ಈ ದಿನದ ವಿಶೇಷ: ಇಂದು ವಿಶ್ವ ಬೈಸಿಕಲ್‌ ದಿನ

ಜನಸಾಮಾನ್ಯನ ಪಾಲಿಗೆ ಸೈಕಲ್‌ ಇಂದಿಗೂ ಸಂಚಾರ ಸಾಧನವಾಗಿದ್ದರೆ ಶ್ರೀಮಂತರ ಪಾಲಿಗೆ ವ್ಯಾಯಾಮದ ಸಾಧನ, ಸೈಕ್ಲಿಂಗ್‌ ಪಟುಗಳಿಗೆ ಕ್ರೀಡಾ ಸಾಧನವಾಗಿದೆ. ರಸ್ತೆಗಳಲ್ಲಿ ಸೈಕಲ್‌ ತುಳಿಯಲು ಹಿಂದೇಟು ಹಾಕುವ ಮಂದಿ ಮನೆಯ ಮೂಲೆಯಲ್ಲೇ ಕುಳಿತು ಸೈಕಲ್‌ ಪೆಡಲ್‌ಗ‌ಳನ್ನು ತುಳಿಯುವಂತಹ ಅತ್ಯಾಧುನಿಕ ವ್ಯಾಯಾಮ ಸಾಧನಗಳು ಬಂದಿವೆ.

ಸೈಕಲ್‌ ತುಳಿ ಯುತ್ತಾ ವಿಶಾಲವಾದ ಮನೆಯಂಗಳದಲ್ಲೋ, ಊರಿನ ಆಟದ ಮೈದಾನದಲ್ಲೋ, ಉದ್ಯಾನವನದ ಕಾಲುದಾರಿಯಲ್ಲೋ ಸಾಗುವುದೆಂದರೆ ದೇಹ ಮತ್ತು ಮನಸ್ಸಿಗೆ ಎಲ್ಲಿಲ್ಲದ ಪುಳಕ. ದೇಹದ ವ್ಯಾಯಾಮಕ್ಕೆ ಸೈಕಲ್‌ ತುಳಿ ಯುವುದಕ್ಕಿಂತ ಮಿಗಿಲಾದ ಚಟು ವಟಿಕೆ ಇನ್ನೊಂದಿಲ್ಲ. ದೈಹಿಕ ಮತ್ತು ಮಾನಸಿಕ ಆರೋಗ್ಯದ ದೃಷ್ಟಿಯಿಂದ ಸೈಕ್ಲಿಂಗ್‌ ಅತ್ಯಂತ ಪರಿಣಾಮಕಾರಿ ವ್ಯಾಯಾಮ ಎನ್ನುವುದು ಹಲವಾರು ಅಧ್ಯಯನ ಗಳಿಂದ ಸಾಬೀತಾಗಿದೆ. ಪ್ರತಿನಿತ್ಯ ಸೈಕಲ್‌ ತುಳಿಯುವುದರಿಂದ ನಾವು ಹಲವಾರು ಮಾರಕ ಕಾಯಿಲೆ ಗಳಿಂದ ದೂರ ವುಳಿಯಬಹುದಲ್ಲದೆ ಶಾರೀರಿಕ ವಾಗಿಯೂ ಸದೃಢರಾಗಿರಲು ಸಾಧ್ಯ.

ಕ್ರಿಸ್ತ ಶಕ 1817ರ ಜೂನ್‌ 12ರಂದು ಜರ್ಮನಿಯ ಬ್ಯಾರನ್‌ ಕಾರ್ಲ್ ವನ್‌ ಡ್ರೈಸ್‌ ಅವರು ಬೈಸಿಕಲ್‌ ಅನ್ನು ವಿಶ್ವದ ಜನತೆಗೆ ಪರಿಚಯಿ ಸಿದರು ಎಂಬ ಉಲ್ಲೇಖವಿದೆ. ಆ ಬಳಿಕ ನಿರಂತರ ವಾಗಿ ಜಗತ್ತಿನಾದ್ಯಂತ ಸಂಚಾರ ಸಾಧನವಾಗಿ ಈ ಸೈಕಲ್‌ ವ್ಯಾಪಕವಾಗಿ ಬಳಸಲ್ಪಟ್ಟಿತ್ತು.

ಕಾಲಕ್ಕೆ ತಕ್ಕಂತೆ ಸೈಕಲ್‌ಗ‌ಳೂ ಸುಧಾರಣೆ ಕಂಡವು. ಇದರ ಜತೆಯಲ್ಲಿ ಸೈಕ್ಲಿಂಗ್‌ ಒಂದು ಕ್ರೀಡೆಯಾಗಿ, ದೈಹಿಕ ವ್ಯಾಯಾಮಕ್ಕೆ ಬಳಸಲ್ಪಡುವ ಸಾಧನವಾಗಿ ಪರಿಗಣಿಸಲ್ಪಟ್ಟಿತು. 2018 ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪ್ರತೀ ವರ್ಷದ ಜೂನ್‌ 3 ರಂದು “ವಿಶ್ವ ಬೈಸಿಕಲ್‌ ದಿನ’ವಾಗಿ ಆಚರಿಸಲು ನಿರ್ಧರಿಸಲಾಯಿತು. 

ಸರ್ವರ ಸ್ನೇಹಿ ಸೈಕಲ್‌ಗೆ ಇನ್ನೂರರ ಹರೆಯ ದಾಟಿದ್ದರೂ ವಿಶ್ವ ಸೈಕಲ್‌ ದಿನವಿನ್ನೂ ಮೂರರ ಎಳೆಯ ಕೂಸು!. ಮಾನವನ ದಿನಚರಿಯಲ್ಲಿ ಹಾಸುಹೊಕ್ಕಾಗಿರುವ ಸೈಕಲ್‌ ಎಲ್ಲ ಆಧುನಿಕ ವಾಹನಗಳ ಭರಾಟೆಯ ಹೊರ ತಾಗಿಯೂ ಇಂದಿಗೂ ಒಂದಲ್ಲ ಒಂದು ತೆರನಾಗಿ ಬಳಕೆಯಾಗುತ್ತಿದೆ.

ಜನಸಾಮಾನ್ಯನ ಪಾಲಿಗೆ ಸೈಕಲ್‌ ಇಂದಿಗೂ ಸಂಚಾರ ಸಾಧನವಾಗಿದ್ದರೆ ಶ್ರೀಮಂತರ ಪಾಲಿಗೆ ವ್ಯಾಯಾಮದ ಸಾಧನ, ಸೈಕ್ಲಿಂಗ್‌ ಪಟುಗಳಿಗೆ ಕ್ರೀಡಾ ಸಾಧನವಾಗಿದೆ. ರಸ್ತೆಗಳಲ್ಲಿ ಸೈಕಲ್‌ ತುಳಿಯಲು ಹಿಂದೇಟು ಹಾಕುವ ಮಂದಿ ಮನೆಯ ಮೂಲೆಯಲ್ಲೇ ಕುಳಿತು ಸೈಕಲ್‌ ಪೆಡಲ್‌ಗ‌ಳನ್ನು ತುಳಿಯುವಂತಹ ಅತ್ಯಾಧುನಿಕ ವ್ಯಾಯಾಮ ಸಾಧನಗಳು ಬಂದಿವೆ. ಆ ಮೂಲಕ ಪ್ರತಿನಿತ್ಯ ದೈಹಿಕವಾಗಿ ಒಂದಿಷ್ಟು ವ್ಯಾಯಾಮ ನಡೆಸುತ್ತಿದ್ದಾರೆ.

ಸೈಕಲ್‌ ಎಂದರೆ ಅದೊಂದು ವಿಸ್ಮಯದ ವಿಶ್ವ. ಪುಟ್ಟಪುಟ್ಟ ಹೆಜ್ಜೆಯನಿಟ್ಟು ನಡೆವ ಕಂದಮ್ಮನಿಗೆ ಆಗಲೇ ಮೂರು ಚಕ್ರದ ಸೈಕಲ್‌, ತರಹೇವಾರಿ ಗೊಂಬೆಗಳ ಚಿತ್ತಾರದೊಂದಿಗೆ ಮನೆಯ ಹೊಸ ಸದಸ್ಯನಾಗಿ ಬಂದು ಬಿಡುತ್ತದೆ.

ಮೂರು ಚಕ್ರದ ಸೈಕಲ್‌ನಲ್ಲಿ ಪ್ರಪಂಚವನ್ನೇ ಸುತ್ತಿದಂತೆ, ಮನೆಯ ಮೂಲೆಮೂಲೆಗಳನ್ನು ಸುತ್ತುವ ಪುಟಾಣಿಗಳ ಆನಂದವು ಮಾತಿಗೆ ನಿಲುಕದ್ದು, ಪದಗಳಲ್ಲಿ ಪಡಿಮೂಡಿಸಲಸದಳವಾದದ್ದು. ಹಾಗೆಯೇ ಬಾಲ್ಯದ ಆರಂಭದ ದಿನಗಳಿಗೆ ಕಾಲಿಡುವಾಗ ಪುಟಾಣಿಗಳ ಸಂಗಾತಿಯಾಗಿ ದೊಡ್ಡದೆರೆಡು ಚಕ್ರಗಳಿಗೆ ಬೆಂಗಾವಲಾಗಿ ನಿಲ್ಲವ ಪುಟ್ಟದೆರೆಡು ಚಕ್ರಗಳಿರುವ ಸೈಕಲ್‌ ಮನೆಯಂಗಳಕ್ಕೆ ಬರುವುದು ಸಾಮಾನ್ಯ.

ಮನೆಯಂಗಳವನ್ನೂ ದಾಟಿ, ತನ್ನ ಓರಗೆಯ ಮಕ್ಕಳೊಡನೆ ಆಟವಾಡುವ ಪುಟಾಣಿ ಗಳ ಸಾಮ್ರಾಜ್ಯಕ್ಕೆ ನಾಲ್ಕು ಚಕ್ರದ ಈ ಪುಟ್ಟ ಸೈಕಲ್ಲೇ ಚಕ್ರವರ್ತಿ. ಹದಿಹರೆಯದ ವಯಸ್ಸಿನಲ್ಲಿ ಇಂಧನ ಬಳಸಿ ಸಾಗುವ ದ್ವಿಚಕ್ರ ವಾಹನಗಳಿಗೂ ಕಡಿಮೆ ಇಲ್ಲವೆಂಬಂತೆ, ಶರವೇಗದಲ್ಲಿ ತುಳಿಯುವ ಸಾಮಾನ್ಯ ಸೈಕಲ್‌ ಹಾಗೂ ಆಧುನಿಕ ಗೇರ್‌ ಸೈಕಲ್‌ಗ‌ಳು ಮಕ್ಕಳಿಗೆ ವ್ಯಾಯಾಮದೊಂದಿಗೆ ಪ್ರತಿ ಯೊಂದು ಕೆಲಸಕ್ಕೂ ಆಪ್ತಮಿತ್ರನಂತೆ ಜತೆಗೂಡುತ್ತದೆ.

ಪ್ರಸ್ತುತ ಕಾಲಘಟ್ಟದಲ್ಲಿ ವಯಸ್ಕರು, ಹಿರಿಯ ನಾಗರಿಕರೂ ಕೂಡ ದೈಹಿಕ ಆರೋಗ್ಯದ ದಿವ್ಯಔಷಧ ವೆಂಬಂತೆ ಸೈಕಲ್‌ ಅನ್ನು ಬಳಕೆ ಮಾಡುತ್ತಿರುವುದು ಸೈಕಲ್‌ನ ಸಾರ್ವಕಾಲಿಕ ಉಪಯುಕ್ತತೆಯನ್ನು ಎತ್ತಿ ಹಿಡಿದಿದೆ. ವಯಸ್ಸಿನ ಭೇದ ವಿಲ್ಲದೆ, ಸೈಕಲ್‌ ರೇಸ್‌ಗಳಲ್ಲಿ ಪಾಲ್ಗೊಂಡು, ವಾರಾಂತ್ಯದ ದಿನಗಳಲ್ಲಿ ಮುದ ಪಡೆಯುವ ಒಂದಿಷ್ಟು ಸೈಕಲ್‌ ಪ್ರೇಮಿಗಳೂ ಇದ್ದಾರೆ ಎಂಬುದು ಸೈಕಲ್‌ನ ಪಾರುಪತ್ಯ ವನ್ನು ಪ್ರತಿಬಿಂಬಿಸುತ್ತದೆ.

ವಾಯು ಮಾಲಿನ್ಯದಿಂದ ತತ್ತರಿಸಿರುವ ಇಳೆಯ ಮಾಲಿನ್ಯದ ಕೊಳೆ ಕಡಿಮೆ ಮಾಡಲು ಸೈಕಲ್‌ ಬಳಕೆ ಬ್ರಹ್ಮಾಸ್ತ್ರವಿದ್ದಂತೆ.

ಸುಮಾರು 70-80 ರ ದಶಕದಲ್ಲಿ ಗ್ರಾಮೀಣ ಭಾಗದಲ್ಲಿ ಮಕ್ಕಳಿಗೆ ದೂರ ದೂರಿನ ಶಾಲೆಗೆ ತೆರಳಲು ಮತ್ತು ಜನಸಾಮಾನ್ಯರಿಗೆ ದೈನಂದಿನ ಕೆಲಸಗಳಿಗೆ ತೆರಳಲು ಸೈಕಲ್‌ ಸಾರಿಗೆಯ ಪ್ರಮುಖ ಸಾಧನವಾಗಿತ್ತು. ದಿನಪತ್ರಿಕೆಯ ಹಂಚು ವವರಿಗೂ, ಅಂಚೆಯಣ್ಣನಿಗೂ ಸೈಕಲ್‌ ಎಂದರೆ ವೃತ್ತಿಯ ಅವಿಭಾಜ್ಯ ಅಂಗವೆಂಬಂತಿತ್ತು. ಶಾಲಾ ಮಕ್ಕಳು ಸ್ನೇಹಿತರೊಂದಿಗೆ ಸೈಕಲ್‌ ತುಳಿಯುತ್ತಾ, ಹರಟೆ ಹೊಡೆಯುತ್ತಾ ಸಾಗುವುದೆಂದರೆ ಅವು ವಿದ್ಯಾರ್ಥಿ ಜೀವನದ ಸುವರ್ಣಾಕ್ಷರದಲ್ಲಿ ಬರೆದಿಡುವಂತಹ ದಿನಗಳಾಗಿದ್ದವು.

ಪ್ರಸ್ತುತ ದಿನಗಳಲ್ಲಿಯೂ ಗ್ರಾಮೀಣ ಭಾಗದಲ್ಲಿನ ಪ್ರೌಢಶಾಲಾ ಮಕ್ಕಳ ಕಲಿಕೆಗೆ ಪೂರಕ ಸೌಲಭ್ಯವನ್ನು ಒದಗಿಸುವ ನಿಟ್ಟಿನಲ್ಲಿ ಸರಕಾರವೂ ಕೂಡ ಸರಕಾರಿ ಶಾಲಾ ಮಕ್ಕಳಿಗೆ ಉಚಿತ ಬೈಸಿಕಲ್‌ ಒದಗಿಸುತ್ತಿತ್ತು. ಇದರಿಂದಾಗಿ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಶಾಲೆ ಮತ್ತಷ್ಟು ಸನಿಹವಾಗಿತ್ತು. ಒಟ್ಟಾರೆಯಾಗಿ ಅಂದು-ಇಂದು-ಎಂದೆಂದೂ ಸೈಕಲ್‌ ವಿದ್ಯಾರ್ಥಿ ಮಿತ್ರ ಎಂದರೆ ಉತ್ಪ್ರೇಕ್ಷೆಯಾಗಲಾರದು.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

ರಾಜಕೀಯ

ಧರ್ಮದ ವಿಚಾರದಲ್ಲಿ ರಾಜಕೀಯ ಬೇಡ; ನಾವು ಅವರ ಪರವೂ ಇಲ್ಲ,‌ ಇವರ ಪರವೂ ಇಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್

ಧರ್ಮದ ವಿಚಾರದಲ್ಲಿ ರಾಜಕೀಯ ಬೇಡ; ನಾವು ಅವರ ಪರವೂ ಇಲ್ಲ,‌ ಇವರ ಪರವೂ

"ನಾವು ಅವರ (ಧರ್ಮಸ್ಥಳ) ಪರವೂ ಇಲ್ಲ, ಇವರ ಪರವೂ ಇಲ್ಲ. ನಾವು ನ್ಯಾಯದ ಪರ. ಧರ್ಮದ ವಿಚಾರದಲ್ಲಿ ರಾಜಕಾರಣ ಮಾಡಬೇಡಿ ಎಂದಷ್ಟೇ ನಾವು ಹೇಳುತ್ತಿದ್ದೇವೆ": ಡಿಸಿಎಂ ಡಿ.ಕೆ.ಶಿವಕುಮಾರ್ (D.K. Shivakumar)

[ccc_my_favorite_select_button post_id="113000"]
2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

ದಾವಣಗೆರೆ: ಬೆಂಗಳೂರು-ದಾವಣಗೆರೆ- ಬೆಳಗಾವಿಗೆ ವಂದೇ ಭಾರತ್ ಎಕ್ಸ್‍ಪ್ರೆಸ್ (Vande Bharat Express) ರೈಲು ಸೇವೆಯಿಂದ ಶಿಕ್ಷಣ, ಆರೋಗ್ಯ ಸೇವೆಯ ಅನುಕೂಲದ ಜೊತೆಗೆ ವ್ಯಾಪಾರ ವಹಿವಾಟು ವೃದ್ದಿಯಾಗಲಿದೆ ಎಂದು ಸಂಸದರಾದ ಡಾ; ಪ್ರಭಾ ಮಲ್ಲಿಕಾರ್ಜುನ್ (Dr.

[ccc_my_favorite_select_button post_id="112408"]
Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

ಹಳೆ ದ್ವೇಷದ ಹಿನ್ನೆಲೆ ಎರಡು ಗ್ಯಾಂಗ್‌ಗಳ ನಡುವೆ ಮಾರಾಮಾರಿ ನಡೆದಿದೆ. ದೊಣ್ಣೆ, ಮಾರಕಾಸ್ತ್ರಗಳಿಂದ ಪರಸ್ಪರ ಹೊಡೆ ದಾಡಿಕೊಂಡಿದ್ದಾರೆ. Crime News;

[ccc_my_favorite_select_button post_id="110866"]
ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಪ್ರವಾಸದಲ್ಲಿರುವ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ತಮ್ಮ ಪ್ರವಾಸದ ಎರಡನೇ ದಿನವೂ ಇಲ್ಲಿನ ಆಡಳಿತ

[ccc_my_favorite_select_button post_id="110371"]

ಕ್ರೀಡೆ

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಒಡಿಶಾದ ಭುವನೇಶ್ವರದಲ್ಲಿ‌ ಇದೇ ತಿಂಗಳ 10ರಂದು ನಡೆದ ವಿಶ್ವ ಅಥ್ಲೆಟಿಕ್ಸ್ ನ ಕಾಂಟಿನೆಂಟಲ್ ಕೂಟದ ಮಹಿಳೆಯರ ವಿಭಾಗದ 400 ಮೀಟರ್ ಓಟದಲ್ಲಿ ಚಿನ್ನದ ಪದಕ ಗಳಿಸಿದ ರಾಜ್ಯಕ್ಕೆ ಕೀರ್ತಿ ತಂದ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ

[ccc_my_favorite_select_button post_id="112580"]
ದೊಡ್ಡಬಳ್ಳಾಪುರ: ಹೆಂಡ ಸಾಗಿಸುತ್ತಿದ್ದ ಮಹಿಳೆಯ ಬಂಧನ.. 70 ಲೀಟರ್‌ ಹೆಂಡ ವಶ..!

ದೊಡ್ಡಬಳ್ಳಾಪುರ: ಹೆಂಡ ಸಾಗಿಸುತ್ತಿದ್ದ ಮಹಿಳೆಯ ಬಂಧನ.. 70 ಲೀಟರ್‌ ಹೆಂಡ ವಶ..!

ನೆರೆ ರಾಜ್ಯದಿಂದ ಅಕ್ರಮವಾಗಿ ಹೆಂಡ (Toddy) ಸಾಗಿಸುತ್ತಿದ್ದ ಮಹಿಳೆಯನ್ನು ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.

[ccc_my_favorite_select_button post_id="112911"]
ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ಮಳೆಯ ವೇಳೆ ವಾಹನ ಸವಾರರು ಎಷ್ಟು ಮುಂಜಾಗ್ರತೆ ಸಾಲದು. ಏಕೆಂದರೆ ನಿನ್ನೆ ಸಂಜೆ ಸುರಿದ ಭಾರಿ ಮಳೆಯ ಕಾರಣ ರಸ್ತೆ ಬದಿಯಲ್ಲಿ ಕೆಟ್ಟು ನಿಂತಿದ್ದ ಟ್ರಾಕ್ಟರ್ ಕಾಣದೆ Accident

[ccc_my_favorite_select_button post_id="112435"]

ಆರೋಗ್ಯ

ಸಿನಿಮಾ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಕಾಂಗ್ರೆಸ್ (Congress) ಮಾಡಿರುವ ಓಟ್ ಚೋರಿ ಆರೋಪ ದಿನೇದಿನೇ ತೀವ್ರ ಸ್ವರೂಪ ಪಡೆಯುತ್ತಿದ್ದು, ಚುನಾವಣೆ ಆಯೋಗ (Election Commission) ಹಾಗೂ ಕೇಂದ್ರ ಸರ್ಕಾರದ (Central Government) ವಿರುದ್ಧ ಅನುಮಾನ ಹೆಚ್ಚಿಸುವಂತೆ ಮಾಡುತ್ತಿದೆ‌.

[ccc_my_favorite_select_button post_id="112714"]
error: Content is protected !!