ದಾಬಸ್ಪೇಟೆ, (ಸೆ.02): ರಾಷ್ಟ್ರೀಯ ಹೆದ್ದಾರಿ 48 ರ ಕೆಂಗಲ್ ಕೆಂಪೋಹಳ್ಳಿ ಬಳಿಯ ನಿರ್ಮಾಣ ಹಂತದಲ್ಲಿದ್ದ ಪೆಟ್ರೋಲ್ ಬಂಕ್ ನಲ್ಲಿ ಮಲಗಿದ್ದ ಚಿಕ್ಕಮಗಳೂರು ಮೂಲದ ಉಹೇಜ್ (18) ಎಂಬ ಕಾರ್ಮಿಕನ ಮೇಲೆ ಆ.29ರಂದು ರಾತ್ರಿ ಸುಮಾರು 3.30 ಗಂಟೆಯ ಸಮಯದಲ್ಲಿ ಕಾರಿನಲ್ಲಿ ಬಂದ ಮೂವರು ಅಪರಿಚಿತರು ಈತನನ್ನು ಡ್ರಾಗನ್ ನಿಂದ ಬೆದರಿಸಿ ನಂತರ ಹಲ್ಲೆ ಮಾಡಿ ಈತನ ಬಳಿಯಿದ್ದ ಪಲ್ಸರ್ಬೈಕ್ ಹಾಗೂ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ದಾಬಸ್ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಒಡವೆ ಕಳವು: ಆಟೋದಲ್ಲಿ ಹೋಗುವಾಗ ಬ್ಯಾಗ್ ನಲ್ಲಿದ್ದ ಚಿನ್ನಾಭರಣ ಕಳೆದು ಹೋಗಿರುವ ಘಟನೆ ದಾಬಸ್ಪೇಟೆ ಪೊಲೀಸ್ ಠಾಣೆಯಲ್ಲಿ ವ್ಯಾಪ್ತಿಯಲ್ಲಿ ನಡೆದಿದೆ.
ತುಮಕೂರು ಜಿಲ್ಲೆಯ ಹಿರೇಹಳ್ಳಿ ಗ್ರಾಮದ ನಿವಾಸಿ ನಾಗರತ್ನ ಇವರು ತಮ್ಮ ಮಗಳ ಒಡವೆಗಳಾದ 18 ಗ್ರಾಂ ನ ಗಣೇಶ ಡಾಲರ್ಇರುವ ಕೊರಳ ಚೈನ್, 11 ಗ್ರಾಂನ 2 ಉಂಗುರ, 4 ಗ್ರಾಂನ ಒಂದು ಜೊತೆ ಓಲೆ, 4 ಗ್ರಾಂನ ಒಂದು ಜೊತೆ ಜುಮುಕಿ ಸೇರಿದಂತೆ 140000 ಮೌಲ್ಯದ ವಡವೆಗಳನ್ನು ತ್ಯಾಮಗೊಂಡ್ಲು ಪಟ್ಟಣದಲ್ಲಿರುವ ಕೆನರಾ ಬ್ಯಾಂಕಿನಲ್ಲಿ ಅಡವಿಡಲು ಆಟೋದಲ್ಲಿ ಹೋಗುತ್ತಿದ್ದಾಗ ಪೆಮ್ಮನಹಳ್ಳಿ ಗ್ರಾಮದ ಬಳಿ ಕಳೆದುಹೋಗಿದ್ದು, ಪತ್ತೆ ಮಾಡಿಕೊಡಬೇಕೆಂದು ದಾಬಸ್ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….