ರೈಲಿಗೆ ಸಿಲುಕಿ ಅಪರಿಚಿತ ವ್ಯಕ್ತಿ ಸಾವು: ವಾರಸುದಾರು ದೊಡ್ಡಬಳ್ಳಾಪುರ ರೈಲ್ವೇ ಪೊಲೀಸರ ಸಂಪರ್ಕಿಸುವಂತೆ ಮನವಿ

ದೊಡ್ಡಬಳ್ಳಾಪುರ, (ಜೂ.19): ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು – ವಿದುರಾಶ್ವಥ ರೈಲು ನಿಲ್ದಾಣದ ನಡುವಿನ ಚಿಕ್ಕಕುರುಗೋಡು ರೈಲ್ವೇ ಗೇಟ್ ಸಮೀಪ ಸುಮಾರು 35 ವರ್ಷದ ಆಪರಿಚಿತ ವ್ಯಕ್ತಿ ರೈಲಿಗೆ ಸಿಲುಕಿ ಮೃತಪಟ್ಟಿರುತ್ತಾನೆ.

ಮೃತರ ಚಹರೆ: ಎತ್ತರ ಸುಮಾರು 5″4 ಅಡಿಗಳು, ಎಣ್ಣೆ ಗೆಂಪು ಮೈಬಣ್ಣ, ದುಂಡು ಮುಖ, ಕಪ್ಪು ತಲೆಕೂದಲು ಬಿಟ್ಟಿದ್ದು, ಸಾಧಾರಣ ಮೈಕಟ್ಟು ಹೊಂದಿರುತ್ತಾರೆ.

ಬಟ್ಟೆಗಳು: ಒಂದು ಕ್ರೀಂ ಬಣ್ಣದ ಹರಿದ ಶರ್ಟ್, ಬಿಳಿ ಮಾಸಲು ಕಲರ್ ಪ್ಯಾಂಟ್ ಧರಿಸಿರುತ್ತಾರೆ.

ಮೃತರ ವಾರಸುದಾರರು ಇದ್ದಲ್ಲಿ ಬೆಂಗಳೂರು ಗ್ರಾಮಾಂತರ ರೈಲ್ವೆ ಪೊಲೀಸ್/ ದೊಡ್ಡಬಳ್ಳಾಪುರ ರೈಲ್ವೆ ಪೊಲೀಸರನ್ನು  ಮೊಬೈಲ್ ನಂಬರ್:9480802118 9480802143 ಸಂಪರ್ಕಿಸಲು ಪ್ರಕಟಣೆ ಕೋರಿದೆ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….