ದೊಡ್ಡಬಳ್ಳಾಪುರ, (ಜೂ.19): ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಸ್ತುವಾರಿ ಕಾರ್ಯದರ್ಶಿಯನ್ನಾಗಿ ಪಶುಸಂಗೋಪನೆ ಇಲಾಖೆಯಲ್ಲಿ ಕಾರ್ಯದರ್ಶಿಯಾಗಿದ್ದ ಸಲ್ಮಾ ಕೆ ಫಾಹಿಂ ಅವರನ್ನು ನೇಮಕ ಮಾಡಲಾಗಿದೆ.
ಈ ಕುರಿತಂತೆ ಸರ್ಕಾರದ ಅಧೀನ ಕಾರ್ಯದರ್ಶಿ ಎಸ್.ಕಲ್ಪನ ಅಧಿಸೂಚನೆ ಹೊರಡಿಸಿದ್ದು, ರಾಜ್ಯದ ಅಭಿವೃದ್ಧಿ ಯೋಜನಾ ಕಾರ್ಯಕ್ರಮಗಳ ಜಾರಿ ಮತ್ತು ಪರಿಶೀಲನೆ ಹಾಗೂ ಅಹವಾಲುಗಳ ವಿಚಾರಣೆ, ಅನಿರೀಕ್ಷಿತ ತಪಾಸಣೆ ಕುರಿತು ಪರಿಶೀಲನೆ ಮಾಡಿ ಸರ್ಕಾರಕ್ಕೆ ವರದಿ ಮಾಡಲು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು/ಪ್ರಧಾನ ಕಾರ್ಯದರ್ಶಿಗಳು ಹಾಗೂ ಕಾರ್ಯದರ್ಶಿಗಳ ಮಟ್ಟದ ಅಧಿಕಾರಿಗಳನ್ನು ಉಲ್ಲೇಖಿತ ಅಧಿಸೂಚನೆ ದಿನಾಂಕ:11.04.2023 ರಲ್ಲಿ ವಿವಿಧ ಜಿಲ್ಲೆಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳನ್ನಾಗಿ ನೇಮಕ ಮಾಡಲಾಗಿತ್ತು.
ಮುಂದುವರೆದು, ಪಟ್ಟಿಯ (ಅನುಬಂಧ-1) ಅನುಸಾರ ಜಿಲ್ಲಾವಾರು ಅಧಿಕಾರಿಗಳನ್ನು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳನ್ನಾಗಿ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನೇಮಕ ಮಾಡಿ ಆದೇಶಿಸಿದೆ ಎಂದಿದ್ದಾರೆ.
ಆದೇಶದ ಅನ್ವಯ ಬೆಂಗಳೂರು ನಗರ- ಟಿ.ಕೆ. ಅನಿಲ್ ಕುಮಾರ್
ಬೆಂಗಳೂರು ಗ್ರಾಮಾಂತರ- ಸಲ್ಮಾ ಕೆ. ಫಾಹಿಂ
ರಾಮನಗರ- ವಿ.ರಶ್ಮಿ ಮಹೇಶ್
ಚಿತ್ರದುರ್ಗ- ಅಮಲಾನ್ ಆದಿತ್ಯ ಬಿಸ್ವಾಸ್
ಕೋಲಾರ- ಡಾ|| ಏಕ್ ರೂಪ್ ಕೌರ್
ಬೆಳಗಾವಿ- ಅಂಜುಂ ಪರ್ವೇಜ್
ಚಿಕ್ಕಬಳ್ಳಾಪುರ- ಡಾ|| ಎನ್. ಮಂಜುಳ
ಶಿವಮೊಗ್ಗ- ಎಸ್. ಆರ್. ಉಮಾಶಂಕರ್
ದಾವಣಗೆರೆ- ಗುಂಜನ್ ಕೃಷ್ಣ
ಡಾ.ಎಸ್.ಸೆಲ್ವಕುಮಾರ್- ಮೈಸೂರು
ಮಂಡ್ಯ- ಡಾ|| ಪಿ.ಸಿ. ಜಾಫರ್
ಚಾಮರಾಜನಗರ- ಮಂಜುನಾಥ ಪ್ರಸಾದ್.ಎನ್
ಹಾಸನ- ಡಾ|| ಎಂ. ಎನ್. ಅಜಯ್ ನಾಗಭೂಷಣ್
ಕೊಡಗು- ಡಾ|| ಎನ್.ವಿ.ಪುಸಾದ್
ಚಿಕ್ಕಮಹಳೂರು- ರಾಜೇಂದರ್ ಕುಮಾರ್ ಕಠಾರಿಯಾ
ಉಡುಪಿ- ಡಾ|| ಎಂ.ಟಿ. ರೇಜು
ದಕ್ಷಿಣ ಕನ್ನಡ- ಎಲ್.ಕೆ. ಅತೀಕ್
ತುಮಕೂರು- ಜಿ.ಸತ್ಯವತಿ
ಧಾರವಾಡ- ವಿ.ಅನ್ನುಕುಮಾರ್
ಗದಗ- ಸಿ.ಶಿಖಾ
ವಿಜಯಪುರ- ಡಾ|| ರಿಚರ್ಡ್ ವಿನ್ಸಂಟ್ ಡಿಸೋಜಾ
ಉತ್ತರ ಕನ್ನಡ- ರಿತೇಶ್ ಕುಮಾರ್ ಸಿಂಗ್
ಬಾಗಲಕೋಟೆ- ಮೊಹಮ್ಮದ್ ಮೊಹಿಸಿನ್
ಕಲಬುರಗಿ- ಪಂಕಜ್ ಕುಮಾರ್ ಪಾಂಡೆ
ಯಾದಗಿರಿ- ಮನೋಜ್ ಜೈನ್
ರಾಯಚೂರು- ಡಾ|| ಜೆ.ರವಿಶಂಕರ್
ಕೊಪ್ಪಳ- ನವೀನ್ ರಾಜ್ ಸಿಂಗ್
ಬಳ್ಳಾರಿ- ಡಾ|| ಕ.ವಿ.ತ್ರಿಲೋಕ್ ಚಂದ್ರ
ಬೀದರ್- ಮುನೀಶ್ ಮೌದಿಲ್
ಹಾವೇರಿ- ಡಾ||ವಿಶಾಲ್.ಆರ್
ವಿಜಯನಗರ- ಕೆ.ಪಿ.ಮೋಹನ್ರಾಜ್ ಅವರನ್ನು ನೇಮಕ ಮಾಡಲಾಗಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….