113 ಕೋಟಿ ರೂ. ಒಡೆಯ ನಿಖಿಲ್ ಕುಮಾರಸ್ವಾಮಿ: ಸಾಲ ಎಷ್ಟು ಗೊತ್ತಾ..?

ಚನ್ನಪಟ್ಟಣ: ತೀವ್ರ ಕುತೂಹಲ ಕೆರಳಿಸಿರುವ ಹೈವೊಲೇಜ್ ಕ್ಷೇತ್ರವೆಂದೇ ಬಿಂಬಿತವಾಗಿರುವ ಚನ್ನ ಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ಕುಮಾರಸ್ವಾಮಿ ಎನ್‌ಡಿಎ ಅಭ್ಯರ್ಥಿಯಾಗಿ ನಿನ್ನೆ ನಾಮಪತ್ರ ಸಲ್ಲಿಸಿದರು.

ನಗರದ ತಾಲೂಕು ಕಚೇರಿಗೆ ಅಪಾರಬೆಂಬಲಿಗರೊಂದಿಗೆ ಶುಕ್ರವಾರ ಮಧ್ಯಾಹ್ನ1.30ಕ್ಕೆ ಆಗಮಿಸಿದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರು ಮೂರು ಪ್ರತ್ಯೇಕ ಪ್ರತಿಗಳೊಂದಿಗೆ ಉಮೇದುವಾರಿಕೆ ಸಲ್ಲಿಸಿದರು.

ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಮಾಜಿ ಸಿಎಂಸದಾನಂದಗೌಡ, ಸಂಸದ ಬಿ.ವೈ. ರಾಘವೇಂದ್ರ, ಪತ್ನಿ ರೇವತಿ ಅವರೊಂದಿಗೆ ಒಂದು ಪ್ರತಿ ನಾಮಪತ್ರ, ಸಂಸದ ಡಾ.ಮಂಜುನಾಥ್, ರಾಜ್ಯ ಸಭೆ ಸದಸ್ಯ ಲೆಹರ್ ಸಿಂಗ್‌, ಜೆಡಿಎಸ್ ನಗರ ಘಟಕದ ಅಧ್ಯಕ್ಷ ಅಜಯ್, ಮುಖಂಡ ಪ್ರಸನ್ನ ಪಿ.ಗೌಡ, ಅವರೊಂದಿಗೆ ಎರಡನೇ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಆನಂದಸ್ವಾಮಿ, ಬಿಡಿಸಿಸಿ ಬ್ಯಾಂಕ್‌ ನಿರ್ದೇಶಕ ಕುಕ್ಕೂರು ದೊಡ್ಡಜಯರಾಮು, ಒಕ್ಕಲಿಗರ ಸಂಘದ ರಾಜ್ಯಾಧ್ಯಕ್ಷ ಹಾಪ್‌ಕಾಮ್ಸ್‌ ದೇವರಾಜು ಅವರೊಂದಿಗೆ ಮೂರನೇ ಪ್ರತಿ ನಾಮಪತ್ರ ಸಲ್ಲಿಸಿದರು.

ನಾಮಪತ್ರ ಸಲ್ಲಿಕೆಗೆ ಚನ್ನಪಟ್ಟಣಕ್ಕೆ ಆಗಮಿಸುವ ಈ ಮುನ್ನ ಬೆಂಗಳೂರಿನ ಜೆ.ಪಿ.ನಗರದ ಶ್ರೀ ತಿರುಮಲಗಿರಿ ವೆಂಕಟರಮಣ ದೇವಸ್ಥಾನದಲ್ಲಿ ಪತ್ನಿ ಯೊಂದಿಗೆ ಪೂಜೆ ಸಲ್ಲಿಸಿದ ನಿಖಿಲ್, ತಾತಾ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಆಶೀರ್ವಾದ ಪಡೆದುಕೊಂಡರು. ನಂತರ ಚನ್ನಪಟ್ಟಣಕ್ಕೆ ಆಗಮಿಸಿದ ಅವರು, ತಂದೆ ಕುಮಾರಸ್ವಾಮಿ ಹಾಗೂ ಪತ್ನಿಯೊಂದಿಗೆ ಶ್ರೀ ಕೆಂಗಲ್ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು.

ಶಕ್ತಿ ಪ್ರದರ್ಶನ: ನಿಖಿಲ್ ನಾಮಪತ್ರ ಸಲ್ಲಿಕೆಗೆ ಮುನ್ನ ಭರ್ಜರಿ ರೋಡ್ ಶೋ ನಡೆಸುವ ಮೂಲಕ ಶಕ್ತಿ ಪ್ರದರ್ಶಿಸಿದರು. ಕೆಂಗಲ್ ಆಂಜನೇಯಸ್ವಾಮಿ ದೇವ ಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ ನಗರದ ಶೇರ್ವಾ ಹೋಟೆಲ್ ಬಳಿಯಿಂದ ಅದ್ದೂರಿ ಮೆರವಣಿಗೆ ನಡೆಸುವ ಮೂಲಕ ಎನ್‌ಡಿಎ ಶಕ್ತಿ ಪ್ರದರ್ಶನ ನಡೆಸಿತು.

113.4 ಕೋಟಿ ರೂ ಒಡೆಯ; ಚನ್ನಪಟ್ಟಣ ಕ್ಷೇತ್ರ ಉಪಚುನಾವಣೆಯಲ್ಲಿ ಸ್ಪರ್ಧೆ ಬಯಸಿ ಎನ್‌ಡಿಎ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ನಿಖಿಲ್ ಕುಮಾರ ಸ್ವಾಮಿ ಕುಟುಂಬ 113.4 ಕೋಟಿ ರೂ. ಮೌಲ್ಯದ ಚರಾಸ್ತಿ – ಸ್ಥಿರಾಸ್ತಿ ಹೊಂದಿರುವುದಾಗಿ ಘೋಷಿಸಿ ಕೊಂಡಿದ್ದಾರೆ.

2019ರ ಲೋಕಸಭಾ ಚುನಾ ವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಿದ್ದಾಗ (ನಿಖಿಲ್ ಮದು ವೆಗು ಮುನ್ನ) 75 ಕೋಟಿ ಹಾಗೂ 2023ರ ರಾಮನಗರ ವಿಧಾನಸಭಾ ಕ್ಷೇತ್ರ ಚುನಾವಣೆ ಯಲ್ಲಿ ನಾಮಪತ್ರದೊಂದಿಗೆ ಸಲ್ಲಿಸಿರುವ ಅಫಿ ಡೆವಿಟ್‌ನಲ್ಲಿ 104.96 ಕೋಟಿ ಆಸ್ತಿ ಹೊಂದಿದ್ದ ನಿಖಿಲ್ ಕುಟುಂಬ, 2024ರ ಚನ್ನಪಟ್ಟಣ ಕ್ಷೇತ್ರ ಉಪಚುನಾವಣೆಯಲ್ಲಿ 113.4 ಕೋಟಿ ಆಸ್ತಿ ಘೋಷಿಸಿದೆ. ಕೇವಲ ಒಂದೂವರೆ ವರ್ಷದಲ್ಲಿ 8.44 ಕೋಟಿ ರೂ. ಆಸ್ತಿ ವೃದ್ಧಿಯಾಗಿದೆ.

ನಿಖಿಲ್ ಅವರ ಚರಾಸ್ತಿ ಮೌಲ್ಯ 29.34 ಕೋಟಿ ರೂ. ಸ್ಥಿರಾಸ್ತಿ ಮೌಲ್ಯ 78.14 ಕೋಟಿ
ರೂ. ಸೇರಿ ಒಟ್ಟು 107.48 ಕೋಟಿ ರೂ. ಹಾಗೂ ಪತ್ನಿ ರೇವತಿ ಬಳಿ 43.43 ಲಕ್ಷ ರೂ. ಮೌಲ್ಯದ ಸ್ಥಿರಾಸ್ತಿ ಮತ್ತು 5.49 ಕೋಟಿ ರೂ. ಮೌಲ್ಯದ ಚರಾಸ್ತಿ ಸೇರಿ ಒಟ್ಟು 5.92 ಕೋಟಿ ರೂ. ಮೌಲ್ಯದ ಆಸ್ತಿ ಇದೆ. ನಿಖಿಲ್ ಮತ್ತು ರೇವತಿ ಕುಟುಂಬದ ಒಟ್ಟು ಚರಾಸ್ತಿ – ಸ್ಥಿರಾಸ್ತಿ ಮೌಲ್ಯ 113.4 ಕೋಟಿ ರೂ.ಗಳಾಗಿದೆ.

2021-2200 ವಾರ್ಷಿ ಕ 4.27 ಕೋಟಿ ರು. ಆದಾಯ ಘೋಷಿಸಿದ್ದರೆ, 2022-23ನೇ ಸಾಲಿನಲ್ಲಿ 2.38 ಕೋಟಿ ರೂ., ಈಗ ಸಲ್ಲಿಸಿರುವ ಆಸ್ತಿ ವಿವರಣೆಯಲ್ಲಿ 2023-24 ನೇ ಸಾಲಿನಲ್ಲಿ 1.69 ಕೋಟಿ ರೂ. ಗಳಿವೆ ಎಂದು ಹೇಳಿಕೊಂಡಿದ್ದಾರೆ.

ನಿಖಿಲ್ ಅವರ ಬಳಿ ಸದ್ಯ ನಗದು 27,760 ರೂ. ಇದ್ದರೆ, ಪತ್ನಿ ಬಳಿ 3.53 ಲಕ್ಷ ರೂ.ಇದೆ. ನಿಖಿಲ್ ಮಾಲೀಕತ್ವದ ಚನ್ನಾಂ ಬಿಕ ಫಿಲಂಸ್ 4.38 ಲಕ್ಷ ರೂ.ಇದೆ. ವಿವಿಧ ಬ್ಯಾಂಕು ಗಳಲ್ಲಿ ವೈಯಕ್ತಿಕ 24.23 ಕೋಟಿ ರೂ. ಇದೆ. ಎನ್‌.ಕೆ. ಎಂಟರ್ಟೈನ್ವೆಂಟ್ಸ್ ಹೆಸರಿನ ಖಾತೆಯಲ್ಲಿ 20.48 ಲಕ್ಷ ರೂ. ಇದೆ.

ಚನ್ನಾಂಬಿಕ ಫಿಲಿಮ್ಸ್‌ ಹೆಸರಿನ ಖಾತೆಗಳಲ್ಲಿ 5, ಮೌಲ್ಯ 92 ಲಕ್ಷ ರೂ.ಇದೆ. ಕಸ್ತೂರಿ ಮೀಡಿಯಾ ಪ್ರೈ.ಲಿನಲ್ಲಿ ಹೂಡಿಕೆ 76 ಲಕ್ಷ ರೂ. ಹಾರಿ ಜಾನ್‌ ರಿಯಾಲಿಟಿ ಸಂಸ್ಥೆಯಲ್ಲಿ 60 ಲಕ್ಷ ರೂ., ನಾರ್ಥ ಆರ್ಕ್ ಸಂಸ್ಥೆಯಲ್ಲಿ 30 ಲಕ್ಷ ರೂ. ಹೂಡಿಕೆ ಮಾಡಿದ್ದಾರೆ.

ನಿಖಿಲ್ ಬಳಿ 39.84 ಲಕ್ಷ ರೂ. ಮೌಲ್ಯದ ಇನ್ನೋವಾ ಹೈಕ್ರಾಸ್ ಕೃಷಿಯೇ ಕಾರಿದೆ. ಇವರ ಮಾಲೀಕತ್ವದ ಎನ್.ಕೆ.ಎಂಟ ರ್ಟೈನೆಂಟ್ ಸಂಸ್ಥೆಯಿಂದ ಖರೀದಿಸಿರುವ ರೇಂಜ್ ರೋವರ್‌ ಕಾರು, ವ್ಯಾನಿಟಿ ವ್ಯಾನ್ (ಜಿಮ್), ಇನ್ನೋವ ಕ್ರಿಸ್ಟ ಕಾರು, ವ್ಯಾನಿಟಿ ವ್ಯಾನ್ (ಕ್ಯಾರವಾನ್) ವಾಹನಗಳಿವೆ. 2023ರಲ್ಲಿ ಘೋಷಿಸಿಕೊಂಡಿದ್ದ ಲ್ಯಾಂಬೊಗ್ನಿ ವೆಂಟೋರ್‌ ಕಾರು ಈ ಬಾರಿಯ ಆಸ್ತಿ ಘೋಷ ಣೆಯಲ್ಲಿ ನಮೂದಾಗಿಲ್ಲ.

ನಿಖಿಲ್ ಬಳಿ 1488.44 ಗ್ರಾಂ ಚಿನ್ನಾಭರಣದ ಸದ್ಯದ ನಲ್ಲಿ ಒದ ಮಾರುಕಟ್ಟೆ ಮೌಲ್ಯ 1.96 ಕೋಟಿ ರೂ., 16 ಕೆ.ಜಿ ಬೆಳ್ಳಿ ಆಭರಣಗಳ ಮೌಲ್ಯ 15.55 ಲಕ್ಷ ರೂ.ಗಳಾಗಿದೆ. ಪತ್ನಿ ರೇವತಿ ಬಳಿ 1411.96 ಗ್ರಾಂ ಚಿನ್ನವಿದ್ದು, ಇದರ ಮೌಲ್ಯ 1.04ಕೋಟಿ ರೂ.ಗಳಾದರೆ, 32.56 ಲಕ್ಷ ರೂ. ಮೌಲ್ಯದ ಬ್ಯಾಂಕು ಬೆಳ್ಳಿ ಆಭರಣ, 12.59 ಕ್ಯಾರೆಟ್ ವಜ್ರದ ಮೌಲ್ಯ 12.46 ಲಕ್ಷ ರೂ.ಗಳಾಗಿದೆ.

ಸ್ಥಿರಾಸ್ತಿ ವಿವರ: 2023ರಲ್ಲಿ ನಿಖಿಲ್ ಹೆಸರಿನಲ್ಲಿ ಕೃಷಿ ಭೂಮಿ ಇರಲಿಲ್ಲ. ಈ ಬಾರಿ ಬಿಡದಿ ಹೋಬಳಿಯಲ್ಲಿ 4 ಎಕರೆ ಕೃಷಿ ಭೂಮಿ ಕೊಂಡಿರುವುದಾಗಿ ತಿಳಿಸಿದ್ದಾರೆ. ಇದರ ಮಾರುಕಟ್ಟೆ ಮೌಲ್ಯ 1.34 ಕೋಟಿ ರೂ. ಕೃಷಿಯೇತರ ಭೂಮಿ ಇಲ್ಲ.

ಬೆಂಗಳೂರಿನ ರಿಚಮಂಡ್‌ ಟೌನ್‌ನಲ್ಲಿ 21500 ಚದರಡಿಯ ವಾಣಿಜ್ಯ ಕಟ್ಟಡವಿದೆ. 2014ರಲ್ಲಿ ಇವರು ಈ ಆಸ್ತಿಯನ್ನು 5.47 ಕೋಟಿ ರೂ.ಗಳಿಗೆ ಖರೀದಿ ಸಿದ್ದರು. ಇದರ ಪ್ರಸಕ್ತ ಮಾರುಕಟ್ಟೆ ಮೌಲ್ಯ 38 ಕೋಟಿ ರೂ., ತಮ್ಮ ಬಳಿ ವಸತಿ ಕಟ್ಟಡಗಳು ಇಲ್ಲ.

ಪತ್ನಿ ರೇವತಿ ತಮಗೆ ಕೊಡುಗೆಯಾಗಿ ಬಂದಿರುವ ಬೆಂಗಳೂರು ಅತ್ತಿಗುಪ್ಪೆಯಲ್ಲಿರುವ ತಿರುಮಲ ಲಕ್ಟೋರಿಯಾ ಅಪಾರ್ಟ್ ಮೆಂಟ್ ನಲ್ಲಿ ಒಂದು ಫ್ಲಾಟ್ ಇದ್ದು, ಇದರ ಮೌಲ್ಯ 43.43 ಲಕ್ಷ ರೂ. ಎಂದು ತಿಳಿಸಿದ್ದಾರೆ.

ನಿಖಿಲ್ ತಾಯಿ ಅನಿತಾ ಅವರಿಗೆ 4.65 ಕೋಟಿ, ತಂದೆ ಕುಮಾರಸ್ವಾಮಿಗೆ 9.18 ಲಕ್ಷ ರೂ. ಸಾಲ ಬಾಕಿ ಕೊಡಬೇಕಿದೆ. ನಿಖಿಲ್ ಬ್ಯಾಂಕುಗಳು ಸೇರಿದಂತೆ ಒಟ್ಟು 70.44 ಕೋಟಿ ಸಾಲ ಕೊಡಬೇಕಾಗಿದೆ.

ರಾಜಕೀಯ

ಜೆಡಿಎಸ್‌ನವರು ಏನೇ ಹೇಳಿದರೂ ಮಾತಾಡಬೇಡಿ; ಬಿ.ವೈ.ವಿಜಯೇಂದ್ರ

ಜೆಡಿಎಸ್‌ನವರು ಏನೇ ಹೇಳಿದರೂ ಮಾತಾಡಬೇಡಿ; ಬಿ.ವೈ.ವಿಜಯೇಂದ್ರ

ಜೆಡಿಎಸ್‌ನವರು (JDS) ಏನೇ ಹೇಳಿದರೂ ಮಾತಾಡಬೇಡಿ ಎಂದು ನಮ್ಮವರಿಗೆ ಹೇಳಿದ್ದೇನೆ. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ (H.D. Kumaraswamy) ಮಾತನಾಡುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (B.Y. Vijayendra) ತಿಳಿಸಿದರು.

[ccc_my_favorite_select_button post_id="119469"]
ಮೈಸೂರು ಸ್ಯಾಂಡಲ್‌ ಪ್ರಚಾರ ರಾಯಭಾರಿಯಾಗಿ ಬಂದ ಚೆಲುವೆ ತಮನ್ನಾ

ಮೈಸೂರು ಸ್ಯಾಂಡಲ್‌ ಪ್ರಚಾರ ರಾಯಭಾರಿಯಾಗಿ ಬಂದ ಚೆಲುವೆ ತಮನ್ನಾ

ಅಲ್ಲಿ ಇದ್ದಿದ್ದು ಕಣ್ಣು ಕೋರೈಸುತ್ತಿದ್ದ ಲೇಸರ್ ಬೆಳಕಿನ ಲೀಲೆ; ಅದರ ಝಗಮಗದ ನಡುವೆ ಹಿಂಬಾಗಿಲ ಮೂಲಕ ಕಾಣಿಸಿಕೊಂಡಿದ್ದು ಖ್ಯಾತ ನಟಿ ತಮನ್ನಾ ಭಾಟಿಯಾ (Tamannaah Bhatia). ಹಾಲ್ಬಣ್ಣದ ಈ ಚೆಲುವೆಯ ಸೌಂದರ್ಯಕ್ಕೆ ಮೆರುಗು ನೀಡಿದ್ದು

[ccc_my_favorite_select_button post_id="119304"]
UGC ನಿಯಮಾವಳಿಗೆ ಸುಪ್ರೀಂ ತಡೆ.. ಕೇಂದ್ರ ಸರ್ಕಾರಕ್ಕೆ ನೋಟಿಸ್

UGC ನಿಯಮಾವಳಿಗೆ ಸುಪ್ರೀಂ ತಡೆ.. ಕೇಂದ್ರ ಸರ್ಕಾರಕ್ಕೆ ನೋಟಿಸ್

ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ತಾರತಮ್ಯವನ್ನು ತಡೆಗಟ್ಟಲು ವಿಶ್ವವಿದ್ಯಾಲಯ ಅನುದಾನ ಆಯೋಗ (UGC) ಇತ್ತೀಚೆಗೆ ಸೂಚಿಸಿದ ನಿಯಮಗಳನ್ನು ಸ್ಥಗಿತಗೊಳಿಸುವಂತೆ ಸುಪ್ರೀಂ ಕೋರ್ಟ್ ಗುರುವಾರ ಆದೇಶಿಸಿದ್ದು, ಕೇಂದ್ರ ಸರ್ಕಾರಕ್ಕೆ ನೋಟೀಸ್ ನೀಡಿದೆ.

[ccc_my_favorite_select_button post_id="118953"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಗಳ ಆಯೋಜನೆಗೆ ಅನುಮತಿ: ಡಿಸಿಎಂ ಡಿ.ಕೆ. ಶಿವಕುಮಾರ್

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಗಳ ಆಯೋಜನೆಗೆ ಅನುಮತಿ: ಡಿಸಿಎಂ ಡಿ.ಕೆ. ಶಿವಕುಮಾರ್

"ಯುವಕರು ಹಾಗೂ ಕ್ರಿಕೆಟ್ ಕ್ರೀಡೆಯ ಹಿತದೃಷ್ಟಿಯಿಂದ ಇನ್ನುಮುಂದೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ಆಯೋಜನೆಗೆ ಸರ್ಕಾರ ಅನುಮತಿ ನೀಡುತ್ತಿದೆ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (D.K. Shivakumar) ಅವರು ತಿಳಿಸಿದರು.

[ccc_my_favorite_select_button post_id="119372"]
ಹಾಸ್ಟೆಲ್‌ನಿಂದ ಬಿದ್ದು ಗೀತಂ ವಿವಿ ವಿದ್ಯಾರ್ಥಿನಿ ಆತ್ಮಹತ್ಯೆ..!

ಹಾಸ್ಟೆಲ್‌ನಿಂದ ಬಿದ್ದು ಗೀತಂ ವಿವಿ ವಿದ್ಯಾರ್ಥಿನಿ ಆತ್ಮಹತ್ಯೆ..!

ಗೀತಂ ವಿಶ್ವವಿದ್ಯಾಲಯದಲ್ಲಿ (Geetham University) ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಆತ್ಮಹತ್ಯೆ (Suicide) ಪ್ರಕರಣಗಳಿಗೆ ಕೊನೆ ಇಲ್ಲವೇ ಎಂಬ ಪ್ರಶ್ನೆ ಪೋಷಕರನ್ನು ಕಾಡುತ್ತಿದ್ದು, ವಿದ್ಯಾರ್ಥಿಗಳ ಆಕಸ್ಮಿಕ ಸಾವು, ಆತ್ಮಹತ್ಯೆ ಕುರಿತಂತೆ ಪದೇ ಪದೇ ದೂರು ದಾಖಲಾಗುತ್ತಿದೆ.

[ccc_my_favorite_select_button post_id="119472"]
ಭೀಕರ ಅಪಘಾತ: ದೊಡ್ಡಬಳ್ಳಾಪುರದ 5 ಯುವಕರು ಸಾವು

ಭೀಕರ ಅಪಘಾತ: ದೊಡ್ಡಬಳ್ಳಾಪುರದ 5 ಯುವಕರು ಸಾವು

ನೆಲಮಂಗಲ ಹೆದ್ದಾರಿಯ ಜಿಂದಾಲ್ ಮೇಲ್ಸೇತುವೆ ಬಳಿ ಸಂಭವಿಸಿದ ಕೆಎಸ್ ಆರ್ ಟಿಸಿ ಬಸ್​​ (KSRTC Bus) ಮತ್ತು ಇಂಡಿಕ ಕಾರಿನ (Indica Car) ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ (Accident) ದೊಡ್ಡಬಳ್ಳಾಪುರದ ಐವರು ಯುವಕರು

[ccc_my_favorite_select_button post_id="119422"]

ಆರೋಗ್ಯ

ಸಿನಿಮಾ

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ (Actor Darshan) ಅವರಿಗೆ ಇಂದು ಜನ್ಮದಿನದ (Birthday) ಸಡಗರ. 49ನೇ ವರ್ಷಕ್ಕೆ ದರ್ಶನ್ ಕಾಲಿಟ್ಟಿದ್ದಾರೆ.

[ccc_my_favorite_select_button post_id="119431"]
error: Content is protected !!