: ವೈದ್ಯ ಮೇಘರಾಜ್ ಪರಾಡ್ಕರ್, ಸನಾತನ ಆಶ್ರಮ.

AI ಚಿತ್ರ ಬಳಸಲಾಗಿದೆ.

ರಾಜಕೀಯ

ಧರ್ಮದ ವಿಚಾರದಲ್ಲಿ ರಾಜಕೀಯ ಬೇಡ; ನಾವು ಅವರ ಪರವೂ ಇಲ್ಲ,‌ ಇವರ ಪರವೂ ಇಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್

ಧರ್ಮದ ವಿಚಾರದಲ್ಲಿ ರಾಜಕೀಯ ಬೇಡ; ನಾವು ಅವರ ಪರವೂ ಇಲ್ಲ,‌ ಇವರ ಪರವೂ

"ನಾವು ಅವರ (ಧರ್ಮಸ್ಥಳ) ಪರವೂ ಇಲ್ಲ, ಇವರ ಪರವೂ ಇಲ್ಲ. ನಾವು ನ್ಯಾಯದ ಪರ. ಧರ್ಮದ ವಿಚಾರದಲ್ಲಿ ರಾಜಕಾರಣ ಮಾಡಬೇಡಿ ಎಂದಷ್ಟೇ ನಾವು ಹೇಳುತ್ತಿದ್ದೇವೆ": ಡಿಸಿಎಂ ಡಿ.ಕೆ.ಶಿವಕುಮಾರ್ (D.K. Shivakumar)

[ccc_my_favorite_select_button post_id="113000"]
2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

ದಾವಣಗೆರೆ: ಬೆಂಗಳೂರು-ದಾವಣಗೆರೆ- ಬೆಳಗಾವಿಗೆ ವಂದೇ ಭಾರತ್ ಎಕ್ಸ್‍ಪ್ರೆಸ್ (Vande Bharat Express) ರೈಲು ಸೇವೆಯಿಂದ ಶಿಕ್ಷಣ, ಆರೋಗ್ಯ ಸೇವೆಯ ಅನುಕೂಲದ ಜೊತೆಗೆ ವ್ಯಾಪಾರ ವಹಿವಾಟು ವೃದ್ದಿಯಾಗಲಿದೆ ಎಂದು ಸಂಸದರಾದ ಡಾ; ಪ್ರಭಾ ಮಲ್ಲಿಕಾರ್ಜುನ್ (Dr.

[ccc_my_favorite_select_button post_id="112408"]
Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

ಹಳೆ ದ್ವೇಷದ ಹಿನ್ನೆಲೆ ಎರಡು ಗ್ಯಾಂಗ್‌ಗಳ ನಡುವೆ ಮಾರಾಮಾರಿ ನಡೆದಿದೆ. ದೊಣ್ಣೆ, ಮಾರಕಾಸ್ತ್ರಗಳಿಂದ ಪರಸ್ಪರ ಹೊಡೆ ದಾಡಿಕೊಂಡಿದ್ದಾರೆ. Crime News;

[ccc_my_favorite_select_button post_id="110866"]
ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಪ್ರವಾಸದಲ್ಲಿರುವ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ತಮ್ಮ ಪ್ರವಾಸದ ಎರಡನೇ ದಿನವೂ ಇಲ್ಲಿನ ಆಡಳಿತ

[ccc_my_favorite_select_button post_id="110371"]

ಕ್ರೀಡೆ

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಒಡಿಶಾದ ಭುವನೇಶ್ವರದಲ್ಲಿ‌ ಇದೇ ತಿಂಗಳ 10ರಂದು ನಡೆದ ವಿಶ್ವ ಅಥ್ಲೆಟಿಕ್ಸ್ ನ ಕಾಂಟಿನೆಂಟಲ್ ಕೂಟದ ಮಹಿಳೆಯರ ವಿಭಾಗದ 400 ಮೀಟರ್ ಓಟದಲ್ಲಿ ಚಿನ್ನದ ಪದಕ ಗಳಿಸಿದ ರಾಜ್ಯಕ್ಕೆ ಕೀರ್ತಿ ತಂದ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ

[ccc_my_favorite_select_button post_id="112580"]
ದೊಡ್ಡಬಳ್ಳಾಪುರ: ಹೆಂಡ ಸಾಗಿಸುತ್ತಿದ್ದ ಮಹಿಳೆಯ ಬಂಧನ.. 70 ಲೀಟರ್‌ ಹೆಂಡ ವಶ..!

ದೊಡ್ಡಬಳ್ಳಾಪುರ: ಹೆಂಡ ಸಾಗಿಸುತ್ತಿದ್ದ ಮಹಿಳೆಯ ಬಂಧನ.. 70 ಲೀಟರ್‌ ಹೆಂಡ ವಶ..!

ನೆರೆ ರಾಜ್ಯದಿಂದ ಅಕ್ರಮವಾಗಿ ಹೆಂಡ (Toddy) ಸಾಗಿಸುತ್ತಿದ್ದ ಮಹಿಳೆಯನ್ನು ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.

[ccc_my_favorite_select_button post_id="112911"]
ದೊಡ್ಡಬಳ್ಳಾಪುರ: ಬೆಳ್ಳಂಬೆಳಗ್ಗೆ ಅಪಘಾತ.. ಯುವಕನ ಬಲಿ ಪಡೆದ ಸಿಮೆಂಟ್ ಲಾರಿ..!

ದೊಡ್ಡಬಳ್ಳಾಪುರ: ಬೆಳ್ಳಂಬೆಳಗ್ಗೆ ಅಪಘಾತ.. ಯುವಕನ ಬಲಿ ಪಡೆದ ಸಿಮೆಂಟ್ ಲಾರಿ..!

ಮತ್ತೊಂದು ರಸ್ತೆಯಲ್ಲಿ ತನ್ನ ಪಾಡಿಗೆ ತಾನು ಸಾಗುತ್ತಿದ್ದ ಯುವಕನ ಮೇಲೆರಗಿದ (Accident) ಲಾರಿ, ಸ್ಥಳದಲ್ಲಿಯೇ ಬಲಿ ಪಡೆದಿರುವ ಘಟನೆ

[ccc_my_favorite_select_button post_id="113040"]

ಆರೋಗ್ಯ

ಸಿನಿಮಾ

Darshan; ‘ಇದ್ರೇ ನೆಮ್ಮದಿಯಾಗ್ ಇರ್ಬೇಕ್’ ಹಾಡು ಬಿಡುಗಡೆ.. Video ಲಿಂಕ್ ಇಲ್ಲಿದೆ ನೋಡಿ

Darshan; ‘ಇದ್ರೇ ನೆಮ್ಮದಿಯಾಗ್ ಇರ್ಬೇಕ್’ ಹಾಡು ಬಿಡುಗಡೆ.. Video ಲಿಂಕ್ ಇಲ್ಲಿದೆ ನೋಡಿ

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ಅಭಿನಯದ ದಿ ಡೆವಿಲ್ ಸಿನಿಮಾದ 'ಇದ್ರೇ ನೆಮ್ಮದಿಯಾಗ್ ಇರ್ಬೇಕ್' ಹಾಡು ಯುಟ್ಯೂಬ್‌ನಲ್ಲಿ ಬಿಡುಗಡೆಯಾಗಿದೆ.

[ccc_my_favorite_select_button post_id="113046"]
error: Content is protected !!