ಹರಿತಲೇಖನಿ ದಿನಕ್ಕೊಂದು ಕಥೆ: ಅತಿ ಆಸೆ ಗತಿಗೇಡು

Excessive desire leads to ruin

Harithalekhani: ಒಂದು ಊರಿನಲ್ಲಿ ಶಿವಪ್ಪ ಎಂಬ ಬಡ ರೈತನು ತನ್ನ ಚಿಕ್ಕ ಸಂಸಾರದೊಡನೆ ತನ್ನ ಹೆಸರಲ್ಲಿದ್ದ ಸಣ್ಣ ಭೂಮಿಯಲ್ಲೇ ವ್ಯವಸಾಯ ಮಾಡುತ್ತಾ ಜೀವನ ನಡೆಸುತ್ತಿದ್ದ.

ಒಂದು ದಿನ ಆತ ತನ್ನ ಜಮೀನಿನಲ್ಲಿ ಹಾವಿನ ಹುತ್ತವನ್ನು ಕಂಡ. ಅವನು ಹುತ್ತವನ್ನು ಕಡಿಸದೆ ಅದಷ್ಟು ಜಾಗವನ್ನು ಬಿಟ್ಟು ವ್ಯವಸಾಯ ಮಾಡತೊಡಗಿದ. ಆತ ದಿನೇ ದಿನೇ ಹುತ್ತದ ಬಳಿ ಹಾಲನ್ನಿಡುತ್ತಿದ್ದ. ಆ ಹಾಲನ್ನು ಹುತ್ತದೊಳಗಿದ್ದ ಹಾವು ಕುಡಿದು ತನ್ನ ಬಾಯಿಯಿಂದ ಚಿನ್ನದ ನಾಣ್ಯವನ್ನು ತೆಗೆದು ಬಟ್ಟಲಿನಲ್ಲಿಟ್ಟು ಹೋಗುತ್ತಿತ್ತು.

ಶಿವಪ್ಪ ಚಿನ್ನದ ನಾಣ್ಯಗಳನ್ನು ಮಾರಿ ಅದರಿಂದ ಬಂದ ಹಣವನ್ನು ಕೂಡಿಸಿದ. ಹೀಗೆ ಆತ ಹಾವಿನಿಂದ ಪಡೆದ ಅನೇಕ ಚಿನ್ನದ ನಾಣ್ಯಗಳನ್ನು ಮಾರಿಬಂದ ಹಣದಿಂದ ಹೊಸ ಜಮೀನನ್ನು ಖರೀದಿ ಮಾಡಿದ. ಶ್ರಮಪಟ್ಟು ದುಡಿದ. ಬಂದ ಫಸಲನ್ನು ಮಾರಿ ಶ್ರೀಮಂತ ವ್ಯಕ್ತಿಯಾದ. ತಾನು ಶ್ರೀಮಂತನಾದರೂ ಸಹ ಹಾವಿಗೆ ಹಾಲನ್ನಿಡುವುದು ಬಿಡಲಿಲ್ಲ.

ಒಂದು ದಿನ ಶಿವಪ್ಪನಿಗೆ ಅನಿವಾರ್ಯವಾಗಿ ಸಂಬಂಧಿಕರ ಮನೆಗೆ ಹೋಗಬೇಕಾಗಿ ಬಂತು. ಆಗ ಶಿವಪ್ಪ ತನ್ನ ಮಗನಿಗೆ ಹುತ್ತದ ಬಳಿ ಹಾಲನ್ನಿಟ್ಟು ಬರಲು ಹೇಳಿದ. ಅವನ ಮಾತಿನಂತೆ ಶಿವಪ್ಪನ ಮಗ ಹುತ್ತದ ಬಳಿ ಹಾಲನ್ನಿಟ್ಟ. ಎಂದಿನಂತೆ ಹಾವು ಹಾಲು ಕುಡಿದ ನಂತರ ಚಿನ್ನದ ನಾಣ್ಯವನ್ನಿಟ್ಟಿತು. ಅದನ್ನು ಕಂಡ ಶಿವಪ್ಪನ ಮಗನಿಗೆ ದುರಾಲೋಚನೆ ಉಂಟಾಯಿತು. ಆತ ಪಕ್ಕದಲ್ಲೇ ಬಿದ್ದಿದ್ದ ದಪ್ಪ ಕೋಲನ್ನು ತೆಗೆದುಕೊಂಡು ಹಾವಿಗೆ ಹೊಡೆದೊಡೆದು ಸಾಯಿಸಿದ. ನಂತರ ಹುತ್ತವನ್ನು ಒಡೆದ. ತಕ್ಷಣವೇ ಅಳತೊಡಗಿದ.

‘ಹುತ್ತದಲ್ಲಿ ಬಹಳಷ್ಟು ನಾಣ್ಯಗಳಿವೆ. ಅದನ್ನು ಹಾವು ತಂದು ಕೊಡುತ್ತೆ, ಹುತ್ತವನ್ನು ಒಡೆದರೆ ಒಂದೇ ಬಾರಿಗೆ ಹಲವಾರು ನಾಣ್ಯಗಳನ್ನು ಪಡೆಯಬಹುದು’ ಎಂದು ಯೋಚಿಸಿ ಆತ ಹುತ್ತವನ್ನು ಹೊಡೆದಿದ್ದ. ಹಾವನ್ನು ಸಾಯಿಸಿದ್ದ.

ತಾನು ಮಾಡಿದ್ದು ತಪ್ಪು ಎಂದು ತಿಳಿದು ಶಿವಪ್ಪನ ಮಗ ಅಲ್ಲೇ ಕುಳಿತ. ಶಿವಪ್ಪ ಊರಿನಿಂದ ಬಂದ. ಮಗ ಎಷ್ಟು ಹೊತ್ತಾದರೂ ಬರಲಿಲ್ಲವೆಂದು ಅವನಲ್ಲಿಗೆ ಹೋದ. ಮಗ ಮಾಡಿದ ತಪ್ಪನ್ನು ಕಂಡು ಪಶ್ಚಾತ್ತಾಪಗೊಂಡ. ಹಾವು ಸತ್ತು ಬಿದ್ದುದನ್ನು ಕಂಡು ದುಃಖಪಟ್ಟ, ಕೆಲವು ದಿನಗಳ ನಂತರ ಹಾವು ಕೊಟ್ಟ ಚಿನ್ನದ ನಾಣ್ಯದಿಂದ ಖರೀದಿಸಿದ ಜಮೀನನ್ನು ಬೇರೆಯವರು ವಶಪಡಿಸಿಕೊಂಡರು. ತಾನು ಸಂಪಾದಿಸಿದ ಹಣವೆಲ್ಲಾ ಕಳುವಾಯಿತು. ಶಿವಪ್ಪ ತನ್ನ ಮೊದಲಿನ ಸ್ಥಿತಿಗೆ ಬಂದು ನಿಂತ.

ಶಿವಪ್ಪನಿಗೆ ತನ್ನ ಮಗ ಹಾವನ್ನು ಸಾಯಿಸಿದ್ದರಿಂದಲೇ ಈ ಎಲ್ಲಾ ಪರಿಸ್ಥಿತಿ ನಿರ್ಮಾಣವಾಗಲು ಕಾರಣ ಎಂದು ತಿಳಿಯಿತು. ಮೊದಲು ಹೇಗೆ ಬಡ ರೈತನಾಗಿ ತನ್ನ ಭೂಮಿಯಲ್ಲಿ ವ್ಯವಸಾಯ ಮಾಡುತ್ತಿದ್ದನೋ ಹಾಗೆಯೇ ತನ್ನ ಜೀವನ ಮುಂದುವರೆಸಿದ. ಇದರಿಂದಾಗಿ ಶಿವಪ್ಪನ ಮಗ ‘ಅತಿಯಾಸೆ ಗತಿಗೇಡು’ ಎಂಬ ಪಾಠ ಕಲಿತ.

ಕೃಪೆ: ಕೆ.ಮುರಳಿ, ಮಕ್ಕಳಿಗಾಗಿ ನೂರಾರು ಕಥೆಗಳು, ಕೃಷಿವಿಕಾಸ್ ಪಬ್ಲಿಕೇಷನ್ಸ್, ಬೆಂಗಳೂರು.

ರಾಜಕೀಯ

ಒಂದು ವಾರದೊಳಗೆ ಎತ್ತಿನಹೊಳೆ ಬಾಕಿ ಕಾಮಗಾರಿ ಪ್ರಾರಂಭ: ಡಿಸಿಎಂ ಡಿ.ಕೆ. ಶಿವಕುಮಾರ್

ಒಂದು ವಾರದೊಳಗೆ ಎತ್ತಿನಹೊಳೆ ಬಾಕಿ ಕಾಮಗಾರಿ ಪ್ರಾರಂಭ: ಡಿಸಿಎಂ ಡಿ.ಕೆ. ಶಿವಕುಮಾರ್

“ಕೇಂದ್ರ ಪರಿಸರ ಇಲಾಖೆಯವರು ದಂಡ ಹಾಗೂ ಮಿಟಿಗೇಷನ್ ಪ್ಲಾನ್ ಸೇರಿ 257 ಕೋಟಿ ರೂಪಾಯಿ ಹಣ ಸಂದಾಯ ಮಾಡಬೇಕು ಎಂದು ಸೂಚಿಸಿದ್ದಾರೆ. ಇಂದೇ ಈ ಹಣ ಪಾವತಿ ಮಾಡಿ ಎಂದು ಮಾರ್ಗದರ್ಶನ ನೀಡಿದ್ದೇನೆ. ಕಟ್ಟಿದ

[ccc_my_favorite_select_button post_id="121560"]
ಬೌರಿಂಗ್ ಆಸ್ಪತ್ರೆ ದುರ್ಘಟನೆ: ಟೀಕೆ ಮಾಡೋದ್ ಬಿಟ್ಟು ಬಿಜೆಪಿಗರು ಸಹಾಯ ಮಾಡಲ್ಲ – ಡಿಸಿಎಂ‌ ಡಿ.ಕೆ. ಶಿವಕುಮಾರ್

ಬೌರಿಂಗ್ ಆಸ್ಪತ್ರೆ ದುರ್ಘಟನೆ: ಟೀಕೆ ಮಾಡೋದ್ ಬಿಟ್ಟು ಬಿಜೆಪಿಗರು ಸಹಾಯ ಮಾಡಲ್ಲ –

"ಬೌರಿಂಗ್ ಆಸ್ಪತ್ರೆ (Bowring Hospital) ಕಾಂಪೌಂಡ್ ಕುಸಿದು ಏಳು ಜನ ಮೃತಪಟ್ಟಿರುವುದು ಅತ್ಯಂತ ದುಃಖಕರ ವಿಚಾರ. ಇಂತಹ ಘಟನೆಗಳು ಆಗಬಾರದಿತ್ತು. ನನಗೂ ಇದರಿಂದ ಆಘಾತವಾಗಿದೆ" ಎಂದು ಡಿಸಿಎಂ ಡಿ.ಕೆ‌. ಶಿವಕುಮಾರ್ (D.K. Shivakumar) ಬೇಸರ

[ccc_my_favorite_select_button post_id="121538"]
ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಮಧ್ಯಪ್ರಾಚ್ಯದಲ್ಲಿ ಯುದ್ದ ನಡೆಯುತ್ತಿರುವುದರಿಂದ ಭಾರತದ ಷೇರುಪೇಟೆ (Indian share market ) ತತ್ತರಿಸುತ್ತಿದ್ದು, ಕೋಟ್ಯಾಂತರ ರೂ ನಷ್ಟದ ಜೊತೆಗೆ, ತೈಲ ಬೆಲೆಯೇರಿಕೆಯಾಗುವ ಭೀತಿ ಉಂಟಾಗಿದೆ.

[ccc_my_favorite_select_button post_id="119892"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ವೇಪಿಂಗ್ ಮಾಡಿದ್ದ ರಿಯಾನ್ ಪರಾಗ್ ಕಠಿಣ ಕ್ರಮದಿಂದ ಪಾರು..!

ವೇಪಿಂಗ್ ಮಾಡಿದ್ದ ರಿಯಾನ್ ಪರಾಗ್ ಕಠಿಣ ಕ್ರಮದಿಂದ ಪಾರು..!

ಮುಲ್ಲನ್‌ಪುರದಲ್ಲಿ ನಡೆದ ಐಪಿಎಲ್ (IPL) ಪಂದ್ಯದ ವೇಳೆ ವ್ಯಾಪಿಂಗ್ ಮಾಡಿದ್ದಕ್ಕಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ರಿಯಾನ್ ಪರಾಗ್‌ಗೆ (Riyan Parag) ಪಂದ್ಯ ಶುಲ್ಕದ 25% ದಂಡ ವಿಧಿಸಿದೆ, ರಾಜಸ್ಥಾನ ರಾಯಲ್ಸ್ ನಾಯಕ ಕಠಿಣ

[ccc_my_favorite_select_button post_id="121572"]
ಮದುವೆಗೆ ಹುಡುಗಿ ಸಿಗಲಿಲ್ಲವೆಂದು ಯುವಕ ಆತ್ಮಹತ್ಯೆ..!

ಮದುವೆಗೆ ಹುಡುಗಿ ಸಿಗಲಿಲ್ಲವೆಂದು ಯುವಕ ಆತ್ಮಹತ್ಯೆ..!

ಮದುವೆಯಾಗಲು ಸೂಕ್ತ ಯುವತಿ ದೊರೆಯದ ಕಾರಣ ಮನನೊಂದ ಯುವಕನೊಬ್ಬ ಕಲ್ಯಾಣಿಗೆ ಬಿದ್ದು ಆತ್ಮಹತ್ಯೆ (suicide) ಮಾಡಿಕೊಂಡಿರುವ ಘಟನೆ ನಡೆದಿದೆ.

[ccc_my_favorite_select_button post_id="121591"]
ದೊಡ್ಡಬಳ್ಳಾಪುರ:  ಡಿವೈಡರ್ಗೆ ಕಾರು ಡಿಕ್ಕಿ.. ಚಾಲಕನಿಗೆ ಗಂಭೀರ ಗಾಯ

ದೊಡ್ಡಬಳ್ಳಾಪುರ: ಡಿವೈಡರ್ಗೆ ಕಾರು ಡಿಕ್ಕಿ.. ಚಾಲಕನಿಗೆ ಗಂಭೀರ ಗಾಯ

ದಾಬಸ್ ಪೇಟೆ ಮಾರ್ಗವಾಗಿ ದೊಡ್ಡಬಳ್ಳಾಪುರ ಕಡೆಗೆ ತೆರಳುತ್ತಿದ್ದ ಕಾರು, ಏಕಾಏಕಿ ಚಾಲಕ ನಿಯಂತ್ರಣ ತಪ್ಪಿ ರಸ್ತೆ ಬದಿಯ ಡಿವೈಡರ್ಗೆ ಡಿಕ್ಕಿ (Accident) ಹೊಡೆದಿದೆ.

[ccc_my_favorite_select_button post_id="121485"]

ಆರೋಗ್ಯ

ಸಿನಿಮಾ

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ (Actor Darshan) ಅವರಿಗೆ ಇಂದು ಜನ್ಮದಿನದ (Birthday) ಸಡಗರ. 49ನೇ ವರ್ಷಕ್ಕೆ ದರ್ಶನ್ ಕಾಲಿಟ್ಟಿದ್ದಾರೆ.

[ccc_my_favorite_select_button post_id="119431"]