ಹರಿತಲೇಖನಿ ದಿನಕ್ಕೊಂದು ಕಥೆ: ಕಳ್ಳನ ನೀತಿ

ಕಳ್ಳನೊಬ್ಬ ಮಧ್ಯ ರಾತ್ರಿಯಲ್ಲಿ ಶ್ರೀಮಂತನೋರ್ವನ ಮನೆಗೆ ಕದಿಯಲು ಹೋದ. ಮನೆಯ ಎಲ್ಲರೂ ಗಾಢ ನಿದ್ರೆಯಲ್ಲಿದ್ದದನ್ನು ತಾನು ತಂದಿದ್ದ ಬ್ಯಾಟರಿಯ ಬೆಳಕಿನಿಂದ ಗಮನಿಸಿದ. ಅದೇ ಕೋಣೆಯಲ್ಲಿ ತಿಜೋರಿಯ ಬೀಗದ ಕೈ ಗೋಡೆಗೆ ನೇತು ಹಾಕಿರುವುದನ್ನು ಆತ ಕಂಡ. ಇದರಿಂದ ತನ್ನ ಕೆಲಸ ಇನ್ನಷ್ಟು ಸುಲಭವಾಯಿತೆಂದು ಆತ ಅಂದುಕೊಂಡು, ತಡ ಮಾಡದೆ ತಿಜೋರಿಯ ಬೀಗ ತೆಗೆದು ನೋಡಿದ. ಅಲ್ಲಿ ಹಣ, ಒಡವೆಗಳು ಸೇರಿದಂತೆ ಬಹಳಷ್ಟು ಬಂಗಾರದ ನಾಣ್ಯಗಳು ಅವನ ಕಣ್ಣಿಗೆ ಬಿದ್ದವು.

ಸಂತೋಷಗೊಂಡ ಕಳ್ಳ ಸದ್ದು ಮಾಡದೆ ತಾನು ತಂದಿದ್ದ ಚೀಲದಲ್ಲಿ ಆ ದ್ರವ್ಯಗಳನ್ನು ತುಂಬಿಕೊಳ್ಳುತ್ತಿರುವಾಗ ಅವನ ಒಂದು ಬೆರಳಿನ ಉಗುರು ಮುರಿದು ನೆಲಕ್ಕೆ ಬಿತ್ತು. ಕಳ್ಳ ಕದಿಯುವ ಕೆಲಸ ಬಿಟ್ಟು ಆ ಉಗುರನ್ನು ಹುಡುಕಲು ಮುಂದಾದ. ಸರಿಯಾದ ಬೆಳಕಿಲ್ಲದ ಆ ಕೋಣೆಯಲ್ಲಿ ಬ್ಯಾಟರಿಯ ಬೆಳಕಿನ ಸಹಾಯದಿಂದ ಎಷ್ಟು ಹುಡುಕಿದರೂ ಆ ಉಗುರು ಸಿಗಲಿಲ್ಲ. ಮುಂಜಾನೆಯ ಬೆಳಕು ಹರಿಯಿತು. ಆಗಲೂ ಕಳ್ಳನಿಗೆ ಉಗುರಿನ ಪತ್ತೆ ಆಗಲಿಲ್ಲ.

ಮನೆ ಯಜಮಾನ ನಿದ್ರೆಯಿಂದ ಎಚ್ಚರಗೊಂಡು ನೋಡಲು ಮನೆಯಲ್ಲಿ ಯಾರೋ ಅಪರಿಚಿತ ವ್ಯಕ್ತಿಯೊಬ್ಬ ಓಡಾಡುತ್ತಿದ್ದಾನೆ. ತಿಜೋರಿಯ ಬಾಗಿಲು ತೆರೆದು ಚಿನ್ನದ ಒಡವೆ, ನಾಣ್ಯಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಗಾಬರಿಗೊಂಡ ಶ್ರೀಮಂತ ಕಳ್ಳನ ಹಿಡಿದು ವಿಚಾರಿಸಿದ.

ಭಯಭೀತನಾದ ಕಳ್ಳ ‘ಸ್ವಾಮಿ, ಈ ದಿನ ನಿಮ್ಮ ಮನೆಗೆ ಕನ್ನ ಹಾಕಲು ಬಂದೆ. ಅಕಸ್ಮಾತಾಗಿ ನನ್ನ ಒಂದು ಉಗುರು ಮುರಿದು ಮನೆಯೊಳಗೆ ಬಿತ್ತು. ಎಷ್ಟು ಹುಡುಕಿದರೂ ಸಿಗಲಿಲ್ಲ’ ಎಂದ ಅವನ ವರ್ತನೆ ಅರ್ಥವಾಗದೇ ಶ್ರೀಮಂತ ‘ಅಲ್ಲಾ, ಉಗುರು ಮುರಿದು ಹೋದರೆ ನಿನಗೇನಾಯ್ತು? ಒಡವೆಗಳನ್ನು ತೆಗೆದುಕೊಂಡು ನೀನು ಹೋಗಬಹುದಾಗಿತ್ತಲ್ಲ’ ಎಂದು ಸಮಾಧಾನದಿಂದ ಕೇಳಿದ.

ಅದಕ್ಕೆ ಕಳ್ಳ ‘ಛೆ, ಛೇ…ಎಲ್ಲಾದರೂ ಉಂಟಾ ಸ್ವಾಮಿ? ಉಗುರನ್ನು ಮನೆಯೊಳಗೆ ಬಿಟ್ಟರೆ ದರಿದ್ರ ನಿಮಗೆ’ ಅಂಥ ಮತ್ತೆ ವಿಚಿತ್ರವಾಗಿ ಉತ್ತರಿಸಿದ. ತಾಳ್ಮೆ ಕಳೆದುಕೊಳ್ಳದ ಶ್ರೀಮಂತ ಕುತೂಹಲದಿಂದ ‘ನಾನು ದರಿದ್ರನಾದರೆ ನಿನಗೇನು? ನಿನ್ನ ಪಾಡು ನಿನ್ನದಲ್ಲ’ ಅಂಥ ಮರು ಉತ್ತರ ನೀಡಿದ.

ಆಗ ಕಳ್ಳ ‘ಸ್ವಾಮಿ, ತಾವು ಶ್ರೀಮಂತಿಕೆಯಿಂದ ಇದ್ದ ಕಾರಣಕ್ಕೆ ನಾನು ಇಲ್ಲಿಗೆ ಕದಿಯಲು ಬಂದೆ. ನೀವು ದರಿದ್ರರಾಗಿಬಿಟ್ಟರೆ ನನ್ನಂಥ ಕಳ್ಳರ ಗತಿ ಏನು? ಆದ್ದರಿಂದ ನೀವು ಚೆನ್ನಾಗಿರಬೇಕು. ಕೊಡುವವನು ಯಾವಾಗಲೂ ಎತ್ತರದ ಸ್ಥಾನದಲ್ಲೇ ಇರಬೇಕು’ ಎಂದು ನುಡಿದ.

ತನಗೆ ಆಪತ್ತು ಒದಗುವುದು ಎಂದು ತಿಳಿದರೂ ತನ್ನ ನೀತಿಯನ್ನು ಬಿಡದ ಕಳ್ಳನನ್ನು ನೋಡಿ ಶ್ರೀಮಂತನಿಗೆ ಅತೀವ ಆನಂದವಾಯಿತು. ಬಳಿಕ ಆತ ಅವನಿಗೆ ಬೇಕಾಗುವಷ್ಟು ಒಡವೆ, ನಾಣ್ಯಗಳನ್ನು ನೀಡಿ ಸಂತೋಷದಿಂದ ಕಳುಹಿಸಿದ. ನಮ್ಮ ನಡವಳಿಕೆಯಿಂದ ಇನ್ನೊಬ್ಬರ ಬದುಕು ಹಸನಾಗದಿದ್ದರೂ ಪರವಾಗಿಲ್ಲ. ವಿನಾಶವಾಗಬಾರದು ಎಂಬುದನ್ನು ಈ ಕತೆಯಿಂದ ತಿಳಿದುಕೊಳ್ಳಬಹುದು.

ಕೃಪೆ: ಸಿ.ರವೀಂದ್ರ ಸಿಂಗ್‌ (ಸಾಮಾಜಿಕ ಜಾಲತಾಣ)

ರಾಜಕೀಯ

ದೊಡ್ಡಬಳ್ಳಾಪುರ TAPMCS ಚುನಾವಣೆ; ಕಣದಲ್ಲಿ ಉಳಿದವರು ಎಷ್ಟು ಗೊತ್ತೆ..!?

ದೊಡ್ಡಬಳ್ಳಾಪುರ TAPMCS ಚುನಾವಣೆ; ಕಣದಲ್ಲಿ ಉಳಿದವರು ಎಷ್ಟು ಗೊತ್ತೆ..!?

ದೊಡ್ಡಬಳ್ಳಾಪುರ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ (TAPMCS) ಚುನಾವಣೆಗೆ ಸಲ್ಲಿಕೆಯಾಗಿದ್ದ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ಕೊನೆಯ ದಿನವಾದ ಸೋಮವಾರ ಅಂತಿಮ ಕಣದಲ್ಲಿ ‘ಎ’ ತರಗತಿಯಿಂದ 9, ‘ಬಿ’ ತರಗತಿಯಿಂದ 19 ಜನ ಉಳಿದಿದ್ದಾರೆ.

[ccc_my_favorite_select_button post_id="115412"]
ಕರ್ನಾಟಕ ಪೊಲೀಸರಿಗೆ ನೂತನ ಕ್ಯಾಪ್..!

ಕರ್ನಾಟಕ ಪೊಲೀಸರಿಗೆ ನೂತನ ಕ್ಯಾಪ್..!

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ವಿಧಾನಸೌಧದ ಬ್ಯಾಂಕ್ವೆಟ್ ಆಯೋಜಿಸಿದ್ದ ಪೊಲೀಸ್ ಸಿಬ್ಬಂದಿಯ ನೂತನ ಪೀಕ್ ಕ್ಯಾಚ್ ವಿತರಣೆ: Cmsiddaramaiah, D.K.Shivakumar

[ccc_my_favorite_select_button post_id="115427"]
ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಅವರೊಂದಿಗೆ, ಸಂಘಟನೆಯ ಟ್ರಸ್ಟಿಯೂ ಆಗಿರುವ ಸಂಸದ ಡಾ.ಕೆ.ಸುಧಾಕರ್‌ (Dr.K.Sudhakar)

[ccc_my_favorite_select_button post_id="113863"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ಯೋಗ ಚಾಂಪಿಯನ್‌ಶಿಪ್: ವಿ.ವರ ಪ್ರಸಾದ್‌ಗೆ ಚಿನ್ನದ ಪದಕ

ಯೋಗ ಚಾಂಪಿಯನ್‌ಶಿಪ್: ವಿ.ವರ ಪ್ರಸಾದ್‌ಗೆ ಚಿನ್ನದ ಪದಕ

ನಿಸರ್ಗ ಯೋಗ ಕೇಂದ್ರದ ಹಾಗೂ ರಾಜ್ಯ ಬಾಲಕರ ಯೋಗ ತಂಡದ ನಾಯಕ ವಿ.ವರ ಪ್ರಸಾದ್ (V. Vara Prasad) 50ನೇ ಗೋಲ್ಡನ್‌ ಜುಬ್ಲಿ ರಾಷ್ಟ್ರೀಯ ಯೋಗ ಚಾಂಪಿಯನ್‌ಶಿಪ್ (Yoga Championship) ನಲ್ಲಿ ಭಾಗವಹಿಸಿ ಚಿನ್ನದ

[ccc_my_favorite_select_button post_id="114944"]
ದೊಡ್ಡಬಳ್ಳಾಪುರ: ಗುಟ್ಟೆ ನರಸಿಂಹಸ್ವಾಮಿ ದೇವಾಲಯದಲ್ಲಿ ಮತ್ತೆ ಕಳವು..!

ದೊಡ್ಡಬಳ್ಳಾಪುರ: ಗುಟ್ಟೆ ನರಸಿಂಹಸ್ವಾಮಿ ದೇವಾಲಯದಲ್ಲಿ ಮತ್ತೆ ಕಳವು..!

ಕಳೆದ ತಿಂಗಳ ಕೊನೆಯ ದಿನ ನಡೆದಿದ್ದ ತಾಲೂಕಿನ ಪ್ರಸಿದ್ಧ ಗುಟ್ಟೆ ಶ್ರೀ ಲಕ್ಷೀನರಸಿಂಹ ಸ್ವಾಮಿ (Gutte Lakshmi Narasimhaswamy Temple) ದೇವಾಲಯದಲ್ಲಿ ಕಳ್ಳತನ (Theft) ಪ್ರಕರಣ ಮತ್ತೆ ಮುಂದುವರಿದಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ.

[ccc_my_favorite_select_button post_id="115220"]
ದೊಡ್ಡಬಳ್ಳಾಪುರ: ಅಪಘಾತ.. ಬೈಕ್ ಸವಾರರಿಬ್ಬರ ದುರ್ಮರಣ

ದೊಡ್ಡಬಳ್ಳಾಪುರ: ಅಪಘಾತ.. ಬೈಕ್ ಸವಾರರಿಬ್ಬರ ದುರ್ಮರಣ

ಇಂದು ಬೆಳ್ಳಂಬೆಳಗ್ಗೆ ಸಂಭವಿಸಿದ ದ್ವಿಚಕ್ರ ವಾಹನ ಅಪಘಾತದಲ್ಲಿ (Accident) ಗಂಭೀರವಾಗಿ ಗಾಯಗೊಂಡ ಇಬ್ಬರು ಸವಾರರು ಸಾವನ್ನಪ್ಪಿರುವ ತಾಲೂಕಿನ ರಾಮಯ್ಯನಪಾಳ್ಯ ಬಳಿ ನಡೆದಿದೆ.

[ccc_my_favorite_select_button post_id="115419"]

ಆರೋಗ್ಯ

ಸಿನಿಮಾ

ಭಾರತೀಯ ಚಿತ್ರರಂಗ ಕನ್ನಡದತ್ತ ಬೆರಗಿನಿಂದ ನೋಡುತ್ತಿದೆ; ಹೆಚ್.ಡಿ. ಕುಮಾರಸ್ವಾಮಿ

ಭಾರತೀಯ ಚಿತ್ರರಂಗ ಕನ್ನಡದತ್ತ ಬೆರಗಿನಿಂದ ನೋಡುತ್ತಿದೆ; ಹೆಚ್.ಡಿ. ಕುಮಾರಸ್ವಾಮಿ

ಕನ್ನಡ ಚಿತ್ರರಂಗ ಸಮೃದ್ಧವಾಗಿ ಬೆಳೆಯಬೇಕಾದರೆ ನಾಯಕ ನಟರು ಹೆಚ್ಚು ಸಿನಿಮಾಗಳನ್ನು ಮಾಡಬೇಕು ಹಾಗೂ ಹೆಚ್ಚು ನಾಯಕ ನಟರು ಚಿತ್ರರಂಗಕ್ಕೆ ಬರಬೇಕು ಎಂದು ಕೇಂದ್ರ ಸರ್ಕಾರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವರಾದ ಹೆಚ್.ಡಿ.

[ccc_my_favorite_select_button post_id="115245"]
error: Content is protected !!